ದನಗಳ ಕಡಿಮೆ ಸಂಖ್ಯೆಯಲ್ಲೂ ಸಡಗರ ಸಂಭ್ರಮದಿಂದ ಗೋಪನಹಳ್ಳಿ ಗ್ರಾಮದಲ್ಲಿ ದೀವಣಿಗೆ ಹಬ್ಬ ಆಚರಣೆ.

by | 14/11/23 | ಸುದ್ದಿ


ಚಳ್ಳಕೆರೆ. ನ.14 ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದೀಪವಾಳಿ ಹಬ್ಬದ ಹಂಗವಾಗಿ ಎತ್ತಿನ ಹಬ್ಬವನ್ನು ಸಡಗರ ಸಂಭ್ರಮದಿAದ ಮಂಗಳವಾರ ಸಂಜೆ ಆಚರಣೆ ಮಾಡಲಾಯಿತು.


ದೀವಣಿಗೆ ಹಬ್ಬದ ವಿಶೇಷವೆಂದರೆ ದನಗಳಿಗೆ ಅಲಂಕಾರ ಮಾಡಿ ಅವುಗಳ ಮೆರವಣಿಗೆ ನಡೆಸಿ ಊರ ಹೊರಗಿನ ದೇವಸ್ಥಾನ ಮುಂದೆ ಗ್ರಾಮದ 9 ಜನ ಅಯಾಗಾರರು ಕಳ್ಳೆ ಮುಳ್ಳು ಜಾತಿಯ ಬೇಲಿಯನ್ನು ಕಡಿದು ಈಡು(ಕಿಚ್ಚು) ಕಟ್ಟಲಾಗುತ್ತದೆ. ಗ್ರಾಮದಲ್ಲಿರುವ ಎಲ್ಲಾ ದನಗಳನ್ನು ಮೈತೊಳೆದು ಕೋಡುಗಳಿಗೆ ಬಣ್ಣ, ಕೋಡನ್ಸ್, ಹೂವಿನ ಹಾರ, ಬಲೂನ್ ಟೇಪ್ ಅಲಂಕರಿಸುತ್ತಾರೆ.
ಹೀಗೆ ಅಲಂಕರಿಸಿದ ದನಗಳನ್ನು ಪ್ರತಿಯೊಬ್ಬರು ಮೆರವಣಿಗೆ ಮೂಲಕ ಗ್ರಾಮದ ಬಸ್ ನಿಲ್ದಾಣದಲ್ಲಿ ಒಂದೆಡೆ ಕರೆತಂದು ಪಟಾಕಿ ಸಿಡಿಸಿ ಹರ್ಷಗೊಳ್ಳುತ್ತಾರೆ. ಪಟಾಕಿ ಸದ್ದಿಗೆ ದನಗಳು ಬೆದರುವಾಗ ಜನಗಳು ಕೇಕೆ ಹಾಕುತ್ತಾರೆ ಹರ್ಷಗೊಳ್ಳುತ್ತಾರೆ. ನಂತರ ಮೆರವಣಿಗೆ ಮೂಲಕ ಊರ ಹೊರಗಿನ ರುದ್ರಭೂಮಿ ಸಮೀಪ ಗ್ರಾಮದ ಒಂಬತ್ತು ಆಯಾಗಾರರು ಕಳ್ಳೆ ಮುಳ್ಳಿನಿಂದ ನಿರ್ಮಿಸಿದ ಈಡು(ಕಿಚ್ಚು) ಬಳಿ ದನಗಳನ್ನು ಹೊಡೆದುಕೊಂಡು ಹೋಗಿ ಈಡಿಗೆ ಪೂಜೆ ಸಲ್ಲಿಸಿ ನಂತರ ಬೆಂಕಿ ಹಚ್ಚಿದಾಗ ದನಗಳನ್ನು ಮೂರು ಸುತ್ತು ಸುತ್ತರಸಿ ಗ್ರಾಮದತ್ತ ಮರಳಿಗೆ ಮನೆಗಳಿಗೆ ಹೋಗುತ್ತವೆ ನಂತರ ಅವುಗಳಿಗೆ ಆರತಿ ಬೆಳೆಗೆ ಎಡೆ ಹಾಕಿ ಪೂಜೆ ಮಾಡಿ ಎಲ್ಲರೂ ಗೋ ಪೂಜೆ ಮಾಡುತ್ತಾರೆ.
ಕಣ್ಮರೆಯಾಗುತ್ತಿರು ಗುಮ್ಮಟಗಳು:
ಸುಮಾರು 18 ವರ್ಷಗಳ ಹಿಂದೆ ನೂರಕ್ಕೂ ಹೆಚ್ಚು ಎತ್ತುಗಳಿಗೆ ಗುಮ್ಮಟ, ಗಾಡಿಗುಮ್ಮಟ, ದ್ವನಿವರ್ಧಕಗಳನ್ನು ಹಾಕಿಕೊಂಡು ಅದ್ದೂರಿಯಾಗಿ ದೀವಣಿಗೆ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು ಸತತ ಬರಗಾಲಕ್ಕೆ ತುತ್ತಾಗಿ ಮೇವಿನ ಕೊರತೆಯಿಂದ ರೈತರು ದನಗಳನ್ನು ಮಾರಾಟ ಮಾಡಿ ಕೃಷಿಚಟುವಟಿಕೆಗೆ ಗುಡ್ ಬೈ ಹೇಳಿರುವುದರಿಂದ ದನಗಳ ಸಂಖ್ಯೆ ಕಡಿಮೆಯಾಗಿ ದೀವಣಿಗೆ ಹಬ್ಬದ ಮೇಲೆ ಬರದ ಕರಿ ನೆರಳು ಕಾಡುತ್ತಿದೆ ಎಂಬುದು ಹಿರಿಯರ ಅನಿಸಿಕೆಯಾಗಿದೆ.


ಕಲ್ಲು ಎಸೆಯುವುದು.


ಈಡು(ಕಿಚ್ಚು)ಗೆ ಬೆಂಕಿ ಹಚ್ಚಿದಾಗ ಹುರಿಯುವ ಕಿಚ್ಚಿನೊಳಗೆ ಚಿಕ್ಕ ಕಲ್ಲು ಹಾಕುವ ಪದ್ದತಿ ಇದೆ ಆದರೆ ಇದನ್ನು ಕೆಲವರು ದುರುಪಯೋಗ ಮಾಡಿಕೊಂಡು ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತುಗಳನ್ನಿಡಿದ ಹಾಗೂ ವೀಕ್ಷಣೆ ಮಾಡಲು ನಿಂತವರ ಮೇಲೆ ಕಲ್ಲುಗಳನ್ನು ಎಸೆಯುವುದರಿಂದ ರೈತರು ಎದರಿ ಎತ್ತುಗಳನ್ನು ಕಿಚ್ಚು(ಈಡಿ)ನಬಳಿ ಕರೆದುಕೊಂಡು ಬಾರದೆ ಮನೆಯ ಬಳಿಯೇಗೋವುಗಳಿಗೆ ಪೂಜೆ ಮಾಡಲಾಗುತ್ತಿದೆ ರಾತ್ರಿ ಮಬ್ಬುಗತ್ತಲು ಆದ್ದರಿಂದ ಯಾರು ಎಂಬುದು ಗೊತ್ತಾಗಲುವುದಿಲ್ಲ ಕಲ್ಲಿನೇಟು ತಿಂದವರು ಮುಂದಿನ ವರ್ಷ ಎತ್ತುಗಳನ್ನು ಕಿಚ್ಚು ಸುತ್ತುವರಿಸಲು ಮುಂದೆ ಬರುವುದಿಲ್ಲಿ ಇದರಿಂದಾಗಿ ಪ್ರತಿ ವರ್ಷ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾಹಿತಿಯನ್ನು ಕಲ್ಲಿನೇಟು ತಿಂದ ರೈತ ಮಾಹಿತಿ ನೀಡಿದ್ದಾನೆ.


ಗೋ ಪೂಜೆಗೆ ಸರಕಾರದ ಆದೇಶ.
ಹಿಂದೂ ದಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇವಸ್ಥಾನಗಳಲ್ಲಿ ದೀಪಾವಳಿ ಹಾಗೂ ನರಕಚತುರ್ದಸಿ ಹಬ್ಬದ ಅಂಗವಾಗಿ ನವಂಬರ್ 14 ರ ಸಂಜೆ 5.30 ಕ್ಕೆಸರಿಯಾಗಿ ದೇವಸ್ಥಾನದಲ್ಲಿ ಗೋಪೂಜೆ ನೆರೆವೇಸುವಂತೆ ಸರಕಾರದ ಆದೇಶದ ಮೇರೆಗೆ ಗಾಪೂಜೆ ಮಾಡಲು ತಯಾರಿ ನಡೆಸಿದ್ದಾರೆ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page