ಆರ್ಥಿಕ

ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಲು ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ

ಚಿತ್ರದುರ್ಗ ಸೆ.04:
ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳ ಅಂಚೆ, ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡುವಂತೆ ಸೂಚಿಸಿದೆ.
ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳಡಿ ಹಾಲಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಪ್ರತಿ ಮಾಹೆ ವಿಳಂಬವಾಗದAತೆ ಸಕಾಲದಲ್ಲಿ ಫಲಾನುಭವಿಗಳಿಗೆ ಅನುಕೂಲಕರವಾದ ಅಂಚೆ, ಬ್ಯಾಂಕ್ ಖಾತೆಗೆ 2023ರ ಡಿಸೆಂಬರ್ ಮಾಹೆಯಿಂದ ನೇರ ಹಣ ಸಂದಾಯ ಮೂಲಕ ಜಮಾ ಮಾಡಲಾಗುತ್ತಿದೆ.
ಪ್ರಯುಕ್ತ ಈ ಯೋಜನೆಗಳಡಿ ಫಲಾನುಭವಿಗಳಿಗೆ ಮಾಸಾಶನ ಮೊತ್ತವನ್ನು ಡಿಸೆಂಬರ್ 2023ರ ಮಾಹೆಯಿಂದ ಆಧಾರ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಬ್ಯಾಂಕ್, ಅಂಚೆ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದ್ದು, ಕಳೆದ 2-3 ತಿಂಗಳಿAದ ಮಾಸಾಶನ ಪಡೆಯದಂತಹ ಫಲಾನುಭವಿಗಳು ನೇರವಾಗಿ ಇತ್ತೀಚಿನ ಆಧಾರ್ ಕಾರ್ಡ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆದಂತಹ ಅಂಚೆ, ಬ್ಯಾಂಕ್ ಪುಸ್ತಕದೊಂದಿಗೆ ಸಂಬAಧಿಸಿದ ನಾಡಕಛೇರಿಯ ಉಪತಹಶೀಲ್ದಾರ್ ಅಥವಾ ತಹಶೀಲ್ದಾರ್‌ಗಳನ್ನು ತಪ್ಪದೆ ಸಂಪರ್ಕಿಸಿ, ಸರ್ಕಾರದ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಕಾಡು ಪ್ರಾಣಿಗಳಿಂದ ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಪರಿಹಾರ ವಿತರಣೆ.


ಮೊಳಕಾಲ್ಮೂರು ಆ.22 ಕರಡಿ ದಾಳಿಯಿಂದ ಮೃತಪಟ್ಟ ಕಾಡುಮೃಗಗಳಿಂಗಾಯಗೊಂಡ ಕುಟುಂಬಗಳಿಗೆ ಅರಣ್ಯಿಲಾಕೆಯಿಂದ ಮಂಜುರಾತಿಯಾದ ಪರಿಹಾರವನ್ನು ಶಾಸಕ ಎನ್.ವೈ.ಗೋಪಾಲಕೃಷ್ಣ ವಿತರಿಸಿದರು.
ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಓಬಳಾಪುರ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಮ್ಮೆಯನ್ನು ಮೇಯಿಸುತ್ತಿದ್ದ
ದನಗಾಹಿ ಓಂಕಾರಪ್ಪ ಇವರ ಮೇಲೆ ಕರಡಿಯು ತೀವೃವಾಗಿ ದಾಳಿ ಮಾಡಿ ಗಾಯ ಮಾಡಿದ್ದು ಶಿವಮೊಗ್ಗ
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆ.14 ರಂದು ಮೃತಪಟ್ಟಿದ್ದು.ಮೃತನ ಕುಟುಂಬಕ್ಕೆ
5,ಲಕ್ಷ ರೂ ಮೃತನ ಪತ್ನಿ ಅನಸೂಯಮ್ಮಗೆ ವಿತರಿಸಿದರೆ.


ಹಾಗೂ ಮೊಳಕಾಲೂರು ಅರಣ್ಯ ವಲಯದ ವ್ಯಾಪ್ತಿಯಬೊಮ್ಮಲಿಂಗನಹಳ್ಳಿ ಗ್ರಾಮದ. ಬಸವರಾಜಪ್ಪನ ಮೇಲೆ ಚಿರತೆದಾಳಿಯಿಂದ ಗಾಯಗೊಂಡಿದ್ದು 1.60 ಲಕ್ಷ ರೂ ಹಾಗೂ ಗುಂತಕೋಲಮ್ಮನಹಳ್ಳಿ ಗ್ರಾಮದ ಮಂಜಮ್ಮ ಇವರ ಮಗಳಾದ ಸಾನ್ವಿ ವನ್ಯಪ್ರಾಣಿಯಿಂದ
ಗಾಯಗೊಂಡಿದ್ದು 60 ಸಾವಿರ ರೂ ಮಂಜೂರಾತಿ ಆದೇಶವನ್ನು ಅರಣ್ಯಇಲಾಖೆಯ ಪರಿಹಾರ ಧನವನ್ನು ಮೊಳಕಾಲ್ಕೂರು ವಿಧಾನ ಸಭಾ ಕ್ಷೇತ್ರದ ಶಾಸಕ
ಎನ್.ವೈ.ಗೋಪಾಲಕೃಷ್ಣ ವಿತರಿಸಿದರು. ಈಸಂದರ್ಭದಲ್ಲಿ ರಾಜಣ್ಣ ಟಿ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಚಿತ್ರದುರ್ಗ ವಿಭಾಗ. ಹರ್ಷ ಡಿ.ಎಲ್. ವಲಯ ಅರಣ್ಯಾಧಿಕಾರಿ ಮೊಳಕಾಲ್ಕೂರು. ಮಂಜುನಾಥ ಎಸ್.ವಿ ವಲಯ ಅರಣ್ಯಾಧಿಕಾರಿ ಚಳ್ಳಕೆರೆ ಹಾಗೂ ಸಿಬ್ಬಂದಿಗಳಿದ್ದರು.

ಸಾವನ್ ಕಿ ಹರಿಯಾಲಿ ,ಕಿಸಾನ್ ಕಿ ಕುಶಾಲಿ ,ಕಾರ್ಯಕ್ರಮ


ಸಾವನ್ ಕಿ ಹರಿಯಾಲಿ, ಕಿಸಾನ್ ಕಿ ಕುಶಾಲಿ. ಬ್ಯಾಂಕ್ ಆಫ್ ಬರೋಡದಿಂದ ಆದ್ಯತಾ ವಲಯದ ಸಾಲ ವಿತರಣೆ. ವಿಜಯ್ ಕುಮಾರ್ ಸೀನಿಯರ್ ಮ್ಯಾನೇಜರ್ ಜೋನಲ್ ಬ್ರಾಂಚ್, ಮಂಗಳೂರು.
ಹಿರಿಯೂರ್ ನಗರದ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಸಾವನ್ ಕಿ ಹರಿಯಾಲಿ ,ಕಿಸಾನ್ ಕಿ ಕುಶಾಲಿ ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯ್ ಕುಮಾರ್ ಅವರು ಕೃಷಿ, ಕೃಷಿ ಕಾರ್ಮಿಕರು ಹಾಗೂ ಸ್ವ ಸಹಾಯ ಸಂಘ ಮಹಿಳೆಯರಿಗೆ ವಿಶೇಷವಾಗಿ ಶೇಕಡಾ 18 ಸಾಲ ವಿತರಣೆ ಮಾಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ರೈತ ಮುಖಂಡ ಕಸವನಹಳ್ಳಿ ರಮೇಶ್ ಮಾತನಾಡಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಮಾತ್ರ ಜನರು ಸಾಲ ಪಡೆಯಬೇಕು ಖಾಸಗಿ ಲೇವಾದೇವಿಗಾರರು, ಫೈನಾನ್ಸಿಯರ್ ಗಳು ಇತರೆ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿದರೆ ಬಡ್ಡಿ ಕಟ್ಟಿ ಹೈರಾಣಗಬೇಕಾಗುತ್ತದೆ. ಗ್ರಾಹಕ ಸ್ನೇಹಿ ಬಡ್ಡಿದರ ಕಡಿಮೆ ಇರುವ ಹಾಗೂ ಸಾಲ ಮರುಪಾವತಿಯಲ್ಲಿ ಸರಳ ವಿಧಾನವಿರುವ ಈ ಬ್ಯಾಂಕುಗಳಲ್ಲಿ ವಿವರಿಸಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹಾಸನ ಪ್ರಾದೇಶಿಕ ಕಚೇರಿ ಕೃಷಿ ವಿಭಾಗದ ಮ್ಯಾನೇಜರ್ ಆದ ಶೈಲಜಾ ಅವರು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸಾಲ ವಿತರಣೆಯಲ್ಲಿರುವ ಪಂಚ ಸೂತ್ರಗಳನ್ನು ತಿಳಿಸಿದರು. ಸಂಘದ ವ್ಯವಹಾರಗಳ ಒಟ್ಟು ಮೊತ್ತದ 4 ಪಟ್ಟು ನಾವು ಬ್ಯಾಂಕ್ನಿಂದ ಕಡಿಮೆ ಬಡ್ಡಿಗೆ ಸಾಲ ವಿತರಿಸುತ್ತೇವೆ ಇದರ ಸದುಪಯೋಗ ಪಡಿಬೇಕು ಅಲ್ಲದೆ ಸರ್ಕಾರದಿಂದಲೂ ಸಹ ಸಹಾಯಧನ ಇತರೆ ಸೌಲಭ್ಯಗಳು ಸಿಗುತ್ತವೆ ಎಂದು ಹೇಳಿದರು. ಚಿಲ್ಲಹಳ್ಳಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಆದ ಶರಣಪ್ಪ ಅವರು ಕೃಷಿ ಸಾಲಗಳು ರೈತರ ಬದುಕಿಗೆ ಬೆಳಕು ನೀಡುತ್ತವೆ. ವಾರ್ಷಿಕವಾಗಿ ಕೇವಲ ಬಡ್ಡಿ ಕಟ್ಟಿದರೆ ರಿನಿವಲ್ ಮಾಡುತ್ತೇವೆ ಅಲ್ಲದೇ ಶೇಕಡ 4 ಬಡ್ಡಿ ದರದಲ್ಲಿ ಸಾಲ ವಿತರಿಸುತ್ತೇವೆ ಹಾಗೂ ನಮ್ಮ ಬ್ಯಾಂಕ್ ಗ್ರಾಮೀಣ ಭಾಗದ ಮಸ್ಕಲ್, ಚಿಲ್ಲಹಳ್ಳಿ, ಧರ್ಮಪುರ, ಕೋಡಿಹಳ್ಳಿ ಶಾಖೆಯನ್ನು ತೆರೆದು ಗ್ರಾಮೀಣ ಜನರಿಗೆ ಅನುಕೂಲ ಮಾಡಿದೆ ಎಂದು ತಿಳಿಸಿದರು. ಹಿರಿಯೂರ್ ಬ್ಯಾಂಕ್ ಮ್ಯಾನೇಜರ್ ವೆಟ್ರಿ ವೇಲಾಯುದನ್ ವಿವಿಧ ಬ್ಯಾಂಕ್ ಆಫ್ ಬರೋಡ ಶಾಖೆಗಳ ರೈತರಿಗೆ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಾಲ ವಿತರಣೆ ಮಾಡಿದರು
. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಬ್ಯಾಡ್ರಳ್ಳಿ ಹನುಮಂತರಾಯ, ಚಿಲ್ಲಹಳ್ಳಿ ಮ್ಯಾನೇಜರ್ ಶರಣಪ್ಪ, ಚಳ್ಳಕೆರೆ, ಧರ್ಮಪುರ, ಕೋಡಿಹಳ್ಳಿ, ಮಸ್ಕಲ್ ಶಾಖೆಯ ಅನಿಲ್, ದರ್ಮಪುರ ಶಾಖೆಯ ವೇಣುಗೋಪಾಲ್, ಮ್ಯಾನೇಜರ್ಗಳು , ಜಯಪ್ರಕಾಶ ಕೆ.ಕೆ .ಹಟ್ಟಿ,ಜಗದೀಶ್ ಹೆಚ್ಚ್.ಎನ್. .ರೈತರು ಸ್ವಸಹಾಯ ಸಂಘಗಳ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಿಳೆಯರ ಸ್ವಾವಲಂಬಿಜೀವನಕ್ಕೆ ಟೈಲರಿಂಗ್ ವೃತ್ತಿ ಉತ್ತಮವಾಗಿದ್ದು, ಈತರಬೇತಿಯಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ:ಸಚಿವರಾದ ಡಿ.ಸುಧಾಕರ್


ಹಿರಿಯೂರು:
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಟೈಲರಿಂಗ್ ವೃತ್ತಿ ಉತ್ತಮವಾಗಿದ್ದು ಈ ತರಬೇತಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬುದಾಗಿ ಕ್ಷೇತ್ರದ ಶಾಸಕರು ಹಾಗೂ
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಜಿಲ್ಲಾ ಖನಿಜ ನಿಗಮ ಪ್ರತಿಷ್ಠಾನ ಚಿತ್ರದುರ್ಗ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯೂರು ಸಹಯೋಗದೊಂದಿಗೆ ಅನುಷ್ಠಾನ ಸಂಸ್ಥೆ ಗ್ರಾಮ ಸಂಸ್ಥೆ ಇವರ ಅನುಷ್ಠಾನದೊಂದಿಗೆ ಹಮ್ಮಿಕೊಳ್ಳಲಾಗಿದ್ದ ನಿರುದ್ಯೋಗಿ ಯುವತಿಯರಿಗೆ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ಟೈಲರಿಂಗ್ ತರಬೇತಿಯನ್ನು ಇನ್ನು ಹೆಚ್ಚು ಜನರಿಗೆ ಕೊಡಿಸಲಾಗುವುದು ಮತ್ತು ತಾಲೂಕಿನಲ್ಲಿ ಗಾರ್ಮೆಂಟ್ ಕಾರ್ಖಾನೆಗಳನ್ನು ಪ್ರಾರಂಭಿಸಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕೊಲ್ಲಮ್ಮ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ತಾಯಿ ಮುದ್ದಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆಸುರೇಶ ಬಾಬು, ಎಂ.ಎ. ಶ್ರೀನಿವಾಸಮಸ್ಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ. ಶ್ರೀಧರ, ಮುಖ್ಯ ಕಾರ್ಯನಿರ್ವಾಹಕರು, ಗ್ರಾಮಸಂಸ್ಥೆ ಚಳ್ಳಕೆರೆ, ಗ್ರಾಪಂ ಸದಸ್ಯರಾದ ವಿ.ಅರುಣ್ ಕುಮಾರ್, ಎಂ.ಹನುಮಂತಯ್ಯ, ಕಲಾವತಿ ತಿಪ್ಪೇಸ್ವಾಮಿ, ಮಂಜುಳಾ ವೀರೇಶ್, ಮುಖಂಡರುಗಳಾದ ಪರಮೇಶ್ವರಪ್ಪ, ಪೆಪ್ಸಿ ನಾಗರಾಜ್, ಕುಮಾರ್, ಸೆಂಥಿಲ್ ಕುಮಾರ್, ಹೇಮಂತ್ ಗೌಡ, ಪಿ.ಎಚ್. ಧನಂಜಯ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವೈ.ನಾಗರಾಜ್ ಮಸ್ಕಲ್ ಸ್ವಾಗತಿಸಿದರು. ಗ್ರಾಮಸಂಸ್ಥೆಯ ಬಸವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಎನ್. ದೇವರಾಜ್ ವಂದಿಸಿದರು.

ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಚಿತ್ರದುರ್ಗ ಜುಲೈ.26:
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ರಾಜ್ಯದ ಪಾರಂಪರಿಕವಾಗಿ ಚರ್ಮಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳ ಯುವ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ, ಸಮಗಾರ, ಡೋರ, ಆದಿ ಜಾಂಬವ, ಮಚಗಾರ, ಮೋಚಿ ಹಾಗೂ ಇತರೆ ಚರ್ಮಗಾರಿಕೆಗೆ ಒಳಪಡುವ ಸಮುದಾಯಗಳಿಗೆ, ಪ್ರಸ್ತುತ ಚರ್ಮ ಉದ್ಯಮದಲ್ಲಿ ಚಾಲ್ತಿಯಲ್ಲಿರುವ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳನ್ನು ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮುಂಚೂಣಿಯಲ್ಲಿರುವ ಆಗ್ರಾ, ಉತ್ತರ ಪ್ರದೇಶ ಹಾಗೂ ಕೋಲ್ಕತ್ತ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿರುವ “ಮೆ. ಸೆಂಟ್ರಲ್ ಫುಟ್‌ವೇರ್ ಟ್ರೆöÊನಿಂಗ್ ಇನ್‌ಸ್ಟಿಟ್ಯೂಟ್” ಕೇಂದ್ರದಲ್ಲಿ 60 ದಿನಗಳ ವಸತಿ ಸಹಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವಾದ “ ಪುಟ್‌ವೇರ್ ಡಿಸೈನಿಂಗ್ ಅಂಡ್ ಪ್ರೊಡಕ್ಷನ್” ತರಬೇತಿ ಪಡೆಯಲು ಕಳುಹಿಸಲಾಗುವುದು. ಆಸಕ್ತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕನಿಷ್ಟ 10ನೇ ತರಗತಿ ತೇರ್ಗಡೆ ಹೊಂದಿರಬೇಕು. 18 ರಿಂದ 40 ವರ್ಷಗಳ ವಯೋಮಿತಿ ಹೊಂದಿರಬೇಕು. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ವೈಯಕ್ತಿಕ ವಿವರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಪಾಸ್ ಪೋರ್ಟ್ ಅಳತೆಯ 5 ಫೋಟೊಗಳನ್ನು ಸಲ್ಲಿಸಲು ಸೂಚಿಸಿದೆ.
ಅರ್ಹ ಅಭ್ಯರ್ಥಿಗಳಿಗೆ ಪ್ರಯಾಣದ ವೆಚ್ಚಗಳನ್ನು ನಿಗಮದಿಂದ ಭರಿಸಲಾಗುವುದು. ತರಬೇತಿ ಸಂಸ್ಥೆಯಲ್ಲಿ ಉಪಹಾರ, ಬೋಜನಾ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಅವಧಿಗೆ ಮಾತ್ರ ದಿನಕ್ಕೆ ರೂ.200/ ರಂತೆ 60 ದಿನಗಳಿಗೆ ರೂ.12,000/ ಗಳನ್ನು ವೇಜ್ ಲಾಸ್ ಅಲೊವೆನ್ಸ್ ಪಾವತಿಸಲಾಗುವುದು. ಮೊದಲನೇ ಹಂತದಲ್ಲಿ ಮೆ. ಸೆಂಟ್ರಲ್ ಪುಟ್‌ವೇರ್ ಟ್ರೆöÊನಿಂಗ್ ಸೆಂಟರ್ ಉತ್ತರ ಪ್ರದೇಶದ ಆಗ್ರಾದಲ್ಲಿ ಆಗಸ್ಟ್ 19 ರಿಂದ ಪ್ರಾರಂಭವಾಗಿ ಅಕ್ಟೋಬರ್ 18 ರಂದು ಮುಕ್ತಾಯಗೊಳ್ಳುವ ತರಬೇತಿಯನ್ನು 30 ಅಭ್ಯರ್ಥಿಗಳಿಗೆ ನಿಯೋಜಿಸಲಾಗುವುದು.
ಅಗತ್ಯ ದಾಖಲೆಗಳೊಂದಿಗೆ ಚಿತ್ರದುರ್ಗ ನಗರದ ಬಿ.ಡಿ.ರೋಡ್, ಸ್ತ್ರೀ ಶಕ್ತಿ ಶಾಪಿಂಗ್ ಕಾಂಪ್ಲೆಕ್ಸ್, ಲಿಡ್‌ಕರ್ ಲೆದರ್ ಎಂಪೋರಿಯAನ ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಜಿಲ್ಲಾ ಕಚೇರಿಗೆ ಇದೇ ಜುಲೈ 29 ರೊಳಗೆ ಸಲ್ಲಿಸಬೇಕು ಎಂದು ಲಿಡ್ಕರ್ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಬ್ಯಾಂಕ್ ಗ್ರಾಹಕರಿಗೆ ವಿಮಾ ಸೇವೆ ನೀಡಲಾಗುತ್ತಿದೆ ಗ್ರಾಹಕರು ಬ್ಯಾಂಕ್ ಖಾತೆ ತೆರೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಬ್ಯಾಂಕ್ ವ್ಯವಸ್ಥಾಪಕ ಬಿ.ಎನ್.ಶಿವಪ್ರಸಾದ್


ಚಳ್ಳಕೆರೆ ಜನಧ್ವನಿ ವಾರ್ತೆ ಜು.11 ಕರ್ನಾಟಕ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಗ್ರಾಹಕರು ಬ್ಯಾಂಕ್ ಖಾತೆ ತೆರೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಬ್ಯಾಂಕ್ ವ್ಯವಸ್ಥಾಪಕ ಬಿ.ಎನ್.ಶಿವಪ್ರಸಾದ್ ಹೇಳಿದರು.
ನಗರದ ಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಶಿಕ್ಷಕ ಶಿವಕುಮಾರ್ ಪಿಎಂಜಿ ಮೆಟಲ್ ಲೈಪ್ ಮೇರಾ ಟರ್ನ್ ಪ್ಲಾನ್ ವಿಮೆ ಮಾಡಿಸಿಕೊಂಡಿದ್ದು ಹೃದಯಾಘತದಿಂದ ಮೃತಪಟ್ಟ ಕಾರಣ ಅವರ ಪತ್ನಿ ಮಹಾಲಕ್ಷ್ಮಿ ಹಾಗೂ ಪುತ್ರಿಯರಿಗೆ 50 ಲಕ್ಷರೂ ಚೆಕ್ ವಿತರಿಸಿ ಮಾತನಾಡಿದರು.
ಮನೆ ಖರೀದಿಲು 30 ಲಕ್ಷ ರೂ ಸಾಲ ಪಡೆದಿದ್ದು ವಿಮೆ ಕಟ್ಟಿದ್ದರಿಂದ ಮನೆಯ 30 ಲಕ್ಷರೂ ಸಾಲಕ್ಕೆ ಜಮೆ ಯಾಗಿದ್ದು ಒಟ್ಟು ಮೃತ ಶಿಕ್ಷಕನ ಕುಟುಂಬಕ್ಕೆ 80 ಲಕ್ಷರೂ ನಮ್ಮ ಶಾಖೆಯಿಂದ ಪಡೆದಿದ್ದಾರೆ.
ಒಂದು ವೇಳೆ ಮೃತ ಶಿಕ್ಷಕರು ಮನೆ ಖರೀದಿ ಸಾಲ ಪಡೆದು ವಿಮೆ ಮಾಡಿಸಸಿದೆ ಇದ್ದು ಮೃತ ಪಟ್ಟಿದ್ದರೆ ಅವರ ಕುಟುಂಬಸ್ಥರು ಸಾಲ ಕಟ್ಟಬೇಕಿತ್ತು ವಿಮೆ ಮಾಡಿಸಿದ್ದರಿಂದ ಸಾಲದ ಹೊರೆಯಿಂದ ಮುಕ್ತರಾಗಿದ್ದಾರೆ.
ಇದೇ ರೀತಿ ನಮ್ಮ ಬ್ಯಾಂಕ್ ಪ್ರತಿಯೊಬ್ಬ ಗ್ರಾಹಕರಿಗೂ ವಿಮಾ ಸೌಲಭ್ಯ ಮಾಡಿಸಲಾಗುವುದು ನಮ್ಮ ಶಾಖೆಯಲ್ಲಿ ಇನ್ನು ಅನೇಕ ಯೋಜನೆಗಳಿದ್ದು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಬಹುದಾಗಿದೆ ಎಂದು ತಿಳಿಸಿದರು.
ಸಹಾಯಕ ವ್ಯವಸ್ಥಾಪಕ ಸುಧೀರಪಂಚಮುಖಿ ಮಾತನಾಡಿ ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತ ಸಾವು ಮನುಷ್ಯನಿಗೆ ಯಾವಾಗ ಯಾವರೀತಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ ಪ್ರತಿಯೊಬ್ಬರು ವಿಮೆ ಮಾಡಿಸಿಕೊಂಡರೆ ಸತ್ತವರ ಕುಟುಂಬಗಳಿಗೆ ಆಸರೆಯಾಗುತ್ತದೆ., ಮೃತ ಶಿಕ್ಷಕ 10 ಲಕ್ಷರೂ ವಿಮೆ ಮಾಡಿಸಿದ್ದರು ನಾಲ್ಕು ಕಂತು ಒಂದು ಲಕ್ಷ ವಿಮೆ ಪಾವತಿಸಿದ್ದರು ಈಗ 50 ಲಕ್ಷ ರೂ ಬಂದಿದೆ. ಸಾಲ ಪಡೆದ ಪ್ರತಿಯೊಬ್ಬ ಗ್ರಾಹಕರಿಗೂ ವಿಮೆ ಸೌಲಭ್ಯವಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಮೃತಶಿಕ್ಷಕನ ಪತ್ನಿ ಮಹಾಲಕ್ಷ್ಮಿ, ನಿವೃತ್ತ ದೈಹಿಕ ಉಪನ್ಯಾಸಕ ಹೆಚ್.ಟಿ.ತಿಪ್ಪೇಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರು ಉಪಸ್ಥಿತರಿದ್ದರು.

ಶಕ್ತಿ ಯೋಜನೆ”ಗೆ ವರ್ಷದ ಸಂಭ್ರಮ, ಕೆಎಸ್‍ಆರ್‍ಟಿಸಿಗೆ ರೂ.85.71 ಕೋಟಿ ಆದಾಯ ಚಿತ್ರದುರ್ಗ ಜಿಲ್ಲಾ ಘಟಕ : 2.21 ಕೋಟಿ ನಾರಿಯರು ಉಚಿತ ಪ್ರಯಾಣ


ಚಿತ್ರದುರ್ಗ ಜೂನ್14:
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ವರ್ಷ ತುಂಬಿದೆ. ಈ ಯೋಜನೆಯಡಿ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 2.21 ಕೋಟಿ ನಾರಿಯರು ಉಚಿತ ಪ್ರಯಾಣ ಬೆಳೆಸಿರುವುದು ಗಮನಾರ್ಹ.
ಮಹಿಳಾ ಸಬಲೀಕರಣ ಉದ್ದೇಶದಿಂದ ಜಾರಿಗೊಳಿಸಿದ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡುವ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗಕ್ಕೆ ಮಹಿಳೆಯರಿಗೆ ನೀಡಿರುವ ಶೂನ್ಯ ದರದ ಟಿಕೆಟ್ ನೀಡಿಕೆ ಮೂಲಕ ರೂ.85.71 ಕೋಟಿ ಆದಾಯ ಲಭಿಸಿದೆ.
ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಸಮಸ್ತ ನಾರಿಯರ ಸಂಚಾರಕ್ಕೆ ಶಕ್ತಿಯನ್ನು ನೀಡಿದೆ ರಾಜ್ಯ ಸರ್ಕಾರದ ಶಕ್ತಿ ಯೋಜನೆ. ಇದರ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ನಾರಿಯರಿಗೆ ಅವಕಾಶ ಲಭಿಸಿದ್ದು, ಜಿಲ್ಲೆಯಲ್ಲಿ ವಾರ್ಷಿಕ ರೂ.85.71 ಕೋಟಿ ವಹಿವಾಟುನೊಂದಿಗೆ ಶಕ್ತಿ ಯೋಜನೆಯು ಮುಂದುವರೆದಿದ್ದು, ಶಕ್ತಿ ಯೋಜನೆಗೆ ಚಾಲನೆ ನೀಡಿದ 2023 ರ ಜೂನ್ 11 ಮೊದಲ ದಿನದಿಂದಲೂ ಇಂದಿನವರೆಗೂ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಸಕಾರದ ಶಕ್ತಿ ಯೋಜನೆಯು ಸಾಮಾಜಿಕ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದಿಂದ ನಗರ ಪಟ್ಟಣಗಳಿಗೆ ತೆರಳಿ ದುಡಿಯುವ ಮಹಿಳೆಯರಿಗೆ ವರದಾನವಾಗಿದೆ. ಖಾಸಗಿ ಹಾಗೂ ಅಸಂಘಟಿತ ವಲಯಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಸಂಚಾರಿ ವೆಚ್ಚದಿಂದ ಮುಕ್ತರಾಗಿದ್ದಾರೆ. ಮಹಿಳೆಯರು ಸಾಮಾನ್ಯವಾಗಿ ದುಡಿಯಲೆಂದೆ ತಮ್ಮ ತಿಂಗಳ ಆದಾಯದ ಶೇ.10ರಷ್ಟು ಹಣವವನ್ನು ಸಂಚಾರಕ್ಕಾಗಿ ವ್ಯಯಿಸಬೇಕಿತ್ತು. ಇನ್ನು ಶಾಲಾ-ಕಾಲೇಜು ವಿದ್ಯಾರ್ಥಿನಿಯರು ವಾರ್ಷಿಕ ಪಾಸ್ ಪಡೆಯಲು ನೀಡಬೇಕಿದ್ದ ಹಣದಲ್ಲಿಯೂ ಉಳಿತಾಯವಾಗಿದೆ. ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸ ಸೇರಿದಂತೆ ಹಲವು ಚಟುವಟಿಕೆಗಳಿಗೆ ಶಕ್ತಿ ಯೋಜನೆಯಿಂದ ಶಕ್ತಿ ಲಭಿಸಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳ ಭರ್ತಿಯ ಜೊತೆಗೆ ನಾರಿಯರು ಆದಾಯ ಹೆಚ್ಚಿಸಿದ್ದಾರೆ. ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿ ತಾಣಗಳಿಗೂ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಧಾರ್ಮಿಕ ಕೇಂದ್ರಗಳಲ್ಲೂ ದೇಣಿಗೆ ಸಂಗ್ರಹವೂ ಸಹ ದುಪ್ಪಾಟ್ಟಾಗಿದೆ.
20 ಹೆಚ್ಚುವರಿ ಮಾರ್ಗ: ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು ಹೆಚ್ಚುವರಿ ಮಾರ್ಗಗಳನ್ನು ಹೆಚ್ಚಿಸಲಾಗಿದ್ದು, ಪ್ರಯಾಣ ಜನಸಂದಣಿಗೆ ಅನುಗುಣವಾಗಿ ಬೇಡಿಕೆಗೆ ಅನುಸಾರವಾಗಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
30 ಹೊಸ ವಾಹನ ಸೇರ್ಪಡೆ: ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗಕ್ಕೆ ಅಶ್ವಮೇಧ, ವೇಗದೂತ ಸೇರಿದಂತೆ 30 ಹೊಸ ವಾಹನಗಳು ಸೇರ್ಪಡೆಯಾಗಿವೆ.
ಬೇಡಿಕೆ ಅನುಸಾರ ವಾಹನ ಕಾರ್ಯಾಚರಣೆಗೆ ಕ್ರಮ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ಪ್ರತಿದಿನ ಸರಾಸರಿ 60 ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿತ್ರದುರ್ಗ ಜಿಲ್ಲೆಯಿಂದ ವಿವಿಧ ಮಾರ್ಗಗಳ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ 2.21 ಕೋಟಿ ನಾರಿಯರು ಉಚಿತ ಪ್ರಯಾಣ ಮಾಡಿದ್ದು, ರೂ.85.71 ಕೋಟಿ ಆದಾಯ ಲಭಿಸಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ವಾರ್ಷಿಕ ಆದಾಯ ಹೆಚ್ಚಾಗಿದೆ. ಮಾರ್ಗಸೂಚಿ ಹಾಗೂ ಬಸ್ ಬೇಡಿಕೆಗಳನ್ನು ಪರಿಗಣಿಸಿ ಹೆಚ್ಚುವರಿ ಮಾರ್ಗಗಳಿಗೆ ಪ್ರಯಾಣ ಜನಸಂದಣಿಗೆ ಅನುಗುಣವಾಗಿ ವಾಹನ ಕಾರ್ಯಾಚರಣೆ ಮಾಡಲು ತಕ್ಷಣ ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್.
ಶಕ್ತಿ ಯೋಜನೆಯಿಂದ ಬಹಳಷ್ಟು ಅನುಕೂಲ: ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ಬಹಳ ಅನುಕೂಲವಾಗಿದೆ. ಆಧಾರ್ ಕಾರ್ಡ್ ತೋರಿಸಿದರೆ ಸಾಕು ನಯಾಪೈಸೆ ಇಲ್ಲದಿದ್ದರೂ ಬಸ್‍ನಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯಿಂದ ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎನ್ನುತ್ತಾರೆ ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿಯ ಗೌರಮ್ಮ

ಆಡಳಿತ ನ್ಯಾಯಾಧೀಕರಣ ತರಬೇತಿ: ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಚಿತ್ರದುರ್ಗ ಜೂನ್13:
2024-25ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಪರಿಶಿಷ್ಟ ವರ್ಗದ ಕಾನೂನು ಪದವೀಧರರನ್ನು ಆಯ್ಕೆಮಾಡಬೇಕಾಗಿರುವುದರಿಂದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜೂನ್ 18 ರಿಂದ ಜುಲೈ 31 ರವರೆಗೆ ವೆಬ್‍ಸೈಟ್ tw.kar.nic.in ನಲ್ಲಿ ಅರ್ಜಿ ಸಲ್ಲಿಸಿ, ಸಲ್ಲಿಸಿರುವ ಅರ್ಜಿಗಳನ್ನು ಚಿತ್ರದುರ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಚೇರಿಗೆ ಜುಲೈ 31ರ ಸಂಜೆ 5.30ರೊಳಗೆ ಸಲ್ಲಿಸಬೇಕು.
ಷರತ್ತುಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ದಿನಾಂಕಕ್ಕೆ ಕಾನೂನು ಪದವಿಯನ್ನು ಪಡೆದು 02 ವರ್ಷ ಮೀರಿರಬಾರದು. ಬಾರ್ ಕೌನ್ಸಿಲಿಂಗ್‍ನ ಖಾಯಂ ಸದಸ್ಯತ್ವ ಪ್ರಮಾಣ ಪತ್ರ ಸಲ್ಲಿಸಬೇಕು ಹಾಗೂ ತರಬೇತಿಯನ್ನು ಜಿಲ್ಲೆಯಲ್ಲಿಯೇ ಪಡೆಯಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಅಭ್ಯರ್ಥಿಯ ವಯಸ್ಸು 40 ವರ್ಷ ಮೀರಿರಬಾರದು. ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಸರ್ಕಾರದ ಆದೇಶದಂತೆ ಶಿಷ್ಯ ವೇತನವನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಅಥವಾ 20 ವರ್ಷಗಳ ಕಾಲ ಕಡಿಮೆ ಇಲ್ಲದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿ ಪಡೆಯುತ್ತೀರಿ ಎಂಬ ಬಗ್ಗೆ ಲಿಖಿತ ರೂಪದಲ್ಲಿ ತಿಳಿಸಿರಬೇಕು. ತರಬೇತಿಯ ಅವಧಿ 02 ವರ್ಷವಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಮಧ್ಯದಲ್ಲಿ ಬಿಡುವುದಿಲ್ಲ ಎಂದು, ಒಂದು ವೇಳೆ ಬಿಟ್ಟರೆ ತರಬೇತಿ ಅವಧಿಯಲ್ಲಿ ಪಡೆದಿರುವ ಶಿಷ್ಯ ವೇತನವನ್ನು ಶೇ.10ರಷ್ಟು ರೂಗಳ ಬಡ್ಡಿಯೊಂದಿಗೆ ಸರ್ಕಾರಕ್ಕೆ ಹಿಂತಿರುಗಿಸಿ ಮರುಪಾವತಿ ಮಾಡುವುದಾಗಿ ಮುಚ್ಚಳಿಕೆ ಬರೆದು ಕೊಡಬೇಕು. ಈ ನಿಯಮ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನೌಕರಿ ಪಡೆದರೆ ಅನ್ವಯಿಸುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಮಾಹಿತಿ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಆಯ್ಕೆಯಾಗಿ ಶಿಷ್ಯ ವೇತನ ಪಡೆದರೆ ಅಂತಹ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಪಡೆದ ಶಿಷ್ಯ ವೇತನವನ್ನು ಒಟ್ಟಿಗೆ ಶೇ.10%ರೂಗಳ ಬಡ್ಡಿಯಲ್ಲಿ ಸರ್ಕಾರಕ್ಕೆ ಹಿಂತಿರುಗಿಸಿ ಕಟ್ಟಬೇಕು ತಪ್ಪಿದರೆ ಭೂ ಕಂದಾಯ ಬಾಕಿ ವಸೂಲಿಯಂತೆ ವಸೂಲಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನಿಗಧಿತ ದಿನಾಂಕದೊಳಗೆ ಹಾಜರಾಗದಿದ್ದರೆ ಅಂತಹವರ ಆಯ್ಕೆಯನ್ನು ರದ್ದು ಪಡಿಸಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. ಪರಿಶಿಷ್ಠ ವರ್ಗದ ಕಾನೂನು ಪದವಿಧರರ ವಾರ್ಷಿಕ ವರಮಾನದ ಮೊತ್ತ 2,50,000/- ಒಳಗಡೆ ಇರಬೇಕು. ಅರ್ಜಿಯೊಂದಿಗೆ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿರಬೇಕು, ತಪ್ಪಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ.

ಚಳ್ಳಕೆರೆ-05 ನಗರದ ಇಂಡೆಲ್‌ಮನಿ ಶಾಖೆ 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿ ರಾಜ್ಯ ಪ್ರಶಸ್ತಿಯನ್ನು ಲಭಿಸಿದೆ ಎಂದು ಹಿರಿಯ ವಲಯ ವ್ಯವಸ್ಥಾಪಕ ಎಂ.ಶೇಖರ್ ತಿಳಿಸಿದರು.
ಅವರು ನಗರದ ಇಂಡೆಲ್ ಮನಿ ಕಂಪನಿ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವಪರಿಸರ‌‌‌ ದಿನಾಚರಣೆ ಮತ್ತು 2023-24ನೇ‌ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿಕ ಕ್ಷೇತ್ರದಲ್ಲಿ ಚಳ್ಳಕೆರೆ ಶಾಖೆ ರಾಜ್ಯಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 2023ರಲ್ಲಿ ಶಾಖೆಗೆ ವ್ಯವಸ್ಥಾಪಕರಾಗಿ ಬಂದ ವಿ.ಶ್ಯಾಮ್ ಕುಮಾರ್ ಮತ್ತು ಸಿಬ್ಬಂದಿ ವರ್ಗದ ಉತ್ತಮ ಕಾರ್ಯದಿಂದ 2023-24ನೇ‌ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿಕ ಕ್ಷೇತ್ರದಲ್ಲಿ ಶಾಖೆಗೆ ರಾಜ್ಯಪ್ರಶಸ್ತಿ ಪಡೆಯುವಂತಾಗಿದೆ ಎಂದರು.
ಶಾಖೆಯ ವ್ಯವಸ್ಥಾಪಕ ವಿ.ಶ್ಯಾಮ್ ಕುಮಾರ್ ಮಾತನಾಡಿ, ಚಳ್ಳಕೆರೆಯಲ್ಲಿ ಶಾಖೆ ಪ್ರಾರಂಭಗೊಂಡು ಸುಮಾರು ಹತ್ತು ತಿಂಗಳಲ್ಲಿ ಈ ಭಾಗದ ಸಣ್ಣ ಉದ್ದಿಮೆ ಬೆಳವಣಿಗೆಗೆ ಸಾಲ ಸೌಲಭ್ಯ ಕಲ್ಪಿಸಿ ವ್ಯಾಪಾರಿಗಳ ಅಭಿವೃದ್ಧಿ ಸಹಕರಿಸಿದ ಎಂದರು.ಕಾರ್ಯಕ್ರಮದಲ್ಲಿ ಜೆ.ಮಂಜುನಾಥ, ಎನ್.ಟಿ.ತಿಪ್ಪೇಸ್ವಾಮಿ, ದಿನೀಲ್, ಸೌಮ್ಯ ಮುಂತಾದವರು ಇದ್ದರು.

ರೈತರ ಖಾತೆ ಬಂತು ಬೆಳೆವಿಮೆ ಪರಿಹಾರ- ಯುಗಾಧಿ ಮುನ್ನವೇ ರೈತರಿಗೆ ಬೇವು ಬೆಲ್ಲ..

ಚಳ್ಳಕೆರೆ ಜನಧ್ವನಿ ಮಾ.8 ಬಯಲು ಸೀಮೆಯ ರೈತರಿಗೆ ಬಂತು ಫಸಲ್ ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ ಅನ್ನದಾತರ ಖಾತೆ ಜಮೆಯಾತ್ತು ಬೆಳೆವಿಮೆ.
2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯ ಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ ನೊಂದಾವಣಿ ಮಾಡಿಸಿದ್ದಾರೆ.ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬಿಡಿಗಡೆ ಮಾಡುವಂತೆ ರೈತ ಮುಖಂಡರ ಹೋರಾಟ, ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ವರದಿ ನೀಡಿದರೂ ಬೆಳೆ ವಿಮೆ ಬಿಡುಗಡೆ ಮಾಡಲು ಬೆಳೆ ವಿಮೆಕಂಪನಿಗಳ ವಿಳಂಭ ದೋರಣೆಯನ್ನು ಖಂಡಿಸಿ ರೈತ ಸಂಘಟನೆಗಳ ಹೋರಾಟದ ಫಲವಾಗಿ ಗುರುವಾರ ರೈತರ ಖಾತೆಗೆ ಬೆಳೆ ವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆಯಾಗಿದ್ದು ಯುಗಾಧಿ ಮುನ್ನವೇ ಬೇವು ಬೆಲ್ಲ ಸವಿದಷ್ಟು ಖುಷಿಯಾಗಿದೆ..ನಿರೀಕ್ಷೆಯ ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ ಬಿಡುಗಡೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಳ್ಳಕೆರೆ ತಾಲೂಕಿನ ಸೋಮಗುದ್ದ ಗ್ರಾಮಪಂಚಾಯಿತಿ ಮಾತ್ರ ಫಸಲ್ ಭೀಮ ಯೋಜನೆಯ ಬೆಳೆ ವಿಮೆಯಿಂದ ವಂಚಿತವಾಗಿದ್ದು ಬೆಳೆ ಕಾಟಾವ್ ಪ್ರಯೋಗದಲ್ಲಿ ಬೆಳೆವಿಮೆ ನಿಗಧಿ ಪಡಿಸಿದ ಕ್ಕಿಂತ ಹೆಚ್ಚಿನ ತೂಕ ಬಂದಿರುವುದರಿಂದ ಬೆಳೆ ವಿಮೆಯಿಂದ ಈ ಪಂಚಾಯಿತಿ ರೈತರಲ್ಲಿ ಯುಗಾಧಿ ಹಬ್ಬಕ್ಕೆ ಬೇವು ಮಾತ್ರ ಸಿಕ್ಕಿದ್ದು ಬೆಲ್ಲ ಇಲ್ಲದೆ ಕಹಿಯಾಗಿದೆ.

You cannot copy content of this page