ಚಳ್ಳಕೆರೆ ಜನಧ್ವನಿ ವಾರ್ತೆ ಮಾ.24.ಬಿಜೆಪಿಯು ರಾಷ್ಟ್ರೀಯ ಪಕ್ಷವಾಗಿದ್ದು, ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದ್ದು, ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ತಾನು ಬಿಜೆಪಿ
ಪಕ್ಷದ ಅಭ್ಯರ್ಥಿಯಾಗಲುಸಿದ್ದನಾಗಿದ್ದೇನೆ ನನಗೆ ಟಿಕೇಟ್ ಸಿಗುವ ಭರವಸೆ ಇದೆ ಎಂದು ಮಾಜಿ ಸಂಸದ ಎಂ.ಜನಾರ್ಧನಸ್ವಾಮಿ ಹೇಳಿದರು.
ಮಾಜಿ ಸಂಸದರ ಅಂತ್ಯ ಸಂಸ್ಕಾರದಲ್ಲಿ ಭಾಗಹವಿಸಿ ಹಿಂದುರುಗುವಾಗ ನಗರದ ಬೆಂಗಳೂರು ರಸ್ತೆಯ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರದುರ್ಗ ಕ್ಷೇತ್ರದ ನಾನು ಎಂಪಿಯಾಗಿ ಕಾರ್ಯನಿರ್ವಹಿಸಿದಾಗ 1500 ಎಕರೆ ಪ್ರದೇಶದಲ್ಲಿ ಡಿಆರ್ ಡಿ ಓ,ಆಟೋಮಿಕ್ ರಿಸರ್ಚ್ ಸೆಂಟರ್, ಬೇರೆ ಕಡೆಗೆ ಹೋಗುವುದನ್ನು ತಪ್ಪಿಸಿ ನನ್ನ ಕ್ಷೇತ್ರ ವ್ಯಾಪ್ತಿಯ ಚಳ್ಳಕೆರೆ ತಾಲೂಕಿನಲ್ಲಿ ಸ್ಥಾಪಿಸಿಲು ಕಾರಣನಾಗಿದ್ದರಿಂದ ಇಂದು ಚಳ್ಳಕೆರೆ ವಿಶ್ವದ ಭೂಪಟದಲ್ಲಿ ನೋಡುವಂತಾಗಿದೆ.
ಅಪ್ಪರ್ ಭದ್ರ, ನೇರ ರೈಲು ಮಾರ್ಗ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ನನ್ನ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತು. ಈ ಬಾರಿ ಟಿಕೇಟ್ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಮತ್ತೊಮ್ಮೆ ನನಗೆ ಗೆಲುವು ನೀಡಿದರೆ ಕೇವ 5 ವರ್ಷದಲ್ಲೇ ಬರದ ನಾಡು ಚಿತ್ರದುರ್ಗ ಎಂಬ ಹಣೆ ಪಟ್ಟಿಯಿಂದ ದೂರ ಮಾಡಲು ಹವಲು ವರ್ಷಗಳ ಬೇಡಿಕೆಗಳಾದ ನೇರ ರೈಲು ಮಾರ್ಗ, ಅಪ್ಪರ್ ಭದ್ರಯೋಜನೆ , ವಿವಿಧ ಕೈಗಾರಿಗಳು ತಲೆ ಎತ್ತಲಿವೆ ಕ್ಷೇತ್ರ ಅಭಿವೃದ್ಧಿಯಾದರೆ ಕುಡಿಯುವ ನೀರು, ಸ್ವಚ್ಚತೆ, ರಸ್ತೆ ತಾನಾಗಿ ಅಭಿವೃದ್ಧಿಯಾಗುತ್ತವೆ ಎಂದು ಸಂಸದರಾಗಿದ್ದಾಗ ಅವರು ಜಾರಿಗೊಳಿಸಿದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಮುಂಡ ಜೆ.ಎಸ್,ತಿಪ್ಪೇಸ್ವಾಮಿ ಮಾತನಾಡಿ ಹಣ ಭಲ, ತೋಳ್ ಬಳ ಇದೆ ಎಂದು ಹೊರಗಿನವರಿಗೆ ಟಿಕೇಟ್ ನೀಡಿದರೆ ಸೋಲು ಖಚಿತ ಮಾಜಿ ಸಂಸದ ಜನಾರ್ಧನಸ್ವಾಮಿ ಸ್ಥಳಯವರಾಗಿದ್ದು ಇವರ ಆಧಿಕಾರವದಿಯಲ್ಲಿ ಉತ್ತಮ ಸೇವೆ ಮಾಡಿದ್ದಾರೆ ಇವರಿಗೆ ಟಿಕೇಟ್ ನೀಡಿದರೆ ಗೆಲುವು ಖಚಿತ ಎಂದು ತಿಳಿಸಿದರು.
ಸೋಮಶೇಖರ್ ಮಂಡಿ ಮಠ್ ಮಾತನಾಡಿದರು. ಈ ಸಂದರ್ಭದಲ್ಲಿ ಜಯಪಾಲಯ್ಯ, ಭದ್ರಣ್ಣ, ಮಂಜುನಾಥ್, ಸಿ.ಎಸ್.ಪ್ರಸಾದ್,ಭೂಲಿಂಗಪ್ಪ, ನಿವೃತ್ತ ಶಿಕ್ಷಕ ಶ್ರೀನಿವಾಸ್, ಶಿವಪುತ್ರಪ್ಪ, ರಾಮದಾಸ್, ಹಾಗೂ ಪಾವಗಡ ತಾಲೂಕಿನ ಹಾಗೂ ಚಳ್ಳಕೆರೆ ತಾಲೂಕಿನ ವಿವಿಧ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments