ಚಳ್ಳಕೆರೆ ಜ.3.ಪ್ರಾಣ ಬಲಿಗಾಗಿ ಕಾಯುತ್ತಿರುವ ಗುಂಡಿ . ಹೌದು ಇದು ಶ್ರೀರಂಗಪಟ್ಟಣ ಬೀದರ್ ರಾಷ್ಟ್ರೀಯ ಹೆದ್ದಾರಿ ಚಳ್ಳಕೆರೆ ನಗರದಿಂದ ಬೆಂಗಳೂರು ಕಡೆಗೆ ಹೋಗುವ ಮುಖ್ಯ ರಸ್ತೆಯ ಬಸವರಾಜ್ ಮಂಡಿಮಠ್ ಮಿಲ್ ಸಮೀಪದ ಹಳ್ಳಕ್ಕೆ ನಿರ್ಮಿಸಿರುವ ಹೆದ್ದಾರಿ ಸೇತುವೆ ಕಿರಿದಾಗಿದ್ದು ಯಾವಾಗಲೂ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ ಇದೇ ಕಿರಿದಾದ ಸೇತುವೆ ಬಳಿ ಒಂದು ಚಿಕ್ಕದಾದ ಗುಂಡಿ ಬಿದ್ದಿದ್ದು ಈ ಗುಂಡಿ ತಪ್ಪಿಸಲು ದ್ವಿಚಕ್ಕವಾಹನ ಸವಾರ ಆಯಾತಪ್ಪಿ ಬೈಕ್ವಸಮೇತ ಬಿದ್ದು ಅಪಘಾತಗಳು ಸಂಭವಿಸುತ್ತಿವೆ.
ಅದೇ ರೀತಿ ಮಂಗಳವಾರ ಬೈಕ್ ಸವಾರರು ಇದೇ ಗುಂಡಿಯನ್ನು ತಪ್ಪಿಸಲು ಹೋದ ಟಿವಿಎಸ್ ಎಕ್ಸೆಲ್ ಹಿಂದಿಕ್ಕಲು ಹೋದ ಲಾರಿ ಬೈಕ್ ಗೆಡಿಕ್ಕಿ ಹೊಡೆದು ಸೇತುವೆ ಕೆಳಗೆ ಬಿದ್ದರೆ ಬೈಕ್ ಸವಾರ ಬೆಸ್ಕಾಂ ಪವರ್ ಮ್ಯಾನ್ ಸಿದ್ದಾಪುರ ಗ್ರಾಮದ ರಂಗಸ್ವಾಮಿ ಮೃತಪಟ್ಟಿರುತ್ತಾರೆ.
0 Comments