ಚಳ್ಳಕೆರೆ. ಜ.21 ಶರಣರ ವಚನಗಳು ನಿತ್ಯಜೀವನದ ದಿಕ್ಸೂಚಿಗಳು. ಸಮಾಜ ದಲ್ಲಿನ ಕೀಳರಿಮೆ ತೊಡೆದುಹಾಕಲು ತಮ್ಮ ಕಠೋರ ವಚನಗಳ ಮೂಲಕ ನಿಜಶರಣ ಅಂಬಿಗರ ಚೌಡಯ್ಯನವರು ಶ್ರಮಿಸಿದ ಮಹಾತ್ಮರು’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿ ಹಾಗೂ ಗಂಗಾಮತ ಸಮಾಜದ ವತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದಾರ್ಶನಿಕರು ವಚನಗಳು ಮೂಲಕ ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸಿದ್ದಾರೆ ಅವರ ವಚನಗಳಲ್ಲಿರುವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಸಮಾಜದ ಮುಖಂಡಂರಾದ ಶಿವನಂದ, ಹೊಸಮನೆ ಮೇಸ್ಟ್ರ ಮಾತನಾಡಿದರು. ನಗರಸಭೆ ಸದಸ್ಯ ರಮೇಶ್್ ಗೌಡ, ಪೌರಾಯುಕ್ತ ಚಂದ್ರಪ್ಪ , ಪಶು ವೈದ್ಯಾಧಿಕಾರಿ ಶ್ರೀನಿವಾಸ್ ಬಾಬು ಹಾಗೂ ಸಮಾಜದಮುಖಂಡರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments