ಜನಧ್ವನಿ ವಾರ್ತೆ ಅ.28. ಸರಿಯಾದ ಸಮಯಕ್ಕೆ ತುರ್ತು ವಾಹನ ಸೌಲಭ್ಯವಂಚಿತರಾಗಿ ಆರೋಗ್ಯ ಸೇವೆ ದೊರೆಯದೆ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರಿದ ಘಟನೆಗಳು ನಮ್ಮಕಣ್ಣು ಮುಂದೆ ಇವೆ ಇಂತಹ ಘಟನೆಗಳನ್ನು ತಡೆಯಲು ಶಾಸಕರೊಬ್ಬರು ತುರ್ತುವಾಹನ ಸೇವೆ ಮಾಡಲು ಮುಂದಾಗಿದ್ದು ಮಾನವೀಯತೆ ಮರೆದಿದ್ದಾರೆ.
ಹೌದು ಇದು ಕೋಟೆ ನಾಡು,ಬರಗಾಲದ ನಾಡು, ಬಯಲು ಸೀಮೆ ಎಂದು ಹಣೆ ಪಟ್ಟಿಕಟ್ಟಿಕೊಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರದ ಹೊರವಯಲಯ ಕಾವಾಡಿಗರಹಟ್ಟಿಯಲ್ಲಿ ಕಲುಸಿತ ನೀರು ಸೇವಿಸಿ ಸಾವು ನೋವಿನಲ್ಲಿದ್ದಾಗ ಜರೊಂದಿಗೆ ಇದ್ದು ಅಲ್ಲಿನ ಜನರ ಚಿಕಿತ್ಸೆಗೆ ನೆರವಾಗಿ ಹೆಚ್ಚಿನ ಸಾವು ನೋವುಗಳನ್ನು ತಡೆಯಲು ಮುಂದಾದ ಬೆನ್ನಲ್ಲೇ ಈಗ ಮತ್ತೊಂದು ಕ್ಷೇತ್ರದ ಜನರ ಆರೋಗ್ಯ ಸೇವೆಗೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಲ್ಲು ಇದೀಗ ಆಂಬ್ಯುಲೆನ್ಸ್ ಸೇವೆ ಆರಂಭಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರ ಅನುಪಮ ಸೇವೆ ಸದಾ ಮುಂದುವರಿಯಲಿ ಎಂದು ಕ್ಷೇತ್ರದ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.


0 Comments