ಚಳ್ಳಕೆರೆ ಜನಧ್ವನಿ ವಾರ್ತೆ ಡಿ27 ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುವಂತಿರು ವಿದ್ಯುತ್ ಕಂಬಕ್ಕೆ ಬಳ್ಳಿ ಆಸರೆಯಾಗಿರುವುದು ಜನರನ್ನು ಭೀತಿಯನ್ನುಂಟು ಮಾಡಿದೆ.
ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಕ್ಕಮದುರೆ ಗ್ರಾಮದಲ್ಲಿನ ವಿದ್ಯುತ್ ಕಂಬಳಿಗೆ ಬಳಿ ಹಬ್ಬಿಸುಮಾರು ದಿನಗಳು ಕಳೆದರೂ ಬೆಸ್ಕಾಂ ಸಿಬ್ಬಂದಿಗಳು ತೆರವುಗೊಳಿಸದೇ ಇರುವುದರಿಂದ ಸಾರ್ವಜನಿಕರು ವಿದ್ಯುತ್ ಅವಗಡ ಭೀತಿ ಎದುರಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಗಿಡಗಂಟಿ, ಬಳ್ಳಿಗಳು ನೆಲದಿಂದ ವಿದ್ಯುತ್ ಮೇಲಿನ ತಂತಿಗಳವರೆಗೂ ಚಾಚಿಕೊಂಡು ಕಂಬ ಸುತ್ತಿಕೊಂಡಿವೆ. ಟಿಸಿ ಕಂಬದ ಸಮೀಪದಲ್ಲಿರುವ ಗಿಡ-ಮರಗಳು ವಿದ್ಯುತ್ ತಂತಿಗೆ ತಾಗುವ ಕಾರಣ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗುತ್ತಿದೆ. ಗಾಳಿ ಮಳೆಗೆ ತಂತಿಗಳು ಒಂದೊಕ್ಕೊಂದು ತಾಗುತ್ತಿವೆ.
ಕಂಬಗಳ ಮೇಲೆ ಬೀಳುವ ಮಳೆಹನಿ ಬಳ್ಳಿಗಳ ಮೂಲಕ ನೆಲದಲ್ಲಿಹರಿಯುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಪ್ರಮುಖ ರಸ್ತೆಗಳಲ್ಲಿನಿತ್ಯ ವಾಹನ ಸವಾರರು, ಪಾದಾಚಾರಿಗಳು, ದನಕರುಗಳು ಓಡಾಡುತ್ತವೆ. ಮಳೆ ಬಂದಾಗ ವಿದ್ಯುತ್ ಕಂಬದ ಬಳಿ ಪಾದಚಾರಿಗಳು ಜೀವಕೈಯಲ್ಲಿಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗೆ ಹರಡಿಕೊಂಡಿರುವ ಬಳ್ಳಿಯನ್ನು ತೆರವುಗೊಳಿಸುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments