ಚಳ್ಳಕೆರೆ ಅರಣ್ಯ ಇಲಾಖೆ ಹಾಗೂ ದಾವಣಗೆರೆ ಕಾರ್ಡಿಯಾ ಸಂಸ್ಥೆ ಇವರ ವತಿಯಿಂದ ನಗರದ ಪ್ರತಿಷ್ಠಿತ ಶಾಲೆಯಾದ ಹೆಗ್ಗೆರೆ ತಾಯಮ್ಮ ಹಾಗೂ ತಿಪ್ಪೇಸ್ವಾಮಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇಂದು ಚಿಣ್ಣರ ವನದ ಒಂದು ದಿನದ ಪರಿಸರ ಅಧ್ಯಯನದ ಪ್ರವಾಸ ಕೈಗೊಳ್ಳಾಗಿತ್ತು.
ಇಂದು ಸಾಲುಮರದ ತಿಮ್ಮಕ್ಕ ಉದ್ಯಾನವನದಿಂದ ಶಾಲೆ ಮಕ್ಕಳನ್ನು ಪ್ರವಾಸ ಕಳುಹಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಡಿ .ಬಹುಗುಣ ಇವರು ಇಂದು ಶಾಲೆ ವಿದ್ಯಾರ್ಥಿ ಗಳನ್ನು ಹೊಸಪೇಟೆಯ ಗುಂಡ ಸಸ್ಯಕ್ಷೇತ್ರ ,ಗುಂಡಿ ಟ್ರೀ ಪ್ರಾರ್ಕ, ಕಮಲಾಪುರದ ಅಟಲ್ ಬಿಹಾರಿ ವಾಜಪಿಯ ಪ್ರಾಣಿ ಸಂಗ್ರಹಾಲಯ ದರೊಜಿ ಕರಡಿ ದಾಮದ ಅಧ್ಯಯನ ಕ್ಕೆ ಕಳುಹಿಸಿಕೊಡಲಾಗಿದೆ. ಇಂದಿನ ಮಕ್ಕಳಲ್ಲಿನ ಅರಣ್ಯ,ಹಾಗೂ ಪ್ರಾಣಿಗಳ ಸಮಗ್ರ ಮಾಹಿತಿಗೆ ಈ ಪ್ರವಾಸ ಅನುಕೂಲವಾಗಲಿದೆ .ಅರಣ್ಯ ಇಲಾಖೆ ವತಿಯಿಂದ ಪ್ರತಿ ವರ್ಷ ಈ ಪ್ರವಾಸ ಕೈಗೊಳ್ಳುತ್ತಿದ್ದ ಒಂದೊಂದು ವರ್ಷ ಒಂದೊಂದು ಪ್ರೌಡಶಾಲಾ ವಿದ್ಯಾರ್ಥಿಗಳನ್ನು ಕಳುಹಿಸಿ ಕೋಡಲಾಗುತ್ತಿದ್ದು ಕರೋನ ಇದ್ದ ಕಾರಣ ಎರಡು ವರ್ಷ ಪ್ರವಾಸ ಕಳುಹಿಸಲ ಹಾಗಿರಲಿಲ್ಲಾ ಆದರೆ ಈ ಬಾರಿ ನಗರದ ಹೆಗ್ಗೆರೆ ತಾಯಮ್ಮತಿಪ್ಪೇಸ್ವಾಮಿ ಶಾಲೆ ವಿದ್ಯಾರ್ಥಿಗಳನ್ನು ಪ್ರವಾಸ ಕಳುಹಿಸಲಾಗಿದೆ ಇದರ ಸದೂಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಎಂದರು.
ದಾವಣಗೆರೆಯ ಕಾರ್ಡಿಯ , ಚಿಣ್ಣರ ವನದ ಕಾರ್ಯದರ್ಶಿ ಡಾ. ಜಿಟಿ.ಸುದರ್ಶನ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾಡಿನ ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ .ಅದೋಷ್ಟ ಪ್ರಾಣಿಗಳು ವಾಹನಗಳಿಗೆ ಬಲಿಯಾಗುತ್ತಿವೆ.ಇದಕ್ಕೆ ಕಾರಣ ಕಾಡು ಸಂಪೂರ್ಣ ನಾಶದಿಂದ. ಅಷ್ಟೇ ಅಲ್ಲದೆ ಮಳೆಯ ಪ್ರಮಾಣವು ಸಹ ಕಡಿಮೆಯಾಗಿದೆ ಸರ್ಕಾರವು ಸಹ ಸಾಕಷ್ಟು ಅರಣ್ಯ ಬೆಳೆಸಲು ಪ್ರಯತ್ನ ಮಾಡುತಿದೆ ಆದರೆ ಜನಸಂಖ್ಯೆ ಹೆಚ್ಚಾದಂತೆಲ್ಲ ಅರಣ್ಯಗಳು ನಾಶ ಹೊಂದುತ್ತಿವೆ ಇದಕ್ಕೆ ನಾವುಗಳು ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ಬೆಳೆಸಿ ಪೋಷಣೆ ಮಾಡಿ ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ ವನ್ಯಜೀವಿಗಳ ಆವಾಸ ಸ್ಥಳಗಳಾದ ಅರಣ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸದಲ್ಲಿ ಸಹಕಾರ ನೀಡಬೇಕು. ಹಾಗೂ ಪ್ರಾಣಿ ಪಕ್ಷಿಗಳಿಗೆ ಕೈಲಾದ ಸಹಾಯ ಮಾಡಬೇಕು ಮತ್ತು ಅತಿ ಹೆಚ್ಚು ಅರಣ್ಯದಲ್ಲಿ ಸಿಗುವಂತಹ ಔಷಧಿ ಗುಣಗಳ ಬಗ್ಗೆ ಮಾಹಿತಿ ಪಡೆಯಬೇಕು ಅರಣ್ಯಗಳು ನಮ್ಮೆಲ್ಲರ ಸಂಪತ್ತು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವಂತಹ ಜವಾಬ್ದಾರಿ ನಮ್ಮದಾಗಿದೆ ಎಂದರು.
ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪ್ರಾಣೇಶ್ ಮಾತನಾಡಿ ಒಂದು ದಿನದ ಪ್ರವಾಸಕ್ಕೆ ನಮ್ಮ ಶಾಲೆ ಆಯ್ಕೆ ಮಾಡಿ ಕಳಿಸಿ ಕೊಟ್ಟಿದ್ದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹಾಗೂ ವಲಯ ಅರಣ್ಯ ಅಧಿಕಾರಿಗಳಿಗೆ ಹಾಗೂ ನಮ್ಮ ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಕಾರ್ಡಿಯಾ ಸಂಸ್ಥೆ ಇವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಗಸ್ತು ವನ ಪಾಲಕ ಎನ್ ರಾಜೇಶ್ ಶಿಕ್ಷಕರಾದ ಪೂರ್ಣಿಮಾ, ವನಜಾಕ್ಷಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
0 Comments