ವರದಕ್ಷಿಣೆ ಕಿರುಕುಳ ಬರೆ ಎಳೆದ ಗಂಡ -ತಳಕು ಠಾಣೆ ಹಾಗೂ ಮಹಿಳಾ ಸಾಂತ್ವಾನ ಕೇಂಮದ್ರದಲ್ಲಿ ದೂರು ದಾಖಲು…

by | 12/01/24 | ಕ್ರೈಂ

ಚಳ್ಳಕೆರೆ ಜ.12. ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿರಾಯನೊಬ್ಬ ಪತ್ನಿಗೆ ಬರೆ .ಗುಂಡುಪಿನ್ ನಿಂದ ಚುಚ್ಚಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಅಮಾನೀಯ ಕೃತ್ಯ ನಡೆದಿರುವ ಘಟನೆ ಬಗ್ಗೆ ತಳಕು ಪೋಲಿಸ್ ಠಾಣೆಯಲ್ಲಿ ನೊಂದ ಗೃಹಿಣಿ ಹಿಂಸೆ ನೀಡಿದ ಗಂಡನ ವಿರುದ್ದ ದೂರು ನೀಡಿದರೂ ಯಾವುದೇ ಕ್ರಮಜರುಗಿಲ್ಲ ಎಂದು ಈಗ ನೊಂದ ಮಹಿಳೆ ಮಹಿಳಾ ಸಾಂತ್ವಾನ ಸಹಾಯ ಕೇಂದ್ರಕ್ಕೆ ದೂರು ನೀಡಿದ್ದಾರೆ.


ಆಂದ್ರ ಮೂಲದ ರಾಯದುರ್ಗ ತಾಕೂಕಿನ ಗೊಲ್ಲಹಳ್ಳಿ ಗೌರಮ್ಮ28 ವರ್ಷ ವಿವಾಹವಾಗಿ ಸುಮಾರು12 ವರ್ಷ ಹಿಂದೆ ದೊಡ್ಡ ಉಳ್ಳಾರ್ತಿ ಗ್ರಾಮದ ರಾಜಣ್ಣ ಎಂಬುವರೊಂದಿಗೆ ವಿವಾಹವಾಗಿದ್ದರು. ಈಗ ದಂಪತಿಗಳಿಗೆ 10 ವರ್ಷದ ಗಂಡು.8 ವರ್ಷದ ಹೆಣ್ಣು.7 ವರ್ಷದ ಗಂಡು. ಮೂರು ಮಕ್ಕಳಿದ್ದಾರೆ. ಸುಮಾರು 7 ವರ್ಷಗಳಿಂದ ಕುಡಿದು ಬಂದು ದಿನ ನಿತ್ಯ ತವರು ಮನೆಯಿಂದ ವರದಕ್ಷಿಣೆ ತರುವಂತೆ ಹಾಗೂ ನೀನು ಸತ್ತರೆ ನಾನು ಮತ್ತೊಂದು ಮದುವೆಯಾಗುತ್ತೇನೆ ಎಂದು ಮಾನಸಿಕವಾಗಿ.ದೈಹಿಕವಾಗಿ ಕಿರುಕುಳ ನೀಡುತ್ತಾನೆ ಎಲ್ಲೆಂದರೆಲ್ಲಿ ಸೀಗರೇಟಿನಿಂದ ಸುಟ್ಟು ಬರೆ ಎಳೆದಿದ್ದಾನೆ. ಪಿನ್ನದಿಂದ ಚುಚ್ಚಿ ಗಾಯಗೊಳಿಸಿದ್ದಾನೆ ಬಲವಂತವಾಗಿ ಬಾಯಿಗೆ ವಿಷ ಕುಡಿಸಿ ಸಾಯಿಸಲು ಮುಂದಾದಗ ನಮ್ಮ ತಂದೆ ತಾಯಿವರು ಊರಿಂದ ಬಂದು ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದಾರೆ ಆಸ್ಪತ್ರೆಗೆ ತಳಕು ಪೋಲಿಸರು ಬಂದು ಮಾಹಿತಿ ಪಡೆದಿದ್ದಾರೆ ದಿನಾಂಕ 8/1/2024 ರಂದು ಗಂಡ ರಾಜಣ್ಣ. ಅತ್ತೆ ಪಾಲಕ್ಕ. ಮೈದುನ ವಿಶ್ವನಾಥ ಮೂರು ಜನರ ಮೇಲೆ ಪ್ರಕರಣ ದಾಖಲಾದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಆದರೆ ಸಂತ್ರಸ್ತರಿಗೆ ನ್ಯಾಯಕೊಡಿಸುವ ಬದಲು ಹಿಂಸೆ ನೀಡಿದವರಿಗೆ ಬೆಂಬಲ ನೀಡುತ್ತಿದ್ದಾರೆ ನನ್ನ ಮೂರು ಮಕ್ಕಳನ್ನು ನನ್ನ ಗಂಡನೊಂದಿಗೆ ಸೇರಿ ಕೆಲವರು ಗೌಪ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದಾರೆ ನಾನು ಮಕ್ಕಳಿಗಾಗಿ ಬದುಕಿಬಂದಿದ್ದೇನೆ ನನಗೆ ಮಕ್ಕಳು ಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಕೊಳ್ಳುವಂತೆ ನೊಂದ ಗೃಹಿಣಿ ಗೌರಮ್ಮ ಗಂಡ ಹಾಗೂ ಇತರರ ಮೇಲೆ ಚಳ್ಳಕೆರೆ ನಗರದ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ದೂರು ನೀಡಿದ್ದಾರೆ.

ದಾರಿ ಕಾಣದ ಯುವತಿ ಇಂದು ಗಂಡನ ಮೇಲೆ ಸೂಕ್ತ ಕ್ರಮ ಕೈಗೊಳ್ಳವಂತೆ ತಳಕು ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ನ್ಯಾಯ ಸಿಗದೆ ಇರುವುದರಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.ಮಹಿಳಾ ಸಾಂತ್ವಾನ ಕೇಂದ್ರದ ಬೋರಣ್ಣ ಮಾತನಾಡಿ ದೊಡ್ಡ ಉಳ್ಳಾರ್ತಿ ಗ್ರಾಮದ ಗೃಹಿಣಿ ಗೌರಮ್ಮ ರಕ್ಷಣೆಕೋರಿ ನಮ್ಮಲ್ಲಿ ದೂರು ನೀಡಿದ್ದಾರೆ ನಮ್ಮ ಕೇಂದ್ರದ ಮಹಿಳೆಯರು ಪರಿಶೀಲನೆ ಮಾಡಿದಾಗ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದು ಗೌಪ್ಯ ಸ್ಥಳ ಸೇರಿದಂತೆ ವಿವಿಧ ಕಡೆ ಬರೆ ಎಳೆದಿರುವುದು.ಸೀಗರೇಟಿನಿಂದ ಸುಟ್ಟಿರುವುದು ಗುಂಡುಪಿನ್ ನಿಂದ ಚುಚ್ಚಿರುವ ದೃಶ ಕಂಡು ಬಂದಿದ್ದು ಮಹಿಳ ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಸಹಾಯಕ ನಿರ್ಧೇಶಕ ಹರಿಪ್ರಸಾದ್ ಇವರಿಗೆ ಮಾಹಿತಿ ನೀಡಿದ್ದು ನೊಂದ ಮಹಿಳೆಯ ರಕ್ಷಣೆ ಹಾಗೂ ನ್ಯಾಯಕೊಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಸದಸ್ಯ ನೊಂದ ಮಹಿಳೆಗೆ ಜಿಲ್ಲಾ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page