ಚಳ್ಳಕೆರೆ ಜನಧ್ವನಿ ವಾರ್ತೆ ಜ.3.ಸಾರಿಗೆ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಪ್ರಯಾಣಿಕರೊಂದಿಗೆ ಹಾಗೂ ಕಚೇರಿಯಲ್ಲಿ ಜನರೊಂದಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿದಾಗ ಶಾಶ್ವತವಾಗಿ ಉಳಿಯುವಂತಾದಾಗುತ್ತದೆ ಎಂದು ಸಾರಿಗೆ ವ್ಯವಸ್ಥಾಪಕ ಪ್ರಭು ಕಿವಿಮಾತು ಹೇಳಿದರು. ಚಳ್ಳಕೆರೆ ಸಾರಿಗೆ ಘಟಕದಿಂದ ಚಿತ್ರದುರ್ಗ ಘಟಕ್ಕೆ ವರ್ಗಾವಣೆಗೊಂಡ ನಿರ್ವಾಹಕ ಸಿಬ್ಬಂದಿಗೆ ಆಯೋಜಿಸಿದ್ದ ಬೀಳ್ಕೊಡಿಗೆ ಸನ್ಮನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಾಲಕ ಮತ್ತು ನಿರ್ವಾಹಕರಾದ ಸಾರಿಗೆ ಸಾಹಿತಿ ಕೆ. ತಿಪ್ಪೇಸ್ವಾಮಿ ಮಣೆಗಾರ ರನ್ನ ಸನ್ಮಾನಿಸಿ, ಶರಣರು ಹೇಳುವಂತೆ “ಕರ್ತವ್ಯ ಕ್ಕಿಂತ ಮತ್ತೊಂದು ದೈವ ಇಲ್ಲ “ಕರ್ತವ್ಯದಲ್ಲಿಯೆ ದೇವರನ್ನ ಕಾಣುವ ಸೌಭಾಗ್ಯ ನಿಮಗೆ ದೊರೆತಿದೆ.ಈ ಸೌಭಾಗ್ಯವನ್ನ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಹಾಗೆ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯಿಂದ ನಮ್ಮ ಸಾರಿಗೆ ಸಂಸ್ಥೆಗೆ ಬಲ ಬಂದಿದೆ. ಈ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ಅಡಚಣೆ ಆಗದಂತೆ ಕರ್ತವ್ಯ ನಿರ್ವಹಿಸಿ ಸಾರಿಗೆಸಂಸ್ಥೆಗೆ ಒಳ್ಳೆಯ ಕೀರ್ತಿತನ್ನಿ ಎಂದು ಸಾರಿಗೆ ಚಾಲಕ ಹಾಗೂ ನಿರ್ವಾಹಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಅಧಿಕಾರಿಗಳು ವರ್ಗಾವಣೆಗೊಂಡ ಚಾಲಕ ನಿರ್ವಾಹಕ ತಿಪ್ಪೇಸ್ವಾಮಿಗೆ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಚೌದರಿ, ವಕೀಲ ಹಾಗೂ ನಿರ್ವಾಹಕರಾದ ರಾಜು. ಮಂಜುನಾಥ ಸಿದ್ದಾಪುರ, ದುಗ್ಗಾವರ ತಿಪ್ಪೇಸ್ವಾಮಿ, ಸಂಚಾರ ನಿಯಂತ್ರಕರಾದ ಮುತ್ತುರಾಜ, ಪ್ರದೀಪ, ಭದ್ರತಾ ಸಿಬ್ಬಂದಿ ವೈಜಂತ್ ಹಾಗೂ ಕಾರ್ಮಿಕ ಮಿತ್ರರು ಪಾಲ್ಗೊಂಡಿದ್ದರು. ನಿರ್ವಾಹಕ ಹಾಗೂ ಸಾಹಿತಿ ತಿಪ್ಪೇಸ್ವಾಮಿ ಮಣೆಗಾರ್ ಕಚನ ವಾಚಿಸಿದರು.
“ಆಶ್ರಯ ದಾತೆ.”
ರೆಕ್ಕೆ ಬಲಿತ ಹಕ್ಕಿ ಗೂಡು ತೋರೆದಂತೆ
ಮಕ್ಕಳು ಮಮತೆಯ ಮಡಿಲು ಮರೆತಂತೆ l
ನಾ ಸಿರಿಯನೆಚ್ಚಿ ನಿನ್ನ ತೊರೆವೆ
ಮನ್ನಿಸಿ ಹರಸಿ ಕಳಿಸು ಆಶ್ರಯದಾತೆ l
*
ಕವಿ ಸಾಹಿತಿಯ ಎನ್ನ ಮನವನ್ನ
ಹೆತ್ತಾಡಿ ಮುದ್ದಿಸಿ ಪೋಷಿಸಿ
ಮಣೆಗಾರನೆಂದು ಕರೆದು ಕೈಯಿಡಿದು ನಡೆಸಿದ
ತನ್ನವರನ್ನಗಲಿ ಹೋಗುತ್ತಿರುವೆ
ಎನ್ನೋಡೆಯ ಸಿದ್ದಪ್ಪನ ಕರೆಗೆ ಶಿರಬಾಗಿ l
*
ದ್ವೇಷಕ್ಕೊ ದುರಾಸೆಗೊ ಅನಾಮತ್ತಾಗಿ
ತನ್ನತನವನ್ನ ಮರೆಮಾಚಿ
ನಿನ್ನ ದೂಷಿಸಿ ಹೋದರು ನನ್ನವರು l
ಮೂರು ಮೂಲೆಯ ದರಿದ್ರದವಳೆಂದು
ಸಾಲದೆoಬಂತೆ ಸರ್ವರಿಗೂ ಸಾರಿ
ಹೇಳಿದರು ಅಲ್ಲಿಗೆ ಹೋಗದಿರೆಂದು l
*
ನಿನ್ನ ಹಂಗಿಸಿ ದೂಷಿಸಿ ನಿಂದಿಸಿ
ನಾ ಹೋಗಲಾರೆ ತಾಯಿ l
ಎನ್ನ ಸಂತೈಹಿಸಿ ಸಾಕಿ ಸಲುಹಿದ
ಆ ದಿನಗಳ ಮರೆಯಲಾರೆ ಮಾತೆ l
ಹೆತ್ತು ಹೊರದೂಡಿದ ನಿನ್ನವ್ವಗೆ ಹೇಳು
ಇವ ನನ್ನವನೆಂದು ಆಶ್ರಯದಾತೆ l
ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ.
0 Comments