ಸಾಮಾಜಿಕ

ತಮಿಳುನಾಡು ಚಂಡಮಾರುತ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆಗೆ ಶ್ರೀಜಪಾನಂದಸ್ವಾಮಿ ಸಿದ್ದತೆ.


ಪಾವಗಡ ಡಿ7 ತಮಿಳುನಾಡು ಚಂಡಮಾರುತದಿಂದ ಜಲಾವೃತಗೊಂಡ ನಿರಾಶ್ರಿತರಿಗೆ ಅಗತ್ಯ ದಿನಬಳಕೆ ವಸ್ತುಗಳನ್ನು ನೀಡಲು ಸಿದ್ದತೆ ಮಾಡಿಕೊಳ್ಳುತ್ತಿರುವ ಶ್ರೀ ಜಪಾನಂದಸ್ವಾಮಿಗಳು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡಕ್ಕೆ, ಕಳೆದ ಒಂದು ವಾರದಿಂದ ಏಕಪ್ರಕಾರವಾಗಿ ತಮಿಳುನಾಡಿನಿಂದ ಅದರಲ್ಲಿಯೂ ಮದ್ರಾಸ್ ಮಹಾನಗರದ ತಾಮ್ರಂ, ಏರ್ಪೋರ್ಟ್, ಮಲ್ಲಿಯಂಕರಣೆ, ಕಾಂಚಿಪುರಂ ,ಮುಂತಾದ ಪ್ರದೇಶಗಳಿಂದ ನಿರಂತರವಾಗಿ ದೂರವಾಣಿ ಕರೆ ಹಾಗೂ ಪತ್ರಗಳು ಬರುತ್ತವೆ . ಇದಕ್ಕೆ ಕಾರಣ ಈ ಹಿಂದೆ ಅಂದರೆ ಎರಡು ಸಾವಿರದ ಹದಿನೈದನೇ ಇಸವಿಯಲ್ಲಿ ಬಂದಂತಹ ಪ್ರಳಯ ಹಾಗೂ 2018ನೇ ಇಸ್ವಿಯಲ್ಲಿ ಬಂದಂತಹ ಗಜ ಚಂಡಮಾರುತದಲ್ಲಿ ಪೂಜ್ಯ ಸ್ವಾಮಿ ಜಪಾನಂದ ಜಿ ಅವರು ಕೈಗೊಂಡ ಪರಿಹಾರ ಕಾರ್ಯ ಇಂದಿಗೂ ಆ ಜನರು ಮರೆತಿಲ್ಲ .ಕೋಟ್ಯಾಂತರ ರೂಪಾಯಿಗಳ ಪರಿಹಾರ ಕಾರ್ಯವನ್ನು ಅನೇಕ ಸಂಘ ಸಂಸ್ಥೆಗಳ ಹಾಗೂ ಮುಖ್ಯವಾಗಿ ಇನ್ಫೋಸಿಸ್ ಫೌಂಡೇಶನ್ ರವರ ಸಹಕಾರದಿಂದ ಸಹಸ್ರ ಸಹಸ್ರ ಜನರಿಗೆ ನಿರಂತರವಾಗಿ ಆಪತ್ಬಾಂಧವರಾಗಿ ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಕಾರ್ಯವೈಸಿದ್ದು, ಇಂದಿಗೂ ಆ ಜನರ ಹೃದಯದಲ್ಲಿ ಮತ್ತು ಮನದಲ್ಲಿ ಅಚ್ಚಳಿಯದೆ ಉಳಿದಿದೆ . ಈ ಕಾರಣದಿಂದ ಪೂಜ್ಯ ಸ್ವಾಮಿ ಜಪಾನಂದ ಜೀ ರವರನ್ನು ಮತ್ತೆ ಈ ಸೇವ ಕಾರ್ಯಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿ ಕೊಂಡಿರುವ ಈ ಜನರಿಗೆ ಪೂಜ್ಯ ಸ್ವಾಮೀಜಿಯವರು ಅವರ ಆ ಕಷ್ಟವನ್ನು ನೋಡಲಾರದೆ ಮತ್ತೆ ಚಂಡಮಾರುತ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ತಾಮ್ರಮ್ ಹಾಗೂ ಚೆನ್ನೈ ಮಹಾನಗರದ ಲಯನ್ಸ್ ಕ್ಲಬ್ಬಿನ ಸ್ವಯಂಸೇವಕರಿಗೆ ಸೇವಾ ಕಾರ್ಯವನ್ನು ಮಾಡಬೇಕೆಂದು ತಿಳಿಸಿರುತ್ತಾರೆ. ಈ ಯೋಜನೆ ಬಹುಶಹ ಒಂದು ಕೋಟಿಯನ್ನು ದಾಟುವಂತಿದೆ ಈಗಾಗಲೇ ಪ್ರತಿಯೊಂದು ಕುಟುಂಬಕ್ಕೆ ಎಲ್ಲ ರೀತಿಯ ದಿನಸಿ ಅಕ್ಕಿ ಸಕ್ಕರೆ ರವೆ ಗೋಧಿಹಿಟ್ಟು ಬೇಳೆ ಮುಂತಾದವುಗಳ ಜೊತೆ ನೂತನ ವಸ್ತ್ರಗಳು, ಹೊದಿಕೆಗಳು ,ಇತ್ಯಾದಿಗಳನ್ನು ಅಣಿ ಮಾಡಲು ಪ್ರಾರಂಭಿಸಿದ್ದಾರೆ .ಚೆನ್ನೈ ಮಹಾನಗರದ ಇನ್ಫೋಸಿಸ್ ಸಂಸ್ಥೆಯ ಸ್ವಯಂಸೇವಕರು ಈ ಯೋಜನೆಯಲ್ಲಿ ಸಹಕಾರ ನೀಡಲಿದ್ದಾರೆ . ಪೂಜ್ಯ ಸ್ವಾಮೀಜಿಯವರು ಈ ಬಾರಿ ಸರಿಸುಮಾರು ನಾಲ್ಕು ಸಹಸ್ರ ಕುಟುಂಬದವರಿಗೆ ತತ್ ಕ್ಷಣದ ಸಹಾಯವನ್ನು ನೀಡಲು ಸಜ್ಜಾಗಿದ್ದು ಈಗಾಗಲೇ ಚೆನ್ನೈ ಮಹಾನಗರಕ್ಕೆ ಪ್ರಯಾಣ ಬೆಳೆಸಲು ತಯಾರಾಗಿದ್ದಾರೆ ತಮ್ಮ ಸ್ವಯಂಸೇವಕ ರ ತಂಡದೊಂದಿಗೆ ಈ ಮಹಾನ್ ಕಾರ್ಯವನ್ನು ಕೈಗೊಳ್ಳಲು ಧುಮುಕಿದ್ದಾರೆ, ಇದೇ ಅಲ್ಲವೇ ನಿಜವಾದ ಆಪದ್ಬಾಂಧವ ಎನಿಸಿಕೊಳ್ಳುವಂತಹ ತಂಡ ಈ ತಂಡದ ರೂವಾರಿಯಾಗಿರುವ ಪೂಜ್ಯ ಸ್ವಾಮಿ ಜಪಾನಂದಜಿಯರವರಿಗೆ ಎಲ್ಲ ಆಶ್ರಮದ ಹಿತೈಷಿಗಳು ಭಕ್ತರು ಹಾಗೂ ಬೆಂಗಳೂರಿನ ಮತ್ತು ಇತರ ನಗರಗಳ ಹಿತೈಷಿಗಳು ಸ್ವಯಂಸೇವಕರು ಸ್ವಾಮೀಜಿಯವರಿಗೆ ಬೆನ್ನೆಲುಬಾಗಿ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಸ್ವಾಮಿ ವಿವೇಕಾನಂದರ ಸೇನಾನಿಯಾಗಿ ಸ್ವಾಮಿ ಜಪಾನಂದರು ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಸಹಸ್ತ್ರ ಸಹಸ್ರ ಜನರಿಗೆ ಸಹಾಯ ಹಸ್ತವನ್ನು ನೀಡಲು ಮುಂದಾಗುತ್ತಿರುವುದು ಸ್ವಾಮಿ ವಿವೇಕಾನಂದರ ಶಕ್ತಿ ಅಲ್ಲದೆ ಬೇರೇನೂ ಇಲ್ಲ ಎನ್ನಬಹುದು ಈ ಭಯಾನಕ ಹಾಗೂ ಅಪಾಯಕರವಾದ ಸ್ಥಿತಿಗಳನ್ನು ಸರಿಯಾದ ನಿದ್ರೆ ಊಟ ಮತ್ತಿತರ ವ್ಯವಸ್ಥೆಗಳನ್ನು ಪಕ್ಕಕ್ಕಿಟ್ಟು ಕಷ್ಟದಲ್ಲಿರುವ ಜನರ ಕೈ ಹಿಡಿದು ಮೇಲೆತ್ತುವ ಈ ಸನ್ಯಾಸಿಗೆ ,ಜನತೆ ,ಯುವಕರು ಹಾಗೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕೆಂದು ಆಶ್ರಮದ ಅಧಿಕಾರಿ ವರ್ಗದವರು ಮನವಿ ಮಾಡಿರುತ್ತಾರೆ . ಇದೇ ಸಂದರ್ಭದಲ್ಲಿ ಜೀವನಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯಲ್ಲಿಯೂ ಸಹ ಪೂಜ್ಯ ಸ್ವಾಮೀಜಿಯವರು ಯಾವುದನ್ನು ಲೆಕ್ಕಿಸದೆ ಕಳೆದ 30 ವರ್ಷಗಳಿಂದ ಏಕಪ್ರಕಾರವಾಗಿ ಅಂದರೆ ಗುಜರಾತಿನ ಭೂಕಂಪದಿಂದ ಹಿಡಿದು ಸುನಾಮಿ ,ಗಜ, ಹಾಗೂ ಭಯಂಕರವಾದ ಕೋವಿಡ್ ಸಂದರ್ಭದಲ್ಲಿಯೂ ಆರು ರಾಜ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಚ್ಚೆದೆಯ ಪೂಜ್ಯ ಸ್ವಾಮಿ ಜಪಾನಂದ ಜೇವರಿಗೆ ಅವರಿಗೆ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಹೋದರ ಸಂಸ್ಥೆಗಳ ಪರವಾಗಿ ಎಲ್ಲ ಕಾರ್ಯಕರ್ತರು ಶುಭಾಶಯವನ್ನು ಕೋರಿದ್ದಾರೆ.

ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳು : ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿಕೆ


ಹಿರಿಯೂರು :
ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಇಂದಿನ ಸಮಾಜದ್ದಷ್ಟೇ ಅಲ್ಲದೇ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದ್ದು, ವಿದ್ಯಾರ್ಥಿಗಳು ಸಹ ಸ್ವಯಂ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರು, ಯುವರೆಡ್ ಕ್ರಾಸ್ ನ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.
ನಗರದ ಸರ್ಕಾರೀ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಪ್ರಾಂಶುಪಾಲರಾದ ವಾಸುದೇವ್ ರವರ ಮಾರ್ಗದರ್ಶನದಲ್ಲಿ ನಡೆದ ಲಿಂಗವರ್ಗಜಾತಿ ಭೇದಗಳನ್ನು ತೊಡೆದು ಹಾಕಿ ಸಮಗ್ರ ಭಾರತದ ಐಕ್ಯಮತ್ಯ ಸಾಧಿಸುವ ಸಲುವಾಗಿ ರಾಷ್ಟ್ರೀಯ ಐಕ್ಯತಾ ದಿನ ಕಾರ್ಯಕ್ರಮದಲ್ಲಿ ಪ್ರಮಾಣ ವಚನವನ್ನು ಬೋಧಿಸಿ, ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಸಮಾಜಮುಖೀ ಧನಾತ್ಮಕ ಆಲೋಚನೆಗಳನ್ನು ಹೊಂದಿರುವ ಧೃಢ ವ್ಯಕ್ತಿತ್ವದ ಇಂದಿನ ಯುವಪೀಳಿಗೆ ನಾಡಿನ ಅಭ್ಯುದಯದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದು, ಈ ನಿಟ್ಟಿನಲ್ಲಿ ಯುವ ವಿದ್ಯಾರ್ಥಿ ಸಮೂಹ ಪಠ್ಯಕ್ರಮಗಳ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯರಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಚೈತ್ರ, ಆರೋಗ್ಯ ಸಹಾಯಕರಾದ ವಿನಯ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಂಶುಪಾಲರಾದ ಬಸವರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನವೀನ್ ಕುಮಾರ್, ಪವನ್, ರಮೇಶ್, ಸುಷ್ಮಾ, ಸವಿತಾ, ಚೇತನ್, ಇತರರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ವೇತಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಶಾಲೆಗೆ ರಾಷ್ಟ್ರನಾಯಕರ ಭಾವಚಿತ್ರಗನ್ನು ಕೊಡುಗೆ ನೀಡಿದ ಗ್ರಾಪಂ ಅಧ್ಯಕ್ಷ ವೆಂಕಟೇಶ್.


ಚಳ್ಳಕೆರೆ ನ.16 ನಾಡು ನುಡಿ.ಜಲ .ಭಾಷೆ ದೇಶ ಉಳಿವಿಗಾಗಿ
ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳು ಅನುಸರಿಸಬೇಕು ಎಂದು ಗ್ರಾಪಂ ಅಧ್ಯಕ್ಚ ಜಿ.ಎನ್ .ವೆಂಕಟೇಶ್ ಕಿವಿಮಾತು ಹೇಳಿದರು
ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೊಡ್ಢೇರಿ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್ ರಾಷ್ಟ್ರನಾಯಕರ ಪೋಟೊಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು. ಶಿಕ್ಷಕರು ಅವರಿಗೆ ರಾಷ್ಟ್ರ ನಾಯಕರು ದೇಶಕ್ಕಾಗಿ ತ್ಯಾಗ ಮಾಡಿದ ಇತಿಹಾಸವ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಒತ್ತಿ ಹೇಳಿದರು.

ಮುಖ್ಯಶಿಕ್ಷಕ ನಾಗರಾಜ್ ಮಾತನಾಡಿ ದೇಶಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ರಾಷ್ಟ್ರನಾಯಕರ ಸಂದೇಶಗಳನ್ನು ಮಕ್ಕಳಿಗೆ ತಿಳಿಸಲು ಈ ಭಾವ ಚಿತ್ರಗಳನ್ನು ಮಕ್ಕಳಿಗೆ ಸಹಕಾರಿಯಾಗಲಿವೆ ದಾನಿಗಳು ನೀಡಿದ ರಾಷ್ಟ್ರನಾಯಕರ ಪೋಟೋಗಳನ್ನು ರಕ್ಷಣೆ ಮಾಡುವ ಜತೆಗೆ ಅವರ ಇತಿಹಾಸ ಮಕ್ಕಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು. ಸಿ ಆರ್ ಪಿ ರಾಧಾ ಶಾಲಾ ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಗರದಲ್ಲಿ ದೀಪಾವಳಿ ಹಬ್ಬದ ಸಡಗರ-ಸಂಭ್ರಮ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವುಹಣ್ಣು ಬೆಲೆ


ಹಿರಿಯೂರು :
ನಮ್ಮ ಕರುನಾಡಿನ ಶ್ರೇಷ್ಠ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ–ಸಂಭ್ರಮಾ ನಗರದಲ್ಲಿ ಎಲ್ಲೆಲ್ಲೂ ಕಂಡು ಬಂದಿದ್ದು, ನಗರದ ಜನತೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಹಣ್ಣು-ಹಂಪಲು, ಹೂಗಳು ಸೇರಿದಂತೆ ಬಾಳೆಕಂದು, ಆಕಾಶಬುಟ್ಟಿ, ದೀಪಗಳು, ಪಟಾಕಿಗಳು ಹಾಗೂ ಹಣತೆಗಳನ್ನು ಕೊಂಡುಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಈ ದೀಪಾವಳಿ ಹಬ್ಬಕ್ಕಾಗಿ ಈ ಬಾರಿ ನಗರದ ನೆಹರೂ ಮಾರುಕಟ್ಟೆ ಆವರಣ, ಗಾಂಧಿಸರ್ಕಲ್, ಖಾಸಗಿಬಸ್ ಸ್ಟ್ಯಾಂಡ್, ನೆಹರೂ ಸರ್ಕಲ್, ಹುಳಿಯಾರು ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಗುರುಭವನದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಪುಟ್ ಪಾತ್ ತುಂಬೆಲ್ಲಾ ಹಣ್ಣು-ಹಂಪಲು, ಹೂಗಳು, ದೀಪಗಳು ರಾಶಿ ರಾಶಿ ಹಾಕಲಾಗಿದೆ.
ಈಗಾಗಲೇ ದಸರಾ ಹಬ್ಬ ಮುಗಿದ ನಂತರ ಕುಸಿದಿದ್ದ ಹೂವಿನ ಬೆಲೆ ಇದೀಗ ಚೇತರಿಸಿಕೊಂಡು ಗಗನಕ್ಕೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳು ಬಾಳೆಕಂಬ, ಪೂಜಾಸಾಮಾಗ್ರಿಗಳ, ಬೆಲೆ ಏರಿಕೆಯಾಗಿದ್ದರೂ ಸಾರ್ವಜನಿಕರಲ್ಲಿ ಹಬ್ಬದ ಸಡಗರ ಸಂಭ್ರಮ ಕಡಿಮೆಯಾಗಿಲ್ಲ.
ಈ ದೀಪಾವಳಿ ಹಬ್ಬದಲ್ಲಿ ಪ್ರತಿಯೊಬ್ಬರ ಮನೆಯ ಮುಂದೆ ತಳಿರುತೋರಣಗಳಿಂದ ಸಿಂಗರಿಸಿ, ದೀಪಗಳನ್ನು ಬೆಳಗಿಸುವ ಮೂಲಕ ಮನೆಯಲ್ಲಿನ ಕತ್ತಲನ್ನು ದೂರಮಾಡಿ, ಬೆಳಕನ್ನು ಪಡೆಯುವ ಈ ಹಬ್ಬದಲ್ಲಿ ಮನೆಯ ಹಿರಿಯರು-ಕಿರಿಯರು ಹೊಸಬಟ್ಟೆ ಹಾಕಿಕೊಂಡು ಸಿಹಿ ಊಟ ಮಾಡಿ, ಪಟಾಕಿ ಸಿಡಿಸಿ, ಸುರುಸುರುಬತ್ತಿ, ಹೂಕುಂಡ, ಭೂಚಕ್ರಗಳನ್ನು ಹಚ್ಚುವ ಮೂಲಕ ಸಡಗರಸಂಭ್ರಮಗಳಿಂದ ಆಚರಿಸುವುದು ಈ ಹಬ್ಬದ ವಿಶೇಷವಾಗಿದೆ.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗ್ರೂಪ್ ವತಿಯಿಂದ ಕ್ಷೇತ್ರದ ಜನತೆಗೆ ಅಂಬ್ಯುಲೆನ್ಸ್ ಸೇವೆ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಮನವಿ.


ಜನಧ್ವನಿ ವಾರ್ತೆ ಅ.28. ಸರಿಯಾದ ಸಮಯಕ್ಕೆ ತುರ್ತು ವಾಹನ ಸೌಲಭ್ಯವಂಚಿತರಾಗಿ ಆರೋಗ್ಯ ಸೇವೆ ದೊರೆಯದೆ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರಿದ ಘಟನೆಗಳು ನಮ್ಮಕಣ್ಣು ಮುಂದೆ ಇವೆ ಇಂತಹ ಘಟನೆಗಳನ್ನು ತಡೆಯಲು ಶಾಸಕರೊಬ್ಬರು ತುರ್ತುವಾಹನ ಸೇವೆ ಮಾಡಲು ಮುಂದಾಗಿದ್ದು ಮಾನವೀಯತೆ ಮರೆದಿದ್ದಾರೆ.
ಹೌದು ಇದು ಕೋಟೆ ನಾಡು,ಬರಗಾಲದ ನಾಡು, ಬಯಲು ಸೀಮೆ ಎಂದು ಹಣೆ ಪಟ್ಟಿಕಟ್ಟಿಕೊಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರದ ಹೊರವಯಲಯ ಕಾವಾಡಿಗರಹಟ್ಟಿಯಲ್ಲಿ ಕಲುಸಿತ ನೀರು ಸೇವಿಸಿ ಸಾವು ನೋವಿನಲ್ಲಿದ್ದಾಗ ಜರೊಂದಿಗೆ ಇದ್ದು ಅಲ್ಲಿನ ಜನರ ಚಿಕಿತ್ಸೆಗೆ ನೆರವಾಗಿ ಹೆಚ್ಚಿನ ಸಾವು ನೋವುಗಳನ್ನು ತಡೆಯಲು ಮುಂದಾದ ಬೆನ್ನಲ್ಲೇ ಈಗ ಮತ್ತೊಂದು ಕ್ಷೇತ್ರದ ಜನರ ಆರೋಗ್ಯ ಸೇವೆಗೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಲ್ಲು ಇದೀಗ ಆಂಬ್ಯುಲೆನ್ಸ್ ಸೇವೆ ಆರಂಭಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರ ಅನುಪಮ ಸೇವೆ ಸದಾ ಮುಂದುವರಿಯಲಿ ಎಂದು ಕ್ಷೇತ್ರದ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಅಂಬ್ಯುಲೆಸ್ಸ್ ಸೇವೆ ಹೇಗಿರುತ್ತದೆ. ದಿನದ 24 ಗಂಟೆ ನಗರ ವ್ಯಾಪ್ತಿಯಲ್ಲಿ ಉಚಿತವಾಗಿದ್ದು ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಾಹನ ಚಾಲಕನಿಗೆ ಬ್ಯಾಟ ಹಾಗೂ ಕಿ.ಮೀ. ಲೆಕ್ಕದಂತೆ ಡೀಜೆಲ್ ಹಾಕಿಸಿದರೆ ಸಾಕು ಗರ್ಭಿಣಿ, ಬಾಣಂತಿ, ವಿಷಜಂತು, ತುರ್ತು ಚಿಕಿತ್ಸೆ. ಆಸ್ಪತ್ರೆಗೆ ದಾಖಲು ಹಾಗೂ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಲು ,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟವರಿಗೂ ಸೇವೆ ನೀಡಲಿದೆ ಇದು ಕ್ಷೇತ್ರದ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ) ಯವರ ಮಾರ್ಗದರ್ಶನದಲ್ಲಿ KCV GROUP’S ಚಿತ್ರದುರ್ಗ ಇವರ ವತಿಯಿಂದ ಸಾರ್ವಜನಿಕರ ದಿನದ 24 ಗಂಟೆ ಸೇವೆ ನೀಡಲಿದ್ದೇವೆ ಎಂದು ಕೆ.ಸಿ.ವಿ ಗ್ರೂಫ್ ನ ಸೇವಕರು ಮಾಹಿತಿ ನೀಡಿದ್ದಾರೆ. ಈ ದೂರವಾಣಿ ಸಂಖ್ಯೆಗೆ 8971721565 – 9916267142 7483789387 – 7406661030 ಕರೆ ಮಾಡಿ ವಿಳಾಸ ತಿಳಿಸಿದರೆ ತಕ್ಷಣ ಸೇವೆ ನೀಡಲಿದ್ದಾರೆ ಈ ಸೇವೆಯನ್ನು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಗುಡಿಸಲಿಗೆ ಬೆಂಕಿ ಬಿದ್ದ ನೊರಾಶ್ರಿತ ಕುಟುಂಬಕ್ಕೆ ಜಪಾನಂದಸ್ವಾಮಿಜಿ ನೆರವು.


ಚಳ್ಳಕೆರೆ ಸೆ.21.ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿಬಿದ್ದು ಅಪಾರ ನಷ್ಟವಾದ ಕುಟುಂಬಕ್ಕೆ ಜಪಾನಂದಸ್ವಾಮಿಗಳು ನೆರವು ನೀಡಿದ್ದಾರೆ.


ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನಾರಹಟ್ಟಿಯ ಭಾಗ್ಯಮ್ಮ ಮತ್ತು ಪಾಪಯ್ಯ ಇವರ ವಾಸದ ಗುಡಿಸಲು ಬುಧವಾರ. ಸಂಜೆ ಬೆಂಕಿ ಬಿದ್ದು ದವಸ ಧಾನ್ಯ.ಬಟ್ಟೆ .ಹಣ ಸುಮಾರು ,70ರಿಂದ80 ಸಾವಿರ ರೂ ನಷ್ಟವಾಗಿ ಕುಟುಂಬ ಬೀದಿಗೆ ಬೀಳುವಂತಾಗಿತ್ತು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಮಕೃಷ್ಣ ಮಠದ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ .10 ಸಾವಿರ ರೂ ಬಟ್ಟೆ ಪಾತ್ರೆ, ದಿನಬಳಕೆ ವಸ್ತುಗಳನ್ನು, ಬೆಡ್‍ಶೀಟ್, ಸೊಳ್ಳೆ ಪರದೆ ಹಾಗೂ ಟಾರ್ಪಾಲುಗಳನ್ನು ತತ್‍ಕ್ಷಣ ಪರಿಹಾರವಾಗಿ ನೀಡಿರುತ್ತಾರೆ.ಅದೇ ರೀತಿ ನನ್ನಿವಾಳ ಗ್ರಾಪಂ ವತಿಯಿಂದ 5 ಸಾವಿರ ರೂಗಳಮ್ನು ಪರಿಹಾರವಾಗಿ ನೀಡಿದ್ದಾರೆ ಇನ್ನು ಹೆಚ್ಚಿನ ನೆರವು ನೀಡುವುದಾಗಿ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ ಅಭಯ ನೀಡಿದ್ದಾರೆ.

ವಿಶ್ರಾಂತ ನ್ಯಾಯಾಧೀಶ ಹೆಚ್.ಬಿಲ್ಲಪ್ಪ ನಿವಾಸದಲ್ಲಿ ಸತ್ಸಂಗ ಕಾರ್ಯಕ್ರಮ.


ಹೊಸದುರ್ಗ ಸೆ.12.ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದು ಜಪಾನಂದ ಮಹರಾಜ್ ಸ್ವಾಮೀಜಿ ಸಲಹೆ ನೀಡಿದರು.
ಹೊಸದುರ್ಗ ಭಗೀರಥ ನಗರದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಎಚ್ ಬಿಲ್ಲಪ್ಪ ರವರ ಮನೆಯ ಆವರಣದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತ ನ್ಯಾಯಾಧೀಶರ ಮನೆಯಲ್ಲಿ ಸುಂಧರವಾದ ಸತ್ಸಂಗ ಕೊಠಡಿಯನ್ನು ನಿರ್ಮಿಸಿರುವುದು ಶ್ಲಾಘನೀಯ. ಸತ್ಸಂಗದಲ್ಲಿ ಭಾಗವಹಿಸುವುದರಿಂದಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಮನಸ್ಸಿಗೆ ನೆಮ್ಮದಿ.ಶಾಂತಿದೊರೆಯುತ್ತದೆ. ಆಡಂಬರದ ಭಕ್ತಿಯಿಂದ ಯಾವುದೇ ಪ್ರಯೋಜನವಿಲ್ಲ. ಸತ್ಯದ ಹಾದಿಯಲ್ಲಿ ಸಾಗಬೇಕು. ಧರ್ಮದ ನಡೆಯಲ್ಲಿಯೇ ಪಯಣಿಸಬೇಕು. ಎಲ್ಲರಲ್ಲೂ ವಿವೇಚನಾ ಶಕ್ತಿ ಇದೆ. ಆದರೆ ಸಾವಿರಾರು ಬಗೆಯ ಮನಸ್ಸುಗಳ ನಡುವೆ ಹೊಂದಿಕೊಂಡು ಜೀವಿಸುವಾಗ ತಪ್ಪುಗಳು ಸಂಭವಿಸಬಹುದು. ಅಂತಹ ಸಂದರ್ಭದಲ್ಲಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸಮಚಿತ್ತದಿಂದ ವರ್ತಿಸಬೇಕಿದೆ’ ಎಂದರು.
ಸಮಚಿತ್ತದಿಂದ ಬದುಕಲು ಏಕಾಗ್ರತೆಯ ಅವಶ್ಯಕತೆಯಿದೆ. ವಿಶ್ರಾಂತ ನ್ಯಾಯಮೂರ್ತಿ ಶ್ರೀ ಹೆಚ್ ಬಿಲ್ಲಪ್ಪ ರವರ ಅಹ್ವಾನದ ಮೇರೆಗೆ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ ಎಂದರು ನಿವೃತ್ತ ನ್ಯಾಯಾಧೀಶ ಹೆಚ್.ಬಿಲ್ಲಪ್ಪನವರ ಮನೆಯಲ್ಲಿ ಸುಂದರವಾದ ಆದ್ಯಾತ್ಮಿಕ ಕೇಂದ್ರ ಸ್ಥಾಪನೆ ಮಾಡಿದ್ದು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು. . ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿಲ್ಲಪ್ಪ ಪ್ಪ ಮಾತನಾಡಿ ಶ್ರೀರಾಮಕೃಷ್ಣ ಸೇವಾಶ್ರಮದ ಅತ್ಯಂತ ನನಗೆ ನಿಕಟವರ್ತಿಗಳು ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಮತ್ತು ಶ್ರೀ ಶಾರದಾದೇವಿ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಗಳ ಕಾನೂನು ಹಾಗೂ ಆಡಳಿತಾತ್ಮಕ ವಿಚಾರಗಳ ಮುಖ್ಯ ಸಲಹೆಗಾರರಾಗಿ ಪೂಜ್ಯ ಸ್ವಾಮೀಜಿ ಜಪಾನಂದ ಜಿ ಮಹಾರಾಜರವರಿಗೆ ಎಲ್ಲ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹೊಸದುರ್ಗದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸತ್ಸಂ ಗ ಕಾರ್ಯಕ್ರಮದ ಸ್ವಾಗತ ಮಾಡಿದರು. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಮಹಾ ಮಾತೆ ಶ್ರೀ ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರಿಗೆ ಪೂಜೆಯನ್ನು ಸಲ್ಲಿಸಿ ನ್ಯಾಯಮೂರ್ತಿಗಳು ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ತಮ್ಮ ಸಿರಿ ಕಂಠದಿಂದ ಶುಶ್ರಾವ್ಯವಾಗಿ ಅನೇಕ ಭಕ್ತಿಗೀತೆಗಳನ್ನು ಹಾಗೂ ಗೌರವಾನ್ವಿತ ನ್ಯಾಯಮೂರ್ತಿಗಳ ಇಚ್ಛೆಯಂತೆ ಸ್ವಾಮಿ ವಿವೇಕಾನಂದರು ರಚಿಸಿದ ಸನ್ಯಾಸಿ ಗೀತೆಗಳನ್ನು ವೇದಘೋಷ ಹಾಗೂ ದಾಸರ ಪದಗಳನ್ನು ಸಹ ಹಾಡಲಾಯಿತು ಸತ್ಸಂಗ ಕಾರ್ಯಕ್ರಮದಲ್ಲಿ ಹಲವರು ಭಾವವಹಿಸಿದ್ದರು.

ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಜಪಾನಂದ ಜೀ ಮಹರಾಜರು .

ಚಳ್ಳಕೆರೆ ಸೆ.12.ಸರಕಾರಗಳು ಅವಶ್ಯಕತೆ ಇಲ್ಲದ ಕಾರ್ಯಕ್ರಮಗಳಿಗೆಕೋಟಿ ಕೋಟಿ ಹಣ ಸುರಿಯುತ್ತವೆ ಆದರೆ ದೇಶದ ಸಂಪತ್ತು ಗೋಮಾತೆ ಎಂದು ಕರೆಯುವ ಜಾನುವಾರುಗಳಿಗೆ ಹಾಗೂ ದೇವರ ಎತ್ತುಗಳಿಗೆ ಹಿಡಿ ಮೇವು ಕೊಡಲು ಸರಕಾರಗಳು ಮುಂದೆ ಬರುತ್ತಿಲ್ಲಎಂದು ಜಪಾನಂದ ಜೀ ಮಹರಾಜರು ವಿಷಾದಿಸಿದರು.

ನಗರದ ಹೊರವಲಯದ ಶ್ರೀ ಜಗಲೂರಜ್ಜ ಸ್ವಾಮಿಯ ದೇವಾಲಯದ ಬಳಿ ಇರುವ ಬುಡಕಟ್ಟು ಸಮುದಾಯದ ದೇವರ ರಾಸುಗಳಿಗೆ ಸುಧಾ ಮೂರ್ತಿ ಫೌಂಡೇಶನ್ .ರಾಮಕೃಷ್ಣ ಆಶ್ರಮ ಸಹಯೋಗದೊಂದಿಗೆ ಉಚಿತ ಮೇವು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವರ ಹಸುಗಳಿಗೆ ಮೇವು ನೀಡಿ ಎಂದು ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಇಲ್ಲಿನ ಬುಡಕಟ್ಟು ಸಮುದಾಯದ ಕಿಲಾರಿಗಳು ತಮ್ಮ ವಂಶ ಪಾರಂಪರ್ಯವಾಗಿ ಬಂದಿರುವ ದೇವರ ಹಸುಗಳನ್ನು ಸಾಕುವ ಕಾಯಕದಲ್ಲಿ ತೊಡಗಿದ್ದಾರೆ ಇಂತಹ ಕಿಲಾರಿಗಳು ತಮ್ಮ ಆಶ್ರಮಕ್ಕೆ ಬಂದು ದೇವರ ಹಸುಗಳು ಹಸಿವಿನಿಂದ ಬಳಲುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿವೆ ತಮಗೆ ಉಚಿತ ಮೇವು ವಿತರಿಸಬೇಕು ಎಂದು ಕೇಳಿಕೊಂಡರು ನಾನು ಈಗಾಗಲೇ ಚಳ್ಳಕೆರೆ ಮೊಳಕಾಲ್ಮೂರು ನಾಯಕನಹಟ್ಟಿ ಕೂಡ್ಲಿಗಿ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಸುಮಾರು 280 ಟನ್ ನಷ್ಟು ಮೇವು ಉಚಿತವಾಗಿ ವಿತರಿಸಿದ್ದೇನೆ ಒಬ್ಬ ಸ್ವಾಮೀಜಿಯಾಗಿ ಶ್ರೀಮತಿ ಸುಧಾ ಮೂರ್ತಿಯವರ ಮೂರ್ತಿ ಫೌಂಡೇಶನ್ ಸಹಕಾರದೊಂದಿಗೆ ನಾನು ನನ್ನ ಕೈಲಾದಷ್ಟು ಮಟ್ಟಿಗೆ ಇದುವರೆಗೂ ಇಂತಹ ದೇವರ ಹಸುಗಳನ್ನು ಸಾಕುವ ಕಿಲಾರಿಗಳಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ ಆದರೆ ಸರ್ಕಾರ ಇಂತಹ ಬರಪೀಡಿತ ಪ್ರದೇಶಗಳಲ್ಲಿಯೂ ಸಹ ದೇವರ ಹಸುಗಳಿಗೆ ಮೇವನ್ನು ವಿತರಿಸದೆ ಸ್ವಾಮೀಜಿಯವರು ನೀಡುತ್ತಿದ್ದರೆ ಅವರ ಬಳಿಯೇ ಹೋಗಿ ಕೇಳಿ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ರಾಜಕಾರಣಿಗಳು ಉದಾಸೀನದ ಮಾತುಗಳನ್ನು ಆಡುತ್ತಿರುವುದು ನೋವು ತರಿಸಿದೆ ಎಂದರು.

ಭಿಕ್ಷೆ ಬೇಡಿ ಮೇವು ವಿತರಣೆ
. ಈಗಾಗಲೇ ರಾಜ್ಯದ ಹಲವೆಡೆ ಮಳೆ ಬಾರದೆ ಬರದ ಛಾಯೆ ಆವರಿಸಿದೆ ಮೇವಿಗಾಗಿ ಹುಲ್ಲು ಎಲ್ಲಿಯೂ ದೊರೆಯುತ್ತಿಲ್ಲ ಆದರೂ ಕಿಲಾರಿಗಳು ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂಬ ದೃಷ್ಟಿಯಿಂದ ದೇವರ ಹಸುಗಳನ್ನು ಸಲಹುತ್ತಿದ್ದಾರೆ ಅವರ ಈ ನಿಸ್ವಾರ್ಥ ಕಾಯಕ ಕಂಡಾಗಿನಿಂದ ಭಿಕ್ಷೆ ಬೇಡಿ ಆದರೂ ಇವರಿಗೆ ಹುಲ್ಲು ತರಿಸುವ ಪ್ರಯತ್ನ ಮಾಡುತ್ತೇನೆ ಇದುವರೆಗೂ ನಾನು ಸರ್ಕಾರದ ಯಾವ ಸಚಿವರನ್ನು ಅಥವಾ ಅಧಿಕಾರಿಗಳನ್ನು ಮೇವು ವಿತರಿಸಿ ಎಂದು ಬೇಡಿಕೊಂಡಿಲ್ಲ ಮುಂದೆಯೂ ಸಹ ಬೇಡುವುದಿಲ್ಲ ಉತ್ತಮ ಮಳೆ ಬೆಳೆ ಆಗುವವರೆಗೂ ಈ ಕಿಲಾರಿಗಳ ಹಸುಗಳು ಹಸಿವಿನಿಂದ ಸಾಯಲು ಬಿಡದೆ ಸಾಧ್ಯವಾದಷ್ಟು ಮಟ್ಟಿಗೆ ಮೇವನ್ನು ವಿತರಿಸುವ ಪ್ರಯತ್ನ ಮಾಡಲಾಗುವುದು.


ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಆಂದೋಲನದ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ಪಶುಸಂಪತ್ತನ್ನು ಉಳಿಸುವ ಕಾಯಕ ಮಾಡಲಾಗುವುದು ಕಿಲಾರಿಗಳು ಕೇವಲ ನನ್ನ ಮೇಲೆ ಅವಲಂಬಿತರಾಗದೆ ಎಚ್ಚೆತ್ತುಕೊಂಡು ಜಾಗೃತರಾಗಿ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಉಪನ್ಯಾಸಕ ಓಬಣ್ಣ ಮಾತನಾಡಿ ಚಳ್ಳಕೆರೆ ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮಳೆಬಾರದೇ ಬರ ಸಂಭವಿಸಿದ್ದು ಮನುಷ್ಯರಾದ ನಾವು ಎಲ್ಲಿ ಬೇಕಾದರೂ ಬದುಕಬಹುದು ಆದರೆ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುವವರು ಯಾರು ಎಂದು ಪ್ರಶ್ನಿಸಿದರು.

ಪಶುಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ ಬುಡಕಟ್ಟು ಸಮುದಾಯದ ಕಿಲಾರಿಗಳು ಹಸುಗಳನ್ನು ಸಾಕುತ್ತಿರುವುದು ಇಂದು ನಿನ್ನೆಯದಲ್ಲ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಇಂದಿನ ಆಧುನಿಕತೆಯ ಬದಲಾದ ಪರಿಸ್ಥಿತಿಯಲ್ಲಿ ಹಸುಗಳನ್ನು ಸಾಕುವವರನ್ನು ಕೀಳಾಗಿ ಕಾಣುವುದರಿಂದ ಇಂತಹ ಕಾಯಕದಲ್ಲಿ ತೊಡಗುತ್ತಿರುವವರ ಸಂಖ್ಯೆ ವಿರಳವಾಗಿದೆ. ನಗರೀಕರಣದ ದೃಷ್ಟಿಯಿಂದ ಪರಿಸರ ನಾಶವಾಗಿ ಮೇವು ಸಿಗದೆ ಇಂತಹ ದೇವರ ಹಸುಗಳು ಅಸು ನೀಗುತ್ತಿವೆ ಸರ್ಕಾರ ಬರಪೀಡಿತ ಪ್ರದೇಶಗಳಲ್ಲಿ ಇಂತಹ ದೇವರ ಹಸುಗಳು ಸೇರಿದಂತೆ ಕಸಾಯಿಖಾನೆ ಸೇರುವ ಹಸುಗಳನ್ನು ರಕ್ಷಿಸಿ ಮೇವು ವಿತರಿಸಿದಾಗ ಮಾತ್ರ ಪಶು ಸಂಕುಲ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯದರ್ಶಿ ಸಿಪಿ ಮಹೇಶ್ ಸಿದ್ದೇಶ್ ಕಿಲಾರಿಗಳಾದ ಸುರೇಶ್ ಪಾಲಯ್ಯ ಪಾಪಯ್ಯ ಕ್ಯಾಸಕ್ಕಿ ಪಾಪಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೃದ್ದಾಶ್ರಮದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವೈದ್ಯ ದಂಪತಿಗಳು.


ಹಿರಿಯೂರು ಸೆ.,3 ತಾಲೂಕು ಬೀಮನ ಬಂಡೆ ಶುಭೋದಯ ವೃದ್ಧಾಶ್ರಮದಲ್ಲಿ ಡಾ. ಸಂಪತ್ ಕುಮಾರ್ ಮತ್ತು ಡಾ. ವಾಸಂತಿ ಸಂಪತ್ ಕುಮಾರ್ ವೈದ್ಯ ದಂಪತಿಗಳು ತಮ್ಮ 27ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ವೃದ್ಧಾಶ್ರಮದ ಆಶ್ರಮ ವಾಸಿಗಳೊಂದಿಗೆ ಊಟ ಮಾಡಿ , ಕೇಕ್ ಕಟ್ ಮಾಡಿ ಹಣ್ಣು ತಿಂದು ಸಂಭ್ರಮ ಪಟ್ಟು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಮಾತನಾಡಿ ಕುಟುಂಬಗಳಲ್ಲಿ ಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಕೆಲಸವಾಗಬೇಕು.. ಇಲ್ಲವಾದಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗುತ್ತದೆ ಇಲ್ಲಿರುವ ವೃದ್ಧರಿಗೆ ಎಲ್ಲರೂ ಸಂಬಂಧಿಕರೇ… ಆದ್ದರಿಂದಲೆ ಎಲ್ಲಾ ಕಡೆಯಿಂದ ನಾಗರಿಕ ಬಂಧುಗಳು ವೃದ್ಧಾಶ್ರಮಗಳಲ್ಲಿ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳುತ್ತಿದ್ದಾರೆ.. ನೀವ್ಯಾರು ಒಂಟಿಗಳಲ್ಲ ನಿಮ್ಮೊಂದಿಗೆ ಸಮಾಜವನ್ನು ಬೆಸೆಯಲಾಗಿದೆ. ಆದ್ದರಿಂದ ನೀವು ಇರುವಷ್ಟು ದಿನ ಸಂತೋಷದಿಂದ ಸಂಭ್ರಮದಿಂದ ಆರೋಗ್ಯದಿಂದ ಇರಬೇಕು ರಾಗ ದ್ವೇಷ ಅಸೂಯಗಳನ್ನು ಮೂಲೆಗೆ ತಳ್ಳಿ ನಗುನಗುತ ನೂರಾರು ವರ್ಷ ಸುಖವಾಗಿ ಬಾಳಿರಿ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಡಾ. ಸಂಪತ್ ಕುಮಾರ್ ಅವರ ಕುಟುಂಬ ವರ್ಗದವರು ಹಾಗು ಆಶ್ರಮದ ಮಹಾಂತೇಶ್,, ನಂದಕುಮಾರ್, ಗಿರೀಶ್ ಬಾಬು ತಾವರೆಕೆರೆ ಹಾಗೂ ಇತರರು ಪಾಲ್ಗೊಂಡಿದ್ದರು.

ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ರಸ್ತೆಬದಿ ತರಕಾರಿ ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆಗೆ ಛತ್ರಿವಿತರಣೆ


ಹಿರಿಯೂರು :
ನಗರದಲ್ಲಿ ಬಿಸಿಲು-ಮಳೆ ಯಾವುದನ್ನೂ ಲೆಕ್ಕಿಸದೇ ದುಡಿಯುತ್ತಿರುವ ಶ್ರಮಿಕ ರಸ್ತೆಬದಿ ವ್ಯಾಪಾರಿಗಳಿಗೆ ತರಕಾರಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಬಿಸಿಲು ಮಳೆ ಗಾಳಿಯಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಗುತ್ತಿದೆ ಎಂಬುದಾಗಿ ಇನ್ಹರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಾಜೇಶ್ ಹೇಳಿದರು.
ನಗರದ ರಸ್ತೆಬದಿ ತರಕಾರಿ ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ಇನ್ಹರ್ ವ್ಹೀಲ್ ಕ್ಲಬ್ ವತಿಯಿಂದ ಛತ್ರಿಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಇನ್ಹರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ರಾಜೇಶ್, ಶ್ರೀಮತಿ ಸೌಮ್ಯ ಪ್ರಶಾಂತ್, ಸ್ವರ್ಣಾರೆಡ್ಡಿ, ಹರಿತ ಸೇರಿದಂತೆ ನಗರದ ರಸ್ತೆಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.