ಯಾವುದೋ ವಾಹನ ಡಿಕ್ಕಿ, ವ್ಯಕ್ತಿ ಸಾವು:

by | 06/02/23 | ಅಪಘಾತ

ಚಳ್ಳಕೆರೆ, ಫೆಬ್ರವರಿ 06 : ಚಳ್ಳಕೆರೆ ತಾಲ್ಲೂಕು ಭರಮಸಾಗರ ಗ್ರಾಮದ ಕೆರೆ ಏರಿಯ ರಸ್ತೆಯಲ್ಲಿ
ದಿನಾಂಕ:06.02.2023 ರಂದು ಬೆಳಗಿನ ಜಾವ ಸುಮಾರು 05 ಗಂಟೆ ಸಮಯದಲ್ಲಿ ಯಾವುದೋ
ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಹೋಗಿ
ಮುಂದೆ ರಸ್ತೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದ ಚಳ್ಳಕೆರೆ ತಾಲ್ಲೂಕು ರಂಗವ್ವನಹಳ್ಳಿ ಗ್ರಾಮದ
ಸಣ್ಣರಂಗಪ್ಪ 70 ವರ್ಷ ವಯಸ್ಸು ಇವರಿಗೆ ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹೋದ
ಪರಿಣಾಮ ಇವರಿಗೆ ಪೆಟ್ಟು ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಬಗ್ಗೆ
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *