ಹಿರಿಯೂರು :
ಶಿಕ್ಷಣ ಕ್ಷೇತ್ರದಲ್ಲಿ ಕಲೆ ಕೇವಲ ಒಂದು ಪಠ್ಯೇತರ ಚಟುವಟಿಕೆಯಲ್ಲ ಬದಲಾಗಿ ಅದು ಸೃಜನಶೀಲತೆಯನ್ನು ಮತ್ತು ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುವ ಪ್ರಬಲ ಸಾಧನವಾಗಿದೆ ಎಂಬುದಾಗಿ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಧನಂಜಯ ಹೇಳಿದರು.
ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಕಲೆಯ ಮಹತ್ವ ಎಂಬ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಕಲೆಯ ಪಾತ್ರವು ಮಹತ್ವದ್ದಾಗಿದ್ದು, ಕಲೆ ಸೃಜನಶೀಲ ಅಭಿವೃದ್ಧಿಯ ವಿವಿಧ ರೂಪಗಳನ್ನು ಒಳಗೊಂಡಿದೆ ಎಂಬುದಾಗಿ ಹೇಳಿದರಲ್ಲದೆ, ಇದು ಕಾಲ್ಪನಿಕವಾಗಿ ಯೋಚಿಸಲು ಹಾಗೂ ಮೋಟಾರು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುತ್ತದೆ. ಕಲಾ ಶಿಕ್ಷಣವು ಸ್ವಯಂ ಆಭಿವೃದ್ಧಿ, ಸಾಂಸ್ಕೃತಿಕ ಚಳುವಳಿ ಮತ್ತು ಸಮಸ್ಯೆ ಪರಿಹಾರಗಳನ್ನು ಉತ್ತೇಜಿಸುತ್ತದೆ.
ಇದಲ್ಲದೆ ಇದು ಕಲಾ ಜಗತ್ತಿಗೆ ಕೊಡುಗೆ ನೀಡಬಲ್ಲ ವಿದ್ಯಾರ್ಥಿಗಳನ್ನು ಪೋಷಿಸುತ್ತದೆ. ಭಾವಿ ಶಿಕ್ಷಕರಾಗುವಂತಹ ಪ್ರಶಿಕ್ಷಣಾರ್ಥಿಗಳಿಗೆ ಇಂತಹ ಕಾರ್ಯಗಾರಗಳು ಹೆಚ್ಚು ಉಪಯುಕ್ತವಾಗಿವೆ. ಯಾವುದೇ ವಿಷಯವನ್ನು ಬೋಧಿಸುವಂತಹ ಸಂಧರ್ಭದಲ್ಲಿ ಕಲೆಯನ್ನು ಬಳಸಿಕೊಂಡು ಬೋಧಿಸಿದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬುದಾಗಿ ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಎನ್. ಕುಬೇರಪ್ಪರವರು ಅನುಪಯುಕ್ತವಾಗಿರುವಂತಹ ವಸ್ತುಗಳಿಂದ ಬೋಧನೆಗೆ ಬೇಕಾದಂತಹ ಬೋಧನೋಪಕರಣಗಳನ್ನು ಹಾಗೂ ಮನೆಯ ಅಲಂಕಾರಕ್ಕಾಗಿ ಬೇಕಾಗುವಂತಹ ಅಲಂಕಾರ ಸಾಮಾಗ್ರಿಗಳನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ಅತ್ಯತ್ತಮವಾಗಿ ತರಬೇತಿ ನೀಡಿರುವುದು ಅತ್ಯುತ್ತಮವಾಗಿದೆ ಎಂಬುದಾಗಿ ಅವರನ್ನು ಪ್ರಶಂಶಿಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಎನ್. ಕುಬೇರಪ್ಪ, ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಎಂ.ಬಸವರಾಜ್, ವ್ಯವಸ್ಥಾಪಕರಾದ ನಾಗೇಶ್, ರವಿಕುಮಾರ್, ಅರುಣ ಕುಮಾರಿ, ಮಾರುತೇಶ್, ನಿಂಗರಾಜ್, ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments