ಚಳ್ಳಕೆರೆ ಜನಧ್ವನಿ ವಾರ್ತೆ ಮೇ 7
ನಾವು ನೀಡಿರುವ ಮೀಸಲಾತಿಯನ್ನ ರದ್ದುಗೊಳಿಸುವ ತಾಕತ್ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಅದನ್ನು ರದ್ದುಗೊಳಿಸುವ ಪ್ರಯತ್ನ ಪ್ರಾರಂಭಿಸಿದ ದಿನದಿಂದಲೇ ಆ ಪಕ್ಷದ ಕೊನೆಯ ದಿನಗಳು ಪ್ರಾರಂಭವಾಗಲಿದೆ ಅಂಬೇಡ್ಕರ್ ಸ್ವಾಬಿಮಾನ ದಲಿತರಿದ್ದರೆ ಬಿಜೆಪಿ ಪಕ್ಷದ ಅನಿಲ್ ಕುಮಾರ್ ಗೆ ಮೇ ೧೦ ರಂದ ಮತ ನೀಡುವಂತೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಮಾದಿಗ ಸಮುದಾಯ ಬಿಜೆಪಿ ಪಕ್ಷಕ್ಕೆ ಬೆಂಗಲಿಸಲು ಆಯೋಜಿಸಿದ್ದ ಬಿಜೆಪಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸದಾಶಿವ ಆಯೋಗವನ್ನು ಕೇಂದ್ರಸರಕಾರಕ್ಕೆ ಶಿಪಾರಸ್ ಮಾಡಿದ್ದ ಅದನ್ನು ಅನುಷ್ಟಾನಕ್ಕೆ ತರಲು ಶ್ರಮ ವಹಿಸಲಾಗುವುದು ಭಾರತೀಯ ಜನತಾ ಪಕ್ಷ ದಲಿತರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎನ್ನುವ ವಿರೋಧ ಪಕ್ಷಗಳ ಟೀಕೆಗೆ ಸಾಮಾಜಿಕ ನ್ಯಾಯದ ನಿಜ ಅರ್ಥವನ್ನು ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಸರ್ಕಾರ ತಕ್ಕ ಎದುರೇಟು ನೀಡಿದೆ ಎಂದರು.
ದಲಿತರ ಕೇರಿಗಳಲ್ಲಿ ಶೌಚಾಲಯ, ಅಡುಗೆ ಅನಿಲ್, ವಸತಿ ಯೋಜನೆ, ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ಅಂಬೇಡ್ಕರ್ ಸಂವಿಧಾನವನ್ನು ಜಾರಿಗೊಳಿಸಲು ಬಿಜೆಪಿ ಸರಕಾರ ದಲಿತರಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಆದ್ದರಿಂದ ಬಿಜೆಪಿ ಸರಕಾರದ ಡಬಲ್ ಇಂಜಿನ್ ಸರಕಾರಕ್ಕೆ ದಲಿತರು ಈ ಬಾರಿ ಮೇ ೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ದಲಿತರ ಕಮಲದ ಗುರಿನ ಅನಿಲ್ ಕುಮಾರ್ ಮತ ನೀಡುವ ಮೂಲಕ ವಿಧಾನಸೌಧಕ್ಕೆ ಕಳಿಸಲು ಎಲ್ಲರೂ ಮುಂದಾಗ ಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ, ತಾಲೂಕು ಮಂಡಲ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಉಪ್ಪಾರಹಟ್ಟಿ ಚಿಕ್ಕಣ್ಣ , ಹಟ್ಟಿ ರುದ್ರಪ್ಪ, ಜಯಪಾಲಯ್ಯ, ಎಲೆ ಭದ್ರಣ್ಣ ಮಾತನಾಡಿದರು. ವೇಧಿಯಲ್ಲಿ ಬಾಳೆಕಾಯಿ ರಾಮದಾಸ್, ಕರಿಯಣ್ಣ, ಆರ್.ಡಿ.ಮಂಜುನಾಥ್. ಎಂ. ಮಹಾಲಿಂಗಪ್ಪ, ಲೀಲಾವತಿ, ಬಸವರಾಜ್, ನಾಗರಾಜ್, ಶ್ರೀನಿವಾಸ್, ಸೇರಿದಂತೆ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments