ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗ್ರೂಪ್ ವತಿಯಿಂದ ಕ್ಷೇತ್ರದ ಜನತೆಗೆ ಅಂಬ್ಯುಲೆನ್ಸ್ ಸೇವೆ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಮನವಿ.

by | 28/10/23 | ಸಾಮಾಜಿಕ


ಜನಧ್ವನಿ ವಾರ್ತೆ ಅ.28. ಸರಿಯಾದ ಸಮಯಕ್ಕೆ ತುರ್ತು ವಾಹನ ಸೌಲಭ್ಯವಂಚಿತರಾಗಿ ಆರೋಗ್ಯ ಸೇವೆ ದೊರೆಯದೆ ಚಿಕಿತ್ಸೆ ದೊರೆಯದೆ ಸಾವಿನ ಮನೆ ಸೇರಿದ ಘಟನೆಗಳು ನಮ್ಮಕಣ್ಣು ಮುಂದೆ ಇವೆ ಇಂತಹ ಘಟನೆಗಳನ್ನು ತಡೆಯಲು ಶಾಸಕರೊಬ್ಬರು ತುರ್ತುವಾಹನ ಸೇವೆ ಮಾಡಲು ಮುಂದಾಗಿದ್ದು ಮಾನವೀಯತೆ ಮರೆದಿದ್ದಾರೆ.
ಹೌದು ಇದು ಕೋಟೆ ನಾಡು,ಬರಗಾಲದ ನಾಡು, ಬಯಲು ಸೀಮೆ ಎಂದು ಹಣೆ ಪಟ್ಟಿಕಟ್ಟಿಕೊಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರದ ಹೊರವಯಲಯ ಕಾವಾಡಿಗರಹಟ್ಟಿಯಲ್ಲಿ ಕಲುಸಿತ ನೀರು ಸೇವಿಸಿ ಸಾವು ನೋವಿನಲ್ಲಿದ್ದಾಗ ಜರೊಂದಿಗೆ ಇದ್ದು ಅಲ್ಲಿನ ಜನರ ಚಿಕಿತ್ಸೆಗೆ ನೆರವಾಗಿ ಹೆಚ್ಚಿನ ಸಾವು ನೋವುಗಳನ್ನು ತಡೆಯಲು ಮುಂದಾದ ಬೆನ್ನಲ್ಲೇ ಈಗ ಮತ್ತೊಂದು ಕ್ಷೇತ್ರದ ಜನರ ಆರೋಗ್ಯ ಸೇವೆಗೆ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಲ್ಲು ಇದೀಗ ಆಂಬ್ಯುಲೆನ್ಸ್ ಸೇವೆ ಆರಂಭಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರ ಅನುಪಮ ಸೇವೆ ಸದಾ ಮುಂದುವರಿಯಲಿ ಎಂದು ಕ್ಷೇತ್ರದ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಅಂಬ್ಯುಲೆಸ್ಸ್ ಸೇವೆ ಹೇಗಿರುತ್ತದೆ. ದಿನದ 24 ಗಂಟೆ ನಗರ ವ್ಯಾಪ್ತಿಯಲ್ಲಿ ಉಚಿತವಾಗಿದ್ದು ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಾಹನ ಚಾಲಕನಿಗೆ ಬ್ಯಾಟ ಹಾಗೂ ಕಿ.ಮೀ. ಲೆಕ್ಕದಂತೆ ಡೀಜೆಲ್ ಹಾಕಿಸಿದರೆ ಸಾಕು ಗರ್ಭಿಣಿ, ಬಾಣಂತಿ, ವಿಷಜಂತು, ತುರ್ತು ಚಿಕಿತ್ಸೆ. ಆಸ್ಪತ್ರೆಗೆ ದಾಖಲು ಹಾಗೂ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋಗಲು ,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟವರಿಗೂ ಸೇವೆ ನೀಡಲಿದೆ ಇದು ಕ್ಷೇತ್ರದ ಶಾಸಕ ಕೆ. ಸಿ. ವೀರೇಂದ್ರ (ಪಪ್ಪಿ) ಯವರ ಮಾರ್ಗದರ್ಶನದಲ್ಲಿ KCV GROUP’S ಚಿತ್ರದುರ್ಗ ಇವರ ವತಿಯಿಂದ ಸಾರ್ವಜನಿಕರ ದಿನದ 24 ಗಂಟೆ ಸೇವೆ ನೀಡಲಿದ್ದೇವೆ ಎಂದು ಕೆ.ಸಿ.ವಿ ಗ್ರೂಫ್ ನ ಸೇವಕರು ಮಾಹಿತಿ ನೀಡಿದ್ದಾರೆ. ಈ ದೂರವಾಣಿ ಸಂಖ್ಯೆಗೆ 8971721565 – 9916267142 7483789387 – 7406661030 ಕರೆ ಮಾಡಿ ವಿಳಾಸ ತಿಳಿಸಿದರೆ ತಕ್ಷಣ ಸೇವೆ ನೀಡಲಿದ್ದಾರೆ ಈ ಸೇವೆಯನ್ನು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಜನರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *