ಚಳ್ಳಕೆರೆ ಜನಧ್ವನಿ ವಾರ್ತೆ ಡಿ.26. ನಗರ ಹಾಗೂ ಗ್ರಾಮೀಣ ಭಾಗದಿಂದ ಸಮಸ್ಯೆಗಳನ್ನು ಒತ್ತು ತಂದ ಕ್ಷೇತ್ರದ ಜನರು ಹೊಟ್ಟೆ ಹಸಿವಿನಿಂದ ಬಳಲು ಬಾರದು ಎಂಬ ಉದ್ದೇಶದಿಂದ ಕ್ಚೇತ್ರದ ಶಾಸಕ ಟಿ
ರಘುಮೂರ್ತಿ ಮತ್ತೊತ್ತು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಾಸಕರ ಭವನದ ಹಿಂಭಾಗದಲ್ಲಿ ಸುಮಾರು15 ಲಕ್ಚರೂ ವೆಚ್ಚದಲ್ಲಿ ಅನ್ನದಾಸೋಹ ಕೊಠಡಿ ನಿರ್ಮಾಣಕ್ಕೆ ಸಿದ್ದತೆ
ಹೌದು ಇದು ಚಳ್ಳಕೆರೆ ನಗರದ ಶಾಸಕರ ಭವನದ ಹಿಂಭಾದಲ್ಲಿರು ಖಾಲಿ ನಿವೇಶದಲ್ಲಿ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ ಅನ್ನದಾಸೋಹ ಭವನ್ನು ಶಾಸಕರ ಅನುದಾನದಲ್ಲಿಅತಿಶೀಘ್ರದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಕ್ಷೇತ್ರದ ಚುಕ್ಕಾಣಿ ಹಿಡಿದ ಪ್ರಾರಂಭದಿಂದ ಸುಮಾರು ಹತ್ತು ವರ್ಷಗಳಿಂದ ಶಾಸಕರ ಭವನದಲ್ಲಿ ಸ್ವಾತ್ರಂತ್ರ್ಯ ಪೂರ್ವದ
ನಂತರ ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನ
ಮಂತ್ರಿಗಳ, ರಾಜ್ಯದ ಮುಖ್ಯಮಂತ್ರಿಗಳ,
ಚಿತ್ರದುರ್ಗ ಕ್ಷೇತ್ರದ ಸಂಸದರ, ಕ್ಷೇತ್ರದ
ಶಾಸಕರ , ಬುದ್ದ, ಬಸವ,ಅಂಬೇಡ್ಕರ್
ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಆಚರಣೆಯ
ಮಹಾನ್ ಸಂತರ ಭಾವ ಚಿತ್ರ ಹಾಗೂ
ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ
ಪೋಟೊಗಳನ್ನು ಹಾಕಿರುವುದು
ನೋಡಿದರೆ
ಇಲ್ಲಿ ಜಾತಿ, ಧರ್ಮ, ಪಕ್ಷ ಬೇದ ಮರೆತು ಸರ್ವ
ಜನಾಂಗದ ತೋಟವಿದ್ದಂತಿದೆ. ಶಾಸಕರ ಭವನಕ್ಕೆ ಬರುವ ಸಾರ್ವಜನಿಕರಿಗೆ
ಬಿಸಿ ಬಿಸಿ ಅನ್ನ ಸಾಂಬಾರ್, ಕಾಫೀ, ಓದಲು
ಎಲ್ಲಾ ದಿನಪತ್ರಿಕೆಗಳು, ವಿವಿಧ ಪುಸ್ತಗಳನ್ನು
ಸಂಗ್ರಹಿ ಗ್ರಂಥಾಲಯ ಮಾಡಿರುವುದು
ವಿಶಾಲವಾದ ಸಭಾಂಗಣ ನಿರ್ಮಿಸಿರುವುದು ಜ್ಞಾನ ಬಂಡಾರವಾಗಿದ್ದು.
ಇದು ರಾಜಕ್ಕೆ ಮಾದರಿಯಾಗಿದೆ . *ಕೋವಿಡ್ ವೈರಾಣು ಹಸಿದ ಹೊಟ್ಟೆ ತುಂಬಿಸಿದ ಶಾಸಕ.* ಕೋವಿಡ್ ವೈರಾಣು ಹರಡುವುದನ್ನು ತಡೆಯಲು ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿದಂತ ಸಂದರ್ಭದಲ್ಲಿ ಹೋಟೆಲ್, ಖಾನಾವಳಿ ಎಲ್ಲಾ ಬಂದ್ ಆಗಿಬಿಟ್ಟಿದ್ದವು. ಆ ಸಂದರ್ಭದಲ್ಲಿ ಅನೇಕ ನಿರಾಶ್ರಿತರು, ಕಾರ್ಮಿಕರು, ಪರ ಊರುಗಳಿಂದ ಬಂದು ಚಳ್ಳಕೆರೆ ಕ್ಷೇತ್ರದಲ್ಲಿ ಉಳಿದಿದ್ದವರು ಕಂಗಾಲಾಗಿ ಹೋಗಿದ್ದರು.
ಈ ವೇಳೆ ಅಂಥವರ ಹಸಿವು ನೀಗಿಸುವ ಕೆಲಸ ಮಾಡಿದ್ದ ಶಾಸಕರು ಕೊರೊನಾ ಲಾಕ್ ಡೌನ್ ತೆರವು ಗೊಳಿಸುವ ತನಕ ಹಸಿದವರ ಹೊಟ್ಟೆ ತುಂಬಿಸಲು ಶಾಸಕರ ಭವನದಲ್ಲಿ ಪ್ರತಿ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಆಯೋಸುವ ಮೂಲಕ ಶಾಸಕ ಟಿ.ರಘುಮೂರ್ತಿ ಸಹ ಹಸಿದವರಿಗೆ ಕೈಯಾರೆ ಊಟ ಬಡಿಸುತ್ತಿದ್ದರು. ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರ ಶಾಸಕರ ಭವನ. ಕಳೆದ ಹತ್ತು ವರ್ಷಗಳಿಂದ ಇಲ್ಲಿ ಪ್ರತಿ ದಿನವೂ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ ಎನ್ನುವುದು ಈ ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತು. ಮಧ್ಯಾಹ್ನ ಮಾತ್ರ ಇದ್ದ ಊಟದ ವ್ಯವಸ್ಥೆ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಎರಡು ಹೊತ್ತಿಗೆ ವಿಸ್ತರಣೆಯಾಯಿತು.
ಪೊಲೀಸರು, ಆಶಾ ಕಾರ್ಯಕರ್ತೆಯರು, ಅ ಧಿಕಾರಿಗಳು, ವೃದ್ಧರು, ಅನಾಥರು, ನಿರಾಶ್ರಿತರು ಸೇರಿದಂತೆ ಪ್ರತಿ ದಿನ ಕನಿಷ್ಠ ಸುಮಾರು 500 ಕ್ಕೂ ಹೆಛಚು ಜನ ಇಲ್ಲಿ ಊಟ ಮಾಡುತ್ತಿದ್ದರಯ. ಶುದ್ಧ ಕುಡಿಯುವ ನೀರಿನ ಜತೆಗೆ, ಅತ್ಯಂತ ಸ್ವಚ್ಛವಾಗಿ ಶಾಸಕರ ಭವನದ ಸಿಬ್ಬಂದಿ ಬಿಸಿ ಬಿಸಿ ಅಡುಗೆ ತಯಾರಿಸಿ ಹಸಿದವರಿಗೆ ಬಡಿಸಿದ್ದಾರೆ.
.
ಈಗಿರುವ ಶಾಸಕರ ಭವನದ ಚಿಕ್ಕ ಅಡುಗೆ ಕೋಣೆಯಲ್ಲಿ ಅನ್ನ ಸಾಂಬಾರ್ .ಕಾಫಿ ತಯಾರಿಸುತ್ತಿರುವ ಕಚೇರಿ ಸಿಬ್ಬಂದಿ. ದೇವಸ್ಥಾನ. ಚತ್ರಗಳಿಗೆ ಸೀಮಿತವಾಗಿದ್ದ ದಾಸೋಹ ಭವನ ಈಗ ಕ್ಷೇತ್ರದ ಶಾಸಕರ ಭವನದ ಹಿಂಭಾಗದಲ್ಲಿ ಸುಸಜ್ಜಿತ ಹೈಟೆಕ್ ಅಡುಗೆ ಕೋಣೆ ನಿರ್ಮಿಸಿ ಸಮಸ್ಯೆಗಳನ್ನು ಒತ್ತುತಂದ ಜನರ ಹಸಿವು ನೀಗಿಸಲು ಶಾಸಕ ಟಿ.ರಘುಮೂರ್ತಿ ಮುಂದಾಗಿದ್ದಾರೆ.
0 Comments