ಇಂಡಿ
ಆಲಮೇಲ: ಬಡವರಿಗೆ ಹಂಚಿಕೆ ಮಾಡಬೇಕಾದ ಪಡಿತರ
ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟ್ಟಣದ ಸಿಂದಗಿ ರಸ್ತೆಯ ಕಾಂತಪ್ಪ ಭೂಸನೂರ ಇವರಿಗೆ ಸೇರಿದ ತೋಟದ ಶೆಡ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 125 ಕ್ವಿಂಟಾಲ್ ತೂಕದ 250 ಚೀಲ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ನೇತೃತ್ವದಲ್ಲಿ ತಹಸೀಲ್ದಾರ್ ಸುರೇಶ ಚಾವಲರ್, ಗ್ರಾಮ ಲೆಕ್ಕಾಧಿಕಾರಿ ಪ್ರದೀಪ ದೊಡಮನಿ, ಗ್ರಾಮ ಸಹಾಯಕ ಸೈಪನ ವಾಲಿಕರ ಅವರ ತಂಡ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 250 ಚೀಲದಷ್ಟು ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದರು.
ಪ್ರಮುಖ ಆರೋಪಿ ಅಶೋಕ ಭೂಸನೂರ ಹಾಗೂ ಇತರರು ಸ್ಥಳದಲ್ಲಿಯೇ ಎರಡು ಗೂಡ್ಸ್ ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಆಲಮೇಲ ಪಟ್ಟಣದ ಸಿಂದಗಿ ರಸ್ತೆಯ ಕಾಂತಪ್ಪ ಭೂಸನೂರ ಇವರ ತೋಟದ ಶೆಡ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿರುವುದು. ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಸುರೇಶ ಚಾವಲರ್, ಪ್ರದೀಪ ದೊಡಮನಿ, ಸೈಪನ ವಾಲಿಕಾರ ಇತರರಿದ್ದರು.
ದಾಳಿ ಕುರಿತು ಗದ್ಯಾಳ ವಿಜಯವಾಣಿಯೊಂದಿಗೆ ಮಾತನಾಡಿ, ಈ ಭಾಗದಲ್ಲಿ
ಬಹಳ ಅವ್ಯಾಹತವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ತಾಲೂಕಿನಾದ್ಯಂತ ಅಕ್ಕಿ ಸಂಗ್ರಹದ ಕುರಿತು ಈ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಈ ದಂಧೆಯಲ್ಲಿ – ಯಾರಾರು ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲಾಗುವುದು. ಇಂದು ವಶಪಡಿಸಿಕೊಂಡಿರುವ ಅಕ್ಕಿಯ ಮೊತ್ತ ಎಷ್ಟು ಎಂದು ಇನ್ನು ತಿಳಿದು ಬಂದಿಲ್ಲ ಎಂದರು. ಸ್ಥಳಕ್ಕೆ ಸಿಂದಗಿ ಸಿಪಿಐ ಡಿ. ಹುಲುಗಪ್ಪ, ಪಿಎಸ್ಐ, ಕುಮಾರ ಹಾಡಕಾರ, ಆಹಾರ ನಿರೀಕ್ಷಕ ರಮೇಶ ತಳವಾರ ಭೇಟಿ ನೀಡಿ 250 ಚೀಲ ಅಕ್ಕಿ ಹಾಗೂ ಆರೋಪಿತರು ಅಕ್ರಮ ದಂಧೆಗೆ ಬಳಸುತ್ತಿದ್ದ ಎರಡು ಕೈ ವಾಹನಗಳು ಜಪ್ತಿ ಮಾಡಿದ್ದಾರೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಪೊಲೀಸ್ ಸಿಬ್ಬಂದಿ ಎಸ್.ಕೆ. ವಾಗಮೋರೆ, ಆರ್.ಎಸ್. ಪಾಟೀಲ ಇತರರಿದ್ದರು.
0 Comments