ಚಳ್ಳಕೆರೆ ಸೆ.30 ಅಂತರ್ಜಾತಿ ವಿವಾಹವಾದ ಹಿನ್ನೆಲೆಯಲ್ಲಿ ತಿಂಗಳ ಮಗುವಿನೊಂದಿಗೆ ದಂಪತಿಗೆ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದ ದಂಪತಿ ಹಾಗೂ ಒಂದು ತಿಂಗಳ ಮಗುವನ್ನು ಎನ್. ದೇವರಹಳ್ಳಿ ಗ್ರಾಮದ ತವರು ಮನೆಗೆ ಜಿಲ್ಲಾಡಳಿತ ಸೇರಿಸುವಲ್ಲಿ ಯಶಸ್ವಿಯಾಗಿದೆ.
ತಾಲ್ಲೂಕು, ಜಿಲ್ಲಾಡಳಿತಹಾಗೂ ವಿವಿಧ ಇಲಾಲೆಯ ಅಧಿಕಾರಿಗಳು ಆರತಿ ಮಾಡಿ ಬರಮಾಡಿಕೊಂಡ ಸಮುದಾಯದ ಜನ ದಂಪತಿಗಳಲ್ಲಿ ಮೂಡಿದ ಮಂದಹಾಸ.
ಅಂತರ್ಜಾತಿ ವಿವಾಹವಾಗಿದ್ದಕ್ಕಾಗಿ ಸಮುದಾಯದಿಂದ ಸಾಮಾಜಿಕ ಬಹಿಷ್ಕಾರಕ್ಕೊಳಪಟ್ಟ ದಂಪತಿಗಳನ್ನು ತಾಲ್ಲೂಕು, ಜಿಲ್ಲಾಡಳಿತ ಜಾಗೃತ ಸಭೆ ನಡೆಸಿ ಶನಿವಾರ ಮರಳಿ ಮನೆ ಸೇರಿಸಿದರು.
ಜೋಗಿ ಸಮುದಾಯದ ಶ್ರವಣ ಮತ್ತು ವಾಕ್ದೋಷವುಳ್ಳ ದಂಪತಿಗಳು ಅಂತರ್ಜಾತಿ ವಿವಾಹವಾದ ಕಾರಣ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದರು.
ಜಿ.ಪಂ.ಸಿಇಒ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತ ಗ್ರಾಮದಲ್ಲಿ ಸರಣಿ ಜಾಗೃತ ಸಭೆ ನಡೆಸಿ ಶನಿವಾರ ದಂಪತಿ ಹಾಗೂ ಒಂದು ತಿಂಗಳ ಮಗುವನ್ನು ಮರಳಿ ಮನೆ ಸೇರಿಸಿದರು.
ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದ ಬಾಣಂತಿ ಮಗುವನ್ನು ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಕರೆತಂದರು ಅಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಬಳಿ ಆರತಿ ಮಾಡಿ ಬರಮಾಡಿಕೊಂಡರು. ಬಾಣಂತಿ ಸಾವಿತ್ರಮ್ಮ ತನ್ನ ತಾಯಿ ಮನೆಗೆ ಹೋದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ ಸೀರೆ, ಅರಿಶಿಣ, ಕುಂಕುಮ ನೀಡಿ ಆರತಿ ಬೆಳಗಿದರು. ಮತ್ತು ಐದು ಜನ ಮುತ್ತೈದೆ ಮಹಿಳೆಯರು ಆರತಿ ಮಾಡಿ ಮುಂದೆ ಸುಖವಾಗಿರು ಎಂದು ಮಗು ಹಾಗು ದಂಪತಿಗಳನ್ನು ಆಶೀರ್ವದಿಸಿದರು.
![](https://janadhwani.in/wp-content/uploads/2023/09/IMG-20230930-WA0218.jpg)
ನಂತರ ಸಭೆಯಲ್ಲಿ ಮಾತನಾಡಿದು. ತಹಶೀಲ್ದಾರ್ ರೆಹಾನ್ಪಾಷ, ಈ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಅಧಿಕಾರಿ ವರ್ಗದವರು ಜಾಗೃತ ಸಭೆ ನಡೆಸಿ ಕಾನೂನು ಅರಿವು ಮೂಡಿಸಿದ್ದೇವೆ. ಮುಂದೆ ಇಂತಹ ಅನಿಷ್ಟ ಪದ್ಧತಿ ಹೆಸರಿನಲ್ಲಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಅಂತಹ ಘಟನೆಗಳು ಗಮನಕ್ಕೆ ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
![](https://janadhwani.in/wp-content/uploads/2023/09/IMG-20230930-WA0213.jpg)
ತಾಪಂ ಇ ಒ ಹೊನ್ನಯ್ಯ ಮಾತನಾಡಿ ಗ್ರಾಮಗಳಲ್ಲಿ ಮೌಢ್ಯಗಳ ಹೆಸರಿನಲ್ಲಿ ಅಸ್ಪೃಶ್ಯತೆ. ಬಹಿಷ್ಕಾರದಂತಹ ಪ್ರಕರಣಗಳು ನಡೆದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ನಿಮ್ಮ ಗ್ರಾಮಕ್ಕೆ ಪೋಲಿಸರ ಭೇಟಿ ಹಾಗೂ ಕಣ್ಣಿಟ್ಟಿರುತ್ತಾರೆ ಮತ್ತೆ ಇಂತಹ ಪ್ರಕರಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಹಾಗೂ ಜಾತಿ ಬೇದ ಮರೆತು ಒಗ್ಗಟ್ಟಿನಿಂದ ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ ಮಾತನಾಡಿ, ಅನಿಷ್ಟ ಪದ್ಧತಿಗಳನ್ನು ಆಚರಿಸುವುದು ಖಂಡನೀಯ. ಬಹಿಷ್ಕಾರದಂತ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಬಾಣಂತಿ ಮಗುವನ್ನು ಹೊರಹಾಕುವುದು ನಾಗರೀಕ ಸಮಾಜಕ್ಕೆ ಶೋಭೆ ತರುವಂತಹುದಲ್ಲ. ಈ ಪ್ರಕರಣ ಇಲ್ಲಿಗೆ ಸುಖಾಂತ್ಯ ಗೊಂಡಿದೆ. ದಂಪತಿಗಳಿಗೆ ನಮ್ಮ ಇಲಾಖೆಯಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕ ಕವಾಗಿ ಕೊಡಿಸಲಾಗುವುದು ಎಂದು ತಿಳಿಸಿದರು.
![](https://janadhwani.in/wp-content/uploads/2023/09/IMG-20230930-WA0216.jpg)
![](https://janadhwani.in/wp-content/uploads/2023/09/IMG-20230930-WA0217.jpg)
ಸಾಮಾಜಿಕ ಹೋರಾಟಗಾರ್ತಿ ರಶ್ಮಿ ಮಾತನಾಡಿ, ನಮ್ಮ ಬಳಿ ಬಾಣಂತಿ ಮಗುವು ಬಂದಾಗ ನಾವು ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದಾಗ ಎಲ್ಲಾ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ದಂಪತಿಗಳಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಿದ್ದೀರಿ. ಮಾನವೀಯ ದೃಷ್ಟಿಯಿಂದ ಯಾರ ಮೇಲೂ ಪ್ರಕರಣ ದಾಖಲಿಸಿಲ್ಲ. ಇಂತಹ ಘಟನೆಗಳು ಮತ್ತೊಮ್ಮೆ ಜರುಗದಂತೆ ನೋಡಿಕೊಳ್ಳಿ ದಂಪತಿಗಳಿಗೆ ಯಾವುದೇ ತೊಂದರೆ ನೀಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಮಾತು ಬಾರದ ದಂಪತಿಗಳು ಅಧಿಕಾರಿಗಳಿಗೆ ತಾವು ಅನುಭವಿಸಿದ ನೋವುಗಳನ್ನು ಕಿವುಡ ಮತ್ತು ಮೂಗ ಶಾಲೆಯ ಶಿಕ್ಷಕಿ ಅಂಬಿಕಾ ಮುಖಾಂತರ ಸಂಜ್ಞೆಗಳ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಸಿಎಂ ಅಧಿಕಾರಿ ಡಾ. ಸುಬ್ರನಾಯ್ಕ, ತಾಲ್ಲೂಕು ಬಿಸಿಎಂ ಅಧಿಕಾರಿ ದಿವಾಕರ್ ಹಾಗು ಗ್ರಾಮಸ್ಥರಾದ ಮಂಜುನಾಥ್, ನಾಗರಾಜ್, ತಾ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿದರು. ಸಿಪಿಐ ಸಮೀವುಲ್ಲಾ, ಸಿಡಿಪಿಒ ಹರಿಪ್ರಸಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಅರುಣ್ಕುಮಾರ್ ಮತ್ತು ಜೋಗಿ ಸಮುದಾಯದ ಮುಖಂಡರು ಹಾಜರಿದ್ದರು.
![](https://janadhwani.in/wp-content/uploads/2023/09/v.v.30-nyk-2p.jpg)
![](https://janadhwani.in/wp-content/uploads/2023/09/IMG-20230930-WA0219.jpg)
0 Comments