ಸಾರಿಗೆ ಹಾಗೂ ಖಾಸಿ ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ

by | 20/11/22 | Uncategorized, ಕರ್ನಾಟಕ, ಜನಧ್ವನಿ

ಚಳ್ಳಕೆರೆ ಬೆಳ್ಳಂ ಬೆಳಗ್ಗೆ ಸಾರಿಗೆ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಚಳ್ಳಕೆರೆ ನಗರದ ಸಾರಿಗೆ ಘಟಕದಿಂದ ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಸಮವೇಶಕ್ಕೆ 50 ಸಾರಿಗೆ ಬಸ್ ಗಳು ಹಾಗೂ ಖಾಸಗಿ ಬಸ್ ಗಳನ್ನೂ ಸಹ ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಸಮಯದಾಯ ಸಮವೇಶಕ್ಕೆ ಒಪ್ಪಂದದ ಮೇರೆಗೆ ಬಸ್ ಗಳಲ್ಲಿ ಜನರನ್ನು ಕರೆದೊಯ್ಯಲು ಬಿಟ್ಟಿರುವುದರಿಂದ ಗ್ರಾಮೀಣ ಸೇರಿದಂತೆ ವಿವಿಧ ಕಡೆ ಪ್ರಾಯಣ ಮಾಡುವ ಪ್ರಯಾಣಿಕರಿ ಸಾರಿಗೆ ಬಸ್ ಬಿಸಿ ತಟ್ಟಿದ್ದು ಬಸ್ ನಿಲ್ದಾಣದಲ್ಲೇ ಕಾಯುವಂತಾಗಿದೆ. ದಿನ ನಿತ್ತ ಗ್ರಾಮೀಣ ಹಾಗೂ ವಿವಿಧ ನಗರಗಳಿಗೆ ಪ್ರಯಾಣಿಕರಿಗೆಂದು ಬಿಟ್ಟ ಸಾರಿಗೆ ಹಾಗೂ ಖಾಸಗಿ ಬಸ್ ಗಳ ಸಮನಚಾರಕ್ಕೆ ಒಂದೂ ಬಸ್ ಬಿಡದೆ ಸಾರಿಗೆ ಬಸ್ ಗಳ ಜತೆ ನೂರಾರು ಖಾಸಗಿ ಬಸ್‌ಗಳೂ ಹೋಗಿರುವುದರಿಂದ ಗ್ರಾಮೀಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ
ನಗರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಅನೇಕ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಯಾವಾಲು ನಜ ಹಾಗೂ ಬಸ್ ಗಳ ದಟ್ಟಣೆಯಿಂದ ಕೂಡಿದ್ದ ಬಸ್ ನಿಲ್ದಾಣದಲ್ಲಿ ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿದೆ. ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ಕುಳಿತು ಹೈರಾಣಾಗಿಧದಾರ
ಗ್ರಾಮೀಣ ಭಾಗದ ಜನರು ಬಸ್ ಕೊರತೆಯಾಗಿದ್ದರಿಂದ ಲಗೇಜ್ ಆಟೋಗಳಲ್ಲಿ ದುಬಾರಿ ಬಾಡಿಗೆ ನೀಡಿ ಊರುಗಳತ್ತ ಪ್ರಯಾಣ ಬೆಳೆಸಿದರೆ ಚಿತ್ರದುರ್ಗ. ಹಿರಿಯೂರು.ಪಾವಗಡ. ದಾವಣಗೆರೆ.ಬೆಂಗಳೂರು ಸೇರಿ ವಿವಿಧ ದೂರದ ಪ್ರಯಾಣಿಕರಿಗೆ ಬಸ್ ಇಲ್ಲದೆ ರಸ್ತೆ ಬದಿ ಹಾಗೂ ಬಸ್ ನಿಲ್ದಾಣದಲ್ಲೇ ಕಾಯುತ್ತಾ ಸರಕಾರ .ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತೆ ಮಾಡಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *