ಹಿರಿಯೂರು ಫೆ.14 :
ತಾಲ್ಲೂಕಿನ ಹರಿಯಬ್ಬೆಯ ಕೆಪಿಟಿಸಿಎಲ್ ನಿಂದ ಹಿರಿಯೂರು ಎಸ್.ಆರ್.ಎಸ್ ರವರೆಗೆ ಬೃಹತ್ ಕಾಮಗಾರಿ ಅಡಿಯಲ್ಲಿ ಬರುವ ರೈತರ ಜಮೀನುಗಳಿಗೆ ಸೋಲಾರ್ ಕಂಪನಿಯವರು ಸೂಕ್ತಪರಿಹಾರ ನೀಡಬೇಕು ಎಂಬುದಾಗಿ ತಾಲ್ಲೂಕು ರೈತಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕೆಪಿಟಿಸಿಎಲ್ ಹರಿಯಬ್ಬೆಯಿಂದ ಹಿರಿಯೂರು ಎಸ್.ಆರ್.ಎಸ್ ರವರೆಗೆ ಬೃಹತ್ ಕಾಮಗಾರಿ ಅಡಿಯಲ್ಲಿ ಬರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲ್ಲೂಕು ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿ ಅವರು ಮಾತನಾಡಿದರು.
ನವದೆಹಲಿ ಮೂಲದ ಸೋಲಾರ್ ಕಂಪನಿಯವರು ವಿದ್ಯುತ್ ಉತ್ಪಾದಿಸಿ, ಸರ್ಕಾರಕ್ಕೆ ನೀಡುವ ಕಾಮಗಾರಿಯು ಪ್ರಗತಿಯಲ್ಲಿದ್ದು, ಇದರ ಅಡಿಯಲ್ಲಿ ಬರುವ ರೈತರಿಗೆ ಯಾವುದೇ ನೋಟೀಸ್ ನೀಡದೇ ಬೆಳೆ ಪರಿಹಾರ ಮತ್ತು ಭೂ ಪರಿಹಾರದ ಬಗ್ಗೆ ಮಾಹಿತಿ ನೀಡದೇ ರೈತರನ್ನು ಬಂಧಿಸಿ, ಕಾಮಗಾರಿ ಮಾಡಲು ಮುಂದಾಗಿರುತ್ತಾರೆ,
ತಾವುಗಳು, ಕ್ಷೇತ್ರದ ಶಾಸಕರು, ಡಿವೈಎಸ್.ಪಿ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ರೈತರೊಂದಿಗೆ ಕಳೆದ ವರ್ಷ ಅಕ್ಟೋಬರ್ 6 ರಂದು ಶಾಸಕರ ಕಚೇರಿಯಲ್ಲಿ ಪರಿಹಾರದ ಬಗ್ಗೆ ಸಭೆ ನಡೆಸುವ ಸಂದರ್ಭದಲ್ಲಿ ಸರ್ಕಾರದಿಂದ ಬೆಳೆ ಪರಿಹಾರ 19.5 ಕೋಟಿ ಮತ್ತು ಕಾರಿಡಾರ್ ಭೂ ಪರಿಹಾರವಾಗಿ 3 ಕೋಟಿ 17.5 ಲಕ್ಷ ರೂಗಳು ಬಂದಿರುತ್ತದೆ ಎಂದು ಮಾಹಿತಿ ನೀಡಿರುತ್ತೀರಿ,
ಅದಕ್ಕೆ ರೈತರು ಒಪ್ಪದೆ ನಮ್ಮ ತಾಲ್ಲೂಕಿನಲ್ಲಿ ಬೇರೆ ಬೇರೆ ಭಾಗದಲ್ಲಿ ಈಗಾಗಲೇ ಕೆಪಿಟಿಸಿಎಲ್ ನವರು ಹೆಚ್ಚಿನ ಪರಿಹಾರ ಕೊಟ್ಟಿರುತ್ತಾರೆ, ಅದೇ ರೀತಿ ಪರಿಹಾರವನ್ನು ನಮಗೂ ಕೊಡಿ ಎಂದು ರೈತರು ಒತ್ತಾಯಿಸಿದರಲ್ಲದೆ, ಫೆಬ್ರವರಿ 10 ರಂದು ಕಾಮಗಾರಿ ನಡೆಸಲು ಕೈಕೋರ್ಟ್ ಆದೇಶ ಮಾಡಿದೆ ಎಂದು ತಾವುಗಳು ಅಡ್ಡಿಪಡಿಸಬಾರದು ಎಂದು ಹೇಳಿ ರೈತರನ್ನು ಬಂಧಿಸಿ ಕಾಮಗಾರಿ ನಡೆಸಲು ಮುಂದಾಗಿರುತ್ತಾರೆ,
ಈ ಕಾಮಗಾರಿಯು ಖಾಸಗಿ ಕಂಪನಿಯವರದಾಗಿದ್ದು, ರೈತರಿಗೆ ಸೂಕ್ತ ಪರಿಹಾರ ಮತ್ತು ತಾವುಗಳು ಸೂಚಿಸಿರುವ ಪರಿಹಾರವನ್ನು ಕೊಡಿಸಿ, ಕಾಮಗಾರಿಯನ್ನು ಮುಂದುವರೆಸಬಹುದು, ಅಲ್ಲಿಯವರೆಗೂ ಕಾಮಗಾರಿಯನ್ನು ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ಗೋವಿಂದಪ್ಪ, ಕಾಂತರಾಜು, ನಿಂಗಪ್ಪ, ಶೇಖರ್, ಶಿವಣ್ಣ, ತಿಪ್ಪೇಸ್ವಾಮಿ, ಮಹಂತೇಶ್, ಪರಶುರಾಮ್, ಕೃಷ್ಣಪ್ಪ, ಚಂದ್ರಣ್ಣ, ತಿಮ್ಮಣ್ಣ, ಈರಣ್ಣ, ಬಂಡೆಪ್ಪ ಮೋಹನ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments