ಚಳ್ಳಕೆರೆ ಜನಧ್ವನಿ ವಾರ್ತೆ ಮಾ.8. ವಿಧಾನಸಭಾ ಮತಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಮೂರನೇವಬಾರಿಗೆ ಮತದಾರರು ಶಾಸಕ ಟಿ.ರಘುಮೂರ್ತಿಯವರಿಗೆ ಆಶೀರ್ವದಿಸಿ ಗೆಲುವು ನೀಡಲಿದ್ದಾರೆ ಎಂದು ಮಾಜಿ ತಾಪಂ ಅಧ್ಯಕ್ಷ ಜಿ.ವೀರೇಶ್ ಹೇಳಿದ್ದಾರೆ. ಇನ್ನು ಕೆಲವೇದಿನಗಳು ವಿಧಾನ ಸಭೆ ಚುನಾವಣೆ ಬಾಕಿ ಇದ್ದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಸೋಲಿನ ಬೀತಿಯಿಂದ ಪಕ್ಷ ಸೇರ್ಪಡೆ ಹೆಸರಿನಲ್ಲಿ ಹಬ್ಬರ ತೋರಿಸಿತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಇನ್ನು ಯಾರಿಗೆ ಟಿಕೇಟ್ ಎಂಬ ಗೊಂದಲದಲ್ಲಿ ಕಾರ್ಯಕರ್ತರು ಯಾರಿಗೆ ಬೆಂಬಲ ನೀಡ ಬೇಕು ಎಂದು ಕಾರ್ಯಕರ್ಯರನ್ನು ವಿಂಗಡನೆಯಾಗಿದ್ದಾರೆ. ಜೆಡಿಎಸ್ .ಬಿಜೆಪಿ ಪಕ್ಷದವರು ಸೇರ್ಪಡೆ ಹೆಸರಿನಲ್ಲ ಹಬ್ಬರ ಹಾಗೂ ಮಹಿಳೆಯರನ್ನು ಪುಣ್ಯ ಕ್ಷೇತ್ರಗಳಿಗೆ ಉಚಿತ ಪ್ರವಾಸ ಕಳಿಸುತ್ತಿದ್ದಾರೆ
ಕ್ಷೆತ್ರದಲ್ಲಿ ಎಂದೂ ಅಭಿವೃದ್ಧಿ ಜಾಣದೆ ಇರುವುದು ಶಾಸಕ ಟಿ.ರಘುಮೂರ್ತಿಯವರು ಹತ್ತು ವರ್ಗಗಳ ಅವಧಿಯಲ್ಲಿ ರಸ್ತೆ
ಸಾರಿಗೆ.ಶಿಕ್ಷಣ.ಕುಡಿಯುವ ನೀರು. ವಸತಿ ಶಾಲೆ ಸರಕಾರಿ ಶಾಲಾ ಕಾಲೇಜು ಕಟ್ಟಡಗಳ ಅಭಿವೃದ್ಧಿ. ಸಮುದಾಯ ಭವನ ಸೇರಿದಂತೆ ಸಾಕಷ್ಟು ಅಭಿವೃದ್ಧಿಮಾಡಿರುವುದರಿಂದ ಹಾಗೂ ಇವರ ಅಧಿಕಾರ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ .ಬಡವರ.ಶೋಷಿತ ತಳ ಸಮುದಾಯದವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದಾರೆ ಕೋವಿಡ್ ಸಂದರ್ಭದಲ್ಲಿ ಅವರು ಮನೆ ಸೇರದೆ ಕ್ಷೇತ್ರದಲ್ಲಿ ಪ್ರವಾಸ ಕೈಕೊಂಡು ಆಹಾರ ಕಿಟ್. ಆಕ್ಸೀಜನ್ . ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದಾರೆ. ಕ್ಷತ್ರವನ್ನು ಅಭಿವೃದ್ಧಿಪಡಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಿರುವುದರಿಂದ ಈ ಬಾರಿಯೂ ಶಾಸಕ ಟಿ.ರಘುಮೂರ್ತಿ ಯ್ಯಾಟ್ರಿಕ್ ಗೆಲವು ಸಾಧಿಸಲಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಟಿ.ರಘುಮೂರ್ತಿ ಸಚಿವರಾಗುವುದು ಖಚಿತ ಶತಸಿಧ್ಧ ಎಂದು ಮಾಜಿ ತಾಪಂ ಅಧ್ಯಕ್ಷ ಜಿ.ವೀರೇಶ್ ಹೇಳಿದ್ದಾರೆ.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...
0 Comments