ತಮಿಳುನಾಡು ಚಂಡಮಾರುತ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆಗೆ ಶ್ರೀಜಪಾನಂದಸ್ವಾಮಿ ಸಿದ್ದತೆ.

by | 07/12/23 | ಸಾಮಾಜಿಕ


ಪಾವಗಡ ಡಿ7 ತಮಿಳುನಾಡು ಚಂಡಮಾರುತದಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಶ್ರೀ ಜಪಾನಂದಸ್ವಾಮಿಗಳು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡಕ್ಕೆ, ಕಳೆದ ಒಂದು ವಾರದಿಂದ ಏಕಪ್ರಕಾರವಾಗಿ ತಮಿಳುನಾಡಿನಿಂದ ಅದರಲ್ಲಿಯೂ ಮದ್ರಾಸ್ ಮಹಾನಗರದ ತಾಮ್ರಂ, ಏರ್ಪೋರ್ಟ್, ಮಲ್ಲಿಯಂಕರಣೆ, ಕಾಂಚಿಪುರಂ ,ಮುಂತಾದ ಪ್ರದೇಶಗಳಿಂದ ನಿರಂತರವಾಗಿ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತವೆ . ಇದಕ್ಕೆ ಕಾರಣ ಈ ಹಿಂದೆ ಅಂದರೆ ಎರಡು ಸಾವಿರದ ಹದಿನೈದನೇ ಇಸವಿಯಲ್ಲಿ ಬಂದಂತಹ ಪ್ರಳಯ ಹಾಗೂ 2018ನೇ ಇಸ್ವಿಯಲ್ಲಿ ಬಂದಂತಹ ಗಜ ಚಂಡಮಾರುತದಲ್ಲಿ ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಕೈಗೊಂಡ ಪರಿಹಾರ ಕಾರ್ಯ ಇಂದಿಗೂ ಆ ಜನರು ಮರೆತಿಲ್ಲ .ಕೋಟ್ಯಾಂತರ ರೂಪಾಯಿಗಳ ಪರಿಹಾರ ಕಾರ್ಯವನ್ನು ಅನೇಕ ಸಂಘ ಸಂಸ್ಥೆಗಳ ಹಾಗೂ ಮುಖ್ಯವಾಗಿ ಇನ್ಫೋಸಿಸ್ ಫೌಂಡೇಶನ್ ರವರ ಸಹಕಾರದಿಂದ ಸಹಸ್ರ ಸಹಸ್ರ ಜನರಿಗೆ ನಿರಂತರವಾಗಿ ಆಪತ್ಬಾಂಧವರಾಗಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಕಾರ್ಯವೈಸಿದ್ದು, ಇಂದಿಗೂ ಆ ಜನರ ಹೃದಯದಲ್ಲಿ ಮತ್ತು ಮನದಲ್ಲಿ ಅಚ್ಚಳಿಯದೆ ಉಳಿದಿದೆ . ಈ ಕಾರಣದಿಂದ ಪೂಜ್ಯ ಸ್ವಾಮಿ ಜಪಾನಂದ ಜೀ ರವರನ್ನು ಮತ್ತೆ ಈ ಸೇವ ಕಾರ್ಯಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿ ಕೊಂಡಿರುವ ಈ ಜನರಿಗೆ ಪೂಜ್ಯ ಸ್ವಾಮೀಜಿಯವರು ಅವರ ಆ ಕಷ್ಟವನ್ನು ನೋಡಲಾರದೆ ಮತ್ತೆ ಚಂಡಮಾರುತ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ತಾಮ್ರಮ್ ಹಾಗೂ ಚೆನ್ನೈ ಮಹಾನಗರದ ಲಯನ್ಸ್ ಕ್ಲಬ್ಬಿನ ಸ್ವಯಂಸೇವಕರಿಗೆ ಸೇವಾ ಕಾರ್ಯವನ್ನು ಮಾಡಬೇಕೆಂದು ತಿಳಿಸಿರುತ್ತಾರೆ. ಈ ಯೋಜನೆ ಬಹುಶಹ ಒಂದು ಕೋಟಿಯನ್ನು ದಾಟುವಂತಿದೆ ಈಗಾಗಲೇ ಪ್ರತಿಯೊಂದು ಕುಟುಂಬಕ್ಕೆ ಎಲ್ಲ ರೀತಿಯ ದಿನಸಿ ಅಕ್ಕಿ ಸಕ್ಕರೆ ರವೆ ಗೋಧಿಹಿಟ್ಟು ಬೇಳೆ ಮುಂತಾದವುಗಳ ಜೊತೆ ನೂತನ ವಸ್ತ್ರಗಳು, ಹೊದಿಕೆಗಳು ,ಇತ್ಯಾದಿಗಳನ್ನು ಅಣಿ ಮಾಡಲು ಪ್ರಾರಂಭಿಸಿದ್ದಾರೆ .ಚೆನ್ನೈ ಮಹಾನಗರದ ಇನ್ಫೋಸಿಸ್ ಸಂಸ್ಥೆಯ ಸ್ವಯಂಸೇವಕರು ಈ ಯೋಜನೆಯಲ್ಲಿ ಸಹಕಾರ ನೀಡಲಿದ್ದಾರೆ . ಪೂಜ್ಯ ಸ್ವಾಮೀಜಿಯವರು ಈ ಬಾರಿ ಸರಿಸುಮಾರು ನಾಲ್ಕು ಸಹಸ್ರ ಕುಟುಂಬದವರಿಗೆ ತತ್ ಕ್ಷಣದ ಸಹಾಯವನ್ನು ನೀಡಲು ಸಜ್ಜಾಗಿದ್ದು ಈಗಾಗಲೇ ಚೆನ್ನೈ ಮಹಾನಗರಕ್ಕೆ ಪ್ರಯಾಣ ಬೆಳೆಸಲು ತಯಾರಾಗಿದ್ದಾರೆ ತಮ್ಮ ಸ್ವಯಂಸೇವಕ ರ ತಂಡದೊಂದಿಗೆ ಈ ಮಹಾನ್ ಕಾರ್ಯವನ್ನು ಕೈಗೊಳ್ಳಲು ಧುಮುಕಿದ್ದಾರೆ, ಇದೇ ಅಲ್ಲವೇ ನಿಜವಾದ ಆಪದ್ಬಾಂಧವ ಎನಿಸಿಕೊಳ್ಳುವಂತಹ ತಂಡ ಈ ತಂಡದ ರೂವಾರಿಯಾಗಿರುವ ಪೂಜ್ಯ ಸ್ವಾಮಿ ಜಪಾನಂದಜಿಯರವರಿಗೆ ಎಲ್ಲ ಆಶ್ರಮದ ಹಿತೈಷಿಗಳು ಭಕ್ತರು ಹಾಗೂ ಬೆಂಗಳೂರಿನ ಮತ್ತು ಇತರ ನಗರಗಳ ಹಿತೈಷಿಗಳು ಸ್ವಯಂಸೇವಕರು ಸ್ವಾಮೀಜಿಯವರಿಗೆ ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಸ್ವಾಮಿ ವಿವೇಕಾನಂದರ ಸೇನಾನಿಯಾಗಿ ಸ್ವಾಮಿ ಜಪಾನಂದರು ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಸಹಸ್ತ್ರ ಸಹಸ್ರ ಜನರಿಗೆ ಸಹಾಯ ಹಸ್ತವನ್ನು ನೀಡಲು ಮುಂದಾಗುತ್ತಿರುವುದು ಸ್ವಾಮಿ ವಿವೇಕಾನಂದರ ಶಕ್ತಿ ಅಲ್ಲದೆ ಬೇರೇನೂ ಇಲ್ಲ ಎನ್ನಬಹುದು ಈ ಭಯಾನಕ ಹಾಗೂ ಅಪಾಯಕರವಾದ ಸ್ಥಿತಿಗಳನ್ನು ಸರಿಯಾದ ನಿದ್ರೆ ಊಟ ಮತ್ತಿತರ ವ್ಯವಸ್ಥೆಗಳನ್ನು ಪಕ್ಕಕ್ಕಿಟ್ಟು ಕಷ್ಟದಲ್ಲಿರುವ ಜನರ ಕೈ ಹಿಡಿದು ಮೇಲೆತ್ತುವ ಈ ಸನ್ಯಾಸಿಗೆ ,ಜನತೆ ,ಯುವಕರು ಹಾಗೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕೆಂದು ಆಶ್ರಮದ ಅಧಿಕಾರಿ ವರ್ಗದವರು ಮನವಿ ಮಾಡಿರುತ್ತಾರೆ . ಇದೇ ಸಂದರ್ಭದಲ್ಲಿ ಜೀವನಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯಲ್ಲಿಯೂ ಸಹ ಪೂಜ್ಯ ಸ್ವಾಮೀಜಿಯವರು ಯಾವುದನ್ನು ಲೆಕ್ಕಿಸದೆ ಕಳೆದ 30 ವರ್ಷಗಳಿಂದ ಏಕಪ್ರಕಾರವಾಗಿ ಅಂದರೆ ಗುಜರಾತಿನ ಭೂಕಂಪದಿಂದ ಹಿಡಿದು ಸುನಾಮಿ ,ಗಜ, ಹಾಗೂ ಭಯಂಕರವಾದ ಕೋವಿಡ್ ಸಂದರ್ಭದಲ್ಲಿಯೂ ಆರು ರಾಜ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಚ್ಚೆದೆಯ ಪೂಜ್ಯ ಸ್ವಾಮಿ ಜಪಾನಂದ ಜೇವರಿಗೆ ಅವರಿಗೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಹೋದರ ಸಂಸ್ಥೆಗಳ ಪರವಾಗಿ ಎಲ್ಲ ಕಾರ್ಯಕರ್ತರು ಶುಭಾಶಯವನ್ನು ಕೋರಿದ್ದಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page