ಚಳ್ಳಕೆರೆ ಜ.15ಆಧುನಿಕ ಜೀವನ ಶೈಲಿಗೆ ಮುಖ ಮಾಡಿ ಮಹಾನಗರಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಭೂಮಿ ತಾಯಿಯನ್ನೇ ಕೃಷಿ. ಹೈನುಗಾರಿಕೆಯಲ್ಲಿ ತೊಡಗಿ ಸ್ವಾವಲಂಭಿ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ಹೌದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ರೈತ ದೇವೇಂದ್ರಪ್ಪ ಮಾದರಿಯಾದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ವಡೇರಹಳ್ಳಿ ಎಂಬ ಗ್ರಾಮದಲ್ಲಿ ದೇವೇಂದ್ರಪ್ಪ ಎಂಬ ರೈತ 2007-2008 ರ ಸಾಲಿನಲ್ಲಿ ತನ್ನ ಒಂದು ಕಾಲನ್ನು ಸಂಪೂರ್ಣ ಕಳೆದುಕೊಂಡರು ಛಲ ಬಿಡದೆ ಕೃತಕ ಕಾಲಿನ ಸಹಾಯದಿಂದ ವ್ಯವಸಾಯ ಮುಂದುವರಿಸಿದ್ದಾರೆ ವ್ಯವಸಾಯದ ಜೊತೆಗೆ ಇವರ ಮಡದಿಯ ಮತ್ತು ಮಕ್ಕಳ ಸಹಾಯದಿಂದ ಹೈನುಗಾರಿಕೆಯನ್ನು ಸಹ ಮಾಡುತ್ತಾ ಇನ್ನೊಬ್ಬರ ಮೇಲೆ ಅವಲಂಬನೆ ಆಗದೆ ಸ್ವಾಭಿಮಾನ ಬದುಕು ನಡೆಸುತ್ತಿದ್ದಾರೆ ಇಷ್ಟು ದಿನದಿಂದ ಇವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಲಭಿಸಿಲ್ಲ ಅಂಗವಿಕಲ. ನಂಬಿ ಬಂಡವಾಳ ಹಾಕಿ ಸಾಧನೆಯ ಕೃಷಿ ಹಾದಿಯತ್ತ ಸಾಗುತ್ತಿರುವ ದೇವೇಂದ್ರಪ್ಪ ಭತ್ತದ ಯಂತ್ರಕ್ಕೆ ಕಾಲು ಸಿಲುಕಿ ಒಂದು ಕಾಲನ್ನು ಸಂಪೂರ್ಣವಾಗಿ ಕಳೆದು ಕೊಂಡು ವಿಕಲಚೇತನ ನಾಗಿದ್ದಾನೆ ಕೃತಕ ಕಾಲೂಜು ಜೋಡಣೆ ಮಾಡಿಕೊಂಡು 1.5ಎಕರೆ ಜಮೀನಿನಲ್ಲಿ ಮೆಕ್ಕೆಜೋಳ .ಮೆಣಸಿನ ಕಾಯಿ. ಈರುಳ್ಳಿ ಜೊತೆಗೆ ಹಸು ಸಾಕಿಕೊಂಡು ಕೃಷಿ ಜತೆಗೆ ಹೈನುಗಾರಿಕೆ ಮಾಡಿಕೊಂಡು ಸ್ವಾಲಂಭಿ ಜೀವನ ನಡೆಸುತ್ತಿದ್ದಾನೆ. ತನ್ನ ಒಂದು ಕಾಲು ಇಲ್ಲದಿದ್ದರೂ ಕೃತಕ ಕಾಲು ಜೋಡಣೆ ಆಸರೆಯಾಗಿಸಿಕೊಂಡು ನಿತ್ಯ ಕೃಷಿಯಲ್ಲಿ ಮಗ್ನರಾಗಿದ್ದಾರೆ.
0 Comments