” ನರರಾಕ್ಷಸನ‌ ವಿಕೃತ ಅಟ್ಟಹಾಸ………
****************************************
ನಾವು‌ ಚಿಕ್ಕವರಿದ್ದಾಗ ದೆವ್ವ, ಪಿಶಾಚಿ, ರಾಕ್ಷಸರೆಂದರೆ‌ ಮನುಷ್ಯರಿಗೆ ತದ್ವಿರುದ್ಧವಾದ ಅತಿ ಭಯಂಕರ ರೂಪ ಹೊಂದಿರುವ, ನೋಡಿದರೆ ಬೆಚ್ಚಿ‌ಬೀಳುವ ಕ್ಷುದ್ರ ಆಕೃತಿಗಳು ಎಂಬ ವಿಶೇಷ ಕಲ್ಪನೆಯಿತ್ತು. ಕಥೆ, ಸಿನಿಮಾ‌, ಡ್ರಾಮಾ, ಫ಼್ಯಾಂಟಸಿ ಕಥಾನಕಗಳಲ್ಲೂ ದೆವ್ವ ಪಿಶಾಚಿಗಳೆಂದರೆ ಒಂದು ರೀತಿಯ ಭಯಾನಕ ಚಿತ್ರಣವೇ‌ ಕಣ್ಣಮುಂದೆ ಇತ್ತು. ಆದರೆ ಸ್ವತಃ ದೆವ್ವ- ಭೂತಗಳೂ ಹೆದರಿಕೊಳ್ಳು ವಂತಹಾ, ಕಾಡು ಪ್ರಾಣಿಗಳೂ ನಾಚಿಕೆ ಪಟ್ಟುಕೊಳ್ಳುವಂತಹ, ವಿಷಜಂತುಗಳೂ ಬೆಚ್ಚಿ ಬೀಳುವ ಭಯಂಕರ ಕೃತ್ಯಗಳನ್ನು ಈ ನರ ಮನುಷ್ಯ ಎಂಬ ವಿಚಿತ್ರ ಪ್ರಾಣಿ ಮಾಡಬಲ್ಲ ಎಂಬುದು ಎಂದೋ ಸಾಬೀತಾಗಿದೆ, ಆಗುತ್ತಲಿದೆ ಹಾಗೂ ಆಗಲಿದೆ.

ಆ ಸಾಲಿಗೆ‌ ಇಲ್ಲೊಬ್ಬ ನರರಾಕ್ಷಸನ‌ ಹೇಯ‌ ಕೃತ್ಯ ಸೇರ್ಪಡೆ ಯಾಗಿದೆ. ಹಾಗೇ ಗಮನಿಸಿ.

ತನ್ನೊಡನೆ ಮದುವೆಯಾಗದೇ ಒಟ್ಟಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿ, ಅವಳ ದೇಹವನ್ನು ಬರೋಬ್ಬರಿ 35 ತುಂಡುಗಳನ್ನಾಗಿಸಿ, ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಆಕೆಯ‌ ದೇಹದ ಭಾಗಗಳನ್ನು ಸರಿ ರಾತ್ರಿಯಲ್ಲಿ ಹೂತು ಹಾಕಿರುವ ಭೀಭತ್ಸಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ನರರಕ್ಕಸ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಮೊನ್ನೆ ಸುದ್ದಿಯಾಗಿದೆ.

ಇದರ ಹಿನ್ನೆಲೆ‌ ಕೆದಕಿದಾಗ ಸಿಕ್ಕಿದ್ದಿಷ್ಟು !

ಕೊಲೆಯಾದ ನತದೃಷ್ಟೆ ಯುವತಿಯ ಹೆಸರು ಶ್ರದ್ಧಾ. ಕೊಲೆಮಾಡಿದ ನಫ಼್ತಟಾಲ್ ನರರಕ್ಕಸ , ಅಫ಼್ತಾಬ್ ಅಮೀನ್ ಪೂನವಾಲಾ ಎಂಬ ಮಾನವ ರೂಪ ಹೊತ್ತ ಕಾಡು ಮೃಗ.

ಶ್ರದ್ಧಾ ಮುಂಬೈನ‌ ಎಂ.ಎನ್.ಸಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಸಾಮಾಜಿಕ ಜಾಲತಾಣದ ಮೂಲಕ‌ ಪರಿಚಯವಾದ ಅಫ಼್ತಾಬ್ ಅಮೀನ್ ಎಂಬ ಪರಮ ಅಯೋಗ್ಯನ ಪ್ರೀತಿಯೆಂಬ ಆಕರ್ಷಣೆಗೆ‌ ಸಲೀಸಾಗಿ ಬೀಳುತ್ತಾಳೆ. ನಂತರ ಬಹುತೇಕ ಮೊಬೈಲ್‌ ಪ್ರೀತಿಗಳಂತೆ ಈ ಹುಚ್ಚು ಆಕರ್ಷಣೆ ಅವರ ನಡುವಿನ ಡೇಟಿಂಗ್ ನ‌ ಪರಾಕಾಷ್ಠೆ ತಲುಪಿದೆ. ಸಹಜವಾಗಿ ಎದುರಾದ ಮನೆಯವರ ವಿರೋಧವನ್ನೂ‌ ಲೆಕ್ಕಿಸದೇ ಈ ಲಫ಼ಂಗನೊಂದಿಗೆ ಭವಿಷ್ಯದ ಕನಸು ಕಂಡು ದೆಹಲಿಗೆ ಹಾರಿ ಅಲ್ಲಿ ಇವನೊಂದಿಗೆ ಕೂಡಿ ಬಾಳುವ ಕನಸಿಗೆ ಹೆಜ್ಜೆ ಇಟ್ಟಿದ್ದಾಳೆ. ಅವಳೊಂದಿಗೆ, ಅವಳ ಹಣದಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಸುಖ ಕಾಣುತ್ತಿದ್ದ ಈ ಕಂತ್ರಿಯಲ್ಲಿ, ದಿನ ಕಳೆದಂತೆ‌ ತನ್ನನ್ನು ಮದುವೆಯಾಗುವಂತೆ‌ ಪೀಡಿಸುತ್ತಿದ್ದ ಶ್ರದ್ಧಾಳ ವರ್ತನೆ‌ ಆಕ್ರೋಷ ಹುಟ್ಟಿಸಿ ಅವನಲ್ಲಿನ ಮೃಗತ್ವವನ್ನು ಹೊರಹಾಕಿದೆ. ಎಲ್ಲಿಯವರಗೆ ಅವಳ ಹಣ, ಸೌಂದರ್ಯ, ದೇಹ ಈ ಎಲ್ಲದರ ರುಚಿ‌ ಇತ್ತೋ ಅಲ್ಲಿಯವರೆಗೆ ಅವಳನ್ನು ಎಂಜಾಯ್ ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡು ಆನಂತರ‌ ಶ್ರದ್ಧಾಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾನೆ.

ಅಷ್ಟೇ ಆಗಿದ್ದಲ್ಲಿ ಈ ಪ್ರಕರಣಕ್ಕೆ ಇಷ್ಟೊಂದು‌ ಕ್ರೂರತೆ ಬರುತ್ತಿರಲಿಲ್ಲ. ಅವಳನ್ನು ಕೊಲೆ ಮಾಡಿ ಆನಂತರ ಅವಳ ಶವವನ್ನು 35 ತುಂಡುಗಳನ್ನಾಗಿ ಮಾಡಿ ಅದನ್ನು ದೆಹಲಿಯ ಮೆಹ್ರೌಲಿಯ ಅರಣ್ಯ ಭಾಗಗಳಿಗೆ ಮಧ್ಯರಾತ್ರಿ ಎರಡು ಘಂಟೆಯ ವೇಳೆಗೆ‌ ಹದಿನೆಂಟು ದಿನಗಳ ಕಾಲ ಹೋಗಿ ಎಸೆದಿದ್ದನಂತೆ ! ಅವಳ ದೇಹದ ತುಂಡುಗಳನ್ನಿರಿಸಲು‌ ಈ ಅಯೋಗ್ಯ ಹೊಸ ಫ಼್ತಿಡ್ಜ್ ಕೂಡಾ ಖರೀದಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆಯಂತೆ‌!

ಇಂತಹಾ‌ ಭೀಭತ್ಸ ದುಷ್ಕೃತ್ಯವನ್ನು ನೋಡಿದಾಗ ಯಾವ ಕೋನದಲ್ಲಿ ಮನುಷ್ಯನಾದವನು ಕ್ಷುದ್ರ ರಾಕ್ಷಸರಿಗಿಂತ ಕಡಿಮೆಯಿರಲು ಸಾಧ್ಯ ಎಂದೆನಿಸುವುದಲ್ಲವೇ ? ಇಂಥವರನ್ನು ಮನುಷ್ಯ ಎನ್ನಲು ಸಾಧ್ಯವೇ ?

ಮೊದಲನೆಯದಾಗಿ ಹರೆಯಕ್ಕೆ ಕಾಲಿಟ್ಟ‌ ಹುಡುಗಿಯರ‌ ಮನಸ್ಥಿತಿಯೆನ್ನುವುದು ಸುಲಭದ ಅರ್ಥಕ್ಕೆ ಸಿಗದ‌‌ ವಸ್ತುವಾಗಿ ಅಂದಿನಿಂದ ಇಂದಿನವರೆಗೂ ಉಳಿದಿದೆ. ಅದರಲ್ಲೂ ಇಂದಿನ ಅಂತರ್ಜಾಲ ಯುಗದಲ್ಲಿ , ಮೊಬೈಲ್ ಫೋನ್ ಗಳ ಭ್ರಮಾತ್ಮಕ ಬದುಕಲ್ಲಿ ಒಬ್ಬರನ್ನು ಆಕರ್ಷಣೆಗೆ ಒಳಗಾಗುವುದೂ- ಒಳಗಾಗಿಸುವುದೂ ಎರಡೂ ಸುಲಭ. ನೋಡಲು ಚಂದವಿರುವ ಸ್ಟೈಲಾಗಿರುವ ವ್ಯಕ್ತಿ ಮೊಬೈಲ್ ಸ್ಕ್ರೀನ್ ನಲ್ಲಿ ಪರಿಚಯವಾದನೆಂದರೆ ತಮ್ಮೆಲ್ಲಾ ಇಹಪರವನ್ನೂ ಮರೆತು, ವಾಸ್ತವ ಲೋಕದಿಂದ ಇನ್ನೆಲ್ಲೋ ಕಳೆದುಹೋಗಿಬಿಡುತ್ತಾರೆ. ಇದಕ್ಕೆ ಅಮಾಯಕ ಹುಡುಗಿ ಅಥವಾ ಹುಡುಗ ಯಾರಾದರೂ ಆಗಿರಬಹುದು.

ಇನ್ಸ್ಟಾ ಗ್ರಾಮ್, ಫ಼ೇಸ್ ಬುಕ್,ವಾಟ್ಸಪ್ ಗಳ ಚಾಟುಗಳಲ್ಲಿ , ಫೋಟೋಗಳಲ್ಲಿ ತಲೆತೂರಿಸಿ ಅಲ್ಲಿನ ಆಕರ್ಷಣೆಗೆ ಬಿದ್ದು ತಮ್ಮ ಕಾಲ ಮೇಲೆ ತಾವೇ‌ ಚಪ್ಪಡಿ ಎಳೆದುಕೊಳ್ಳುವ ಅನೇಕರಿದ್ದಾರೆ. ಈ ಹಂತದಲ್ಲಿ ಯಾರ ಬುದ್ದಿವಾದವಾಗಲೀ , ಯಾವುದೇ ವಾಸ್ತವ ಪ್ರಜ್ಞೆಯಾಗಲೀ ಕೆಲಸ ಮಾಡಲಾರದು. ಈ ಕಾರಣಕ್ಕಾಗಿಯೇ ಸಾಮಾಜಿಕ ಜಾಲತಾಣದ ಕೆಲ‌ ಕ್ಷುದ್ರ ಮನಸುಗಳು ಸರಿಯಾದ ಅವಕಾಶಕ್ಕಾಗಿ ಕಾದು ಸೂಕ್ತ ಸಮಯ ನೋಡಿ ತಮ್ಮ‌ ಖೆಡ್ಡಾಕ್ಕೆ ಅಮಾಯಕರನ್ನು ಬೀಳಿಸಿಕೊಂಡು ಇನ್ನಿಲ್ಲದ ಅಪರಾಧಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅದರಲ್ಲೂ ಹುಡುಗಿಯ/ ಮಹಿಳೆಯ ಜೊತೆ ಮೊಬೈಲ್ ನಲ್ಲಿ ಸಲಿಗೆ ಬೆಳೆಸಿಕೊಂಡು ಅವರೊಂದಿಗಿನ ಖಾಸಗಿ ಕ್ಷಣಗಳ ವಿಡಿಯೊ ಮಾಡಿ ಅಥವಾ ಅವರ ಖಾಸಗೀ ಪೋಸುಗಳ ಫೋಟೋಗಳನ್ನು ತೆಗೆದು ಬ್ಲಾಕ್ ಮೈಲ್ ಮಾಡುತ್ತಾ ಹೆದರಿಸಿ ಬ್ಲಾಕ್ ಮೈಲ್ ಮಾಡುತ್ತಾ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಾರೆ.

ಈ‌ ಬಗ್ಗೆ ಏನೇ ಎಚ್ಚರಿಕೆ ನೀಡಿದರೂ ಪ್ರಕರಣಗಳು ಕಡಿಮೆಯಾಗುವ ಬದಲು ದಿನೇ ದಿನೇ ಹೆಚ್ಚುತ್ತಿವೆ.

ಈ ಮೇಲಿನ ಘಟನೆಯಲ್ಲಿ ಮೂಲ ತಪ್ಪು ಎಲ್ಲಿದೆ ?

ಕೇವಲ ಮೊಬೈಲ್ ಸ್ಕ್ರೀನಿನಲ್ಲಿ ಚೆನ್ನಾಗಿ ಹಲ್ಲು ಕಿರಿದ ಅಯೋಗ್ಯನೊಬ್ಬ ನೋಡಲು ಸ್ಮಾರ್ಟಾಗಿದ್ದಾನೆಂಬ ಏಕೈಕ ಕಾರಣಕ್ಕಾಗಿ ಹಿಂದೆ ಮುಂದೆ ನೋಡದೇ ಇಪ್ಪತ್ತೈದು ವರ್ಷ ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಅವನೊಟ್ಟಿಗೆ ಪರಾರಿಯಾಗಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಮೈ, ಮನಸ್ಸು ಎರಡನ್ನೂ ಅನಾಮತ್ತು ಕೊಡುತ್ತಾರೆಂದರೆ ಅಲ್ಲಿಗೆ ತಪ್ಪು ಎಲ್ಲಿದೆ…. ಯಾರಲ್ಲಿದೆ ?

ಆಯ್ತು … ಪ್ರೀತಿಗೆ ಜಾತಿ, ಧರ್ಮ, ಅಂತಸ್ತು, ಉದ್ಯೋಗ ಇದಾವುದರ ಭೇದವಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಅವನು ನಿಜವಾಗಿಯೂ ಇವಳನ್ನು ಪ್ರೀತಿಸುವವನಾಗಿದ್ದರೆ ಮೊದಲು ಮದುವೆಯಾಗಿ ನಂತರ ರಿಲೇಷನ್ ಶಿಪ್ ಮುಂದುವರೆಸ ಬೇಕಿತ್ತಲ್ಲವೇ ? ನಿಜವಾದ ಪ್ರೀತಿಗೂ, ಸ್ವಾರ್ಥಕ್ಕಾಗಿ ಟಿಶ್ಯೂ ಪೇಪರಿನಂತೆ ಉಪಯೋಗಿಸಿ ಬಿಸಾಕುವ ಪ್ರೇತಗಳ ಟೆಂಪೊರೆರಿ ಕಿಕ್ಕಿಗೂ ವ್ಯತ್ಯಾಸ ಅರಿಯದೇ ಹೋದರೆ ಹಾಗೂ ವಾಸ್ತವ ಜಗತ್ತಿಗೆ ಮುಖ ಮಾಡದೇ ಭ್ರಮಾಲೋಕದ ಬಾಳಿನಲ್ಲಿ ಮುಳುಗೇಳುವ ಕನಸ ಕಂಡರೆ….ಅಲ್ಲಿ ಶ್ರದ್ಧಾಳಿಗೆ ಆದ ಗತಿ ಇಲ್ಲಿ ಎಲ್ಲರಿಗೂ ಆದೀತು ! ಎಚ್ಚರವಿರಲಿ.

** ಮರೆಯುವ ಮುನ್ನ **

ನಮ್ಮ ಸಮಾಜದ ಸಮಸ್ಯೆಯೆಂದರೆ ಎಂತಹಾ ಕಣ್ಣು ತೆರೆಸುವ ಘಟನೆಗಳಾದರೂ ಅವುಗಳನ್ನು ಬಹುಬೇಗ ಮರೆತು ಮತ್ತೇ‌‌ ಯಥಾ ಸ್ಥಿತಿಯ ಹಳಿಗೇ ಮರಳುವುದು ಹಾಗೂ ಒಳ್ಳೆಯದು – ಕೆಟ್ಟದರ ನಡುವಿನ ಸೂಕ್ಷ್ಮ‌ ವ್ಯತ್ಯಾಸದ ಪದರನ್ನು ಗುರುತಿಸಲು ಪರದಾಡುವುದು , ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿನ ಅವಾಸ್ತವಿಕತೆಗೆ, ಮಾಯಾ ಭ್ರಮೆಗೆ ಸಲೀಸಾಗಿ ತೆರೆದುಕೊಳ್ಳುವುದು. ವಸ್ತುಸ್ಥಿತಿ ಹೀಗಿರುವುದರಿಂದಲೇ ನೆಟ್ ಲೋಕದ ನಯವಂಚಕರು ಅತಿ ಸುಲಭಕ್ಕೆ ಯಾಮಾರಿಸಬಹುದಾದ ಹೆಣ್ಣು/ ಗಂಡು ಗಳನ್ನು ತಮ್ಮದೇ ಆದ ನೆಟ್ ವರ್ಕ್ ಮೂಲಕ ಜಾಣತನದಿಂದ ಹೆಕ್ಕಿ ಬಲೆ ಬೀಸಿ ತಮ್ಮ ಜಾಲಕ್ಕೆ ಕೆಡವಿ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಸಾಧ್ಯವಾಗಿರುವುದು.

ಶ್ರದ್ಧಾಳದ್ದು ಹೆಚ್ಚು ಕಡಿಮೆ ಇದೇ ರೇಂಜಿನ ಕೇಸು. ಅದೇನೇ ಇರಲಿ ! ಒಬ್ಬ ಅಮಾಯಕ ಯುವತಿಯ ಜೊತೆ ತಿಂಗಳುಗಳ ಕಾಲ ಡೇಟಿಂಗ್ ಮಾಡಿ ಅವಳದೆಲ್ಲವನ್ನೂ ಅನುಭವಿಸಿ ಆನಂತರ ಅವಳನ್ನು‌ ಬರ್ಬರವಾಗಿ ತುಂಡುತುಂಡಾಗಿ ಕತ್ತರಿಸಿ ಅರಣ್ಯ ಪ್ರದೇಶದಲ್ಲಿ ಹೂತು ಬರುತ್ತಾನೆಂದರೆ ಇಂಥವರನ್ನು ಯಾವುದರಲ್ಲಿ ಹೊಡೆಯಬೇಕು, ಯಾವ ಕಾನೂನಿನಿಂದ ಹೇಗೆ ಶಿಕ್ಷಿಸಬೇಕು ಅಥವಾ ಇತರರಿಗೆ ಪಾಠವಾಗುವ ಯಾವ ದಂಡನೆ ವಿಧಿಸಬೇಕು ಎಂಬುದು ತರ್ಕಕ್ಕೆ‌ ನಿಲುಕದ ಸಂಗತಿಯಾಗಿದೆ. ಇವನಿಗೆ ಕೊಡುವ ಶಿಕ್ಷೆ, ಈ ತರಹದ ಅಪರಾಧಗಳಲ್ಲಿ‌ ಭಾಗಿಯಾಗುವವರಿಗೆಲ್ಲಾ ಒಂದು ಎಚ್ಚರಿಕೆಯ ಗಂಟೆಯಾಗಲೆಂದಷ್ಟೇ ನಾವು ಆಶಿಸಬಹುದು.

ಅಫ಼್ತಾಬ್ ಅಮೀನ್ ನಂತಹ ಕ್ರೂರ ಮೃಗಗಳ ಬಗೆಗೆ, ಸಾಮಾಜಿಕ ಜಾಲತಾಣಗಳ ವಿಷಜಾಲಗಳ ಬಗೆಗೆ ಅಮಾಯಕ ಹೆಣ್ಣುಮಕ್ಕಳು ಮೈತುಂಬಾ ಎಚ್ಚರವಿರೋದು ಒಳ್ಳೆಯದು .

# ಲಾಸ್ಟ್ ಪಂಚ್ #

ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿದು ಹಾಳಾಗುವುದು ಬಟ್ಟೆಯೇ !

ಪ್ರೀತಿಯಿಂದ…

ಹಿರಿಯೂರು ಪ್ರಕಾಶ್.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page