ಹಿರಿಯೂರು :
ತಾಲ್ಲೂಕಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ ಹಣ ತುಂಬಿ ನಾಲ್ಕು ವರ್ಷ ಕಳೆಯುತ್ತಾ ಬಂದರೂ ರೈತರಿಗೆ ಪರಿವರ್ತಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದಿಲ್ಲ, ಈ ಕುರಿತು ಇಲಾಖೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಬೆಸ್ಕಾಂ ಇಲಾಖೆ ಕಚೇರಿಯ ಮುಂಭಾಗದಲ್ಲಿ ತಾಲ್ಲೂಕು ರೈತಸಂಘದ ವತಿಯಿಂದ ಅಕ್ರಮ ಸಕ್ರಮ ಯೋಜನೆಯಲ್ಲಿ ಪರಿವರ್ತಕ ಅಳವಡಿಸುವುದು ಮತ್ತು ಇಲಾಖೆಯಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ ಮುಖಾಂತರ ಮುಖ್ಯ ಇಂಜಿನಿಯರ್ ರವರಿಗೆ ಮನವಿಪತ್ರ ಅರ್ಪಿಸಿ ನಂತರ ಅವರು ಮಾತನಾಡಿದರು.
ಕಳೆದ ವರ್ಷ 2023ರಲ್ಲಿ 24 ಕೋಟಿ ಈ ಯೋಜನೆಗೆ ಬಂದಿದ್ದ ಹಣವನ್ನು ಹೊಸ ಸರ್ಕಾರ ಬಂದಾಗ ವಾಪಸ್ ಕೊಡಲಾಗಿತ್ತು, ಈಗ ಈ ಯೋಜನೆಗೆ ಸುಮಾರು 50 ಕೋಟಿ ಅಂದಾಜಿಸಲಾಗಿದೆ ಅಷ್ಟು ಹಣವನ್ನು ಬಿಡುಗಡೆ ಮಾಡಿ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟು ಇನ್ನು ಎರಡು ತಿಂಗಳ ಒಳಗಾಗಿ ಎಲ್ಲಾ ರೈತರಿಗೂ ಪರಿವರ್ತಕವನ್ನು ಅಳವಡಿಸಬೇಕು ಎಂದರಲ್ಲದೆ,
ಅಕ್ರಮ ಸಕ್ರಮ ಯೋಜನೆಯಲ್ಲಿ ಸುಮಾರು 71 ಕಾಮಗಾರಿಗಳಿಗೆ ಕಾರ್ಯಾಧೀಶ ನೀಡದೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ನಿಯಮಾನುಸರ ಶಿಸ್ತು ಕ್ರಮ ಕೈಗೊಳ್ಳಬೇಕು ಅಕ್ರಮ ಸಕ್ರಮ ಯೋಜನೆಯೆಲ್ಲಿ ಹಣ ತುಂಬುವುದನ್ನು ನಿಲ್ಲಿಸಿರುವುದನ್ನು ಸರ್ಕಾರ ಕೂಡಲೇ ಪುನಹ ಕಟ್ಟಿ ಸಕ್ರಮಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದರು.
ತ್ರೀ ಫೇಸ್ ವಿದ್ಯುತ್ ಸರಬರಾಜಿನಲ್ಲಿ ತುಂಬಾ ಕಳಪೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ದಿನಕ್ಕೆ 7 ಗಂಟೆ ಸರಾಸರಿ ವಿದ್ಯುತ್ ಪೂರೈಸಬೇಕು. ಪರಿವರ್ತಕಗಳು ಸುಟ್ಟುಹೋದಲ್ಲಿ 74 ಗಂಟೆಯಲ್ಲಿ ಟಿಸಿ ಒದಗಿಸಬೇಕು ಮತ್ತು ನಮ್ಮ ಇಲಾಖೆಯ ವಾಹನದಲ್ಲಿ ರೈತರ ಜಮೀನಿಗೆ ಸಾಗಿಸಬೇಕು ಮತ್ತು ಗುಣಮಟ್ಟ ಪರಿವರ್ತಗಳನ್ನು ಕೊಡಬೇಕು.
ಮಾರ್ಡನ್ ವಿಲೇಜ್ ಕಾಮಗಾರಿಯಲ್ಲಿ ಬಾರಿ ಹಗರಣ ನಡೆದಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸುತ್ತ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದಾಗಿ ತಾಲ್ಲೂಕಿನ ರೈತರ ಪರವಾಗಿ ಅವರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯಪಾಲಕ ಅಭಿಯಂತರರಾದ ಡಿ.ರಾಮಚಂದ್ರ ಈಗ ಅಕ್ರಮ ಸಕ್ರಮ ಯೋಜನೆಯ ಹಣ ಮುಂಜೂರ್ ಆಗಿದೆ, ಹಂತಹಂತವಾಗಿ ಮೂರು ತಿಂಗಳ ಒಳಗಾಗಿ ಎಲ್ಲಾ ಕೆಲಸಗಳನ್ನು ಮುಗಿಸುವ ಪ್ರಯತ್ನ ಮಾಡುತ್ತೇವೆ ಮುಂದಿನ ವಾರ ಮುಖ್ಯ ಇಂಜಿನಿಯರ್ ಅವರನ್ನು ಕರೆಸಿ ಸಭೆ ನಡೆಸೋಣ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ರೈತಮುಖಂಡರುಗಳಾದ ಆಲೂರು ಸಿದ್ದರಾಮಣ್ಣ, ಬಿ.ರಂಗಸ್ವಾಮಿ, ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ ಬಬ್ಬೂರ್ ಫಾರಂ, ಶಿವಣ್ಣ, ರಂಗಜ್ಜ, ಮೀಸೆ ರಾಮಣ್ಣ, ಗೌಡಪ್ಪ, ಮಂಜುನಾಥ್, ರಾಮಕೃಷ್ಣ, ಶಿವಣ್ಣ, ಜಗನ್ನಾಥ್, ಕೆಂಚಪ್ಪ, ತಿಮ್ಮಯ್ಯ, ತಿಪ್ಪೇಸ್ವಾಮಿ, ವಿರುಪಾಕ್ಷಿ, ಮೆಹಬೂಬ್, ನಾಗರಾಜಪ್ಪ, ಮಾಂತೇಶ ಬಗ್ಗನಾಡು, ಕಾಂತರಾಜ್, ಬಾಲು, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments