ಚಳ್ಳಕೆರೆ: ಇಂದಿನ ದಿನಮಾನಗಳಲ್ಲಿ ರಾಜಕೀಯ ಪಕ್ಷಗಳ ರಾಜಕೀಯ ಪ್ರೇರಿತ ದೊಂಬರಾಟಗಳಿಂದಾಗಿ ಜಾತಿ ಧರ್ಮಗಳ ನಡುವೆ ಕಂದಕ ಹೆಚ್ಚಾಗುತ್ತಿದ್ದು ಇಂತಹ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದತೆಯನ್ನು ಮುನ್ನಡೆಗೆ ತರಲು ಎಲ್ಲಾ ಕ್ಷೇತ್ರಗಳ ಮಾನವೀಯತೆ ಮನಸ್ಸುಗಳು ಮುಂದಾಗಬೇಕಿದೆ ಎಂದು ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ ತಿಪ್ಪೇಸ್ವಾಮಿ ಕರೆ ನೀಡಿದರು.
ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆಯ ಅಂಗವಾಗಿ ಸೌಹಾರ್ದತೆಗಾಗಿ ಕೈಜೋಡಿಸೋಣ ಎಂಬ ಕಾರ್ಯಕ್ರಮದ ಸಲುವಾಗಿ ನಗರದ ಎಪಿಎಂಸಿ ಮಾರುಕಟ್ಟೆಯಿಂದ ಮೆರವಣಿಗೆಯಲ್ಲಿ ಸಾಗಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಭಾರತ ದೇಶ ಸೌಹಾರ್ದ ಪರಂಪರೆಯಿಂದ ಬಹು ಸಂಸ್ಕೃತಿ ಬಹು ಭಾಷೆ ಮತ್ತು ಬಹು ಧರ್ಮಗಳ ಜನರು ಪರಸ್ಪರ ಸೌಹಾರ್ದದಿಂದ ಬದುಕುತ್ತಾ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಬದ್ಧತೆಯಿಂದ ಅನೇಕ ಸಾಧಕರು ಶ್ರಮಿಸಿದ್ದಾರೆ ಆದರೆ ಇತ್ತೀಚಿನ ಕೆಲವು ಅಹಿತಕರ ಘಟನೆಗಳು ನಮ್ಮ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುತ್ತೇವೆ ದೇಶದ ದಾಹವನ್ನು ಹೆಚ್ಚಿಸುತ್ತೇವೆ ಮಾನವೀಯ ಮೌಲ್ಯಗಳನ್ನು ಮಣ್ಣು ಮಾಡುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಜನಸಮುದಾಯಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ.
ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆಯ ದಿನವಾಗಿರುವ ಇಂದು ಸೌಹಾರ್ದ ಪರಂಪರೆಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ದೇಶದಲ್ಲಿ ಸೌಹಾರ್ದತೆಯ ಭಾವನೆ ಮೂಡಿಸಲು ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆ ಇದೆ ಹಾಗಾಗಿ ಸೌಹಾರ್ದತೆ ಸಾರುವ ಜೀವಪರ ಮನಸ್ಸುಗಳ ಬೆಸುಗೆಯನ್ನು ಇಲ್ಲಿಂದಲೇ ಆರಂಭಿಸಬೇಕೆಂದು ಮಹಾತ್ಮ ಗಾಂಧಿಯವರ ಹುತಾತ್ಮ ದಿನದಂದು ಎಲ್ಲಾ ವರ್ಗದ ಜಾತಿ,ಧರ್ಮದ ದ್ವೇಷವನ್ನು ಮರೆತು ಮನುಷ್ಯರಾಗಿ ಬಾಳಬೇಕೆಂದು ಸೌಹಾರ್ದತೆಯ ಕರ್ನಾಟಕಕ್ಕಾಗಿ ಮಾನವ ಸರಪಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ ನಿಂಗಣ್ಣ ಖಜಾಂಚಿ ಹೆಚ್ಚು ನಾಗರಾಜ್ ಬೋರಯ್ಯ ನಾಗರಾಜ್ ಎಸ್ ರಾಜಣ್ಣ ಎಸ್ ಶಿವಣ್ಣ ಪ್ರಭು ಓಬಯ್ಯ ಇಂದಿರಮ್ಮ ಗೌರಮ್ಮ ಗಂಗಮ್ಮ ಪುಟ್ಟಮ್ಮ ಕರಿಬಸಮ್ಮ ನಾಗರಾಜ್ ಸತೀಶ್ ಚನ್ನಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments