ಚಳ್ಳಕೆರೆ ಫೆ. 22 ನಗರದ ಪೊಲೀಸ್ ಠಾಣೆ ಆವರಣದಲ್ಲಿ ಚಿನ್ಬ ಬೆಳ್ಳಿ ವರ್ತಕರೊಂದಿಗೆ ಠಾಣಾಧಿಕಾರಿ ಕೆ.ಕುಮಾರ್ ಸಭೆ ನಡೆಸಿದರು.
ಈ ವೇಳೆ ಪಿಐ ಕೆ.ಕುಮಾರ್ ಮಾತನಾಡಿ ಅಪರಿಚಿತ ವ್ಯಕ್ತಿಗಳು ಬಂಗಾರದ ಅಂಗಡಿಗಳಿಗೆ ಬಂದು ಆಭರಣಗಳನ್ನು ಗಿರವಿ ಅಥವಾ ಕೊಂಡುಕೊಳ್ಳಬಾರದು. ಒಂದೇ ವೇಳೆ ಆಭರಣಗಳನ್ನು ಖರೀದಿ ಮಾಡುವಾಗ ಅವರ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಪಡೆದುಕೊಳ್ಳಬೇಕು. ಬಂಗಾರವು ಕಡಿಮೆ ಬೆಲೆಗೆ ಮಾರಾಟ ಇಡುತ್ತಾರೆಂದು ಅಪರಿಚಿತರ ಬಳಿ ಕೊಳ್ಳಬಾರದು ಎಂದು ಹೇಳಿದರು.
ಕಳ್ಳರು ಎಲ್ಲೋ ಬಂಗಾರದ ಆಭರಣಗಳನ್ನು ಕದೀಯುತ್ತಾರೆ. ಪೊಲೀಸರಿಗೆ ಸಿಕ್ಕಿಬಿದ್ದು, ತನಿಖೆ ಮಾಡುವಾಗ ಎಲ್ಲೋ ಮಾರಾಟ ಮಾಡಿ ಇಲ್ಲಿ ಬಂಗಾರದ ಅಂಗಡಿಗಳಿಗೆ ಮಾರಾಟ ಮಾಡಿದ್ದೇನೆಂದು ಹೇಳುತ್ತಾರೆ. ನಾವು ಆಗ ನಿಮ್ಮನ್ನು ವಶಕ್ಕೆ ಪಡೆದು ತನಿಖೆ ಮಾಡುವುದು, ಪ್ರಕರಣಗಳು ದಾಖಲು ಮಾಡಬೇಕಾಗುತ್ತದೆ. ಆದ್ದರಿಂದ ಬಂಗಾರದ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಗಳು ಅಳವಡಿಸಿಕೊಳ್ಳಬೇಕು, ಆಗ ಕಳ್ಳರು ನಿಮ್ಮ ಅಂಗಡಿಗಳಿಗೆ ಮಾರಾಟ ಮಾಡಿದ್ದಾನೋ, ಇಲ್ಲವೋ ಎನ್ನುವುದು ತಿಳಿಯುತ್ತದೆ, ಅಂಗಡಿಗಳಿಗೆ, ಬಂದು ಹೋಗುವವರು ಕಾಣುವಂತೆ ಗುಣಮಟ್ಟದ ಸಿಸಿ ಕ್ಯಾಮರಗಳನ್ನು ಹಾಕಿಸಿಕೊಳ್ಳಬೇಕು, ಬಂಗಾರದ ಅಂಗಡಿಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಬೇಟಿ ನೀಡಿದಾಗ, ಸಿಸಿ ಕ್ಯಾಮರ ಹಾಕಿಸಿಕೊಳ್ಳದ ಅಂಗಡಿಗಳಿಗೆ ೧೫ ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
.ಬಂಗಾರದ ಅಂಗಡಿಗಳಿಗೆ ಪದೆ-ಪದೇ ಅಪರಿಚಿತ ವ್ಯಕ್ತಿಗಳು ಬಂದು ಆಭರಣಗಳನ್ನು ಗಿರವಿ ಇಟ್ಟರೆ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಈ ವೇಳೆ ಪಿಎಸ್ಐ ಸತೀಶ್ ನಾಯ್ಕ್ ಸೇರಿದಂತೆ ಬಂಗಾರದ ಅಂಗಡಿ ಮಾಲೀಕರು ಇತರರಿದ್ದರು
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...
0 Comments