ಸಾಣೀಕೆರೆ ಗ್ರಾಮದಲ್ಲಿ ನೆಲೆಸಿರುವ ಗಂಜಿಗುಂಟೆಮ್ಮ ಇತಿಹಾಸ

by | 06/11/22 | Uncategorized, ಕರ್ನಾಟಕ, ಚರಿತ್ರೆ, ಸಂಗ್ರಹ, ಸುದ್ದಿ

ಜನಧ್ವನಿ ಚಳ್ಳಕೆರೆ6 ರಾಷ್ಟ್ರೀಯ ಹೆದ್ದಾರಿ ಚಳ್ಳಕೆರೆ ಬೆಂಗಳೂರು ಮಾರ್ಗಗವಾಗಿ ಹೋಗುವರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 13 ಕಿ.ಮೀ ದೂರದಲ್ಲಿ ಸಿಗುವ ಸಾಣೀಕೆರೆಗ್ರಾಮ ಹತ್ತು ಹಲವು ವಿಶಿಷ್ಟ ಪಡೆದು ಕೂಡಿದ್ದು. ಪುರಾತನ ಇತಿಹಾಸ ಈ ಗ್ರಾಮದೊಂದಿಗೆ ತಳಕುಹಾಕಿಕೊಂಡಿದೆ. ಇಲ್ಲಿನ ಜನರರಿಂದ ಲಭ್ಯವಾಗುವ ಮಾಹಿತಿಗಳಿಂದ ಸ್ಥಳಿಯ ಪರಂಪರೆ ಅನಾವರಣಗೊಳ್ಳುತ್ತಾ ಹೋಗುತ್ತದೆ.
ಹಿನ್ನೆಲೆ
ಗ್ರಾಮದಲ್ಲಿ ನೆಲೆಸಿರುವ ಪ್ರಾಚೀನ ದೇವತೆ ಗಂಜಿಗುAಟಮ್ಮ ಈ ಭಾಗದ ಹತ್ತಾರು ಹಳ್ಳಿಗಳ ಭಕ್ತರನ್ನು ತನ್ನಡೆಗೆ ಸೆಳೆದುಕೊಂಡು ಅಪಾರ ಭಕ್ತ ಸಮುಹ ಹೊಂದಿದ್ದಾಳೆ ಇದಲ್ಲದೆ ಈ ಗ್ರಾಮ ಅನೇಕ ಐತಿಹಾಸಿಕ ಕುರುಗಳುಳ್ಳ ಕೋಟೆ, ಕೊತ್ತಲ, ಬುರುಜು ಬತೇರಿ, ಮಂಟಪಗಳು, ಉಯ್ಯಾಲೆ ಕಂಬ, ವೀರಗಲ್ಲು, ಸಪ್ತಮಾತೃಕೆಯರ(ಏಳುಮಂದಿ ಅಕ್ಕಮ್ಮ) ಕಲ್ಲುಗಳು ಇಲ್ಲಿನ ಇತಿಹಾಸಕ್ಕೆ ಕನ್ನಡಿ ಹಿಡಿಯುತ್ತಿವೆ.
ಸಾಣ Ãಕೆರೆ ಮಧ್ಯಭಾಗದಲ್ಲಿ ಸುಮಾರು ವರ್ಷಗಳ ಹಿಂದೆ ಬಂದು ನೆಲೆಸಿರುವ ಗಂಜಿಗುAಟಮ್ಮ ಗ್ರಾಮದ ಜನರ ಆರಾಧ್ಯ ದೇವತೆಯಾಗಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಈ ದೇವತೆ ಸಾಣೀಕೆರೆಗೆ ಬಂದು ನೆಲಸಿದ ಬಗ್ಗೆ ಯಾವುದೇ ಸ್ಪಷ್ಟ ಕುರುಗಳು ಇಲ್ಲವಾದರೂ ಹಿಂದಿನ ಕಾಲದ ಹಿರಿಯ ವಯಸ್ಕರು ಹೇಳುವ ಜನಪದ ಕತೆಗಳನ್ನು ಆಧರಿಸಿ ಗ್ರಾಮದ ಸಾಣ Ãಕೆರೆ ಸಾಹಿತಿ ಹಾಗೂ ಗ್ರಂಥಪಾಲಕ ಪತ್ರಿಕೆಗೆ ಮಾಹಿತಿ ನೀಡುತ್ತಾ ೨೫೦ ವರ್ಷಗಳ ಹಿಂದೆ ಸಾಣೀಕೆರೆಗೆ ಬಂದು ನೆಲೆಸಿದ್ದಾಳೆ ಎಂಬ ಮಾಹಿತಿ ನೀಡುತ್ತಾರೆ.
ದೇವಿಯ ಪೂರ್ವ ಇತಿಹಾಸದ ಕುರಿತು ಜನರಿಂದ ಮಾಹಿತಿ ಸಂಗ್ರಹಿಸಿದ ರಘು ಅನೇಕ ಜನಪದ ಕತೆಗಳನ್ನು ಹೇಳುತ್ತಾರೆ. ದೈವೀಸ್ವರೂಪಿ ದೇವಿಯು ಹೊಳೆಯಲ್ಲಿ ತೇಲುತ್ತಾ ಎಲ್ಲಿದಂಲೋ ಬಂದು ಸಾಣೀಕೆರೆ ಪಕ್ಕದ ಗಂಜಿಗುಂಟೆ ಗರಣಿ ಹಳ್ಳದ ದಡದಲ್ಲಿರುವ ಒಂದು ಪೊದೆಯಲ್ಲಿ ನೆಲೆಯೂರುತ್ತಾಳೆ. ದನಗಾಹಿ ಹುಡುಗರು ಹಳ್ಳದಲ್ಲಿ ನೀರು ಕುಡಿಸಲು ದನಗಳನ್ನು ಹೊಡೆದುಕೊಂಡು ಹೋದಾಗ ನಾನು ನಿಮ್ಮ ಜತೆ ಬರುತ್ತೇನೆ ಎಂಬ ವಿಚಿತ್ರ ದ್ವನಿಯೊಂದು ಕೇಳಿಸಿಕೊಂಡ ಹುಡುಗರು ಭಯಭೀತರಾಗಿ ಮನೆಯ ಹಿರಿಯರಿಗೆ ವಿಷಯ ತಿಳಿಸುತ್ತಾರೆ.
ಗಂಜಿ ಗುಂಟೆ ಗ್ರಾಮದ ಜಡಿಯಾರ ನಿಂಗಪ್ಪನ ಮಗನ ಕನಸಿನಲ್ಲಿ ಬಂದ ದೇವತೆ ನಿಮ್ಮ ಮನೆಗೆ ಬರುವುದಾಗಿ ಕೋರಿಕೊಳ್ಳುತ್ತಾಳೆ. ಅಂದಿನಿಂದ ಗಂಜಿಗುಂಟೆಯಲ್ಲಿದ್ದ ದೇವಿ ನಂತರದ ದಿನಗಳಲ್ಲಿ ಸಾಣ ಸಾಣೀಕೆರೆಯಲ್ಲಿ ಬಂದು ನೆಲೆಯೂರಿದಳು ಎಂಬ ಕತೆ ಕೇಳಿಬರುತ್ತದೆ. ಗಂಜಿಗುಂಟಮ್ಮ ದೇವಿಯನ್ನು ಕರಿಯಮ್ಮ ದೇವಿ ಎಂಬ ಹೆಸರಿನಿಂದಲೂ ಕರೆಯುವುದು ವಾಡಿಕೆಯಾಗಿದೆ. ಇಂತಹ ದೇವತೆಗೆ ಮೂರು ವರ್ಷಕೊಮ್ಮೆ ಸಾಣೀಕೆರೆ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳ ಜನರು ದೊಡ್ಡ ಜಾತ್ತಾ ಮಹೋತ್ಸವ ನಡೆಸುತ್ತಾರೆ. ಒಂದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬುಡಕಟ್ಟು ಸಮುದಾಯದ ಅನೇಕ ಆಚರಣೆಗಳನ್ನು ಇಲ್ಲಿ ಮುಂದುವರಿಸಲಾಗುತ್ತಿದೆ.
ಜಾತ್ರೆ ಪ್ರಾರಂಭಕ್ಕೂ ಮುನ್ನ ದೇವಿಯನ್ನು ಗಂಜಿಗುಂಟೆ ಗರಣಿ ಹಳ್ಳಕ್ಕೆ ಕರೆದೊಯ್ದು ಹಳ್ಳದಲ್ಲಿ ಎರೆಡು ಚಿಲುಮೆ ತೋಡಿ ದೇವಿಗೆ ಗಂಗಾಸ್ಣಾನ, ಅಭಿಷೇಕ, ನಂತರ ಏಳು ಜನ ಈರಗಾರರು ಮತ್ತು ದೇವಿಯ ಪಟ್ಟದ ಪೂಜಾರಿ ಉಪವಾಸ ನಡೆಮುಡಿಯಲ್ಲಿ ಬಂದು ಮಧ್ಯರಾತ್ರಿಯಲ್ಲಿ ದೇವಿಯ ಅಗ್ನಿಕುಂಡದಲ್ಲಿ ನಡೆದು ಹೋಗುವುದು ರೋಮಾಂಚನವನ್ನುಂಟು ಮಾಡುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page