ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಎರಡನೇ ದಿನದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ “ಭಾಗವತದಲ್ಲಿ ನವವಿಧಭಕ್ತಿ” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡಿದ ಅವರು ಭಗವಂತನ ನಾಮ-ಗುಣದ ಶ್ರವಣ, ಕೀರ್ತನೆ,ಸ್ಮರಣೆ, ಭಗವಂತನ ಪಾದಸೇವೆ,ಅರ್ಚನೆ,ವಂದನೆ,ದಾಸ್ಯಭಾವ, ಸಖ್ಯಭಾವ,ಆತನಲ್ಲಿ ಆತ್ಮನಿವೇದನೆ ಮಾಡಿಕೊಳ್ಳುವುದರಿಂದ ನಾವು ಭಗವಂತನಲ್ಲಿ ಪೂರ್ಣ ಭಕ್ತಿಯನ್ನು ಹೊಂದವುದರಿಂದ ಭಗವಂತ ಭಕ್ತರಾಧೀನನಾಗುತ್ತಾನೆ. ಎಂದು ತಿಳಿಸಿದರು. ಈ ವಿಶೇಷ ಸತ್ಸಂಗ ಕಾರ್ಯಕ್ರಮದ ಮೊದಲು ಪೂಜ್ಯರು ವಿಶೇಷ ಭಜನೆಯನ್ನು ನಡೆಸಿಕೊಟ್ಟರು. ಈ ಸತ್ಸಂಗ ಸಭೆಯಲ್ಲಿ ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಶ್ರೀ ನೇತಾಜಿ ಪ್ರಸನ್ನ, ಕೃಷ್ಣಮೂರ್ತಿ, ಲಕ್ಷ್ಮಣ ರೆಡ್ಡಿ, ದೊಡ್ಡಜ್ಜಯ್ಯ,ಕಾವೇರಿ ಸುರೇಶ್, ರತ್ನಮ್ಮ,ಜಗದಂಬಾ,ಹೇಮಾಕ್ಷಿ, ಯತೀಶ್ ಎಂ ಸಿದ್ದಾಪುರ, ವೆಂಕಟೇಶ್, ರಮೇಶ್,ಆಶಾ ನಾಗರಾಜ್,ಉಷಾ ಶ್ರೀನಿವಾಸಲು, ವನಜಾಕ್ಷಿ ಮೋಹನ್,ನಾಗರತ್ನಾ, ಮಾಣಿಕ್ಯ ಸತ್ಯನಾರಾಯಣ, ಗಂಗಮ್ಮ, ರಶ್ಮಿ,ಹಿತಾ, ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಪಾಲ್ಗೊಂಡಿದ್ದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...
0 Comments