ಸಾಮಸಜಕ್ಕೆ ಸಿನಿಮಾ ರಂಗದ ಮೂಲಕಬಕೊಡುಗೆ ನೀಡಿದ ದಿ.ನಟರ ಜೂ. ನಟರಿಂದ ರಸಮಂಜರಿ ಕಾರ್ಯಮ.

by | 05/08/23 | ರಂಗಭೂಮಿ

ಚಳ್ಳಕೆರೆ ಆ.5. ಭಾನುವಾರ ಸರಕಾರಿ ಬಿಸಿನೀರು ಮುದ್ದಪ್ಪ ಸರಕಾರೊ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಜೂ.ಕಲಾವಿದರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಹಾಗೂ ಶಾಸಕರಿಗೆ ಸನ್ಮಾನ ಹಾಗೂ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವವಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಶ್ರೀವಿಶ್ವ ಭಾರತಿ ಯುವ ಬಳಗ ಗೋಣಿಬೀಡು, ನೇತಾಜಿ ಸ್ನೇಹ ಬಳಗ, ಸುರಕ್ಷಾ ಪಾಲಿ ಕ್ಲಿನಿಕ್, ರೋಟರಿ ಕ್ಲಬ್, ಸಂಜೀವಿನಿ ಲ್ಯಾಬ್, ಹಾಗೂ ಸೃಷ್ಟಿ ಮಿತ್ರ ಬಳಗದ ಸಹಯೋಗದೊಂದಿಗೆ ನಗರದ ಬಿ ಎಂ ಜಿ ಎಚ್ ಎಸ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿರುವ ವಿಶ್ವ ಭಾರತಿ ಯುವ ಬಳಗ ಗೋಣಿಬೀಡು ಇವರು ನಿರ್ಮಿಸಿರುವ ಕಲಾವಿದರ ಆಶ್ರಯಧಾಮ ಮತ್ತು ಸಂಗೀತ ಶಾಲೆಯ ಸಹಾಯಾರ್ಥ ಕನ್ನಡ ನಿತ್ಯೋತ್ಸವ ರಸಮಂಜರಿ ಕಾರ್ಯಕ್ರಮದ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಇಂದಿನ ಯುವ ಸಮೂಹಕ್ಕೆ ಡಾ‌. ರಾಜಕುಮಾರ್ ಡಾ. ವಿಷ್ಣುವರ್ಧನ್ ಡಾ. ಅಂಬರೀಶ್, ಶಂಕರ್ ನಾಗ್ ರಂತಹ ಅದ್ಭುತ ಕಲಾವಿದರನ್ನು ಕಾಣಲು ಸಾಧ್ಯವಾಗದ ಕಾರಣ ಇಂತಹ ಜೂನಿಯರ್ ಕಲಾವಿದರ ನಟನಾ ಕೌಶಲ್ಯದಿಂದಾದರು ಮೇರು ನಟರನ್ನು ನೆನಪಿಸುವಂತಾಗಬೇಕು ಎಂದು ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಆರ್ ಪ್ರಸನ್ನ ತಿಳಿಸಿದರು.

ಭದ್ರಾವತಿಯ ಅಭಿಜಾತ ಕಲಾವಿದ ಜಿ ಎಸ್ ಆರಾಧ್ಯ (ಜೂನಿಯರ್ ಅಂಬರೀಶ್) ರವರು ಹೆಸರಾಂತ ಕನ್ನಡ ಚಲನಚಿತ್ರ ನಟ ದಿ.ಅಂಬರೀಶ್ ರವರ ಹಲವು ಚಿತ್ರಗಳ ಅಭಿನಯದ ಅನುಕರಣೆ ಅಷ್ಟೇ ಅಲ್ಲದೆ ಇನ್ನು ಹಲವು ನಟ ನಟಿಯರಿಂದ ವಿವಿಧ ಪಾತ್ರಗಳ ನಟನ ವಿಶೇಷ ಪ್ರದರ್ಶನವನ್ನು ಕಾರ್ಯಕ್ರಮದಲ್ಲಿ ನೀಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್ ಜೂನಿಯರ್ ರವಿಚಂದ್ರನ್ ಜೂನಿಯರ್ ಶಂಕರ್ ನಾಗ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸುವರು ಈ ರಸಮಂಜರಿ ಕಾರ್ಯಕ್ರಮಕ್ಕೆ ಯೋಜನಾ ಮತ್ತು ಸಾಂಕಿಕ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಶಾಸಕ ಟಿ ರಘುಮೂರ್ತಿ ಶಾಸಕ ಕೆ ಸಿ ವೀರೇಂದ್ರ ರಾಜ್ಯ ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಅಧಿಕಾರಿ ವರ್ಗ ಪಾಲ್ಗೊಳ್ಳುವರು ಕನ್ನಡ ವಿಷಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಭದ್ರಾವತಿಯ ಅಭಿಜಾತ ಕಲಾವಿದ ಜಿಎಸ್ ಆರಾಧ್ಯ (ಜೂನಿಯರ್ ಅಂಬರೀಶ್) ಮಾತನಾಡಿ ಕನ್ನಡಿಗರ ಮನಸೂರೆಗೊಳ್ಳುವಂತೆ ಅಭಿನಯಿಸಿ ತಮ್ಮ ನಟನ ಚಾತುರ್ಯದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು 60 ವರ್ಷ ದಾಟಿದ ಅನೇಕ ಬಡ ಕಲಾವಿದರು ಇಂದು ಅವಕಾಶ ವಂಚಿತರಾಗಿ ಬೀದಿಗೆ ಬಂದಿದ್ದಾರೆ ಅಂತಹವರನ್ನು ಗುರುತಿಸಿ ಭದ್ರಾವತಿಯ ಗೋಣಿಬೀಡು ಗ್ರಾಮದಲ್ಲಿ ಶ್ರೀ ವಿಶ್ವ ಭಾರತಿ ಯುವ ಬಳಗ ವತಿಯಿಂದ ಕಲಾವಿದರ ಆಶ್ರಯ ಧಾಮ ಮತ್ತು ಸಂಗೀತ ಶಾಲೆಯ ನಿರ್ಮಾಣ ಮಾಡಿ ಕಲಾವಿದರನ್ನು ಸಲಹುವ ಇಚ್ಛೆ ಹೊಂದಿದ್ದು ತಮ್ಮ ಬದುಕಿನುದ್ದಕ್ಕೂ ಬಣ್ಣ ಹಚ್ಚಿಕೊಂಡು ರಂಜಿಸಿ ಇಂದು ಅವರ ಜೀವನದ ಅಂತ್ಯಕಾಲದಲ್ಲಿ ಬೀದಿಗೆ ಬೀಳಬಾರದು ಎಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ತನು-ಮನ ಧನಸಹಾಯ ಪಡೆದು ಕಲಾವಿದರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ ಎಂದು ತಿಳಿಸಿದರು.

ಕೆಪಿಸಿಸಿ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷ ಆರ್ ಪ್ರಸನ್ನಕುಮಾರ್ ಮಾತನಾಡಿ ಚಳ್ಳಕೆರೆ ಕ್ಷೇತ್ರ ಬರದ ನಾಡಾಗಿದ್ದರು ಕಲೆಯನ್ನು ಪೋಷಿಸುವ ಇಂತಹ ಅಭಿಜಾತ ಕಲಾವಿದರಿಗೆ ಸದಾ ನೆರವು ನೀಡುವ ಮೂಲಕ ಚಳ್ಳಕೆರೆ ಕಲಾಭಿಮಾನಿಗಳು ಹಲವು ಬಾರಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಈ ಬಾರಿಯೂ ರಸಮಂಜರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯಕ್ಕೆ ಮಾದರಿಯಾಗುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಟಿ ವೀರಭದ್ರಪ್ಪ ಸಂಜೀವಿನಿ ಲ್ಯಾಬ್ ನ ಎಂ ಎನ್ ಮೃತ್ಯುಂಜಯ ಸೃಷ್ಟಿ ತಿಪ್ಪೇಶ್ ಸುರಕ್ಷ ಪಾಲಿ ಕ್ಲಿನಿಕ್ ನ ಫರೀದ್ ಖಾನ್ ವಿಶ್ವಕರ್ಮ ಸಮಾಜದ ಅಧ್ಯಕ್ಷ ವೆಂಕಟೇಶ್ ಅಖಿಲ ಭಾರತ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾದ ಸರಸ್ವತಿ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಾಜೇಶ್ವರಿ ನಾಗೇಂದ್ರ, ಚೇತನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page