ಹಿರಿಯೂರು ಜ.13. ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ರೈತರೊಂದಿಗೆ ಕೃಷಿ ವಿಜ್ಞಾನ ಕಾರ್ಯಕ್ರಮದಲ್ಲಿ ರೈತರನ್ನು ಕಡೆಗಣಿಸಿದೆ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಅಕ್ರೋಶ ಹೊರಹಾಕಿದ್ದಾರೆ. ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ರೈತರ ಹಿತ ರಕ್ಷಣಾ ಸಮಿತಿ. ಇಂದು ಹಿರಿಯೂರಿನಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ಇಲ್ಲದೆ ಇರುವ ರಾಜಕಾರಣಿಗಳನ್ನು ವೇದಿಕೆಯ ಮೇಲೆ ಕುಳ್ಳಿರಿಸಿ ಹಾಗೂ ರೈತರು ಮತ್ತು ರೈತ ಮಹಿಳೆಯರನ್ನು ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುತ್ತೇವೆ ಎಂದು ಹೇಳಿ ಕರೆತಂದು ಯಾವುದೇ ಸಂವಾದ ನಡೆಸದೆ ಇದು ಸರಕಾರಿ ಕಾರ್ಯಮ ನದಲು ರಾಜಕೀಯಸಭೆಯಾದಂತಾಗಿದೆ. ಕೃಷಿ ಇಲಾಖೆ ಹಾಗೂ ತಾಲೂಕು ಆಡಳಿತ ನಿರ್ಲಕ್ಷ ತೋರಿದ್ದಾರೆ
ರೈತರ ದಿನಾಚರಣೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಜಿ ಪ್ರಧಾನಿ ದಿ. ಚೌದರಿ ಚರಣಸಿಂಗ್ ಅವರ ಜಯಂತ್ಯುತ್ಸವ ದಿನವನ್ನು ರಾಷ್ಟ್ರೀಯ ರೈತ ದಿನವಾಗಿ ಆಚರಿಸುವ ಸಂದರ್ಭದಲ್ಲಿ ಕೃಷಿ ರಂಗಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸೇವೆ ಬಗ್ಗೆ ಹೊಗಳುಥತಾರೆ. ಆದರೆ ಅವರ ಯೋಜನೆಗಳನ್ನು ಜಾರಿಗೆಗಿಳಿಸುವಲ್ಲಿ ವಿಫಲವಾಗಿದ್ದು ಕೊನೆ ಪಕ್ಷದಲ್ಲಿ ಅವರ ಜನ್ಮ ದಿನಾರಣೆ ರೈತರನ್ನು ಆಹ್ವಾನ ನೀಡದೆ ನಿರ್ಲಕ್ಷತೋರುತ್ತಿದ್ದಾರೆ. ಶನಿವಾರ ನಡೆದ ಜಿಲ್ಲಾ ಉಸ್ತುವರಿ ಸಚಿವ ಡಿ ಸುಧಾಕರ್ ಅಧ್ಯಕ್ಚತೆಯಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮದ ವೇಧಿಕೆಯ ಮೇಲೆ ರೈತರ ಬದಲಾಗಿ ರಾಜಕೀಯ ಮುಂಡರಿಗೆ ವೇಧಿಕೆ ನೀಡಿದ್ದು ರೈತರಿಗೆ ಆಹ್ವಾನ ನೀಡದೆ ನಿರ್ಲಕ್ಷತೋರಿದ್ದಾರೆ ಎಂದು ತೋರಿದ್ದಾರೆ ರೈತರಿ ಮೊದಲು ಗೌರವ ಕೊಡುವುದನ್ನು ಇಲಾಖೆ ಅಧಿಕಾರಿಗಳು ಕಲಿತುಕೊಳ್ಳಬೇಕು ಎಂದು ಕಸವನಹಳ್ಳಿ ರಮೇಶ್ ಕಿಡಿ ಕಾರಿದ್ದಾರೆ.
![](https://janadhwani.in/wp-content/uploads/2024/01/Picsart_24-01-13_18-45-05-771-scaled.jpg)
0 Comments