ರಸ್ತೆ,ಚರಂಡಿ, ನಗರಭೆ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಗರಭೆ ಬೊಕ್ಕಸಕ್ಕೆ ನಷ್ಟವಾದರೂ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ ಹಿರಿಯ ನಾಗರೀಕರ ಅಕ್ರೋಶ….!

by | 02/01/24 | ಜನಧ್ವನಿ


ಚಳ್ಳಕೆರೆ ಜನಧ್ವನಿ ವಾರ್ತೆ ಜ.2. ನಗರದ ಗಲ್ಲಿ ರಸ್ತೆಗಳು ,ಚರಂಡಿಗಳು ಹಾಗೂ ನರಸಭೆ ಖಾಲಿ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣಮಾಡಿಕೊಂಡರೂ ಹೇಳೋರಿಲ್ಲ ಕೇಳೋರಿಲ್ಲ ಎಂಬತಾಗಿದ್ದು ಕೂಡಲೆ ನಗರಸಭೆ ಆಸ್ತಿ ರಕ್ಷಣೆಗೆ ಅಧಿಕಾರಿಗಳು ಮುಂದಾಗುವಂತೆ ಮಾಜಿ ಪುರಸಭೆ ಅಧ್ಯಕ್ಷ ಪ್ರಭುದೇವ್ ಹೇಳಿದರು.


ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ 2024-25 ನೇ ಸಾಲಿನ ನಗರದ ನಾಗರೀಕರಿಗೆ ಆಯೋಜಿಸದ್ದ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಸುಮಾರು ಐದು ವರ್ಷಗಳ ಆಯಾ –ವ್ಯಯಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಗರದ ಬಹುತೇಕ ವಾರ್ಡ್ ಗಳಲ್ಲಿರುವ ಪಾರ್ಕ್ ಗಳ ರಕ್ಷಣೆ, ನಗರದ ನಗರದ ವಿವಿಧ ಬಡವಾಣೆಯ ಡಾಂಬರ್ ರಸ್ತೆಗಳನ್ನು ಪೈಪ್ ಲೈನ್ ಕಾಮಗಾರಿ ಹೆಸರಿನಲ್ಲಿ ಗುಂಡಿಗಳನ್ನು ತೋಡಿದ್ದು ದುಸರಸ್ಥಿ ಮಾಡದೆ ವಾಹನಗಳು ಅಪಘಾತವಾಗುತ್ತಿವೆ. ಹಾಗೂ ನಗರದ ಬಹುತೇಕ ವಾರ್ಡ್ ಗಳಲ್ಲಿನ ರಸ್ತೆ, ಚರಂಡಿ ಹಾಗೂ ನಗರಸಭೆ ಆಸ್ತಿಗಳನ್ನು ಒತ್ತುವರಿ ತೆರವುಗೊಳಿಸುವಂತೆ ಪ್ರತಿ ಆಯ-ವ್ಯಯಾ ಸಭೆಯಲ್ಲಿ ಸಲಹೆ ನೀಡಿದ್ದರೂ ಸಹ ಅವುಗಳನ್ನು ಕಾರ್ಯಗತ ಗೊಳಿಸಿಲ್ಲ ಇದರಿಂದ ನಗರಭೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದೆ ಎಂದರು.
ವಕೀಲ ಪಾಪಣ್ಣ ಮಾತನಾಡಿ ಪರಿಸರದ ದಿನಾಚರಣೆಯ ದಿನದಂದು ಮಾತ್ರ ಉದ್ಯಾಹ್ನವನದಲ್ಲಿ ಗಿಡಗಳನ್ನು ನೆಟ್ಟರೆ ಸಾಲದು ಯಾವ ಪಾರ್ಕ್ ಗಳಿಗೆ ತಂತಿ ಬೇಲಿ ಅಥವಾ ತಡೆಗೋಡೆ ಯಿಲ್ಲದೆ ಒತ್ತುವರಿಯಾಗುತ್ತಿವೆ. ಸುಮಾರ 30 ವರ್ಷಗಳಿಂದ ಕಂದಾಯ ಬಾಕಿ ಉಳಿಸಿ ಕೊಂಡಿರುವ ಗ್ರಾಹಕರಿಗೆ ಒ ಟಿ ಎಸ್ ಒಂದೇ ರಿಯಾತಿ ನೀಡುವ ಮೂಲಕ ಒಂದೇ ಕಂತಿನಲ್ಲಿ ಕರವಸೂಲಿ ಮಾಡಿದರೆ ನಗರಸಭೆಗೂ ಆಧಾಯ, ಗ್ರಾಹಕರಿಗೆ ಹೊರೆ ಕಡಿಮೆಯಾಗುತ್ತದೆ. ಅದೇ ರೀತಿ ನಗರದ ಸೋಮಗುದ್ದು ರಸ್ತೆಯಲ್ಲಿ ಸುಮಾರು ನೂರು ಮೀಟರ್ ರಸ್ತೆ ಒತ್ತುವರಿ ಮಾಡಿಕೊಂಡು ಅಕ್ರಮ ಮನೆಗಳನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ಇದರಕ್ಕೆ ಕಡಿವಾಣ ಹಾಕಿ ಅಂಗನವಾಡಿ ಕೇಂದ್ರಗಳು ಬಾಡಿಗೆದ ಕಟ್ಟಡದಲ್ಲಿವೆ ಅವುಗಳಿಗೆ ಕಟ್ಟಡ ನಿರ್ಮಾಣ ಹಾಗೂ ವಾಣೀಜ್ಯ ಮಳಿಗೆ ನಿರ್ಮಿಸಿದರೆ, ಒಂದು ಮನಗೆ ಎರಡು ಮೂರು ಅಕ್ರಮ ನಲ್ಲಿ ಸಂಪರ್ಕ ಪಡೆದುಕೊಂಡು ಮೂರು ಮಹಡಿ ಮನೆಗಳನ್ನು ನಿರ್ಮಿಸಿಕೊಂಡ ನಗರಸಭೆಗೆ ತೆರಿಗೆ ವಂಚನೆ ಮಾಡಿದವರೆ ಮೇಲೆ ಕಾನೂನು ಕ್ರಮ ಕೈಗೊಂಡು ವಸೂಲಿ ಮಾಡಬೇಕು ಅಧಿಕಾರಿಗಳು ನಗರಸಂಚಾರ ಮಾಡಿದರೆ ಸಮಸ್ಯೆಗಳು ತಿಳಿಯುತ್ತವೆ ಆದರೆ ಅಧಿಕಾರಿಗಳು ನಗರಸಂಚಾರ ಮಾಡುವುದನ್ನು ಕೈಬಿಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ , ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ನಗರದ ಪ್ರಮುಕ ರಸ್ತೆ, ವಾರ್ಡ್ ಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ. ವಾಹನ ನಿಲುಗಡೆ ಸ್ಥಳದ ಬೀಗ ತೆರವುಗೊಳಿಸಿ, ಪುಟ್ ಬಾತ್ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.
ನಾಗರೀಕನೊಬ್ಬ ಖಾತೆ ಮಾಡಲು ನೀಡಿ ಆರು ತಿಂಗಳು ಕಳೆದರೂ ಇನ್ನೂ ಖಾತೆ ಮಾಡಿಲ್ಲ ಇನ್ನು ಎಷ್ಟು ದಿನ ಬೇಕು ಎಂದು ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದರು.
ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಇದು ಆಯ-ವ್ಯಯ ಸಭೆ ಖಾತೆ ವಿಚಾರಲ್ಲಿ ಇಲ್ಲ ಬೇಡ ಇಷ್ಟು ದಿನ ನನ್ನ ಗಮನಕ್ಕೆಏಕೆ ತರಲಿಲ್ಲ. ಕಂದಾಯ ಅಧಿಕಾರಿಗಳು ಹಾಗೂ ಬಿಲ್ ಕಲೆಕ್ಟರ್ ಸಿಬ್ಬಂದಿ ಕೊರತೆ ಇದೆ ಸಿಬ್ಬಂದಿ ಕೊರತೆಯ ನಡುವೆಯೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಉತ್ತರಿಸಿದರು.
ಸಮಾಜ ಸೇವಕ ಹೆಚ್.ಎಸ್. ಸೈಯಾದ್ ಮಾತನಾಡಿ ಪುಟ್ ಬಾತುಗಳು ಬೀದಿ ಬದಿ ವ್ಯಾಪಾರಿಗಳಿಗೆ ರತ್ನ ಕಂಬಳಿ ಹಾಸಿಕೊಟ್ಟಂತಾಗಿದೆ ತಿಂಡಿ ತಿನಿಸು, ಪಾನಿ ಪುರಿ ಸೇರಿದಂತೆ ವಿವಿಧ ಅಂಗಡಿಗಳ ವ್ಯಾಪಾರಸ್ತರು ಹೋಟೆಲ್ ತ್ಯಾಜ್ಯ, ಮುಸಿರೆ ಸೇರಿದಂತೆ ಪ್ಯಾಸ್ಟಿಕ್ ಲೋಟ, ಕವರ್ ಗಳನ್ನು ಚರಂಡಿಗಳಲ್ಲಿ ಹಾಕುವುದರಿಂದ ಗೊಬ್ಬೆದ್ದು ನಾರುತ್ತಿದ್ದು ಪುಟ್ ಬಾತ್ ರಸ್ತೆಗಳು ಕಿತ್ತುಹೋಗಿರುವುದರಿಂದ ನಗರಸಭೆ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದೆ. ಕೂಡಲೆ ಬಳ್ಳಾರಿ ಹಾಗೂ ಪಾವಗಡ ರಸ್ತೆಗಳ ಹಗಲೀಕರ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹೇಳಿದರು.
31 ಸದಸ್ಯರಿಗೆ 5 ಸದಸ್ಯರು ಹಾಜರ್.


ಇಂದು ನಡೆಯಲಿರುವ ಆಯ-ವ್ಯಯ ಪೂರ್ವ ಭಾವಿ ಸಭೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯ ಬೇಕಿತ್ತು ಆದರೆ ಅವರೇ ಬಂದಿಲ್ಲ ಎಂದರೆ ನಾವೋ ಹೋಗೆ ಏನು ಪ್ರಯೋಜನ ಎಂಬಂತೆ ಸದಸ್ಯರಾದ ಮಲ್ಲಿಕಾರ್ಜುನ, ವೆಂಕಟೇಶ್, ತಿಪ್ಪಮ್ಮ , ನಾಗವೇಣಿ, ಮಂಜುಳಮ್ಮ ಇವರು ಮಾತ್ರ ಸಭೆಗೆ ಹಾಜರಿಯಾದರೆ ಉಳಿದ ಸದಸ್ಯರು ಗೈರು ಹಾಜರಿಯಾಗಿದ್ದರು.
ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದ ಕಾರಣ ಸುಮಾರು 8 ತಿಂಗಳಿಂದ ಜಿಲ್ಲಾಧಿಕಾರಿಯವರು ನಗರಸಭೆ ಅಧ್ಯಕ್ಷರಾಗಿದ್ದು ಇಲ್ಲಿಯವರೆಗೆ ಒಂದು ಸಭೆ ಕರೆಯದೆ ಇರುವುದು ಸದಸ್ಯರಿಗೆ ಬೇಸರ ಹಾಗೂ ನಗರದ ಅಭಿವೃದ್ಧಿಗೆ ಕುಂಠೊತವಾಗಲು ಕಾರಣವಾಗಿದ್ದು ಅಯ-ವ್ಯಯ ಸಭೆಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಸಭೆ ನಡೆಯುತ್ತಿರುವುದು ಪೌರಾಡಳಿತ ಕಾನೂನು ಉಲ್ಲಂಘನೆಯಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಆರ್.ಪ್ರಸನ್ನಕುಮಾರ್ ಹೇಳಿದರು.


ಆಯ-ವ್ಯಯ ಸಭೆಯತ್ತ ಬಾಠದ ಸಾರ್ವಜನಿಕರು.
ನಗರಸಭೆ ಅಧಿಕಾರಿಗಳು ಕಳೆದ ಒಂದು ವಾರದಿಂದ ನಗರದ ಗಲ್ಲಿ ಗಲ್ಲಿ ಹಾಗೂ ಮುಖ್ಯ ರಸ್ತೆಯಲ್ಲಿ ಧ್ವನಿ ವರ್ಧಕದ ಮೂಲಕ ಆಯ-ವ್ಯಯ ಸಭೆಗೆ ಹಾಜರಿಯಾಗಿ ನಗರದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡುವಂತೆ ವ್ಯಾಪಕ ಪ್ರಚಾರ ಮಾಡಿದರೂ ಸಹ ನಿಗಧಿತ ಸಮಯದಕ್ಕೆ ಜನರು ಸಭೆ ಬಾರದೆ ಇರುವುದರಿಂದ ಒಂದು ಗಂಟೆ ನಂತರ ಕೆಲವೇ ಜನರು ಮಾತ್ರ ಬಂದಿದ್ದು ಖಾಲಿ ಖಾಲಿ ಇರುವ ಖುರ್ಚಿಗಳ ಬರ್ತಿಗೆ ಕಚೇರಿಯಲ್ಲಿನ ಎಲ್ಲಾ ಸಿಬ್ಬಂದಿಗಳನ್ನು ಸಾರ್ವಜನಿಕರ ಜಾಗದಲ್ಲಿ ಕೂರಿಸಿ ಖುರ್ಚಿಗಳನ್ನು ಬರ್ತಿ ಮಾಡಿದರು.


ಪೌರಾಯುಕ್ತರು ಹಾಗೂ ವ್ಯಪವಸ್ಥಾಪಕರು ದೂರವಾಣಿ ಮೂಲಕ ಸಭೆಗೆ ಬರುವಂತೆ ಸದಸ್ಯರಿಗೆ ಕರೆ ಮಾಡುತ್ತಿರುವ ದೃಶ್ಯ ಕಂಡು ಬಂತು.
ಸಭೆಯಲ್ಲಿ ಗಂಗಾಧರಪ್ಪ, ಭದ್ರಿ ,ಪೆನ್ನೇಶ್ ಸೇರಿದಂತೆ ವಿವಿಧ ಗ್ರಾಹಕರು ಸಲಹೆ ಸೂಚನೆಗಳನ್ನು ನೀಡಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page