ಶಿವಮೊಗ್ಗ ಡಿ.14.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಂಚದ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತಳ್ಳಿಯ ಈಶ್ವರ ನಾಯ್ಕ ಎಂಬುವವರ ಸುಮಾರು 150 ಹೊರೆ ಭತ್ತದ ಪೈರು ಬುಧವಾರ ವಿದ್ಯುತ್ ತಂತಿ ತಗುಲಿ ನಾಶವಾಗಿದೆ.
ತಮ್ಮ ಗದ್ದೆಯಿಂದ ಮನೆಗೆ ಟ್ರಾಕ್ಟರ್ ನಲ್ಲಿ ಭತ್ತದ ಪೈರನ್ನು ಹೊರೆ ಕಟ್ಟಿ ತರುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಉಂಟಾಗಿದೆ ಇದನ್ನು ಅರಿತ ಚಾಲಕ ಸ್ವಲ್ಪ ದೂರದಲ್ಲಿ ಭತ್ತದ ಹೊರೆಗಳನ್ನು ಉರುಳಿಸಿದ್ದಾರೆ. ಇದರಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ ವರ್ಷಪೂರ್ತಿ ಬೆಳೆದ ಬೆಳೆ ಕೈ ಸೇರದಿರುವುದು ಬೇಸರ ಉಂಟು ಮಾಡಿದೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಘವೇಂದ್ರ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ,
ಕಟ್ಟೆ ಮಹೇಶ್ ಭೇಟಿ ನೀಡಿದ್ದರು.
0 Comments