ಚಳ್ಳಕೆರೆ ಜ.12. ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿರಾಯನೊಬ್ಬ ಪತ್ನಿಗೆ ಬರೆ .ಗುಂಡುಪಿನ್ ನಿಂದ ಚುಚ್ಚಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಅಮಾನೀಯ ಕೃತ್ಯ ನಡೆದಿರುವ ಘಟನೆ ಬಗ್ಗೆ ತಳಕು ಪೋಲಿಸ್ ಠಾಣೆಯಲ್ಲಿ ನೊಂದ ಗೃಹಿಣಿ ಹಿಂಸೆ ನೀಡಿದ ಗಂಡನ ವಿರುದ್ದ ದೂರು ನೀಡಿದರೂ ಯಾವುದೇ ಕ್ರಮಜರುಗಿಲ್ಲ ಎಂದು ಈಗ ನೊಂದ ಮಹಿಳೆ ಮಹಿಳಾ ಸಾಂತ್ವಾನ ಸಹಾಯ ಕೇಂದ್ರಕ್ಕೆ ದೂರು ನೀಡಿದ್ದಾರೆ.
ಆಂದ್ರ ಮೂಲದ ರಾಯದುರ್ಗ ತಾಕೂಕಿನ ಗೊಲ್ಲಹಳ್ಳಿ ಗೌರಮ್ಮ28 ವರ್ಷ ವಿವಾಹವಾಗಿ ಸುಮಾರು12 ವರ್ಷ ಹಿಂದೆ ದೊಡ್ಡ ಉಳ್ಳಾರ್ತಿ ಗ್ರಾಮದ ರಾಜಣ್ಣ ಎಂಬುವರೊಂದಿಗೆ ವಿವಾಹವಾಗಿದ್ದರು. ಈಗ ದಂಪತಿಗಳಿಗೆ 10 ವರ್ಷದ ಗಂಡು.8 ವರ್ಷದ ಹೆಣ್ಣು.7 ವರ್ಷದ ಗಂಡು. ಮೂರು ಮಕ್ಕಳಿದ್ದಾರೆ.
![](https://janadhwani.in/wp-content/uploads/2024/01/IMG-20240112-WA0200.jpg)
![](https://janadhwani.in/wp-content/uploads/2024/01/IMG-20240112-WA0262.jpg)
![](https://janadhwani.in/wp-content/uploads/2024/01/IMG-20240112-WA0263.jpg)
![](https://janadhwani.in/wp-content/uploads/2024/01/IMG-20240112-WA0264.jpg)
ದಾರಿ ಕಾಣದ ಯುವತಿ ಇಂದು ಗಂಡನ ಮೇಲೆ ಸೂಕ್ತ ಕ್ರಮ ಕೈಗೊಳ್ಳವಂತೆ ತಳಕು ಠಾಣೆಯಲ್ಲಿ ದೂರು ನೀಡಿದರೂ ಯಾವುದೇ ನ್ಯಾಯ ಸಿಗದೆ ಇರುವುದರಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ.ಮಹಿಳಾ ಸಾಂತ್ವಾನ ಕೇಂದ್ರದ ಬೋರಣ್ಣ ಮಾತನಾಡಿ ದೊಡ್ಡ ಉಳ್ಳಾರ್ತಿ ಗ್ರಾಮದ ಗೃಹಿಣಿ ಗೌರಮ್ಮ ರಕ್ಷಣೆಕೋರಿ ನಮ್ಮಲ್ಲಿ ದೂರು ನೀಡಿದ್ದಾರೆ ನಮ್ಮ ಕೇಂದ್ರದ ಮಹಿಳೆಯರು ಪರಿಶೀಲನೆ ಮಾಡಿದಾಗ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದು ಗೌಪ್ಯ ಸ್ಥಳ ಸೇರಿದಂತೆ ವಿವಿಧ ಕಡೆ ಬರೆ ಎಳೆದಿರುವುದು.ಸೀಗರೇಟಿನಿಂದ ಸುಟ್ಟಿರುವುದು ಗುಂಡುಪಿನ್ ನಿಂದ ಚುಚ್ಚಿರುವ ದೃಶ ಕಂಡು ಬಂದಿದ್ದು ಮಹಿಳ ಮಕ್ಕಳ ಕಲ್ಯಾಣ ಹಾಗೂ ಶಿಶು ಅಭಿವೃದ್ಧಿ ಸಹಾಯಕ ನಿರ್ಧೇಶಕ ಹರಿಪ್ರಸಾದ್ ಇವರಿಗೆ ಮಾಹಿತಿ ನೀಡಿದ್ದು ನೊಂದ ಮಹಿಳೆಯ ರಕ್ಷಣೆ ಹಾಗೂ ನ್ಯಾಯಕೊಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಸದಸ್ಯ ನೊಂದ ಮಹಿಳೆಗೆ ಜಿಲ್ಲಾ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.
0 Comments