ಗ್ರಹಣ ಹಾಗೂ ನ್ಯೂಸ್ ಚಾನೆಲ್ ಗಳ ಸುತ್ತ

by | 08/11/22 | ಕಥೆ – ಕವನ, ವಿಶ್ಲೇಷಣೆ

***************************************
ಈ ಸೂರ್ಯಗ್ರಹಣ , ಚಂದ್ರಗ್ರಹಣ ಅಂತ ಬಂದರೆ ಸಾಕು, ಸೂರ್ಯ ಚಂದ್ರಗಿಂತಲೂ ಸಿಕ್ಕಾಪಟ್ಟೆ ಬಿಜ಼ಿ ಆಗೋದು ಅಂದ್ರೆ ನಮ್ಮ‌ ಟೀವಿ ನ್ಯೂಸ್ ಚಾನೆಲ್ ಗಳು ! ನಭೋಮಂಡಲದಲ್ಲಿ ಆಯಾ ಕಾಲಕ್ಕನುಸಾರವಾಗಿ ಘಟಿಸುವ ಈ ಕೌತುಕ ವಿದ್ಯಮಾನಗಳು ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋದರೂ ನಮ್ಮ ನ್ಯೂಸ್ ಚಾನೆಲ್ ಗಳು ಸುಮ್ಮನಿರಬೇಕಲ್ಲ ? ಇವರ ಕೃಪೆಯಿಂದ ಗ್ರಹಣಗಳಿಗೆ ಕಲರ್ ಫ಼ುಪ್ ವರ್ಣನೆ ಕೊಟ್ಟು ಭೂಮಂಡಲದ ಎಲ್ಲಾ ಜ್ಯೋತಿಷಿಗಳನ್ನು, ಪಂಡಿತರನ್ನೂ‌ ಸ್ಟುಡಿಯೋದಲ್ಲಿ‌ ಗುಡ್ಡೆ ಹಾಕಿ ಅವರಿಂದ ಪುಂಖಾನುಪುಂಖವಾಗಿ ಗ್ರಹಣದ ಪ್ರಭಾವದಿಂದಾಗಿ ಮನುಜರ ಮೇಲೆ ಆಗಬಹುದಾದ ವಿವಿಧ ಪರಿಣಾಮಗಳನ್ನು ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟಿಸಿ ತಿಳಿಸುತ್ತಾ , ವೀಕ್ಷಕ ರಾಶಿಯವರ ಮೆದುಳಿಗೇ ಕೈ ಹಾಕಿ ಚಂದ್ರ ಗ್ರಹಣ ಬಿಟ್ಟರೂ ಟೀವಿ ಗ್ರಹಣ‌ ಬಿಡದಂತೆ ಕಾಪಾಡಿಕೊಂಡು ಬರುತ್ತಾರೆ.

ಇದು ಪ್ರತೀ ಗ್ರಹಣದ ದಿನ‌ ನಡೆಯುವ ಟೀವಿ ವಿದ್ಯಮಾನ.

ಗ್ರಹಣಕ್ಕೆ ಸಂಬಂಧಿಸಿದಂತೆ ಪಾಲಿಸಬೇಕಾದ ಆಚಾರ ವಿಚಾರಗಳು ಹಾಗೂ ನಂಬಿಕೆಗಳ ಕುರಿತಾಗಿ ಹೆಚ್ಚು ಮಾತನಾಡದಿರೋದೇ ಬೆಟರ್ . ಏಕೆಂದರೆ ಪ್ರತಿಯೊಬ್ಬರೂ ಈ ದಿನ ಹೇಗಿರಬೇಕು , ಏನು ಮಾಡಬೇಕು- ಮಾಡಬಾರದು, ಏನು ತಿನ್ನಬೇಕು- ತಿನ್ನಬಾರದು, ಎಲ್ಲಿಗೆ ಹೋಗಬೇಕು- ಹೋಗಬಾರದು ಎಂಬ ಬಗ್ಗೆ ಈಗಾಗಲೇ ಮೈಂಡ್ ಫ಼ಿಕ್ಸ್ ಮಾಡಿಕೊಂಡಿರೋದ್ರಿಂದ ಯಾರನ್ನು ಯಾರೂ ಬದಲಾಯಿಸೋಕೆ ಆಗೋಲ್ಲ- ಹೋಗೋಲ್ಲ.

ಆದರೆ ನನ್ನಲ್ಲಿ ತೀರಾ ರೇಜಿಗೆ ಹುಟ್ಟಿಸುವ ಸಂಗತಿಯೆಂದರೆ ನಮ್ಮ ಟೀವಿ ನ್ಯೂಸ್ ಚಾನೆಲ್ ಗಳು ಜನರಲ್ಲಿ ಗ್ರಹಣದ ಬಗೆಗೆ ಹುಟ್ಟಿಸುತ್ತಿರುವ ವಿಪರೀತ ಕುತೂಹಲ ಹಾಗೂ ಸಾಮಾಜಿಕ ಭಯವನ್ನು ಕುರಿತದ್ದು ! ಇವರ ಅಡ್ವೈಸ್ ನ ಅಬ್ಬರ ಯಾವ ರೀತಿಯಲ್ಲಿ ಪರಿಣಾಮಕಾರಿ ಯಾಗಿರುತ್ತದೆಯೆಂದರೆ ಶುಗರ್ ಇರೋರೂ ಸಹ ಗ್ರಹಣ‌ ಬಿಡೋವರೆಗೂ ಏನೂ ತಿನ್ನೋಲ್ಲ, ಮೈ ಕೈ ನವೆಯಾದ್ರೂ ಸ್ನಾನ ಮಾಡೋ ಹಂಗಿಲ್ಲ, ಅನಿವಾರ್ಯವಿದ್ದರೂ ಎಲ್ಲಿಗೂ ಹೋಗೋ ಹಂಗಿಲ್ಲ, ಹೊರಗಡೆ ಎಲ್ಲೂ ಸುತ್ತೋ ಹಂಗಿಲ್ಲ, ರಸ್ತೆಗಳು, ಕಚೇರಿಗಳು, ಷಾಪ್ ಗಳು, ದೇವಾಲಯಗಳು ಎಲ್ಲವೂ ತಾವೇ ತಾವಾಗಿ ಬಂದ್ ಆಗಿಬಿಡುತ್ತವೆ. ಆಫ಼ೀಸುಗಳಲ್ಲಿ ಯಾವ ಕೆಲಸವೂ‌ ಗ್ರಹಣದ ಕಾರಣದಿಂದ ಆಗುವ ಛಾನ್ಸೇ ಇಲ್ಲ. ಒಟ್ಟಾರೆ ಕೊರೋನಾ ಟೈಮಲ್ಲಿ ಹೊರಗೆ ಬರಬೇಡಿ ಎಂದು‌ ಬಡ್ಕೊಂಡ್ರೂ ಹೊರಗೆ ಸುತ್ತಾಡುವ ನಮ್ಮ ಜನ, ಗ್ರಹಣ ಅಂದ್ರೆ ಸಾಕು, ಬಾಗಿಲು ಬಂದ್‌ ಮಾಡ್ಕೊಂಡು ಮೌಢ್ಯಕ್ಕೆ ಶರಣಾಗಿ ಬಿಡ್ತಾರೆ ಹಾಗೂ ಇದಕ್ಕೆ ನಮ್ಮ ಚಾನೆಲ್ ಗಳ ಕೊಡುಗೆ ಅಪಾರ.

ಓಕೆ, ಇವಿಷ್ಟೇ ಆಗಿದ್ದಲ್ಲಿ ತೊಂದರೆಯಿರಲಿಲ್ಲ. ಆದರೆ ಗ್ರಹಣದ ಆಚರಣೆಯ‌ ವಿಧಾನದಲ್ಲಿ ಇಲ್ಲ- ಸಲ್ಲದ‌ ಸಲಹೆಗಳನ್ನು‌ ಕೊಟ್ಟು ಅವರಲ್ಲಿ‌ ಭಯ‌ಹುಟ್ಟಿಸುವ ಕೆಲ ಟೀವಿ ಚಾನೆಲ್ ರವರ ‌ಕಾರ್ಯ ಅತ್ಯಂತ ಅಸಹನೀಯವೆನಿಸಿಬಿಡುತ್ತದೆ .

ಉದಾಹರಣೆಗೆ ಬೆಳಿಗ್ಗೆ ಒಂದು ನ್ಯೂಸ್ ಚಾನೆಲ್‌ನಲ್ಲಿ‌ ಒಬ್ಬಾತ ಹೇಳುತ್ತಾರೆ ” ಈ‌ ಚಂದ್ರ ಗ್ರಹಣದಂದು ಗರ್ಭಿಣಿಯರಿಗೆ ನೀರಿನ‌ ಗಂಡಾಂತರ ಇರೋದ್ರಿಂದ, ಗ್ರಹಣ‌ ಬಿಡೋವರೆಗೂ ಅವರು ನೀರಿಂದ‌ ದೂರ ಇರಬೇಕು ಎಂದು ! ಹೀಗೆ ಹೇಳುವವರ ತಲೆಯಲ್ಲಿ ಏನಿದೆಯೋ, ಅರಿಯಲು ನನಗೆ ಅಷ್ಟು ಜ್ಞಾನ ಇಲ್ಲ.‌ ಆದರೆ‌ ಹೀಗೆಲ್ಲಾ ಅವರಿಗೆ ಭಯಪಡಿಸಿದಲ್ಲಿ ಗರ್ಭಿಣಿಯರ ಮಾನಸಿಕ ಸ್ಥಿತಿ ಹೇಗಿರಬಲ್ಲದು ಎಂಬ ಕಾಮನ್‌ಸೆನ್ಸ್‌ ಬಗ್ಗೆ ಹೀಗೆಲ್ಲಾ ಕಣಿ ಹೇಳುವವರು ಯೋಚಿಸಲು ಹೋಗೋಲ್ಲ. ಗರ್ಭ ಧರಿಸಿರುವ ಹಂತದಲ್ಲಿ ಮಹಿಳೆಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಯಕ್ಕೆ ತಕ್ಕ ಪೌಷ್ಟಿಕ ಆಹಾರ, ಮನೋಸ್ಥೈರ್ಯ, ಆತ್ಮವಿಶ್ವಾಸ, ಒಳ್ಳೆಯ ವಾತಾವರಣ ಹಾಗೂ ನಿರಂತರ ಆರೈಕೆ. ಯಾವುದೇ ಕಾರಣಕ್ಕೂ ಅವರಲ್ಲಿ ಆತಂಕ, ಖಿನ್ನತೆ ಅಥವಾ ಗಾಬರಿ ಹುಟ್ಟಿಸುವ ಸಂಗತಿಗಳು ಈ ಹಂತದಲ್ಲಿ ಸುಳಿಯಬಾರದು. ಇದು‌ ನಮ್ಮಂತಹಾ ಆರ್ಡಿನರಿಗಳಿಗೆ ತಿಳಿದಿರೋದು. ಆದರೆ‌ ಗ್ರಹಣದ ಹೆಸರಲ್ಲಿ ಈ ಗಿರಾಕಿಗಳು ಏನೆಲ್ಲಾ ಕಥೆ ಕವನಗಳನ್ನು ಹೆಣೆದು ಜನರಲ್ಲಿ ಅನಗತ್ಯ ಭಯ ಬಿತ್ತುವುದನ್ನು ಕಂಡರೆ ಆ ಚಂದ್ರನೂ ನಾಚಿ ನೀರಾದಾನು !

ಇಂತಹಾ ಸಂಧರ್ಭದಲ್ಲಿ ನಮ್ಮ ಟೀವಿ ಚಾನೆಲ್‌ಗಳು ಹೆಚ್ಚಿನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡೋದು ಒಳ್ಳೆಯದು. ಈ‌ ಮೊದಲೂ ಸಾವಿರಾರು ವರ್ಷಗಳಿಂದ ಗ್ರಹಣ‌ ಸಂಭವಿಸುತ್ತಲೇ ಇತ್ತು. ಆಗೆಲ್ಲಾ ವಿದ್ಯಾವಂತರ ಸಂಖ್ಯೆ ಕಡಿಮೆಯೂ ಇತ್ತು. ಆದರೆ ಇಂದು ಗ್ರಹಣವನ್ನು ನೋಡುವ ರೀತಿಗೂ ಅಂದು ಅದನ್ನು ಸ್ವೀಕರಿಸುತ್ತಿದ್ದ ರೀತಿಗೂ ವ್ಯತ್ಯಾಸವಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಸಾಮಾನ್ಯ ಜ್ಞಾನದ ಹರಿವೂ ಹೆಚ್ಚಬೇಕು. ಆದರೆ ಇಂದಿನ ನೆಟ್ ಜ಼ಮಾನಾದಲ್ಲೂ ಜನರಲ್ಲಿ ಇಲ್ಲ ಸಲ್ಲದ ಭಯವನ್ನು ಹುಟ್ಟಿಸಿ , ಗ್ರಹಣದ ದಿನ ಇಂತಹಾ ರಾಶಿಯವರಿಗೆ ಗಂಡಾಂತರ ಕಾದಿದೆಯೆನ್ನುವುದು, ಅದಕ್ಕೆ ಹೀಗೀಗೆ ಪರಿಹಾರ ಮಾಡಬೇಕೆನ್ನುವ ಸಲಹೆಗಳನ್ನು ಟೀವಿ ಜ್ಯೋತಿಷ್ಯಿಗಳಿಂದ ಹೇಳಿಸುವ ಬಗ್ಗೆ ಒಮ್ಮೆ ರಿವ್ಯೂ ಮಾಡಿಕೊಳ್ಳುವುದು ಒಳ್ಳೆಯದು. ಕೆಲವರಿಗೆ ಅವನ್ನೆಲ್ಲಾ ಪಾಲಿಸುವ ಅನುಕೂಲವೂ ಇಲ್ಲದಿರಬಹುದು !

ಗ್ರಹಣದ ದಿನದಂದು ಅವರವರ ಆಚಾರ , ಆಚರಣೆ, ಜ್ಯೋತಿಷ್ಯ, ನಂಬಿಕೆ ಎಲ್ಲವೂ ಇದ್ದುಕೊಳ್ಳಲಿ . ಆದರೆ‌ ಗ್ರಹಣದ ಹೆಸರಲ್ಲಿ ಅಮಾಯಕ ಜನರಲ್ಲಿ ಇಲ್ಲ ಸಲ್ಲದ ಕಥೆ ಹೇಳಿ ಮೌಢ್ಯವನ್ನು‌ ಬಿತ್ತುವ ಹುಸಿ ಬಾಂಬ್ ಗಳ ಬಗೆಗಷ್ಟೇ ನನ್ನ ಆತಂಕ ಹಾಗೂ ‌ವಿರೋಧ.

** ಮರೆಯುವ ಮುನ್ನ **

ಒಬ್ಬರ ನಂಬಿಕೆಗಳಿಗೆ ಹಾಗೂ ಭಾವನೆಗಳಿಗೆ ಧಕ್ಕೆ ತರುವುದು ಹೇಗೆ ಸಹ್ಯವಲ್ಲವೋ ಹಾಗೆಯೇ ಅಮಾಯಕರಲ್ಲಿ ಮೌಢ್ಯತೆಯನ್ನು ತುಂಬುವ ಅನವಶ್ಯಕ ಚರ್ಚೆಗಳೂ ಅಷ್ಟೇ ಅಪಾಯಕಾರಿ. ಎಲ್ಲಾ ಟೀವಿ ವಾಹಿನಿಯವರೂ ಕೇವಲ ಜ್ಯೋತಿಷಿಗಳನ್ನು ಕರೆಸಿ ಅವರಿಂದ ಗ್ರಹಣದ ದಿನ ಏನು ಮಾಡಬೇಕು, ಏನು ಮಾಡಬಾರದು, ಯಾವ ರಾಶಿಯವರ‌ ಗ್ರಹಗತಿ ಹೇಗೆ ಎಂಬುದರ ಬಗೆಗಿನ ಚರ್ಚೆಗಳನ್ನು ಬೆಳಗಿನಿಂದ ಸಂಜೆಯವರೆಗೆ ಮಾಡಿಸುತ್ತಾರೆಯೇ ವಿನಃ, ಗ್ರಹಣದ ವೈಜ್ಞಾನಿಕ ಕಾರಣ, ಅವುಗಳ ಪರಿಣಾಮ, ಇತ್ಯಾದಿಗಳ ಬಗೆಗೆ ಒಬ್ಬ ಖಗೋಳ ಶಾಸ್ತ್ರಜ್ಞನನ್ನು ಕರೆಸಿ ಜನರಲ್ಲಿ ಅರಿವು ಮೂಡಿಸುವ ಸತ್ಕಾರ್ಯ ಮಾಡಲು ಹೆಜ್ಜೆ‌ ಇಡುವುದಿಲ್ಲ. ಟಿ.ಆರ್.ಪಿ. ಹಿಂದೆ‌ ಬಿದ್ದಿರುವ ಮಹಾನುಭಾವರಿಂದ ಇವೆಲ್ಲಾ ನಿರೀಕ್ಷೆ ಮಾಡುವುದೂ ಸಹಾ ತಪ್ಪಾಗುತ್ತದೆ.

ಅದೇನೇ‌ ಇರಲಿ, ‌ಅಪರೂಪಕ್ಕೊಮ್ಮೆ ನಭೋಮಂಡಲದಲ್ಲಿ ಘಟಿಸುವ, ಯಾರಿಗೂ ಕೆಡುಕನ್ನು ಮಾಡದ ಕೌತುಕದ ಈ ವಿದ್ಯಮಾನವನ್ನು ಖಗೋಳ ಶಾಸ್ತ್ರಜ್ಞರ ಸಲಹೆಗಳಿಗನುಗುಣವಾಗಿ ಕಣ್ತುಂಬಿಕೊಂಡು ಆಸ್ವಾದಿಸಿ, ಅನುಭವಿಸಬೇಕೇ ಹೊರತು ಅದು ನಮ್ಮ‌ ಬದುಕಿನ ದಿಕ್ಕನ್ನು ಅಥವಾ ‌ಭವಿಷ್ಯದ ರೂಪುರೇಷೆಗಳನ್ನು ಬದಲಿಸಬಲ್ಲದು ಎಂಬ ಭಯ ಅಥವಾ ಭ್ರಮೆಯಲ್ಲಿ‌ ಬದುಕುವುದು ಬೇಡ.

ಪ್ರೀತಿಯಿಂದ….

ಹಿರಿಯೂರು ಪ್ರಕಾಶ್.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page