ಸರಕಾರ ನೀಡಿದ ಭೂಮಿಯಲ್ಲಿ ಉಳುಮೆ ಮಾಡಲು ಬಿಡದೆ ಈಗ ಮಣ್ಣು ಮಾರಾಟ ಮಾಡಲು ರೈತ ಸಂಘದ ವಿರೋಧ ಪಡಿಸುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.

by | 08/11/22 | Uncategorized, ಕರ್ನಾಟಕ, ಜನಧ್ವನಿ, ಸುದ್ದಿ

ಚಳ್ಳಕೆರೆ ನವಂಬರ್ 8
ರೈತರಿಗೆ ಸರಕಾರ ನೀಡಿದ ಭೂಮಿಯನ್ನು ಉಳಿಮೆ ಮಾಡಲು ಕೆಲ ಪ್ರಭಾವಿಗಳು ಅಡ್ಡಿ ಪಡಿಸಿದಾಗ ರೈತ ಸಂಘ ಎಲ್ಲಿ ಹೋಗಿತ್ತು ಈಗ ಏಕಾ ಏಕಿ ಬಂದು ರೈತರಿಗೂ ತಿಳಿಸಿದೆ ಪ್ರತಿಭಟನೆ ಮಾಡುತ್ತಿರುವ ರೈತ ಸಂಘದ ವಿರುದ್ದ ರೈತರು ಆರೋಪಿಸಿದ್ದಾರೆ.
ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬಂಗಾರದೇವರಹಟ್ಟಿ ಸಮೀಪದ ಸರಕಾರಿ ರಿ.ಸಂ 75 ಹಾಗೂ 76 ರಲ್ಲಿ 11 ಜನರಿಗೆ ಬಗರ್ ಹುಕುಂಸಮಿತಿಯಿAದ ಹಕ್ಕು ಪತ್ರ ನೀಡಿ ಸುಮಾರು 40 ವರ್ಷಗಳು ಕಳೆದರೂ ಕಂದಾಯ ಇಲಾಖೆವತಿಯಿಂದ ಫೋಡಿ ದುರಸ್ಥಿ ಮಾಡದೆ ಇರುವುದು ಹಾಗೂ ಭೂಮಾಪನ ಇಲಾಖೆಯವರು ಅಳತೆ ಮಾಡಲು ಬಂದಾಗ ಕೆಲ ಪ್ರಭಾವಿ ವ್ಯಕ್ತಿಗಳು ಅಡ್ಡಿ ಪಡಿಸಿ ರೈತರು ಉಳುಮೆ ಮಾಡಲು ಬಂದಾಗ ಕಲ್ಲುಗಳಿಂದ ಹೊಡೆಯಲು ಬಂದಿದ್ದರಿAದ ನಾವುಗಳು ಉಳುಮೆ ಮಾಡಿರುವುದಿಲ್ಲ , ಕೆಲ ರೈತರು ಇಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ ಆದ್ದರಿಂದ ರಸ್ತೆ ಅಭಿವೃದ್ಧಿಗೆ ಮಣ್ಣು ಮಾರಾಟ ಮಾಡಿದ್ದೇವೆ ಎಂದು ರೈತರು ಮಾಹಿತಿ ನೀಡಿದರು.
ಜಮೀನಿನ ಮೇಲೆ ಈಗಾಗಲೆ ನಾವು ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಾವೆ. ಉಳುಮೆಮಾಡಲು ಬಿಡದ ಕಾರಣ ರಸ್ತೆ ಅಭಿವೃದ್ಧಿಗೆ ರೈತರಿಗೆ ಹಣ ನೀಡಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ. ರೈತರ ಸಂಘದ ಮುಖಂಡರು ರೈತರಿಗೆ ಮಾಹಿತಿ ನೀಡಿದೆ ಏಕಾ ಏಕಿ ನಮ್ಮ ಜಮೀನುಗಳಿಗೆ ಬಂದು ಪ್ರತಿಭಟನೆ ಮಾಡುವುದು ಎಷ್ಟು ಸರಿ. ಜಮೀನು ಉಳುಮೆ ಮಾಡಲು ಅಡ್ಡಿ ಪಡಿಸಿದ ದೊಡ್ಡ ಬೈಯಣ್ಣ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ರೈತರಾದ ದ್ಯಾಮಣ್ಣ,ರುದ್ರಪ್ಪ,ದುರುಗಪ್ಪ, ದೇಮಣ್ಣ,ಇತರ ರೈತರು ರೈತ ಸಂಘದ ವಿರುದ್ದ ಅಕ್ರೊಶ ವ್ಯಕ್ತಪಡಿಸಿದ್ದಾರೆ.
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *