ಶರಣರು ಹೇಳುವಂತೆ “ಕರ್ತವ್ಯ ಕ್ಕಿಂತ ಮತ್ತೊಂದು ದೈವ ಇಲ್ಲ “ಕರ್ತವ್ಯದಲ್ಲಿಯೆ ದೇವರನ್ನ ಕಾಣುವ ಸೌಭಾಗ್ಯ ನಿಮಗೆ ದೊರೆತಿದೆ.ಈ ಸೌಭಾಗ್ಯವನ್ನ ಸದುಪಯೋಗಪಡಿಸಿಕೊಳ್ಳಿ ಎಂದು ವ್ಯವಸ್ಥಾಪಕ ಪ್ರಭು.

by | 03/01/24 | ಸುದ್ದಿ


ಚಳ್ಳಕೆರೆ ಜನಧ್ವನಿ ವಾರ್ತೆ ಜ.3.ಸಾರಿಗೆ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಹಾಗೂ ಕಚೇರಿಯಲ್ಲಿ ಜನರೊಂದಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿದಾಗ ಶಾಶ್ವತವಾಗಿ ಉಳಿಯುವಂತಾದಾಗುತ್ತದೆ ಎಂದು ಸಾರಿಗೆ ವ್ಯವಸ್ಥಾಪಕ ಪ್ರಭು ಕಿವಿಮಾತು ಹೇಳಿದರು. ಚಳ್ಳಕೆರೆ ಸಾರಿಗೆ ಘಟಕದಿಂದ ಚಿತ್ರದುರ್ಗ ಘಟಕ್ಕೆ ವರ್ಗಾವಣೆಗೊಂಡ ನಿರ್ವಾಹಕ ಸಿಬ್ಬಂದಿಗೆ ಆಯೋಜಿಸಿದ್ದ ಬೀಳ್ಕೊಡಿಗೆ ಸನ್ಮನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಾಲಕ ಮತ್ತು ನಿರ್ವಾಹಕರಾದ ಸಾರಿಗೆ ಸಾಹಿತಿ ಕೆ. ತಿಪ್ಪೇಸ್ವಾಮಿ ಮಣೆಗಾರ ರನ್ನ ಸನ್ಮಾನಿಸಿ, ಶರಣರು ಹೇಳುವಂತೆ “ಕರ್ತವ್ಯ ಕ್ಕಿಂತ ಮತ್ತೊಂದು ದೈವ ಇಲ್ಲ “ಕರ್ತವ್ಯದಲ್ಲಿಯೆ ದೇವರನ್ನ ಕಾಣುವ ಸೌಭಾಗ್ಯ ನಿಮಗೆ ದೊರೆತಿದೆ.ಈ ಸೌಭಾಗ್ಯವನ್ನ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಹಾಗೆ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯಿಂದ ನಮ್ಮ ಸಾರಿಗೆ ಸಂಸ್ಥೆಗೆ ಬಲ ಬಂದಿದೆ. ಈ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ಅಡಚಣೆ ಆಗದಂತೆ ಕರ್ತವ್ಯ ನಿರ್ವಹಿಸಿ ಸಾರಿಗೆಸಂಸ್ಥೆಗೆ ಒಳ್ಳೆಯ ಕೀರ್ತಿತನ್ನಿ ಎಂದು ಸಾರಿಗೆ ಚಾಲಕ ಹಾಗೂ ನಿರ್ವಾಹಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಅಧಿಕಾರಿಗಳು ವರ್ಗಾವಣೆಗೊಂಡ ಚಾಲಕ ನಿರ್ವಾಹಕ ತಿಪ್ಪೇಸ್ವಾಮಿಗೆ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಚೌದರಿ, ವಕೀಲ ಹಾಗೂ ನಿರ್ವಾಹಕರಾದ ರಾಜು. ಮಂಜುನಾಥ ಸಿದ್ದಾಪುರ, ದುಗ್ಗಾವರ ತಿಪ್ಪೇಸ್ವಾಮಿ, ಸಂಚಾರ ನಿಯಂತ್ರಕರಾದ ಮುತ್ತುರಾಜ, ಪ್ರದೀಪ, ಭದ್ರತಾ ಸಿಬ್ಬಂದಿ ವೈಜಂತ್ ಹಾಗೂ ಕಾರ್ಮಿಕ ಮಿತ್ರರು ಪಾಲ್ಗೊಂಡಿದ್ದರು. ನಿರ್ವಾಹಕ ಹಾಗೂ ಸಾಹಿತಿ ತಿಪ್ಪೇಸ್ವಾಮಿ ಮಣೆಗಾರ್ ಕಚನ ವಾಚಿಸಿದರು.
“ಆಶ್ರಯ ದಾತೆ.”

ರೆಕ್ಕೆ ಬಲಿತ ಹಕ್ಕಿ ಗೂಡು ತೋರೆದಂತೆ
ಮಕ್ಕಳು ಮಮತೆಯ ಮಡಿಲು ಮರೆತಂತೆ l
ನಾ ಸಿರಿಯನೆಚ್ಚಿ ನಿನ್ನ ತೊರೆವೆ
ಮನ್ನಿಸಿ ಹರಸಿ ಕಳಿಸು ಆಶ್ರಯದಾತೆ l
*
ಕವಿ ಸಾಹಿತಿಯ ಎನ್ನ ಮನವನ್ನ
ಹೆತ್ತಾಡಿ ಮುದ್ದಿಸಿ ಪೋಷಿಸಿ
ಮಣೆಗಾರನೆಂದು ಕರೆದು ಕೈಯಿಡಿದು ನಡೆಸಿದ
ತನ್ನವರನ್ನಗಲಿ ಹೋಗುತ್ತಿರುವೆ
ಎನ್ನೋಡೆಯ ಸಿದ್ದಪ್ಪನ ಕರೆಗೆ ಶಿರಬಾಗಿ l
*
ದ್ವೇಷಕ್ಕೊ ದುರಾಸೆಗೊ ಅನಾಮತ್ತಾಗಿ
ತನ್ನತನವನ್ನ ಮರೆಮಾಚಿ
ನಿನ್ನ ದೂಷಿಸಿ ಹೋದರು ನನ್ನವರು l
ಮೂರು ಮೂಲೆಯ ದರಿದ್ರದವಳೆಂದು
ಸಾಲದೆoಬಂತೆ ಸರ್ವರಿಗೂ ಸಾರಿ
ಹೇಳಿದರು ಅಲ್ಲಿಗೆ ಹೋಗದಿರೆಂದು l
*
ನಿನ್ನ ಹಂಗಿಸಿ ದೂಷಿಸಿ ನಿಂದಿಸಿ
ನಾ ಹೋಗಲಾರೆ ತಾಯಿ l
ಎನ್ನ ಸಂತೈಹಿಸಿ ಸಾಕಿ ಸಲುಹಿದ
ಆ ದಿನಗಳ ಮರೆಯಲಾರೆ ಮಾತೆ l
ಹೆತ್ತು ಹೊರದೂಡಿದ ನಿನ್ನವ್ವಗೆ ಹೇಳು
ಇವ ನನ್ನವನೆಂದು ಆಶ್ರಯದಾತೆ l

ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page