ಮಕ್ಕಳ ಭಾಗ್ಯಕ್ಕೆ ದತ್ತು ಪಡೆಯುವ ದಂಪತಿಗಳು ಮಕ್ಕಳ ಸಂಸ್ಕಾರ ಮತ್ತು ಕುಟುಂಬದ ಪ್ರೀತಿಗೆ ವೃದ್ದಾಶ್ರಮಗಳಿಂದ ಹಿರಿಯರನ್ನು ದತ್ತು ಪಡೆಯುವ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಆರ್.ದಯಾವತಿ ಪುತ್ತೂರ್ಕರ್

by | 26/05/24 | ಪುಸ್ತಕ


ಚಳ್ಳಕೆರೆ:
ಮಕ್ಕಳ ಭಾಗ್ಯಕ್ಕೆ ದತ್ತು ಪಡೆಯುವ ದಂಪತಿಗಳು ಮಕ್ಕಳ ಸಂಸ್ಕಾರ ಮತ್ತು ಕುಟುಂಬದ ಪ್ರೀತಿಗೆ ವೃದ್ದಾಶ್ರಮಗಳಿಂದ ಹಿರಿಯರನ್ನು ದತ್ತು ಪಡೆಯುವ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಆರ್.ದಯಾವತಿ ಪುತ್ತೂರ್ಕರ್ ಹೇಳಿದರು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿನ ಬನಶ್ರೀ ವೃದ್ದಾಶ್ರಮದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ತನುಶ್ರೀ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಮ್ಮಂದಿರ ದಿನಾಚರಣೆ ಮತ್ತು ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಿತ ಸಮಾಜದಲ್ಲಿ ಸಂಬಂಧಗಳ ಮೌಲ್ಯತೆ ಕುಸಿಯುತ್ತಿದೆ. ಕುಟುಂಬದಲ್ಲಿ ಹಿರಿಯ ಸಂಬAಧಗಳಿಲ್ಲದೆ ಸಂಸ್ಕಾರ ಸಿಗುತ್ತಿಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಬಿಡುವ ಮನಸ್ಥಿತಿ ಬೆಳೆಯುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಜೀವನವೇ ತ್ಯಾಗ ಮಾಡಿದ ಹೆತ್ತವರ ಕೊನೆ ದಿನಗಳ ಸೇವೆಯಲ್ಲಿ ಋಣ ತೀರಿಸಿಕೊಳ್ಳಬೇಕಿದೆ ಎಂದರು.
ವೃದ್ದರಿಗೆ ಅಭಿನಂದಿಸಿ ಮಾತನಾಡಿದ ವೇದಿಕೆ ಗೌರವ ಅಧ್ಯಕ್ಷ, ವಕೀಲ ಬಿ.ಕೆ. ರಹಮತ್‌ವುಲ್ಲಾ, ವಿಲಾಸಿ ಹಂಬಲದಲ್ಲಿ ಕುಟುಂಬದ ಪ್ರೀತಿ ಕಾಣುತ್ತಿಲ್ಲ. ಕಲುಷಿತ ಸಮಾಜ ತಿದ್ದಲು ಅಂತಃಕರಣ ಸಾಹಿತ್ಯ ಅಗತ್ಯವಿದೆ. ತಾಯಿ, ಮಕ್ಕಳ ಮತ್ತು ಕುಟುಂಬದ ಪ್ರೀತಿಯ ಬಗ್ಗೆ ಹೆಚ್ಚು ಸಾಹಿತ್ಯ ರಚನೆ ಆಗಬೇಕು. ಅವಿಭಕ್ತ ಕುಟುಂಬಗಳ ಪ್ರೀತಿ ಕಂಡ ನೆಲದಲ್ಲಿ ಸ್ವಾರ್ಥ ಜೀವನ ನಡೆಯುತ್ತಿದೆ. ವೃದ್ದಾಶ್ರಮಗಳು ಕೊನೆಯಾಗಲು ಯುವಕರಲ್ಲಿ ಕುಟುಂಬ ಮತ್ತು ಮಾನವೀಯ ಸಂಬAಧಗಳ ಅರಿವು ಮೂಡಬೇಕಿದೆ ಎಂದು ಕಿವಿಮಾತು ಹೇಳಿದರು.
ಸಮಾಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶಫೀವುಲ್ಲಾ ಮಾತನಾಡಿ, ನಿವೃತ್ತಿ ಬಳಿಕ ಬಂದ ಹಿಡಿಗಂಟು ಹಣದಲ್ಲಿ ವೃದ್ದಾಶ್ರಮ ಆರಂಭ ಮಾಡಿರುವ ಎಸ್. ಮಂಜುಳಮ್ಮ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಲೌಖಿಕ ಅನುಭವ ಕಂಡ ಹಿರಿಯರ ಸೇವೆಯಲ್ಲಿ ದೇವರನ್ನು ಕಾಣುವ ಮಾರ್ಗ ಕಂಡುಕೊAಡಿದ್ದಾರೆ ಎಂದು ಹೇಳಿದರು.
ಕವಿಯತ್ರಿ ಶೋಭಾ ಮಲ್ಲಿಕಾರ್ಜುನ ಮಾತನಾಡಿ, ಮಾನವನ ಧರ್ಮದಲ್ಲಿ ಇನ್ನೊಬ್ಬರಿಗೆ ನೆರವಾಗಬೇಕು. ವಯಸ್ಸಾದವರಿಗೆ ಸೇವೆ ಮಾಡುವ ಮೂಲಕ ಧರ್ಮದ ಮೂಲ ಉಳಿಸಬೇಕು. ಪ್ರಸ್ತುತ ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯ ಸಂಬAಧಗಳ ನಡುವೆ ವೃದ್ದಾಶ್ರಮ ಸೇವೆ ಸಾರ್ಥಕ ಅನಿಸುತ್ತದೆ. ಎಷ್ಟೋ ಜೀವಗಳು ಅನ್ನ ಇಲ್ಲ ಎನ್ನುವುದಕ್ಕಿಂತ ಕುಟುಂಬದಿಂದ ಪ್ರೀತಿ ಸಿಗುತ್ತಿಲ್ಲ ಎಂದು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ವೃದ್ದಾಶ್ರಮ ಸಂಸ್ಥಾಪಕಿ ಎಸ್. ಮಂಜುಳಮ್ಮ ಮಾತನಾಡಿ, ಕುಟುಂಬಕ್ಕೆ ಗಂಡು ಮಕ್ಕಳೆ ಸ್ಥಿರವಲ್ಲ. ನನ್ನ ತಂದೆಯ ಹೆಸರೇಳಲು ವೃದ್ದಾಶ್ರಮ ಆರಂಭ ಮಾಡಿದ್ದೇನೆ. ಇಲ್ಲಿ ಆಶ್ರಯ ಪಡೆದವರಲ್ಲಿ ಹೆಚ್ಚು ಗಂಡುಮಕ್ಕಳಿಂದ ನೋವು ಅನುಭವಿಸಿ ಬಂದವರೂ ಇದ್ದಾರೆ. ನಗರದ ಕೆಲ ಶ್ರೀಮಂತ ಮನೆತನದಲ್ಲೂ ಪ್ರೀತಿ, ಹಾರೈಕೆ ಕಾಣದೆ ಬಂದಿದ್ದಾರೆ. ತಕ್ಷಣವೇ ಮಗ ಸೊಸೆಯಂದಿರು ಇನ್ನು ಮುಂದೆ ತಪ್ಪಾಗಿ ನಡೆದುಕೊಳ್ಳುವುದಿಲ್ಲ ಎಂದು ಮನಪರಿವರ್ತನೆ ಮಾಡಿಕೊಂಡು ಮರಳಿ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಮರಿಸಿದರು.
ಶಿಕ್ಷಕ ರವಿಕುಮಾರ್ ಇದೇ ವೇಳೆ ವೃದ್ದಾಶ್ರಮಕ್ಕೆ ೫ ಸಾವಿರ ಧನ ಸಹಾಯ ಮಾಡಿದರು. ಕಾರ್ಯಕ್ರಮದಲ್ಲಿ ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ಕೆ.ಎಸ್. ತಿಪ್ಪಮ್ಮ, ಎಂ.ಡಿ. ಓಬಣ್ಣ, ಕವಿತಾ, ಶಿವರುದ್ರಪ್ಪ, ಮುದ್ದುರಾಜ್, ಬೆಳಕು ಪ್ರಿಯ, ವಿನಾಯಕ, ಶಬ್ರೀನ್ ಮಹಮ್ಮದ್ ಅಲಿ, ಎಂ. ಯತೀಶ್, ತಿಪ್ಪೀರಮ್ಮ, ಪಗಡಲಬಂಡೆ ನಾಗೇಂದ್ರಪ್ಪ, ವಿನಾಯಕ, ಎಚ್. ಸತೀಶ್‌ಕುಮಾರ್, ಎನ್.ಶಿವಾನಂದ, ಎನ್. ಕುಶ ಮತ್ತಿತರರು ಭಾಗವಹಿಸಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page