ಸರಕಾರಿ ಪಿ ಯು ಕಾಲೇಜಿನ ಎನ್ ಎಸ್ ಎಸ್ ಘಟಕಕ್ಕೆ ,2021-22 ನೇ ಸಾಲಿನ ಪ್ರಶಸ್ತಿಗರಿ-ಎನ್ ಎಸ್.ಎಸ್ ಅಧಿಕಾರಿ ಬಿ. ಶಾಂತಕುಮಾರಿ ರಾಜ್ಯ ಮಟ್ಟದ ಅತ್ಯುತ್ತಮ ಕಾರ್ಯಕ್ರಮಾಧಿ ಕಾರಿ ಪ್ರಶಸ್ತಿಗೆ ಆಯ್ಕೆ. ಪಿಯು ಕಾಲೇಜಿಗೆ ಡಬಲ್ ಧಮಾಕ ಪ್ರಶಸ್ತಿ.

by | 09/10/23 | ಶಿಕ್ಷಣ

ಚಳ್ಳಕೆರೆ ಳ್ಳಕೆರೆ ಅ.9.ಬರದ ಅಣೆ ಪಟ್ಟಿಕಟ್ಟಿಕೊಂಡಿದ್ದರೂ ಶಿಕ್ಷಣ ಕ್ಷೇತ್ರಕ್ಕೆ ಬರವಿಲ್ಲ ಎಂಬುದಕ್ಕೆ ರಾಷ್ಟ್ರೀಯಾ ಸೇವಾ ಯೋಜನೆ ಘಟಕ ಅತ್ಯುತ್ತಮ ಸೇವೆ ಗುರುತಿಸಿ ರಾಜ್ಯ ಪ್ರಶಸ್ತಿ ಲಭಿಸಿದೆ. ಹೌದು ಇದು ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿರುವ ಸರಕಾರಿ ಪಿ ಯು ಕಾಲೇಜಿನ ಎನ್ ಎಸ್ ಎಸ್ ಘಟಕಕ್ಕೆ ,2021-22 ನೇ ಸಾಲಿನ ಪ್ರಶಸ್ತಿಗೆ ಪಿಯು ಶಿಕ್ಷಣ ಬೋರ್ಡ್ಆಯ್ಕೆಮಾಡಿರುವುದು ಖುಷಿತಂದ ವಿಷಯವಾಗಿದೆ. ಕಾಲೇಜು ಆವರಣದಲ್ಲಿ ಕಲ್ಲು ಬಂಡೆ ಹಾಗೂ ತಗ್ಗು ದಿನ್ನೆಯಿದ್ದ ಬರಡು ಭೂಮಿಯಲ್ಲಿ ಎನ್ ಎಸ್ ಎಸ್ ಘಟಕವತಿಯಿಂದ ಗಿಡ ಮರಗಳನ್ನು ಬೆಳೆಸಿ ಸುಂದರ ಪರಿಸರ ಹಚ್ಚ ಹಸಿರಿನಿಂದ ವಿದ್ಯಾರ್ಥಿಗಳನ್ನು ಕಲಿಕೆಗೆ ಕೈ ಬೀಸಿ ಕರೆವಂತೆ ಮಾಡಲಾಗಿದೆ. ವಿಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಲು ಎನ್‌ಎಸ್‌ಎಸ್‌ ಶಿಬಿರ ಸಹಕಾರಿಯಾಗಿದೆ. ರಾಷ್ಟ್ರಪ್ರೇಮ, ದೇಶಭಕ್ತಿ ಬೆಳೆಯುತ್ತದೆ. ವೈಜ್ಞಾನಿಕ ಚಿಂತನೆಗಳ ಕುರಿತು ಚರ್ಚಿಸಲು ಯುವ ಜನತೆ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತದೆ. ವಿದ್ಯಾರ್ಥಿಗಳು ದೇಶದ ಆರ್ಥಿಕ ಭದ್ರತೆ ಕುರಿತು ವಿಶ್ಲೇಷಣೆ ಮಾಡುವ ಎಲ್ಲಾ ಅವಕಾಶಗಳನ್ನು ಈ ವಿಶೇಷ ಶಿಬಿರ ಕಲ್ಪಿಸುತ್ತದೆ. ಪಠ್ಯ ಕಲಿಕೆಯ ಜತೆಗೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರಿಯಾಗುತ್ತದೆ‌ ಕಾಲೇಜಿನ ನ್.ಎಸ್.ಎಸ್‌ ಘಟಕ ಉತ್ತಮ ಸೇವೆ ಮಾಡಿರುವುದನ್ನು ಗುರುತಿಸಿ ಚಳ್ಳಕೆರೆ ಸರಕಾರಿ ಪಿಯು ಕಾಲೇಜು ರಾಜ್ಯದ ಅತ್ಯುತ್ತಮ 2021-22ನೇ ಸಾಲಿನ ಪ್ರಶಸ್ತಿಗೆ ಪಿಯು ಬೋರ್ಡ್ ಆಯ್ಕೆ ಮಾಡಿದೆ.
ಗ್ರಾಮೀಣ ಪ್ರದೇಶಗಳ ಸ್ವಚ್ಛತೆ, ಸೇವಾ
ಮನೋಭಾವ, ಪರಿಸರ ಸಂರಕ್ಷಣೆಯ ಜತೆ
ಜತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ
ಬೆಳೆಸುವುದು, ಮಹಿಳಾ ಸಬಲೀಕರಣ ಮತ್ತು
ಮಹಿಳೆಯರಲ್ಲಿ ನೈರ್ಮಲ್ಯತೆ
ಉಪನ್ಯಾಸದ ಜತೆಗೆ ಸಾಮಾಜಿಕ ಜೀವನದ
ಬಗ್ಗೆ ಅರಿವು ಮೂಡಿಸಿರುವ ಹಿನ್ನೆಲೆಯಲ್ಲಿ
ಕಾಲೇಜಿಗೆ ಈ ಪ್ರಶಸ್ತಿ ಸಿಕ್ಕಿದೆ.

ಸರಕಾರದ ದತ್ತು ಗ್ರಾಮಗಳ ಯೋಜನೆಗಳ
ಅನುಷ್ಠಾನ ಸಮೀಕ್ಷೆಯಲ್ಲಿ ಈ ಕಾಲೇಜು
ಅತ್ಯುತ್ತಮ ಸಾಧನೆ ಮಾಡಿದೆ. ಎನ್
ಎಸ್.ಎಸ್ ಅಧಿಕಾರಿ ಬಿ. ಶಾಂತಕುಮಾರಿ
ರಾಜ್ಯ ಮಟ್ಟದ ಅತ್ಯುತ್ತಮ ಕಾರ್ಯಕ್ರಮಾಧಿ
ಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೀಗೆ
ಡಬಲ್ ಧಮಾಕ ಚಳ್ಳಕೆರೆ ಪಿಯು ಕಾಲೇಜಿಗೆ
ಎನ್‌ಎಸ್‌ಎಸ್ ಘಟಕದಿಂದ ಸಿಕ್ಕಿದೆ ಜತೆಗೆ ಕಾಲೇಜಿನ ಫಲಿತಾಂಶವೂಸಹ ಉತ್ತಮವಾಗಿ ಬರುತ್ತಿದೆ.
ಅಮೃತ ಮಹೋತ್ಸವ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಕಳೆದ ವರ್ಷ ಸರಕಾರ ಅಮೃತ ಸಮುದಾಯ
ಅಭಿವೃದ್ಧಿ ಯೋಜನೆಯಡಿಯಲ್ಲಿ ಅತಿ ಹಿಂದುಳಿದ
ಹಳ್ಳಿಗಳೆಂದು ಗುರುತಿಸಲ್ಪಟ್ಟ 750 ಹಳ್ಳಿಗಳನ್ನು
ಎನ್‌ಎಸ್‌ಎಸ್ ಘಟಕ ದತ್ತು ಪಡೆದಿತ್ತು.
ಅಲ್ಲದೇ ಸರಕಾರದ ಯೋಜನೆಗಳ ಬಗ್ಗೆ
ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಲಾಗಿತ್ತು.ರ
ನಂತರ ಅವುಗಳನ್ನು ಅನುಷ್ಠಾನಗೊಳಿಸುವ
ಉದ್ದೇಶದಿಂದ ನಾನಾ ಇಲಾಖೆಗಳಿಗೆ ಹಂಚಿಕೆ
ಮಾಡಿದ್ದರಲ್ಲಿ ಪಿಯು ಬೋರ್ಡ್‌ನಿಂದ
ರಾಜ್ಯದ 860 ಎನ್‌ಎಸ್‌ಎಸ್ ಘಟಕಗಳ ಪೈಕಿ
23 ಕಾಲೇಜುಗಳು ಆಯ್ಕೆಯಾಗಿದ್ದು, ಚಳ್ಳಕೆರೆ
ಪಿಯು ಕಾಲೇಜು ಒಂದಾಗಿತ್ತು.
ದತ್ತು ಗ್ರಾಮಕ್ಕೆ ದೊಡ್ಡರಿ

ಸಮುದಾಯ ಅಭಿವೃದ್ಧಿ ಯೋಜನೆಯಡಿ ಚಳ್ಳ ಕೆರೆ ತಾಲೂಕಿನ ದೊಡ್ಡೇರಿ ಗ್ರಾಮವನ್ನು ಎನ್ ಎಸ್ ಎಸ್ ಘಟಕ ಚಳ್ಳಕೆರೆ ಪಿಯು ಕಾಲೇಜಿನಿಂದ ಅಮೃತ ಗ್ರಾಮಯೋಜನೆಯಡಿಆಯ್ಕೆಯಾಗಿತ್ತು.
ಈ ಹಳ್ಳಿಯಲ್ಲಿ
ಸಾಮಾಜಿಕ-ಆರ್ಥಿಕ ಸಮೀಕ್ಷೆ ಹಾಗೂ ನಾನಾ
ಇಲಾಖೆಗಳ ಸಹಭಾಗಿತ್ವದಲ್ಲಿ
ಯೋಜನೆಗಳನ್ನು ವಿದ್ಯಾರ್ಥಿಗಳು ಪ್ರಚಾರಗೊಳಿಸಿ ಅನುಷ್ಠಾನಗೊಳಿಸಿ
ಸರಕಾರಕ್ಕೆ ವರದಿಸಲ್ಲಿಸಲಾಗಿತ್ತು. ದೊಡ್ಡೇರಿ ಗ್ರಾಮದಲ್ಲಿ ವಿಧ್ಯಾರ್ಥಿಗಳೆ ಮನೆ ಮನೆಗೆ ಹೋಗಿ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ವಂಚಿತರಿಗೆ ಸೌಲಭ್ಯಗಳನ್ನು ಪಡಿತರ.ಪಿಂಚಿಣಿ.ಆರೋಗ್ಯ.ಶೌಚಾಲಯ.ಶಿಕ್ಷಣ. ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿ ಗ್ರಾಮದಲ್ಲಿ ಉತ್ತಮ ಸೇವೆ ಮಾಡಿದ್ದಕ್ಕೆ ಗ್ರಾಮಪಂಚಾಯಿತಿಯೂ ಸಹ ವಿದ್ಯಾರ್ಥಿ ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಿದ ಬೆನ್ನಲ್ಲೇ ಎನ್‌ಎಸ್‌ಎಸ್‌
ಘಟಕದ ಉತ್ತಮ ಸೇವೆ ಗುರುತಿಸಿ ಪಿ ಯು ಬೋರ್ಡ್
ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್
ಹಾಲ್‌ನಲ್ಲಿ ಅ.11ಕ್ಕೆ ನಡೆಯುವಸಮಾರಂಭದಲ್ಲಿ ರಾಜ್ಯ ಪ್ರಶಸ್ತಿಯನ್ನು ರಾಜಪಾಲರು ಪ್ರದಾನ ಮಾಡಲಿದ್ದಾರೆ. ಷ್ಟ್ರೀಯ ಸೇವಾ
ಯೋಜನೆ ಕೋಶ, ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆ ಹಾಗೂ ಪಿಯು
ಬೋರ್ಡ್ ಇದರ ನೇತೃತ್ವ ವಹಿಸಲಿದೆ. .

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page