ವೈರಲ್

ದಾರಿ ಮಧ್ಯೆ ಕೆಟ್ಟು ನಿಂತ ಸಾರಿಗೆ ಬಸ್-ಪ್ರಯಾಣಿಕರು ಇಳಿದು ತಳ್ಳು ನೂಕು ಹೈಸಾ..

ಚಳ್ಳಕೆರೆ ಏ.20 ತಾಂತ್ರಿಕ ದೋಷದಿಂದಾಗಿ ಮಾರ್ಗ ಮಧ್ಯದಲ್ಲಿಯೇ ಕೆಟ್ಟುನಿಂತ ಪರಿಣಾಮ ಪ್ರಯಾಣಿಕರು ಪರದಾಡಿ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಸ್ಸು ತಳ್ಳಿದರೂ ಚಾಲನೆಯಾಗದ ಪ್ರಸಂಗ ಜರುಗಿತು. ಚಳ್ಳಕೆರೆ ಯಿಂದ ಕ್ಯಾತಗೊಂಡನಹಳ್ಳಿಗೆ ಹೋಗುವ ದಾರಿ ಮಧ್ಯೆ ಕೆಟ್ಟು ನಿಂತ ಪರಿಣಾಮವಾಗಿ ಪ್ರಯಾಣಿಕರು ಇಳಿದು ತಳ್ಳು ನೂಕು ಐಸ ಎಂದು ನೂಕಿದರೂ ಸಹ ಚಾಲನೆಯಾಗದೆ ಸುಮಾರು ಒಂದು ಗಂಟೆ ಕಾಲ ಪ್ರಯಾಣಿಕರು ಪರದಾಡುವಂತಾಯಿತು . ಇದು ಇವತ್ತಿನ ಸ್ಥಿಯಲ್ಲ ಎರಡು ಮೂರು ದಿನಕ್ಕೊಮ್ಮೆ ದಾರಿ ಮಧ್ಯೆ ಕೆಟ್ಟು ನಿಲ್ಲುವುದು ಮಾಮೂಲಿಯಾಗಿದೆ
ಚಳ್ಳಕೆರೆ ಸಾರಿಗೆ ಘಟಕದಲ್ಲಿ ಅತಿ ಹೆಚ್ಚು ಕಿ.ಮೀ ಓಡಿಸಿದ ಡೊಕೋಟಾ ಬಸ್ಸುಗಳ ಸಂಖ್ಯೆ ಇದ್ದು ಅವುಗಳು ತಾಂತ್ರಿಕ ದೋಷದಿಂದ ಕೆಟ್ಟು ನಿಲ್ಲುವುದು ಮಾಮೂಲಿಯಾಗಿದೆ ಮತ್ತೆ ಮ್ಯಾಕ್ಯಾನಿಕ್ ಬಂದು ದುರಸ್ಥಿ ಮಾಡುವ ತನಕ ಪ್ರಯಾಣಿಕರು ದಾರಿ ಮಧ್ಯೆ ಇರುವುದು ಅನಿವಾರ್ಯವಾಗಿದೆ.


ಹೆಸರೇಳಲು ಇಚ್ಚಿಸದ ಪ್ರಯಾಣಿಕರೊಬ್ಬರು ಮಾತನಾಡಿ ಸಾರಿಗೆ ಬಸ್‌ಗಳನ್ನು ಸಮರ್ಪಕ ನಿರ್ವಹಣೆ ಮಾಡದಿರುವುದು ಬಸ್‌ಗಳು ಮಾರ್ಗ ಮಧ್ಯೆ ಕೆಟ್ಟು ನಿಲ್ಲಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ದಾರಿ ಮಧ್ಯೆ ಕೆಟ್ಟು ನಿಲ್ಲದಂತೆ ಅವುಗಳ ನಿರ್ವಹಣೆ ಮಾಡುವರೇ ಕಾದು ನೋಡ ಬೇಕಿದೆ.

ನಾನು ಚಿಲ್ಲರೆ ಅಂಗಡಿ ಪ್ರಾರಂಭಿದ್ದು ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆಗೆ ಮನವಿ ನೀಡಿದ ಚಂದ್ರಶೇಖರ್.

. ಬಹಿರಿಯೂರು ಫೆ22 ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಇಲ್ಲೊಬ್ಬರು ನಾನು ಕಿರಾಣಿ ಅಂಗಡಿ ಪ್ರಾರಂಭಿಸಿದ್ದು ಮದ್ಯ ಮಾರಾಟಕ್ಕೆ ಪರವಾನಿಗೆ ನೀಡುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹೌದು ಇದು ಹಿರಿಯೂರು ತಾಕೂಕಿನ ಐಮಂಗಲ
ಹೋಬಳಿ ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಸನಾಯಕರಹಟ್ಟಿ ಗ್ರಾಮದರಾಜ್ಯ ಸಂಘಟನಾ ಕಾರ್ಯದರ್ಶಿ
ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯಹೆಚ್.ಸಿ.ಚಂದ್ರಶೇಖರ್ ಚಿಲ್ಲರೆ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಇವರು ಹಿರಿಯೂರು
ಅಬಕಾರಿ ನಿರೀಕ್ಷರು ಮನವಿ ಮಾಡಿಕೊಂಡಿದ್ದಾರೆ.
ಮನವಿ ಪತ್ರದಲ್ಲೇನಿದೆ. ಹೊಸನಾಯಕರಹಟ್ಟಿ ವಾಸಿಯಾಗಿದ್ದು ನಾನು ನಮ್ಮ ಮನೆಯಲ್ಲಿ ಒಂದು ಚಿಲ್ಲರೆ ಅಂಗಡಿಯನ್ನು ತೆರೆಯುತ್ತಿದ್ದು ಈ ಚಿಲ್ಲರೆ
ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡಲು ಉತ್ಸುಕನಾಗಿದ್ದು ತಾವುಗಳು ದಯಮಾಡಿ ನನ್ನ ಚಿಲ್ಲರೆ
ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡಲು ಅನುಮತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ದಿನಾಂಕ 21-2-2024 ರಂದು ಹಿರಿಯೂರು ಅಬಕಾರಿ ಉಪ ನಿರೀಕ್ಷಕರ ಕಚೇರಿಗೆ ಮನವಿ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲೆಂದೇ ಡಬ್ಬಾ ಅಂಗಡಿಗಳನ್ನು ಪ್ರಾರಂಭಿಸಿ ಕಿರಾಣಿ ಸಾಮಾನುಗಳ ಜತೆ ಮದ್ಯ ಮಾರಾಟ ಮಾಡುತ್ತಾರೆ ಕಡಿವಾಣ ಹಾಕುವಂತೆ ಅಬಕಾರಿ ಇಲಾಖೆಗೆ ಮನವಿ ನೀಡುವುದನ್ನು ಕಂಡಿದ್ದೇವೆ ಆದರೆಹೊಸನಾಯಕರಹಟ್ಟಿ ಚಂದ್ರಶೇಖರ್ ಎಂಬುವರು ಚಿಲ್ಲರೆ ಅಂಗಡಿಯಲ್ಲಿ ಮದ್ಯಮಾರಾಟ ಮಾಡಲು ಅನುಮತಿ ಕೋರಿ ಅಬಕಾರಿ ಇಲಾಖೆಗೆ ಮನವಿ ನೀಡಿರುವುದು ಇದು ವಿಶೇಷವಾಗಿದೆ ಅಬಕಾರ ಇಲಾಖೆ ಪರವಾನಿಗೆ ನೀಡುತ್ತೋ ಇಲ್ಲವೊಇ ಕಾದು ನೋಡ ಬೇಕಿದೆ.

ರಾಷ್ಟ್ರೀಯ ಹೆದ್ದಾರಿ ಮಾರ್ಗದ ನಾಮಫಲಕಗಳಲ್ಲಿ ತಪ್ಪು ಮಾಹಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.


ಚಳ್ಳಕೆರೆ: ತಾಲೂಕಿನ ಸಿದ್ದಾಪುರ ಗೇಟ್ ನಿಂದ ಬುಡ್ನಹಟ್ಟಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಕಾಮಗಾರಿ ಹೆದ್ದಾರಿ ಪ್ರಾಧಿಕಾರದ ಕೆಲವು ಎಡವಟ್ಟುಗಳನ್ನು ಮಾಡುತ್ತಿದ್ದು ತಾಲೂಕಿನ ಚಿಕ್ಕಮಧುರೆ ಗ್ರಾಮದ ಗ್ರಾಮಸ್ದ ಮಲ್ಲಿಕಾರ್ಜುನ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವ ಅವರು ವಾಹನ ಸವಾರರಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಬದಿಗಳಲ್ಲಿ ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳುವ ತಿರುವುಗಳಲ್ಲಿ ತಪ್ಪು ಮಾಹಿತಿ ನೀಡುವ ನಾಮಫಲಕಗಳನ್ನು ಅಳವಡಿಸಿರುವುದರಿಂದ ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದ್ದು ಇದರಿಂದಾಗಿ ಹೊರ ಊರುಗಳಿಂದ ಬರುವ ಟ್ರಕ್ ಚಾಲಕರಿಗೆ ಕಾರು ಚಾಲಕರು ಸೇರಿದಂತೆ ಹಲವರಿಗೆ ಸಮಸ್ಯೆಗಳು ಉಂಟಾಗುತ್ತಿದ್ದು ರಾಜ್ಯ ಹೆದ್ದಾರಿ ಪ್ರಾದಿಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅವಘಡಗಳನ್ನು ಸರಿಪಡಿಸಬೇಕು ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ

ಶೌಚಾಲಯ ವಂಚಿತ ಸರಕಾರಿಶಾಲೆಗಳಿಗೆ ಉಚಿತ ಹೈಟೆಕ್ ಶೌಚಾಲಯ ನಿರ್ಮಿಸಿ ಕೊಡುವುದಾಗಿ ಎನ್ ಜಿ ಒ ದುರುಗೇಶಪ್ಪ ವೈರಲ್ ವೀಡಿಯೋ.

ಸಕತ್ ವೈರಲ್ ವೀಡಿಯೋ
ಚಿತ್ರದುರ್ಗ ಶೌಚಾಲಯ ವಂಚಿತ ಸರಕಾರಿ ಶಾಲೆಗಳಿಗೆ 3 ಲಕ್ಷ ರೂ ವೆಚ್ಚದಲ್ಲಿ ಉಚಿತವಾಗಿ ಹೈಟೆಕ್ ಶೌಚಾಲಯ ನಿರ್ಮಿಸಿಕೊಡುವುದಾಗಿ ಚಿತ್ರದುರ್ಗದ ಎನ್.ಜಿ.ಒ ಸಂಸ್ಥೆಯ ದುರುಗೇಶಪ್ಪ ಸಾಮಾಜಿಕ ಲ
ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೋ ಸಕತ್ ವೈರಲ್ ಆಗುತ್ತಿದೆ. ದುರುಗೇಶಪ್ಪ ಮಾತನಾಡಿ ರಾಜ್ಯದ ಯಾವುದೇ ಸರಕಾರಿ ಶಾಲೆಗಳಲ್ಲಿ ಶೌಚಾಯ ಇಲ್ಲ ಎಂದರೆ ನನಗೆ ಮಾಹಿತಿ ನೀಡಿದರೆ ಸಾಕು ಸರಕಾರದ ಸೌಲಭ್ಯ ಪಡೆಯದೆ ನಮ್ಮ ಎನ್ ಜಿ ಒ ದಿಂದ ಕನಿಷ್ಟ 3 ಲಕ್ಷ ರೂ ಹೈಟೆಕ್ ಶೌಚಾಲಯ ನಿರ್ಮಿಸುವುದಾಗಿ ಹಂಚಿಕೊಂಡಿದ್ದಾರೆ

ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ ನಾನು ಕಟ್ಟಿಸಿ ಕೊಡುತ್ತೇನೆ. ಕರೆ ಮಾಡಿ ವಿಳಾಸ ಕೊಡಿ 9901564149

ಬೆಳೆಯೋರು ಬೆಳೆಯಲಿ ಆಸೂಹೆ ಪಟ್ಟು ಕಾಲೆಳೆಯ ಬೇಡಿ ಇಂತ ವಿಚಾರಗಳು ನಿಮ್ಮ ಮಕ್ಕಳಿಗೆ ಮಾರಕವಾಗುತ್ತದೆ .ಪೊಲೀಸಪ್ಪ ವೀಡಿಯೋ ಸಕತ್ ವೈರಲ್.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸಪ್ಪನ ವಿಡೀಯೋ ಸಕತ್ ಸದ್ದು ಮಾಡುತ್ತಿದೆ..
ಚಳ್ಳಕೆರೆ ನ.25. ಮನವಿ ಮಾಡಿಕೊಂಡಿರುವ ಪಲೀಸಪ್ಪನ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಎಲ್ಲರೀಗೂ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಗ್ರಾಮಗಳಲ್ಲಿ ಯಾರಾದರೊಬ್ಬರು ಅಭಿವೃದ್ಧಿಹೊಂದಿದರೆ , ಉತ್ತಮ ಹೆಸರು ಗಳಿಸಿದರೆ ಬೆಳೆದವರು ಹೊಟ್ಟೆ ಕಿಚ್ಚು, ಅಸೂಹೆ ಪಟ್ಟುಕೊಂಡು ಕಾಲಳೆಯುವವರು ಹೆಚ್ಚಾಗಿದ್ದಾರೆ. ಅಂತವರ ಮೇಲೆ ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡಿ ಹಣ ಎಂದು ಪೊಲೀಸರಿಗೆ ಪೋನ್ ಮಾಡುವವರ ಸಂಖ್ಯೆಹೆಚ್ಚಾಗಿದೆ.
ದಯಮಾಡಿ ನಿಮ್ಕ ಮಕ್ಕಳಿಗೆ ಒಳ್ಳೆಯದರು ಮಾಡಲಿ ಯಾರೂ ಸಹ ಇಂತಹ ಮಾಹಿತಿಯನ್ನು ಬಿಡಿ ಅವರು ಯಾವ ರೀತಿ ಅಭಿವೃದ್ಧಿ ಹೊಂದಿದ್ದಾನೆ ತಿಳಿದು ನೀವು ಸಹ ಕಷ್ಟ ಪಟ್ಟು ಮುಂದೆ ಬನ್ನಿ ಹೊಟ್ಟೆ ಕಿಚ್ಚು ಮನೋ ಭಾವನೆ ಬಿಡಿ ನಿಮ್ಮ ಮಕ್ಕಳು ಸಹ ಉನ್ನತ ಮಟ್ಟಕ್ಕೆ ಹೋಗಲಿ ಭಗವಂತೆ ಒಳ್ಳೆಯದು ಮಾಡಲಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ವಿವಿಧ ಪ್ರಕರಣಗಳ ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ, ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆತಂಕ ಜನಸಮಾನ್ಯರಲ್ಲಿ ಮನೆ ಮಾಡಿದೆ.
ಗಂಡ ಹೆಂಡತಿ ಜಗಳ, ಭೂವಿವಾದ, ರಸ್ತೆ ಅಪಘಾತ, ಪ್ರೇಮ ಪ್ರಕರಣ, ಸಂಚಾರಿ ನಿಯಮ ಉಲ್ಲಘನೆ ಸೇರಿದಂದೆ ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತ್ರರಿಗೆ ನ್ಯಾಯ ಸಿಗುವ ಬದಲು ತಪ್ಪು ಮಾಡಿದವರಿಗೆ ನ್ಯಾಯದೊರೆಯುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿದೆ.
ಸಂತ್ರಸ್ತ್ರರು ದೂರು ನೀಡಲು ಬರುವ ಮುನ್ನವೇ ತಪ್ಪು ಮಾಡಿದವರ ಪರವಾಗಿ ಪ್ರಭಾವಿಗಳಿಂದ ಪೋನ್ ಕರೆ ಮಾಡಿ ಇಬ್ಬರಿಗೆ ರಾಜಿ ಮಾಡಿಕಳಿಸಿ ಇಲ್ಲವೆ ಇಬ್ಬರಿಂದಲೂರು ದೂರು ಪಡೆದು ತಪ್ಪು ಮಾಡಿದವನು ನಮ್ಮವನು ಎಂದು ರಕ್ಷಣೆ ನೀಡುತ್ತಾರೆ.
ಸಂತ್ರಸ್ತರಿಗೆ ನ್ಯಾಯಸಿಗದೆ ಅಲೆದಾಡುವಂತಾಗುತ್ತದೆ ಮತ್ತೆ ಪದೇ ಪದೆ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತವೆ ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆಯಾಗಲ್ಲಿ ಅನ್ಯಾಯಕ್ಕೆ ತುಳಿತಕ್ಕೆ ಒಳಗಾದವರಿಗೆ ನ್ಯಾಯಸಿಗಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಪ್ರಕರಣಗಳನ್ನು ದಾಖಲಿಸಿ ನ್ಯಾಯ ದೊರಕಿಸಿಕೊಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಅಥವಾ ರಾಜಕೀಯ ಮುಖಂಡರ ಒತ್ತಡದ ಕಾರಣದಿಂದ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಹಣೆಪಟ್ಟಿಕೊಂಡು ಒತ್ತಡಗಳ ನಡುವೆ ಪೊಲೀಸ್ ಇಲಾಖೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಪೋಲಿಸ್ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಲ್ಲಿ

ಈಗಲಾದರೂ ತಪ್ಪಿತಸ್ಥರ ಪರ ಅಸೂಹೆ ಹೊಟ್ಟೆಕಿಚ್ಚಿನ ಮೇಲೆ ಬೆಂಬಲಿಸದೆ ಪೋಲಿಸರಿಗೆ ಕೆಲಸ ಮಾಡಲು ಬಿಡಿ ತಪ್ಪು ಮಾಡಿದವರಿಗೆ ಬುದ್ದಿಕಲಿಸಲು ಮುಂದಾಗಿ ಪೋಲಿಸಪ್ಪ ಮನವಿ ಮಾಡಿಕೊಂಡಿರುವು ಸತ್ಯ ಎಲ್ಲಾ ಕಡೆ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಕೈಮುಗಿದು ಮನವಿ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ ಹಾಗೂ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

ಚಳ್ಳಕೆರೆ ಕ್ಷೇತ್ರದ ಶಾಸಕನೇ ಹೊರತು, ಚಿತ್ರದುರ್ಗದ ಶಾಸಕನಲ್ಲ. ಚಿತ್ರದುರ್ಗ ನನ್ನ ಕ್ಷೇತ್ರವೂ ಅಲ್ಲ ಎಂಬುದನ್ನು ಬಿಜೆಪಿ ಐಟಿ ಸೆಲ್ ನವರಿಗೆ ತಿಳಿಸಲು ಇಚ್ಛಿಸುತ್ತೇನೆ. ಟೀಕಿಸುವ ಮುನ್ನ ಮಾಹಿತಿ ತಿಳಿಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಟ್ವಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸುದ್ದಿ ಕಲ್ಲೇನಹಳ್ಳಿ ಗ್ರಾಮ ಚಿತ್ರದುರ್ಗ ಕ್ಷೇತ್ರಕ್ಕೆ ಸೇರಿರುತ್ತದೆ. ನಾನು ಚಳ್ಳಕೆರೆ ಕ್ಷೇತ್ರದ ಶಾಸಕನೇ ಹೊರತು, ಚಿತ್ರದುರ್ಗದ ಶಾಸಕನಲ್ಲ. ಚಿತ್ರದುರ್ಗ ನನ್ನ ಕ್ಷೇತ್ರವೂ ಅಲ್ಲ ಎಂಬುದನ್ನು ಬಿಜೆಪಿ ಐಟಿ ಸೆಲ್ ನವರಿಗೆ ತಿಳಿಸಲು ಇಚ್ಛಿಸುತ್ತೇನೆ. ಟೀಕಿಸುವ ಮುನ್ನ ಪೂರ್ವಾಪರ ತಿಳಿದು ಮಾತನಾಡುವುದು ಉತ್ತಮ.

ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಸಾಮಾಜಿಕ‌ಜಾಲ ತಾಣದಲ್ಲಿ ಮನವಿ ಮಾಡಿಕೊಂಡಿದ್ದಾನೆ….

ಬೆಳೆ ವಿಮೆ ಬೆಳೆ ಪರಿಹಾರ ನೀಡುವಂತೆ ಯುವನೊಬ್ಬ ಸಾಮಾಜಿಕ ಜಾಲ ತಾಣದಲ್ಲಿ ಬೆಳೆವಿಮೆ ಕಟ್ಟಿದ ರಸೀದಿಯೊಂದಿಗೆ ಹಂಚಿಕೊಂಡಿದ್ದಾನೆ. ಫಸಲ್ ಭೀಮಾ ಯೋಜನೆ ಕೇಂದ್ರ ಸರ್ಕಾರ… 2022-2023 (ಬೆಳೆ ವಿಮೆ).

ಬೆಳೆ ಪರಿಹಾರ 2022-23….ರಾಜ್ಯ ಸರ್ಕಾರ…
*
ಈ ವರ್ಷ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತು ಆಲ್ಮೋಸ್ಟ್ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸಂಪೂರ್ಣ ಬೆಳೆಗಳು ಹಾಳಾಗಿ ಹೋಗಿದೆ ಹಾಗಾಗಿ ಈ ವರ್ಷನಾದ್ರು ನಾವು ಕಟ್ಟಿರುವ ಬೆಳೆ ವಿಮೆಯ ಹಣಕ್ಕೆ ಪ್ರತಿಫಲವಾಗಿ ಬೆಳೆ ವಿಮೆಯ ಹಣವನ್ನು ತಡ ಮಾಡದೆ ನಿಮ್ಮ ಇತರೆ ಉದ್ದೇಶಗಳನ್ನ ಬದಿಗೊತ್ತಿ ನಮ್ಮ ರೈತರ ಖಾತೆಗಳಿಗೆ 2 ಸಾವಿರಾನೋ ಅಥವಾ
3 ಸಾವಿರಾನೋ ಹಾಕಿ ಸಮಾಧಾನ ಮಾಡುವುದನ್ನ ಬಿಟ್ಟು ನ್ಯಾಯಯುತವಾಗಿ ಎಷ್ಟು ಹಣ ನೀಡಬೇಕೊ ಅಷ್ಟು ಹಣವನ್ನ ಕೂಡಲೇ ಜಮೆ ಮಾಡಬೇಕಾಗಿ ಒಬ್ಬ ನಾಗರೀಕನಾಗಿ ಒಬ್ಬ ರೈತ ಮಗನಾಗಿ ಮನವಿ
ಮಾಡಿಕೊಳ್ಳುತ್ತಿದ್ದೇನೆ..

ಇಲ್ಲಿ ಬೆಳೆ ವಿಮೆ ಕಟ್ಟಿರು ರಶೀದಿಯನ್ನ ಹಾಕಿದ್ದೀನಿ ಯೋಜನೆಯ ನಿಯಮಗಳ ಪ್ರಕಾರ 5 ಎಕರೆ ಮಳೆಯಾಶ್ರಿತ ಭೂಮಿಗೆ ಸಂಪೂರ್ಣ ಬೆಳೆ ನಾಶ ಆದರೆ 1ಲಕ್ಷದ 10 ಸಾವಿರ ರೂಪಾಯಿಗಳನ್ನ ನೀಡಬೇಕು ಈ ಭಾರಿ ನಮ್ಮಲ್ಲಿ ನೂರಕ್ಕೆ ನೂರರಷ್ಟು ಬೆಳೆ ನಾಶ ಆಗಿದೆ ಹಾಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಮಖ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ಎಲ್ಲರೂ ಮಾತಾಡಿಕೊಂಡು ಆದಷ್ಟು ಬೇಗ ರೈತರಿಗೆ ಸಲ್ಲಬೇಕಾಗಿರುವ ಹಣವನ್ನು ನ್ಯಾಯಯುತವಾಗಿ ಸಲ್ಲುವ ಹಾಗೆ ಮಾಡಿ ಇಲ್ಲವಾದರೆ ಈಗಾಗಲೇ ರೈತ ಕೆಲಸಗಳು ಇಳಿಕೆಯಾಗುತ್ತಿದೆ ನೆಕ್ಸ್ಟ್ ಬಿತ್ತನೆ ಮಾಡುವವರ ಸಂಖ್ಯೆ ಇನ್ನೂ ತುಂಬಾ ಕಡಿಮೆ ಆಗುತ್ತದೆ…ಹೀಗಾದರೆ ಮುಂದೆ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ…

ಹೆಸರಿಗಷ್ಟೇ ಯೋಜನೆ ಅನ್ನೋ ಹಾಗೆ ಮಾಡಬೇಡಿ

ದಯವಿಟ್ಟು ಸಂಬಂಧ ಪಟ್ಟ ಅಧಿಕಾರಿಗಳು ಎಮ್ ಎಲ್ ಎ ಗಳು ಎಂ ಪಿ ಗಳು ಸಚಿವರುಗಳು ರೈತ ಸಂಘದವರು ಇತರೆ ನಾಯಕರುಗಳು ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿ ನಮ್ಮ ರೈತರಿಗೆ ಬೆಳೆ ವಿಮೆಯ ಸೂಕ್ತ ಹಣವನ್ನು ಕೊಡಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.

ಇದನ್ನ ಬಿಟ್ಟು ವಿಮೆ ಕಂಪೆನಿಗಳಿಂದ ಕೆಲವರು ಹಣಪಡೆದೋ ಅಥವಾ ಮತ್ತಿನ್ಯಾವುದೊ ಕಾರಣಗಳಿಗಾಗಿ ಮೇಲ್ನೋಟಕ್ಕೆ ಹೋರಾಟ ಮಾಡುವ ಹಾಗೆ ನಾಟಕ ಮಾಡಿ ನಮ್ಮ ರೈತರಿಗೆ ಅನ್ಯಾಯ ಮಾಡಬೇಡಿ…
ರೈತರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ..

ಹಾಗೆ ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನ ಕೇಂದ್ರ ಸರ್ಕಾರ ಯಾಣ ಕೊಟ್ಟಿಲ್ಲ
ಎನ್ ಡಿ ಆರ್ ಎಫ್ ನಿಯಮಗಳು ಸರಿಹೊಂದುತ್ತಿಲ್ಲ ಅಂತ ಇನ್ನಿತರೇ ಯಾವುದೇ ಸಬೂಬು ಹೇಳದೇ ಆದಷ್ಟು ಬೇಗ ರೈತರಿಗೆ ಪರಿಹಾರದ ಹಣವನ್ನ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ…

ದಯವಿಟ್ಟು ಸಂಬಂಧಪಟ್ಟವರು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಿ ರೈತರಿಗೆ ನ್ಯಾಯ ಒದಗಿಸಿ…ಹಾಗೆ ಎಲ್ಲಾ ನಾಗರೀಕರು ಇದರ ಬಗ್ಗೆ ಧ್ವನಿ ಎತ್ತಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ…

ಎಷ್ಟೋ ವಿಚಾರಗಳಿಗೆ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುತ್ತೇವೆ ಈ ಕಷ್ಟದ ಸಮಯದಲ್ಲಿ ನಮ್ಮ ರೈತರ ಪರ ಪಕ್ಷಾತೀತವಾಗಿ ಧ್ವನಿ ಎತ್ತೋಣ….

ವಿ ಸ್ಟ್ಯಾಂಡ್ ವಿತ್ ಇಸ್ರೇಲ್ & ಪ್ಯಾಲೆಸ್ತೈನ್..ವಿ ಸ್ಟ್ಯಾಂಡ್ ವಿತ್ ಎಡಪಂಥೀಯ & ಬಲಪಂಥೀಯ ವಿ ಸ್ಟ್ಯಾಂಡ್ ವಿತ್ ಜಾತ್ಯಾತೀತ & ಕೋಮುವಾದ…ಹೀಗೆ ಎಷ್ಟೋ ಪೋಸ್ಟ್ ಗಳನ್ನ ಹಾಕ್ತಿರ್ತೀವಿ ಇದೇ ತರಹ ಅವಾಗಾವಗ ಅಟ್ಲೀಸ್ಟ್ ಕಷ್ಟದ ಸಮಯದಲ್ಲಿ


ವಿ ಸ್ಟ್ಯಾಂಡ್ ವಿತ್ ನಮ್ಮ ರೈತರು ಅಂತ ಹೇಳಬುಹುದಲ್ವಾ???

ಸೋ ಎಲ್ಲಾ ರೈತ ಬಾಂಧವರು ಮತ್ತು ರೈತ ಪರ ಇರುವವರು ಆದಷ್ಟು ಈ ಅರ್ಹ ಹಕ್ಕಿನ ಪೋಸ್ಟನ್ನು ಶೇರ್ ಮಾಡಿ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.💐

ಪುಟ್ಟ ಬಾಲಕಿಯ ಪತ್ರಕ್ಕೆ ಸ್ಪಂಧಿಸಿ 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು 9 ಮತ್ತು 10ನೇ ತರಗತಿಗೂ ವಿಸ್ತರಿಸಿದ ಮುಖ್ಯಮಂತ್ರಿ ಸಿದ್ದರಾಮ್ಯ.

ಬೆಂಗಳೂರು ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ. ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ.

ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ‌ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ.

ಅನ್ನಭಾಗ್ಯ ಭಾಗ್ಯ ಯೋಜನೆಯಡಿ ಉಚಿತ ಪಡಿತರ ವಿತರಣೆಗೆ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ವೀಡಿಯೋ ವೈರಲ್

ಜನಧ್ವನಿ ವಾರ್ತೆ ಜೂ 17
ಅನ್ನಭಾಗ್ಯ ಭಾಗ್ಯ ಯೋಜನೆಯಡಿ ಉಚಿತ ಪಡಿತರ ವಿತರಣೆಗೆ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ವೀಡಿಯೋ ಸಾಮಾಜಿ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಪಂ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಮಾಲಿಕ ಉಚಿತ ಪಡಿತರ ಅಕ್ಕಿ ನೀಡಲು ಪ್ರತಿಯೊಬ್ಬರಿಂದ 10 ರಿಂದ 20 ರೂ ವಸೂಲಿ ಮಾಡುತ್ತಿರುವ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಣಾದಲ್ಲಿ ಹರಿದಾಡುತ್ತಿದೆ ಬಡವರಿಗೆಂದು ಉಚಿತವಾಗಿ ನೀಡುತ್ತಿರುವ ಅನ್ನ ಭಾಗ್ಯ ಯೋಜನೆಯಡಿ ಸರಕಾರ ಉಚಿತ ಅಕ್ಕಿ ನೀಡಿದರೆ ನ್ಯಾಯಬೆಲೆ ಅಂಗಡಿಯವರು ಪ್ರತಿ ಪಡಿತರ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೆಆರ್‌ಎಸ್‌ಪಕ್ಷದ ಸಿ.ಮಹೇಶ್ ನಗರಂಗೆರೆ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರಕಾರ ಬಡವರಿಗೆಂದು ಉಚತವಾಗಿ ಪಡಿತ ವಿತರಣೆ ಮಾಡುತ್ತಿದ್ದು ಇತ್ತ ಪಡಿತರ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿ ಮಾಲಿಕರು ಹಣ ಪಡೆಯುವ ಜತೆಗೆ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದಲೇ ಆಹಾರ ಇಲಾಖೆ ಅಧಿಕಾರಿಗಳು ಹಫ್ತಾ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಇದು ಯಾವುದೋ ಒಂದು ಅಂಗಡಿ ಕಥೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಲ್ಲಿ ನಡೆಯುತ್ತಿರುವ ತೂಕದಲ್ಲಿ ಮೋಸ ಹಾಗೂ ಹಣ ಪಡೆಯುತ್ತಿರುವುದು ಕೇಳಿ ಬರುತ್ತಿದೆ ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕದಿದ್ದರೆ ಪ್ರತಿಭಟೆನೆ ಮಾಡುವುದಾಗಿ ಕೆಆರ್‌ಪಕ್ಷ ಎಚ್ಚರಿಕೆ ನೀಡಿದೆ.

ರಾಷ್ಟ್ರಧ್ವಜ ಕಸದ ಪುಟ್ಟಿಗೆ ವೀಡಿಯೋ ವೈರಲ್ ಖಾಸಗಿ ಶಾಲೆಯ ಯಡವಟ್ಟು


ಚಳ್ಳಕೆರೆ ಜನಧ್ವನಿ ವಾರ್ತೆ ಜೂ.5 ವೈರಲ್ ವೀಡಿಯೋ
ನಮ್ಮ ದೇಶದ ರಾಷ್ಟ್ರಧ್ವಜ ಶಾಲಾ ಕಾಲೇಜು ಹಾಗೂ ಹಲವಾರು
ಶಿಕ್ಷಣ ಸಂಸ್ಥೆಗಳು ನಮ್ಮ ದೇಶದ ತ್ರಿವರ್ಣ
ಧ್ವಜವನ್ನು ಮಕ್ಕಳಿಗೆ ಶಿಕ್ಷಣ ಕೊಡುವಂತಹ ಕೆಲವು ಶಿಕ್ಷಣ
ಸಂಸ್ಥೆಗಳು ರಾಷ್ಟ್ರಧ್ವಜದ ಮಹತ್ವವನ್ನು ಅರಿಯದೆ ಕಸದ ಪುಟ್ಟಿಗೆ
ಹಾಕಿರುವ ಸಂಗತಿ ವಿಡಿಯೋ ವೈರಲ್ ಆಗಿದೆ,
ಹೌದು
ನಮ್ಮ ದೇಶದ ಹೆಮ್ಮೆಯ ಕೇಸರಿ ಬಿಳಿ ಹಸಿರು ಧ್ವಜವನ್ನು ನಮ್ಮ
ರಾಷ್ಟ್ರದ ಜನತೆಯು ಪ್ರತಿಯೊಬ್ಬರು ಗೌರವಿಸುತ್ತಾರೆ, ಆದರೆ ಇಲ್ಲಿ
ನೋಡಿ ಚಳ್ಳಕೆರೆ ನಗರದ ವಿಠಲ್ ನಗರದಲ್ಲಿ ಬರುವ ಚಿನ್ಮಯ್
ಶಾಲೆ ಎದುರು ಕಸದ ಬುಟ್ಟಿಯಲ್ಲಿ ಬಿದ್ದಿದ್ದ ರಾಷ್ಟ್ರಧ್ವಜವನ್ನು ನೋಡಿ
ಶಾಲೆಗೆ ಮಕ್ಕಳನ್ನು ಬಿಡಲು ಹೋದ ಪೋಷಕರು ಸಾಮಾಜಿಕ
ಜಾಲತಾಣದಲ್ಲಿ ಹರಿಬಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ,
ಚಿನ್ಮಯ ಶಾಲೆಯ ಶಾಲೆಯ ಹೊರಗಡೆಯ ಕಾಲಿ ನಿವೇಶನದ ಕ್ರಾಸ್
ಬಳಿ ಕಸದ ಬುಟ್ಟಿಯಲ್ಲಿ ರಾಷ್ಟ್ರಧ್ವಜ ಕಾಣಿಸಿಕೊಂಡಿದ್ದು ಕೆಲವೇ
ನಿಮಿಷಗಳಲ್ಲಿ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಅವರಿಗೆ
ಮಾಧ್ಯಮದಿಂದ ಫೋನ್ ಮಾಡಿದಾಗ ಈ ವಿಷಯವನ್ನು
ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಮಾಧ್ಯಮದವರಿಗೆ
ವಿಶೇಷ ತಿಳಿಸಿದರು ನೋಡಿ ಒಂದು ಶಿಕ್ಷಣ ಸಂಸ್ಥೆ ಈ ತರಹ
ರಾಷ್ಟ್ರಧ್ವಜವನ್ನು ಅವಮಾನಿಸಿದ್ದು ಎಷ್ಟರಮಟ್ಟಿಗೆ ಸರಿ, ಇದಕ್ಕೆ
ಸಾರ್ವಜನಿಕರೇ ಸರಿಯಾದ ಉತ್ತರ ಹೇಳಬೇಕಾಗಿದೆ ,ಇನ್ನಾದರೂ
ಶಿಕ್ಷಣ ಅಧಿಕಾರಿಗಳು ಇಂತಹ ಶಾಲೆಯನ್ನು ಗುರುತಿಸಿ ಅಂತವರ
ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು
ಒತ್ತಾಯಿಸಿದ್ದಾರೆ

You cannot copy content of this page