ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಎಲ್ಲೆಂದರೆಲ್ಲಿ ತ್ಯಾಜ್ಯವನ್ನು ಹಾಕುವುದನ್ನು ತಡೆಗಟ್ಟಲು ನಗರಸಭೆ ಸ್ಟೈನ್‌ಲೆಸ್ ಸ್ಟೀಲ್ ಡಸ್ಟ್ಬಿನ್‌ಗಳ ಅಳವಡಿಕೆ

by | 13/03/23 | ಜನಧ್ವನಿ


ಚಳ್ಳಕೆರೆ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಆಯ್ದ ಪ್ರಮುಖ ಸ್ಥಳಗಲ್ಲಿ ಹಣ ಕಾಸು ಯೋಜನೆಯಡಿಯಲ್ಲಿ ಸುಮಾರು 65ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ನಗರಸಭೆ ಅಳವಡಿಸಿರುವುದು.
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.13.
ಮನೆಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸುತ್ತಿರುವ ನಗರಸಭೆ ಇದೀಗ ರಸ್ತೆಗಳ ಸ್ವಚ್ಛತೆಗಾಗಿ ನಗರದ ಆಯ್ದ ಸ್ಥಳಗಳಲ್ಲಿ ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ಅಳವಡಿಕೆಗೆ ಮುಂದಾಗಿದೆ.
ಹೌದು ಚಳ್ಳಕೆರೆ ನಗರಸಭೆ ವ್ಯಾಪ್ತಿ ದಿನದಿಂದ ದಿನಕ್ಕೆ ತನ್ನ ವಿಸ್ತೀಣವನ್ನು ಹೆಚ್ಚಿಸಿಕೊಳ್ಳುತ್ತಿದ್ದು ದಿನಕ್ಕೆ ಸುಮಾರು ಟನ್ ಲೆಕ್ಕದಲ್ಲಿ ಪ್ರತಿ ನಿತ್ಯ ಕಸದ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಜನ ಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಪೌರಕಾರ್ಮಿರ ಕೊರತೆಯ ನಡುವೆಯೂ ದಿನ ನಿತ್ಯ ನಗರದ ಮುಖ್ಯ ರಸ್ತೆ, ತರಕಾರಿ ಮಾರುಟ್ಟೆ, ಸಂತೆ ಮೈದಾನ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿನ ಕಸವನ್ನು ಎತ್ತುವಳಿಗೆ ಮಾಡಲು ನಗರಸಭೆ ಅಧ್ಯಕ್ಷೆ ಉಪಾಧ್ಯಕ್ಷೆ , ಆರೋಗ್ಯಾಧಿಕಾರಿಗಳು, ಸಿಬ್ಬಂದಿಗಳು ಸಿಟಿ ರೌಂಡ್ ಮಾಡುತ್ತಿದ್ದಾರೆ.
ನಗರದ ಸಾರ್ವಜನಿಕ ಆಯ್ದ ಪ್ರಮುಖ ಸ್ಥಳಗಲ್ಲಿ ಹಣ ಕಾಸು ಯೋಜನೆಯಡಿಯಲ್ಲಿ ಸುಮಾರು ೬೫ ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ಅಳವಡಿಕೆ ಮಾಡಲಾಗಿದ್ದು ಸಾರ್ವಜನಿಕರಮ ಅಂಗಡಿ ಮುಂಗಟ್ಟುಗಳ ಮಾಲೀಕರು ಕಡ್ಡಾಯವಾಗಿ ನಗರಸಭೆಯ ಕಸದ ವಾಹನಗಳಿಗೆ ಅಂಗಡಿಗಳ ತ್ಯಾಜ್ಯ, ಕಸವನ್ನು ನೀಡುವಂತೆ ನಗರಸಭೆ ಜಾಗೃತಿ ಮೂಡಿಸಲಾಗುತ್ತಿದೆ.

ಪುಟ್ಟ ಕಂದಮ್ಮ ಒಂದು ಮನೆಯಲ್ಲಿನ ಕಸವನ್ನು ಸಂಗ್ರಹಿಸಿ ಕಸದ ವಾಹನ ಬಂದಾಗ ಕಸದೊಂದಿಗೆ ಕಾಯುತ್ತಿರುವುದು.

ನಗರಸಭೆಇಷ್ಟೆಯಲ್ಲಿ ಅಳವಡಿ ಜಾಗೃತಿ ಮೂಡಿಸಿದರೂ ಸಹ ಬೀಊದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆ ಹಾಗೂ ಚರಮಡಿಯಲ್ಲಿ ಕಸ, ಘನತ್ಯಾಜ್ಯ ಹಾಕುವುದು, ಸಾರ್ವಜನಿಕರು ಓಡಾಡುವಾಗ ತಿಂಡಿ ತಿನಿಸುಗಳ ತ್ಯಾಜ್ಯ, ಕವರ್‌ಗಳನ್ನು ರಸ್ತೆಗಳಲ್ಲೇ ಬಿಸಾಡುತ್ತಿರುವುದರಿಂದ ರಸ್ತೆ ಬದಿಯಲ್ಲಿ
ಕಸದ ರಾಶಿ ಸೃಷ್ಟಿಯಾಗುತ್ತಿದೆ. ಹೀಗಾಗಿ ಪಾದಚಾರಿಗಳು, ದಾರಿಹೋಕರು ತಿಂಡಿ ತಿನಿಸುಗಳ ತ್ಯಾಜ್ಯ, ಕವರ್‌ಗಳನ್ನು ರಸ್ತೆ ಬದಿಯಲ್ಲಿ ಬಿಸಾಡುವ ಬದಲು ಡಸ್ಟ್ಬಿನ್‌ಗಳಿಗೆ ಹಾಕಲೆಂಬ ಕಾರಣಕ್ಕೆ ಜೋಡಿ ಲಿಟರ್ ಬಿನ್‌ಗಳನ್ನು ಅಳವಡಿಸಲಾಗಿದೆ ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ನಗರದ ಸ್ವಚ್ಚತೆಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಗರಸಭೆ ಪರಿಸರ ಇಂಜಿನಿಯರ್ ನರೇಂದ್ರಬಾಬು ಮಾತನಾಡಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಎಲ್ಲೆಂದರೆಲ್ಲಿ ತ್ಯಾಜ್ಯವನ್ನು ಹಾಕುವುದನ್ನು ತಡೆಗಟ್ಟುವ ನಿಟ್ಟಿಯಲ್ಲಿ ಸ್ಟೈನ್‌ಲೆಸ್ ಸ್ಟೀಲ್ ಡಸ್ಟ್ಬಿನ್‌ಗಳನ್ನು ಗಳನ್ನು ಪೈಪ್‌ಗಳನ್ನು ಭೂಮಿಯಲ್ಲಿ ನೆಟ್ಟು ಆಗಿರುವುದರಿಂದ ಮಳೆ, ಗಾಳಿ, ಬಿಸಿಲಿನಿಂದ ಹಾಳಾಗುವ ಪ್ರಮಾಣ ಕಡಿಮೆ ಎರಡು ಒಂದು ಸಥಳದಲ್ಲಿ ಎರಡು ಡಸ್ಟ್ ಬಿನ್‌ಗಳನ್ನು ಅಳಡಿಸಿರುವುದರಿಂದ ಒಂದನ್ನು ಹಸಿ ಕಸ ಮತ್ತೊಂದನ್ನು ಒಣ ಕಸ ಸಂಗ್ರಹಕ್ಕೆ ಮೀಸಲಿಡಲಾಗಿದೆ. ಪ್ರತಿ ಲಿಟರ್ ಬಿನ್‌ಗಳು ೧೦೦ ಲೀಟರ್ ಸಾಮರ್ಥ್ಯ ಹೊಂದಿವೆ ಇದನ್ನು ನಗರಸಭೆ ಪೌರಕಾರ್ಮಿಕರು ಕಸ ಸಂಗ್ರಹ ವಾಹನದಲ್ಲಿ ಪ್ರತಿನಿತ್ಯ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.


ಆರೋಗ್ಯಾಧಿಕಾರಿ ಗೀತಾ ಮಾತನಾಡಿ ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ರಸ್ತೆ ಬದಿಯಲ್ಲಿನ ಕಸ ಸಂಗ್ರಹಣೆ ಮಾಡಲಾಗುವುದು ರಸ್ತೆ ಬದಿಯ ಎಲ್ಲೆಂದರೆಲ್ಲಿ ಸಕವನ್ನು ಹಾಕಿ ನಗರದ ಪರಿಸವನ್ನು ಹಾಳು ಮಾಡುತ್ತಿದ್ದರು ವರ್ತಕರಿಗೆ ಕಸವನ್ನ ರಸ್ತೆ ಹಾಗೂ ಚರಮಡಿಗಳಲ್ಲಿ ಹಾಕ ಬಾರದು ಎಂದು ಸೂಚನೆ ನೀಡಿದ ಮೇರೆಗೆ ಕಸವನ್ನು ಸಂಗ್ರಹಣೆ ಮಾಡಿ ವಾಹನ ಬಂದಾಗ ಕಸವನ್ನು ಹಾಕುತ್ತಾರೆ ಈಗ ಜನರಲ್ಲಿಯೂ ಸಹ ಜಾಗೃತಿ ಮೂಡಿದೆ ಎಂದು ತಿಳಿಸಿದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page