ಚಳ್ಳಕೆರೆ: ನಗರದ ಹೊರವಲಯದ ಅಜ್ಜನಗುಡಿ ಬಳಿಯ ದೇವರ ಎತ್ತುಗಳಿಗೆ “ವಾಸವಿ ವನಿತಾ ಸಂಘ”ದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗೋಪೂಜೆ ನೆರವೇರಿಸಿ ಮೇವು,ಬಾಳೆ ಹಣ್ಣು, ಅಕ್ಕಿ ಬೇಳೆ ಬೆಲ್ಲ ವಿತರಿಸಿ ಗೋಪಾಲಕರಾದ ಕಿಲಾರಿಗಳನ್ನು ವಾಸವಿ ವನಿತಾ ಸಂಘ ಮತ್ತು ಶ್ರೀ ಶಾರದಾಶ್ರಮದ ವತಿಯಿಂದ ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ ವಾಸವಿ ವನಿತಾ ಸಂಘದ ಅಧ್ಯಕ್ಷರಾದ ಕಲ್ಪನ ಮಧುಸೂದನ್ ಮಾತನಾಡಿ:- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ಮಹಿಳೆಯರು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ,ಆದರೆ ನಮ್ಮ ಸಂಘದ ವತಿಯಿಂದ ಈ ಬಾರಿ ದೇವರ ಎತ್ತುಗಳಿಗೆ ಗೋಪೂಜೆ ನೆರವೇರಿಸಿ, ಮೇವು, ಬಾಳೆಹಣ್ಣು ಮತ್ತು ಗೋಪಾಲಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಆದರೆ ಇಂತಹ ದೇವರ ಎತ್ತುಗಳಿಗೆ ಸರ್ಕಾರ ಮತ್ತು ಸಂಘ- ಸಂಸ್ಥೆಗಳಿಂದ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ಹೇಳಿದರು.
![](https://janadhwani.in/wp-content/uploads/2024/03/IMG-20240313-WA0146.jpg)
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮೀರಾ ರಮೇಶ್, ಕಾರ್ಯದರ್ಶಿಗಳಾದ ನಳಿನಿ ರಾಧಾಕೃಷ್ಣ, ಖಜಾಂಚಿ-ವಾಸವಿ ಸತ್ಯನಾರಾಯಣ, ಎಲ್ಲಾ ಸದಸ್ಯರು, ಶ್ರೀ ಶಾರದಾಶ್ರಮದ ಭಕ್ತರಾದ ಯತೀಶ್.ಎಂ.ಸಿದ್ದಾಪುರ,ದೇವರ ಎತ್ತುಗಳ ಮೇಲ್ವಿಚಾರಣೆ ಮಾಡುತ್ತಿರುವ ಮಹೇಶ,ಸಿದ್ದೇಶ್. ಗೋಪಾಲಕರಾದ ಕಿಲಾರಿಗಳು ಉಪಸ್ಥಿತರಿದ್ದರು.
![](https://janadhwani.in/wp-content/uploads/2024/03/IMG-20240313-WA0146-1.jpg)
0 Comments