ಚಳ್ಳಕೆರೆ ಫೆ.16 ನಗರ ಪ್ರದೇಶದಲ್ಲಿ ಹಂದಿಗಳ ಸಾಕಂದಿಗಳ ಹಾವಳಿ ದಾಳಿಗೆ ಬೆಳೆಗಳು ನಾಶ ಪಡಿಸಿದ ಬೆನ್ನಲ್ಲೇ ಈಗ ಕುದುರೆಗಳು ರೈತರ ಬೆಳೆಗಳನ್ನು ನಾಶ ಪಡಿಸಲು ಮುಂದಾಗಿದ್ದು ಬೆಳೆಗಳ ರಕ್ಷಣೆಗೆ ರೈತರು ಹೈರಾಣಾಗುತ್ತಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿನ ನಗರಂಗರೆ ಗ್ರಾಪಂ ವ್ಯಾಪ್ತಿಯ ನರಹರಿನಗರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರೈತರ ಜಮೀನುಗಳಿಗೆ ನಗರದ ಸಾಕಂದಿಹಾಗೂ ಕುದುರೆಗಳ ದಾಳಿಯಿಂದ ಬೆಳೆ ಕಳೆದುಕೊಂಡು ರೈತರ ಕಣ್ಣೀರಿನ ಕಥೆ ಇದು.
![](https://janadhwani.in/wp-content/uploads/2024/02/Screenshot_20240203_102740.png)
ಈಗಾಗಲೆ ರೈತರು ಹಿಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ, ಕೀಟಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದ್ದಾನೆ. ಬಿಸಿಲಿನ ತಾಪ ಹೆಚ್ಚಾಗಿದ್ದು ಅಂತರ್ಜಲ ಮಟ್ಟ ಕುಸಿದಿದ್ದು ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದ್ದು ವಿದ್ಯುತ್ ಕಣ್ಣ ಮುಚ್ಚಾಲೆಯಾಟದಲ್ಲು ಹಗಲು ರಾತ್ರಿ ನೀರುಣಿಸಿ ಬಿತ್ತನೆ ಮಾಡಿದ ಬೆಳೆಗಳನ್ನು ರೈತರ ಕಣ್ಣುಮುಂದೆಯೇ ಸಾಕಂದಿಗಳು ಹಾಗೂ ಕುದುರೆಗಳು ಬೆಳೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿದ್ದು ಹಂದಿ ಹಾಗೂ ಕುದುರೆ ಮಾಲಿಕರಿಗೆ ಹೇಳಿದರೂ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ಮೌನ ವಹಿಸಿದ್ದಾರೆ. ಬೆಳೆ ಕಳೆದುಕೊಂಡ ರೈತರು ಅಧಿಕಾರಿಗಳಿ ದೂರು ನೀಡಿದರೂ ಸಹ ಹಂದಿ ಮಾಲಿಕರ ವಿರುದ್ದು ತಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಹಂದಿಗಳು ಬೆಳೆ ನಾಶ ಮಾಡಿದ ಬೆನ್ನಲ್ಲೇ ಎರಡು ಕುದುರೆಗಳು ಬೆಳೆಗಳ ಮೇಲೆ ದಾಳಿ ಮಾಡುವ ಬಗ್ಗೆ ಕುದುರೆ ಮಾಲಿಕರಿಗೆ ತಿಳಿಸಿದರೂ ಅವುಗಳು ನಮ್ಮ ಕುದುರೆಯಲ್ಲ ಎಂಬ ಉತ್ತರ ನೀಡುತ್ತಾರೆ ಬೆಳೆ ನಾಶ ಮಾಡುವ ಕುದುರೆಗಳನ್ನು ಕಟ್ಟಿ ಹಾಕಿ ರೈತ ಮಹೇಶ್ ಮೇವು ನೀರು ಹಾಕಿ ಪಾಲನೆ ಮಾಡುತ್ತಿದ್ದು ಇಂತಹ ಬರಗಾಲ ಅದರಲ್ಲೂ ಮೇವಿನ ಸಮಸ್ಯೆ ನಡುವೆ ಸಾಕುತ್ತಿರುವುದು ಅನಿವಾರ್ಯವಾಗಿದೆ. ನಗರಕ್ಕೆ ಹೊಂದಿಕೊಂಡ ನೀರಾವರಿ ಆಶ್ರಿತ ಬೆಳೆಗಳಿಗೆ ಹಂದಿಗಳ ಹಾವಳಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. .
![](https://janadhwani.in/wp-content/uploads/2024/02/Screenshot_20240203_102740.png)
ಈಗಲಾದರೂ ತಾಲೂಕು ಆಡಳಿತ ರೈತರ ಹೊಲದಲ್ಲಿರುವ ಬೆಳೆ ನಾಶ ಮಾಡುತ್ತಿರುವ ಹಂದಿ ಹಾಗೂ ಕುದುರೆ ಹಾವಳಿಗೆ ಮುಕ್ತಿ ನೀಡಬೇಕೆಂದು ರೈತ ನರಹರಿನಗರದ ಮಹೇಶ್ ಅಳಲು ತೋಡಿಕೊಂಡಿದ್ದಾರೆ.
0 Comments