ಮಾತೆಂದರೆ-ಇದು

ಜನರನ್ನು ಕಚೇರಿಗೆ ಅಲೆದಾಡಿಸದೆ ನಿಗಧಿತ ಅವದಿಯೊಳಗೆ ಇ-ಸ್ವತ್ತು ನೀಡುವಂತೆ ಪೌರಯುಕ್ತ ಜಗರೆಡ್ಡಿ

filter: 0; fileterIntensity: 0.0; filterMask: 0; module: photo;
hw-remosaic: false;
touch: (-1.0, -1.0);
sceneMode: 2;
cct_value: 0;
AI_Scene: (0, 2);
aec_lux: 296.18164;
aec_lux_index: 0;
albedo: ;
confidence: ;
motionLevel: -1;
weatherinfo: null;
temperature: 36;

ಚಳ್ಳಕೆರೆ ಆ.15 ನಿವೇಶನ, ಮನೆಯ ಇ- ಸ್ವತ್ತು ಮಾಡಿಕೊಡಲು ಕಚೇರಿ ಸುಬ್ಬಗಳು ಹಣ ಕೇಳುವ ದೂರುಗಳು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಜಗರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಕಚೇರಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರನ್ನು ಅನಾಗತ್ಯವಾಗಿ ಅಲೆದಾಡಿಸುವುದು ನಿಗಧಿತ ಸವದಿಯಿಳಗೆ ಇ-ಸ್ವತ್ತು ಖಾತೆ ವಿಳಂಬ ದಾಖಲೆಗಳಿಲ್ಲ ಎಂದು ಅಲೆದಾಡಿಸುವುದು .ಹಣಕ್ಕೆ ಬೇಡಿಕೆ ಇಡುವುದು ಕಂಡು ಬಂದರೆ ಅಂತಹ ಸಿಬ್ಬದಿಯನ್ನು ಅಮಾನತು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಪಾರಸ್ ಮಾಡಲಾಗುವುದು ಎಂದರು.
ಜನರಿಗೆ ಸೇರಿದ ಆಸ್ತಿ ದಾಖಲೆಗಳನ್ನು ನೀಡಲು ಸತಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಯಾರೇ ಲಂಚ ಕೇಳಿದರೂ ಅವರನ್ನೇ ಹೊಣೆ ಮಾಡಲಾಗುವುದು.
ಕೆಲವರು ಕಷ್ಟ ಸುಖಕ್ಕೆ ಮಾರಾಟ. ಸಾಲ ಸೌಲಭ್ಯ ಪಡೆಯಲು ಇ-ಸ್ವತ್ತು ಖಾತೆ ಅಗತ್ಯವಿರುತ್ತದೆ ವಿಳಂಭ ಮಾಡದೆ ಆಸ್ತಿ ಮಾಲಿಕರನ್ನು ಅಲೆದಾಡಿಸದೆ ನಿಗಧಿತ ಅವದಿಯೊಳಗೆ ಇ-ಸ್ವತ್ತು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಪೌರಾಯುಕ್ತ ಜಗರೆಡ್ಡಿ ತಿಳಿಸಿದ್ದಾರೆ.

ಪಾದಯಾತ್ರೆಗಳು- ಜನಾಂಧೋಲನಗಳೆಂಬ ಡ್ರಾಮಾಗಳ ಸಂತೆಗಳ ನಡುವೆ ನಿಂತು…….

ಪಾದಯಾತ್ರೆಗಳು- ಜನಾಂಧೋಲನಗಳೆಂಬ ಡ್ರಾಮಾಗಳ ಸಂತೆಗಳ ನಡುವೆ ನಿಂತು…….

ಕರ್ನಾಟಕದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮೈಸೂರಿನ‌ ಮುಡಾ ಹಗರಣಗಳ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ಮುಂದಾಳುಗಳೆಲ್ಲಾ ಜಿದ್ದಿಗೆ ಬಿದ್ದವರಂತೆ ಮುಗಿಬೀಳುತ್ತಾ ಇದೀಗ ಪಾದಯಾತ್ರೆಯನ್ನೂ ಹಮ್ಕಿಕೊಂಡಿದ್ದಾರೆ‌. ವಿಧಾನಸಭೆ ಅಥವಾ ಸಂಸತ್ ನ ಒಳಗೆ ಮತ್ತು ಹೊರಗೆ ಈ ತರಹದ ಪ್ರತಿಭಟನೆಗಳು, ಹೋರಾಟಗಳು ಹಾಗೂ ಆಡಳಿತ ಪಕ್ಷದ ಸೋ ಕಾಲ್ಡ್ ಅಕ್ರಮಗಳ ವಿರುದ್ಧದ ವಿರೋಧ ಪಕ್ಷಗಳ ಪಾದಯಾತ್ರೆಗಳ ಜಾಥಾಗಳ ಹೋರಾಟದ ನಮೂನೆಯ‌ ರಸವತ್ತಾದ ಡ್ರಾಮಾಗಳನ್ನು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ನೋಡಿ ನೋಡಿ ಸಾಮಾನ್ಯ ಜನರಿಗೆ ಸಾಕಾಗಿ ಹೋಗಿದೆ.

ವ್ಯತ್ಯಾಸವೆಂದರೆ ಒಮ್ಮೆ‌ ಇವರ , ಮತ್ತೊಮ್ಮೆ ಅವರ ರೋಲ್ ಪ್ಲೇ ಗಳು ಬದಲಾಗುತ್ತಿರುತ್ತವೆ ಅಷ್ಟೇ ! ಇದರಿಂದ ಅವರವರ ರಾಜಕೀಯ ಇಮೇಜು ಬದಲಾಗಬಹುದೇ ವಿನಃ ಸಾಮಾನ್ಯ ಜನರಿಗೆ ಮಾತ್ರ ಪುಕ್ಕಟ್ಟೆ ಮನರಂಜನೆ, ಟೀವೀ ನ್ಯೂಸ್ ಚಾನೆಲ್ ಗಳಿಗೆ ಭರಪೂರ ಆಹಾರ ಬಿಟ್ರೆ ಇನ್ನೇನೂ ವಿಶೇಷವಾಗಿ ಸಾಧನೆಯಾಗಿರುವುದು ಇತಿಹಾಸದಲ್ಲೇ ಇಲ್ಲ.

ಈ ಎಲ್ಲಾ ರೀತಿಯ ರಾಜಕೀಯ ಹೋರಾಟದ ಪ್ರದರ್ಶನಗಳು, ಆರೋಪ- ಪ್ರತ್ಯಾರೋಪಗಳು, ವಾಕ್ಸಮರಗಳು , ಜೈಲ್ ಭರೋ ಡ್ರಾಮಾಗಳು, ಏರಿದ ದನಿಯಲ್ಲಿ ಅಬ್ಬರಿಸುವ ಮೀಡಿಯಾ ಮುಂದಿನ‌ ಆವೇಶದ ಪ್ರತಾಪಗಳು ಎಲ್ಲವೂ ನಮ್ಮ ರಾಜಕಾರಣಿಗಳಿಗೆ ಪಕ್ಷಾತೀತವಾಗಿ ನೀರು ಕುಡಿದಷ್ಟೇ ಸುಲಭ . ಹೀಗಾಗಿ ಅವರವರ ರಾಜಕೀಯ ಹಿಂಬಾಲಕರು ತಮ್ಮ ತಮ್ಮ ನಾಯಕರ ಸಚ್ಚಾರಿತ್ರ್ಯದ ಬಗೆಗೆ ಗಟ್ಟಿಯಾಗಿ ಶಂಖ ಊದುವುದನ್ನು ಬಿಟ್ಟರೆ ಅದರಲ್ಲಿ ಯಾರು ಸಚ್ಛಾ, ಯಾರು ಝೂಟಾ, ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬ‌ ಬಗ್ಗೆ ನಮ್ಮಂತಹ ಜನಸಾಮಾನ್ಯರು ತಲೆ ಕೆಡಿಸಿಕೊಳ್ಳಲು ಹೋಗಲಾರರು. ಏಕೆಂದರೆ ಒಂದೇ ಗೂಡಿನ‌ ಹಕ್ಕಿಗಳಲ್ಲಿ ಭೇಧವೆಣಿಸಬಾರದೆಂಬ ರಾಜಕೀಯ ಪ್ರಜ್ಞೆ ಕನ್ನಡಿಗನಿಗೆಂದೋ ಬಂದಾಗಿದೆ.

ರಾಜ್ಯ ವಿಧಾನಸಭೆಯ / ವಿಧಾನ ಪರಿಷತ್ತಿನ
ಹಾಗೂ ನವದೆಹಲಿಯ ಪಾರ್ಲಿಮೆಂಟ್ ಭವನದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಜನಪ್ರತಿನಿಧಿಗಳಿಗೆ , ಒಟ್ಟಾರೆಯಾಗಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಪಕ್ಷಾತೀತವಾದ ಎಲ್ಲಾ ರಾಜಕೀಯ ಮುಂದಾಳುಗಳಿಗೆ, ರಾಜಕೀಯವನ್ನೇ ಉಸಿರಾಗಿಸಿಕೊಂಡು‌ ಈ ಹಿಂದೆ ಅಧಿಕಾರ ನಡೆಸಿ ಈಗಲೂ ಚಲಾವಣೆಯಲ್ಲಿರುವ ಬಹುಪಾಲು ಪೊಲಿಟಿಷಿಯನ್ಸ್ ಗೆ ಜನಸಾಮಾನ್ಯರ ಪರವಾಗಿ ಕೆಲವು ಸಿಂಪಲ್ ಪ್ರಶ್ನೆಗಳು.‌

ಮೊದಲು ಈ‌ ಪ್ರಶ್ನೆಗಳನ್ನು ಅವರೆಲ್ಲರೂ ಪಕ್ಷಾತೀತವಾಗಿ ತಮಗೆ ತಾವೇ‌ ಹಾಕಿಕೊಂಡು ಅವುಗಳಿಗೆ ಆತ್ಮಸಾಕ್ಷಿಗನುಗುಣವಾದ ಉತ್ತರಗಳನ್ನು ಕಂಡುಕೊಂಡು ಆನಂತರ ಅಕ್ರಮ ,ಅನ್ಯಾಯ, ಹಗರಣ ಹೋರಾಟ, ಆ ಯಾತ್ರೆ ಈ ಯಾತ್ರೆ ಅಂತೆಲ್ಲಾ ಜಬರ್ದಸ್ತಾಗಿ ಇನ್ನೂ ಶತಮಾನಗಳ ಕಾಲ ಮಾಡಿಕೊಂಡು ಹೋದಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ಅರ್ಥ ಬಂದೀತು. ಆದರೆ ಹಾಗಾದೀತೇ..?

ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತದರ ನಾಯಕರಿಗೆ ನಿರ್ಭಾವುಕರಾಗಿ ಎದೆಮುಟ್ಟಿ ಪ್ರಮಾಣಿಸಿ ಕೇಳಿಕೊಳ್ಳುವಂತೆ ವಿನಂತಿಸಿ ಜಸ್ಟ್ ಆಸ್ಕಿಂಗ್ !

1. ತಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ ತಾವೆಲ್ಲರೂ ಸಂವಿಧಾನಾತ್ಮಕವಾಗಿ ಸತ್ಯ ಸಂಧರಾಗಿಯೇ ಕೆಲಸ ಮಾಡಿದ್ದೇವೆಯೇ ಹೊರತು ಈ‌ ನೆಲದ ಕಾನೂನನ್ನು ಯಾವ ಹಂತದಲ್ಲೂ ಉಲ್ಲಂಘನೆ ಮಾಡಿಲ್ಲ. ‌

2. ತಮ್ಮ ತಮ್ಮ ಜಾತಿಯವರನ್ನು ಓಲೈಸುವ ರಾಜಕಾರಣ ಎಂದಿಗೂ ಮಾಡಿಲ್ಲ, ಮಾಡಿಸಿಲ್ಲ, ಮಾಡಿಸೋದೂ ಇಲ್ಲ. ತಮ್ಮ ತಮ್ಮ ಜಾತಿ ಆಧಾರದ ಮೇಲೆ ಅಧಿಕಾರಿಗಳನ್ನು ನೇಮಕ ಅಥವಾ ವರ್ಗಾವಣೆ ಮಾಡಿಸಿಲ್ಲ ಹಾಗೂ ತಮ್ಮ ತಮ್ಮ ಜಾತಿಗಳ ಓಟು ಪಡೆಯಲು ಜಾತಿಯ ಮಠಗಳನ್ನು ಸಂಪರ್ಕಿಸಿಲ್ಲ.

3. ಯಾವೊಬ್ಬ ಒಬ್ಬ ಸರ್ಕಾರಿ ಅಧಿಕಾರಿಗೂ ಅಥವಾ ಇಲಾಖೆಗೂ ಅವರ ದಿನನಿತ್ಯದ ಕರ್ತವ್ಯದಲ್ಲಿ ಯಾವುದೇ ವಿಚಾರದಲ್ಲಿ ಪ್ರಭಾವ ಬೀರಿಲ್ಲ, ಹಸ್ತಕ್ಷೇಪ ಮಾಡಿಲ್ಲ. ಅಥವಾ ದ್ವೇಷ ದುರುದ್ದೇಶದಿಂದ ಯಾರನ್ನೂ ಎತ್ತಂಗಡಿ ಮಾಡಿಸಿಲ್ಲ. ಇಲ್ಲವೇ ಸ್ವಜನ ಪಕ್ಷಪಾತ ಮಾಡಿಲ್ಲ‌

4. ಭ್ರಷ್ಟಾಚಾರ, ಲಂಚಗುಳಿತನ, ಅಕ್ರಮ ಸಂಪಾದನೆ, ಪರ್ಸೆಂಟೇಜ್ ವ್ಯವಹಾರ, ಬೇನಾಮಿ ಆಸ್ತಿ , ವಶೀಲಿ ಬಾಜಿ- ಧಂಕಿ ರಾಜಕಾರಣ, ಪ್ರಚಾರಕ್ಕಾಗಿ ಹಪಾಹಪಿತನ,
ಸೇಡಿನ ರಾಜಕಾರಣ ಇತ್ಯಾದಿ ಮಹತ್ತರ ಸಾಧನೆಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಮಾಡಿಯೇ ಇಲ್ಲ.

5. ತಮ್ಮ ಕ್ಷೇತ್ರದ, ರಾಜ್ಯದ, ದೇಶದ ಅಭಿವೃದ್ಧಿಯಲ್ಲಿ ರಾಜಕೀಯವನ್ನು ಎಂದಿಗೂ ಬೆರೆಸಿಯೇ ಇಲ್ಲ.

6. ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಗಾಗಿ, ಎಲೆಕ್ಷನ್ ಸ್ಪರ್ಧೆಗಾಗಿ, ಮತಕ್ಕಾಗಿ, ಮಂತ್ರಿಗಿರಿಗಾಗಿ, ಪೊಗದಸ್ತಾದ ಖಾತೆಗಾಗಿ….ಆಸೆ ಪಟ್ಟಿಲ್ಲ, ಕುತಂತ್ರ ಹೆಣೆದಿಲ್ಲ, ಯಾರಿಗೂ ನಯಾಪೈಸೆ ಕಪ್ಪಕಾಣಿಕೆಗಳನ್ನೂ ಕೊಟ್ಟಿಲ್ಲ.

7. ಸಿಕ್ಕಾಪಟ್ಟೆ ಹಣದ ರಾಶಿ ತಂದುಕೊಡುವ ಸರ್ಕಾರದ ನಿಗಮಗಳು, ಇಲಾಖೆಗಳು, ಅಥವಾ ಇನ್ನಿತರ ಕಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿಯೇ ಇಲ್ಲ ಅಥವಾ ಅದು ಇಲ್ಲವೇ ಇಲ್ಲ. ಅಧಿಕಾರವನ್ನು ಸ್ವಂತಕ್ಕೆ‌, ಸ್ವಾರ್ಥಕ್ಕೆ, ಸ್ವಪಕ್ಷದವರಿಗಾಗಿ ಬಳಸಿಕೊಂಡಿಯೇ ಇಲ್ಲ.

8. ತಾವು ತಮ್ಮ ಕುಟುಂಬ, ತಮ್ಮ ಬಂಧು ಬಳಗಗಳ ಅಭಿವೃದ್ಧಿಗಾಗಿ ಎಂದಿಗೂ ಏನನ್ನೂ ನಾಮಿಯಾಗಲೀ ಬೇನಾಮಿಯಾಗಲೀ ಮಾಡಿಲ್ಲ. ಅವರೆಲ್ಲರನ್ನು ತಮ್ಮ ಅಧಿಕಾರದಿಂದ , ರಾಜಕೀಯದ ಹತ್ತಿರ ಸೇರಿಸಿಲ್ಲ. ವಂಶಾಡಳಿತವನ್ನು‌ ಬೆಂಬಲಿಸಿಲ್ಲ.

9. ಕೇಡಿಗಳನ್ನು, ರೌಡಿ ಷೀಟರ್ ಗಳನ್ನು, ಯಾವುದೇ ತರಹದ ಸಮಾಜಘಾತುಕ ಶಕ್ತಿಗಳನ್ನು ಹತ್ತಿರವೂ ಬಿಟ್ಟುಕೊಂಡಿಲ್ಲ, ಚುನಾವಣೆಯಲ್ಲಿ ಅಂಥವರ ನೆರಳನ್ನೂ ಸೋಕಿಲ್ಲ.

10.. ತಮ್ಮ ಪಕ್ಷದ ಹೈಕಮಾಂಡ್ ನ‌ ಆದೇಶ ರಾಜ್ಯದ ಹಿತಾಸಕ್ತಿ ವಿರುದ್ಧವಾಗಿದ್ದಲ್ಲಿ ಅದನ್ನು‌ ನೇರವಾಗಿ ಪ್ರತಿಭಟಿಸುವ ಎದೆಗಾರಿಕೆ ತೋರದೇ ಬಿಟ್ಟಿಲ್ಲ.

11. ತನಗೆ ಪಕ್ಷವೇ ಮುಖ್ಯ. ತನಗೆ ಅಥವಾ ತನ್ನವರಿಗೆ ಚುನಾವಣಾ ಟಿಕೆಟ್ ಅಥವಾ ರಾಜಕೀಯ ಸ್ಥಾನಮಾನ ಸಿಗದೇ ಹೋದಾಗ, ಮಂತ್ರಿಗಿರಿ‌ ಕೊಡದೇ ಹೋದಾಗ ಎಂದೂ ಅಸಮಾಧಾನದಿಂದ ಪಕ್ಷಾಂತರ ಮಾಡಿಲ್ಲ.

12. ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿದ್ದಾಂತಗಳ ಹೆಸರಲ್ಲಿ ಫ಼ೇಕ್ ನ್ಯೂಸ್ ಗಳನ್ನು ಹರಡಿಲ್ಲ. ಜಾತಿವಾದ, ಕೋಮುವಾದಕ್ಕೆ ಪ್ರಚೋದನೆ ನೀಡಿಲ್ಲ.

13. ತನ್ನ‌ ವಿರೋಧಿಗಳನ್ನು ಮಟ್ಟ ಹಾಕಲು ಆದಾಯ ತೆರಿಗೆ, ಇಡಿ. ಸಿಬಿಐ , ಸಿಐಡಿ, ಲೋಕಾಯುಕ್ತ…ಮುಂತಾದ
ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿಲ್ಲ.

14. ಚುನಾವಣಾ ಖರ್ಚಿಗಾಗಿ ದೇಣಿಗೆ ನೀಡುವ ಉದ್ಯಮಿಗಳಿಗೆ ಎಂದೂ ನಿಯಮಬಾಹಿರವಾಗಿ ಅನುಕೂಲ ಮಾಡಿಕೊಟ್ಟಿಲ್ಲ. ಅಥವಾ ತಮ್ಮ ಭ್ರಷ್ಟಾಚಾರದ ಅಕೃತ್ಯಗಳನ್ನು ಮುಚ್ಚಿಹಾಕಿಕೊಳ್ಳುವಂತಹ ಕಾನೂನನ್ನು ಮಾಡಿಯೇ‌ ಇಲ್ಲ.

14.. ತಮ್ಮ‌ ರಾಜಕೀಯ ವಿರೋಧಿಗಳ ಚಲನವಲನಗಳ ಮೇಲೆ ಕಣ್ಣಿಡುವಂತಹ ರಹಸ್ಯ ಕಾರ್ಯಾಚರಣೆಯನ್ನು ಎಂದೂ ಮಾಡಿಲ್ಲ. ವಿರೋಧಿಗಳ ವೈಯಕ್ತಿಕ ಮಾನಹಾನಿಯಾಗುವಂತಹ‌ ಅನೈತಿಕ ಕೃತ್ಯಗಳನ್ನು ಬೆಂಬಲಿಸಿಲ್ಲ.

15. ತಮ್ಮ ರಾಜಕೀಯ ವ್ಯಕ್ತಿಗತ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮಾಧ್ಯಮಗಳ ಮೇಲೆ ಪ್ರಭಾವ ಬೀರಿಲ್ಲ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವಿರೋಧಿಗಳನ್ನು ಹೆಣೆಯುವ ಟ್ರೋಲ್ ಗಳನ್ನು ಉತ್ತೇಜಿಸಿಲ್ಲ .

16. ಚುನಾಯಿತ ಸರ್ಕಾರವನ್ನು ಕೆಡವಲು ಶಾಸಕರನ್ನು ಖರೀದಿಸುವ ಆಪರೇಷನ್ ಅಥವಾ ಇನ್ನಿತರೆ ವಾಮ‌ಮಾರ್ಗಗಳನ್ನು ಅನುಸರಿಸಿಲ್ಲ.

17 .‌ ಸ್ವಜನ‌ ಪಕ್ಷಪಾತ, ಸ್ವಾರ್ಥ, ಅಧಿಕಾರ ಮದ, ಅಧಿಕಾರ ದುರುಪಯೋಗ, ಅಧಿಕಾರ ಕೇಂದ್ರೀಕರಣ ಇತ್ಯಾದಿಗಳು ತಮ್ಮಲ್ಲಿಲ್ಲವೇ‌ ಇಲ್ಲ.

18. ದೇಶದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ‌ ಮುಖ್ಯವೆಂದು ನಡೆದುಕೊಂಡಿಲ್ಲ. ಕಾನೂನುಬದ್ದ ವ್ಯಾಪ್ತಿ ಮೀರಿ , ಪ್ರಭಾವ ಬೀರಿ ತಾವಾಗಲೀ ತಮ್ಮ ಕುಟುಂಬದವರಾಗಲೀ ಅಕ್ರಮ ಆಸ್ತಿ ಸಂಪಾದಿಸಿಲ್ಲ.

19. ಕೇವಲ ಅಧಿಕಾರ, ಹಣ, ಅಂತಸ್ತಿಗಾಗಿ ರಾಜಕೀಯಕ್ಕೆ‌ ಬಂದಿಲ್ಲ ಸ್ಥಾನಮಾನ ಬೇಡಿಲ್ಲ.

20. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ‌ ಬಿತ್ತುವ ಕೆಲಸ ಮಾಡಿಲ್ಲ. ಯಾವ ಜಾತಿ ಧರ್ಮವನ್ನೂ ಓಲೈಸಿಲ್ಲ ಅಥವಾ ತುಳಿಯಲು ಪ್ರಯತ್ನಿಸಿಲ್ಲ.

ಮನದಾಳಕ್ಕೆ ಇಳಿಯಿತೇ…?

** ಮರೆಯುವ ಮುನ್ನ **

ಈ ನಾಡಿನ ಪ್ರಜ್ಞಾವಂತರೆಲ್ಲಾ ಚಳಿಬಿಟ್ಟು ನಮ್ಮ ರಾಜಕೀಯ ನಾಯಕರಿಗೆ ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಈ ಪ್ರಶ್ನೆಗಳು ಮುಗಿಯೋದೇ ಇಲ್ಲ. ಆದರೂ, ಸಧ್ಯ‌ ಇವಿಷ್ಟು ಪ್ರಶ್ನೆಗಳನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಧುರೀಣರು ತಮ್ಮ ತಮ್ಮ ಆತ್ಮ ಸಾಕ್ಷಿಗಳಿಗೆ ಕೇಳಿಕೊಂಡು, ಒಂದೊಮ್ಮೆ ಅವುಗಳಿಗೆಲ್ಲ ಉತ್ತರ ” ತಾನು ಇದಾವುದನ್ನೂ ಯೋಚಿಸಿಯೂ ಇಲ್ಲ…ಮಾಡಿಯೂ ಇಲ್ಲ ” ಎಂದಾದಲ್ಲಿ, ಈ ನಾಡಿಗೆ ಇನ್ನೂ ಭವಿಷ್ಯವಿದೆಯೆಂಬ ತುಂಬು ಭರವಸೆ ಉಳಿಸಿಕೊಂಡು, ಪ್ರಜಾಪ್ರಭುತ್ವವನ್ನೇ ನಂಬಿಕೊಂಡು‌ ಇವರ ಎಲ್ಲಾ ಹಾರಾಟ ಹೋರಾಟ ಆರೋಪ ಪ್ರತ್ಯಾರೋಪಗಳನ್ನು ನಮ್ಮ ನಮ್ಮ ಕಿವಿಗಳ ಮೇಲೆ ದಾಸವಾಳ ಇಟ್ಟುಕೊಂಡು ನೋಡುತ್ತಲೇ ಇರುತ್ತೇವೆ, ಕೇಳುತ್ತಲೇ ಇರುತ್ತೇವೆ.

ರಾಜಕೀಯ ನಾಯಕರುತಮ್ಮ ತಮ್ಮ ರಾಜಕೀಯ ಬೇಳೆ‌ ಬೇಯಿಸಿಕೊಳ್ಳಲಿಕ್ಕಾಗಿ ಎಲ್ಲಾ ಜನರನ್ನು, ಎಲ್ಲಾ ಕಾಲದಲ್ಲೂ, ಎಲ್ಲಾ ರೀತಿಯಲ್ಲೂ ಕುರಿಗಳನ್ನಾಗಿಸಲು ಸಾಧ್ಯವಿಲ್ಲವೆಂಬ ಸರಳ ಸತ್ಯವನ್ನು ಒಮ್ಮೆ ಅರ್ಥೈಸಿಕೊಂಡರೆ ಸಾಕು !!
.ಹಿರಿಯೂರು ಪ್ರಕಾಶ್ ನಿವೃತ್ತ ಬ್ಯಾಂಕ್ ಅಧಿಕಾರಿ

ಗ್ರಾಮಪಂಚಾಯಿತಿಗಳಲ್ಲಿ ಹಣ ದುರ್ಬಳಕೆ ದೂರುಗಳು ಬಂದರೆ ಪಿಡಿಓ ಅಮಾನತು -ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವಕ್ಕೂ ಕುತ್ತು .


ಚಳ್ಳಕೆರೆ ಜನಧ್ವನಿ ವಾರ್ತೆ ಆ.2 ಗ್ರಾಮಪಂಚಾಯಿತಿ ಕಚೇರಿಯಲ್ಲಿ ಹಣ ದುರ್ಬಳಕೆ ದೂರುಗಳು ಕೇಳಿ ಬಂದರೆ ಪಿಡಿಓ ಜತೆಗೆ ಅಧ್ಯಕ್ಷರ ಸದಸ್ಯತ್ವಕ್ಕೆ ಕುತ್ತು ಹಾಗೂ ಕ್ರಿಮಿನಲ್ ಮೋಕುದ್ದೆವೆ ಶಿಕ್ಷಕೆಗೆ ಗುರಿಯಾಗಬೇಕಾಗುತ್ತದೆ .
ಹೌದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ 14,15 ನೇ ಹಣಕಾಸು, ನರೇಗಾ, ವರ್ಗಾ 1 ಸೇರಿದಂತೆ ವಿವಿಧ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಾಕಷ್ಟು ಹಣದ ಹೊಳೆ ಹರಿದರೂ ಗ್ರಾಮಗಳ ಅಭಿವೃದ್ಧಿ ಮಾತ್ರ ಶೂನ್ಯ.
ನಮ್ಮಲ್ಲಿ ಬೀದಿ ದೀಪ ,ರಸ್ತೆ, ಚರಂಡಿ ಸ್ವಚ್ಚತೆ ಯಿಲ್ಲ ಎಂಬ ಸಮಸ್ಯೆಗಳ ಬಗ್ಗೆ ಶಾಸಕರ ಬಳಿ ಹಾಗೂ ಮೇಲಾಧಿಕಾರಿಗಳಿಗೆ ದೂರು ಹೊತ್ತು ಬರುವವರ ಜನರಿದ್ದಾರೆ.
ಅಕ್ರಮಗಳಿಗೆ ಸ್ಪಂದಿಸದ ಪಿಡಿಓ ಗಳ ಬಗ್ಗೆ ಅಧ್ಯಕ್ಷ ಹಾಗೂ ಸದಸ್ಯರ ದಂಡು ಅಧಿಕಾರಿಗಳ ಬಳಿ ಬಂದು ಪಿಡಿಓ ಸ್ಪಂದಿಸುತ್ತಿಲ್ಲ , ನಮ್ಮ ಮಾತು ಕೇಳುವುದಿಲ್ಲ, ಇಲ್ಲ ಸಲ್ಲದ ದೂರು ನೀಡಿ ವರ್ಗವಾಣೆ ಮಾಡುವಂತೆ ಒತ್ತಾಯ ಮಾಡುತ್ತಾರೆ, ವರ್ಗವಾಣೆ ಮಾಡದಿದ್ದರೆ ಅವರ ಮೇಲೆ ಅನುದಾನ ದುರ್ಭಳಕೆ ಅಸ್ತ್ರ ಬಳಸಿ ದೂರು ನೀಡಿ ಅಮಾನತು ಮಾಡಿಸುತ್ತಾರೆ.
ಗ್ರಾಪಂ ಕಚೇರಿಯಲ್ಲಿ ಯಾವುದೇ ಅನುದಾನದ ಹಣ ಬಳಕೆ ಬಿಲ್ ಪಾವತಿ ಮಾಡುವಾಗ ಅಧ್ಯಕ್ಷರ ಸಹಿ ಹಾಗೂ ಒಪ್ಪಿಗೆ ಇಲ್ಲದೆ ಹಣ ಬಿಡಿಗಡೆಯಾಗುವುದಿಲ್ಲ ಆದರೂ ಸಹ ಹಣ ದುರ್ಬಳಕೆ , ಕರ್ತವ್ಯ ಲೋಪದ ಅಸ್ತ್ರಕ್ಕೆ ಪಿಡಿಓ ಗಳು ಅಮಾನತು ಶಿಕ್ಷೆಗೆ ಗುರಿಯಾಗುತ್ತಿದ್ದರು. ಈ ಸರಕಾರ ಜು.30 ರಂದು ಹೊಸ ಆದೇಶ ಹೊರಡಿಸಿದ್ದು ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಓ ಗಳ ಮೇಲೆ ಹಣ ದುರ್ಬಳಕೆ ಆರೋಪದ ದೂರು ಬಂದರೆ ಅಧ್ಯಕ್ಷರ ಸದಸ್ಯತ್ವ ರದ್ದು ಹಾಗೂ ಕ್ರಿಮಿನಲ್ ಪ್ರಕಣ ದಾಖಲು ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿ ಇದು ಹೊಸದೇನಲ್ಲ ಚಳ್ಳಕೆರೆ ತಾಲೂಕಿನಲ್ಲಿ ಹಣ ದುರ್ಬಳಕೆ, ಅಧಿಕಾರ ದುರುಪಯೋಗದಡಿಯಲ್ಲಿ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ಕಳೆದುಕೊಂಡ ನಿದರ್ಶನಗಳಿವೆ. ಹಿಂದಿನಿಂದಲೂ ಇದೆ ಆದರೆ ಇದು ಗ್ರಾಪಂ ಅಧ್ಯಕ್ಷರಿಗೆ ಶಿಕ್ಷೆಯಾಗುತ್ತಿರಲಿಲ್ಲ ಈಗ ಕಡ್ಡಾಯವಾಗಿದೆ .

ಬಡ್ಡಿದರ ನಿಗಧಿ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ವೆಂಕಟೇಶ್.

ಚಿತ್ರದುರ್ಗ ಮೇ.27:
ಲೇವಾದೇವಿ ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ಬಡ್ಡಿದರ ನಿಗಧಿಪಡಿಸಿದೆ.
ಸರ್ಕಾರವು ಬಡ್ಡಿದರ ನಿಗಧಿಪಡಿಸಿರುವ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲೈಸೆನ್ಸ್ ಪಡೆದ ಲೇವಾದೇವಿ ಹಾಗೂ ಗಿರವಿದಾರರ ಅಂಗಡಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಗೆ ಸುಲಭವಾಗಿ ಕಾಣುವಂತೆ ಬಡ್ಡಿದರ ವಿಧಿಸುವ ನಾಮಫಲಕಗಳನ್ನು ನಗದು ಕೌಂಟರ್ ಹತ್ತಿರ ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ಪ್ರದರ್ಶಿಸಬೇಕು.
ಭದ್ರತೆ ಇರುವ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇ.16 ಮಾತ್ರ ವಿಧಿಸಬೇಕಾಗಿರುತ್ತದೆ. ಈ ದರಗಳಿಗಿಂತ ಮಿತಿ ಮೀರಿದ ಬಡ್ಡಿ ವಿಧಿಸಿ ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಗಿರವಿ ಲೇವಾದೇವಿ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ ಮತ್ತು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಗಿರವಿ ಲೇವಾದೇವಿ ಉಪ ನಿಬಂಧಕರು, ಚಿತ್ರದುರ್ಗ ಇವರಿಗೆ ದೂರು ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ

ರೈತರ ಖಾತೆಗೆ ಜಮೆಯಾಗುವ ಪರಿಹಾರ ಮೊತ್ತವನ್ನು ಬ್ಯಾಂಕ್‍ನವರು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ .


ಚಿತ್ರದಲ್ಲಿ ಮೇ8 ಡಿಬಿಟಿ ಮುಖಾಂತರ ರೈತರ ಖಾತೆಗೆ ಜಮೆಯಾಗುವ ಪರಿಹಾರ ಮೊತ್ತವನ್ನು ಬ್ಯಾಂಕ್‍ನವರು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರೈತರ ಸಭೆಯಲ್ಲಿ, ರೈತರು ಬೆಳೆವಿಮೆ ಪರಿಹಾರ, ಬರ ಪರಿಹಾರ, ಪಿಎಂ ಕಿಸಾನ್, ಹಾಲಿನ ಸಹಾಯಧನದ ಮೊತ್ತ, ಉದ್ಯೋಗ ಖಾತ್ರಿಯ ಕೂಲಿ ಮೊತ್ತವನ್ನು ಬ್ಯಾಂಕ್‍ನವರು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ರೈತರು, ರೈತ ಮುಖಂಡರು ದೂರಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ರೈತರ ಖಾತೆಗೆ ಜಮೆಯಾಗುವ ಪರಿಹಾರ, ಸಹಾಯಧನ ಮೊತ್ತವನ್ನು ಸರ್ಕಾರವು ನಿರ್ದಿಷ್ಟ ಉದ್ದೇಶಗಳಿಗಾಗಿ ನೀಡುತ್ತಿದ್ದು, ಈ ಮೊತ್ತವನ್ನು ಯಾವುದೇ ಬ್ಯಾಂಕುಗಳು ಸಾಲಗಳಿಗೆ ಜಮೆ ಮಾಡಿಕೊಳ್ಳದೇ ಇರಲು ಕಟ್ಟುನಿಟ್ಟಿನ ನಿರ್ದೇಶನ ನೀಡಿ ಆದೇಶಿಸಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಕ್ರಮಗನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಋಣ ತೀರಿಸುವುದು ದೊಡ್ಡ ಗುಣ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್.ರವಿಕಾಂತೇ ಗೌಡ,

ಪಾವಗಡ ಮೇ 7 ಸೇವೆ ಮಾಡುವುದು ಮನುಷ್ಯನ ಕರ್ತವ್ಯ, , ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಕಾರ್ಯಕ್ರಮಗನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಋಣ ತೀರಿಸುವುದು ದೊಡ್ಡ ಗುಣ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್.ರವಿಕಾಂತೇ ಗೌಡ, ಐ.ಪಿ.ಎಸ್ ಹೇಳಿದರು.


ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಅವರು ಭೇಟಿ ನೀಡಿ ಕಣ್ಣಿನ ಆಸ್ಪತ್ರೆ, ವಿವಿಧ ಚಿಕಿತ್ಸಾ ಆರೋಗ್ಯ ಕೇಂದ್ರ ಹಾಗೂ ಜಾನುವಾರುಗಳಿಗೆ ಮೇವು ವಿತರಣೆ ಕಾರ್ಯಮ ವೀಕ್ಷಣೆ ಮಾಡಿ ಮಾತನಾಡಿದರು.
ಕುಷ್ಠರೋಗ ನಿರ್ಮೂಲನೆ, ಕ್ಷಯರೋಗ ನಿಯಂತ್ರಣ, ಅಂಧತ್ವ ನಿಯಂತ್ರಣ, ಕಿವಿ, ಗಂಟಲು, ಮೂಗಿನ ಯೋಜನೆ ಮುಂತಾದ ಇಪ್ಪತ್ತಕ್ಕೂ ಹೆಚ್ಚಿನ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಜೊತೆಯಲ್ಲಿ ತಾವು ಮತ್ತೊಂದು ಅದ್ಭುತವಾದ ವಿಚಾರವನ್ನು ಕಂಡಿರುವುದೇನೆಂದರೆ ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒಡಿಶಾ, ಮುಂತಾದ ರಾಜ್ಯಗಳಲ್ಲಿಯೂ ಸಹ ನೆರೆ ಹಾವಳಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪೂಜ್ಯರ ನೇತೃತ್ವದಲ್ಲಿ ನಡೆಸುತ್ತಿರುವ ಪರಿಹಾರ ಯೋಜನೆಗಳು ದೇಶಕ್ಕೆ ಒಂದು ಮಾದರಿ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಹಿಂದುಳಿದ ಪ್ರದೇಶದಲ್ಲಿ ಶ್ರೀಸ್ವಾಮಿವಿವೇಕಾನಂದರ, ಶ್ರೀಶಾರದಾಶ್ರಮ ಹಾಗೂ ಸುಧಾಮೂರ್ತಿಯವರ ಟ್ರಸ್ಟ್ ಅಡಿಯಲ್ಲಿ ಬಡಮಕ್ಕಳಿಗೆ ಶಿಕ್ಷಣ ಆರೋಗ್ಯ ಸೇವೆ ನೀಡುವ ಜತೆ ಜತೆಯಲ್ಲಿ ಪ್ರಾಣಿ ಸಂಕುಲ, ಗೋ ಮಾತೆಗಳಿಗೆ ಉಚಿತ ಮೇವು ನೀರು , ಉಚಿತ ಆರೋಗ್ಯ ಸೇವೆ ಒದಗಿಸುತ್ತಿರುವುದು ವಿವೇಕಾನಂದರ ಆಶಯಗಳನ್ನು ಸಾಕಾರಮಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ.


ಇಂತಹ ಬೀಕರ ಬರಗಾಲದಲ್ಲಿ ದೇವರ ಎತ್ತುಗಳಿಗೆ ಹಾಗೂ ರೈತರ ಜಾನುವಾರುಗಳಿಗೆ ಮೇವು ಒದಗಿಸುತ್ತಿರುವುದು ಇದು ಪುಣ್ಯದ ಕೆಲಸ ಎಂದು ಶ್ರೀ ಜಪಾನಂದಸ್ವಾಮೀಜಿಯವರ ಸೇವೆಯನ್ನು ಶ್ಲಾಘೀಸಿದರು.

ಶ್ರೀ ಜಪಾನಂದಜೀ ಮಾತನಾಡಿ, ಕಳೆದ ಸುಮಾರು 30 ವರ್ಷಗಳಿಂದ ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯ ಕೇಂದ್ರ ನಿರಂತರವಾಗಿ ಜನಸೇವೆ ಸಲ್ಲಿಸುತ್ತಿದೆ. ಕಣ್ಣಿನ ಆಸ್ಪತ್ರೆ ಕೂಡ ಭವಿಷ್ಯದಲ್ಲಿ ಜನರಿಗೆ ಅನುಕೂಲವಾಗಲಿದೆ, ಬಡವರ ಪರವಾದ ಸಾಕಷ್ಟು ಕಾರ್ಯಕ್ರಮವನ್ನು ಆಶ್ರಮದ ವತಿಯಿಂದ ರೂಪಿಸಲಾಗಿದ್ದು, ಇನ್ಫೋಸಿಸ್ ಫೌಂಡೇಷನ್ ನೆರವು ಸ್ಮರಣೀಯ ಎಂದರು.


ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಐ.ಪಿ.ಎಸ್. ರೈತ ಮುಖಂಡರಾದ ಜಯಸಿಂಹರೆಡ್ಡಿ, ಹೊನ್ನಪ್ಪ, ಸುದೇಶ್ ಬಾಬು, ಎಂ.ಭಗವಂತಪ್ಪ, ರಾಮಮೂರ್ತಿ, ರಾಮನಾಥ್, ಕಮಲ್ ಬಾಬು, ಕೃಷ್ಣಮೂರ್ತಿ, ಗೋವಿಂದರಾಜು ಇತರರಿದ್ದರು.

ಮೇವಿನ ಕೊರತೆಯಿಂದ ಸಾವಿನ ಮನೆ ಕದ ತಟ್ಟುವ ಎಮ್ಮೆಗಳಿಗೆ ಮೇವು ನೀಡಿ ಅನ್ನದಾತರ ನೆರವಿಗೆ ದಾವಿಸಿದ ಸಂತ ಶ್ರೀ ಜಪಾನಂದಸ್ವಾಮೀಜಿ.


ಪಾವಗಡ ಮೇ 5 ಬೀಕರ ಬರದ ಛಾಯೆ, ಹಾಗೂ ಬಿಸಿಲಿನ ತಾಪಮಾನದಿಂದ ಜಾನುವಾರುಗಳಿಗೆ ಮೇವು ನೀರಿಲ್ಲದೆ ಸಾವಿನ ಮನೆ ಸೇರುತ್ತಿದ್ದು ರೈತರನ ಹೈನುಗಾರಿಕೆ ಮೇಲು ಕರಿನೆರಳಿನ ಛಾಯೆ ಬಿದ್ದು ಇಲ್ಲೊಬ್ಬ ಸಂತ ಜಾನುವಾರುಗಳ ನೆರವು ನೀಡಲು ಮುಂದಾಗಿದ್ದಾರೆ.
ಹೌದು ಇದು ಪಾವಗಡ ಪಾವಗಡ ಹಾಗೂ ಆಂಧ್ರಪ್ರದೇಶದ ಗಡಿಭಾಗದ ಭಕ್ತರಪಲ್ಲಿ ಗ್ರಾಮದಲ್ಲಿ ಸ್ವಲ್ಪ ನೀರು ಹಾಗೂ ಮೇವು ದೊರೆಯುತ್ತದೆ ಎಂಬ ಆಸೆಯಿಂದ ಅಲ್ಲಿಗೆ ತೆರಳಿದಾಗ ನಡೆದ ಘಟನೆ ಯೇ ಬೇರೆದಾಗಿತ್ತು ಮೆವಿಲ್ಲದೆ ಅಪೌಷ್ಠಿಕತೆಗೆ ತುತ್ತಾಗಿ ಸಂಪೂರ್ಣ ನಿತ್ರಾಣಗೊಂಡು ಶಂಕರು ಗುಳಿ ತಳಿಯ 5 ಎಮ್ಮೆಗಳು ಸಾವಿನ ಮನೆ ಸೇರಿದ್ದು ಕಂಡು ಸಂತ ಶ್ರೀ ಜಪಾನಂದಸ್ವಾಮೀಗಳು ಕಣ್ಣೀರು ಹರಿಸಿ ರೈತರ ಎಮ್ಮೆಗಳಿಗೆ ಮೇವು ಒದಗಿಸುವ ಮೂಲಕ ಮೂಕ ಪ್ರಾಣಿಗಳ ಹಸಿವು ನೀಗಿಸಿ ರೈತರ ನೆರವಿಗೆ ಮುಂದಾಗಿದ್ದಾರೆ.


ಬೀಕರ ಬರಗಾಲ ಹಾಗೂ ಬಿಸಿಲಿನ ತಾಪದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳು ಬಿಸಿಲಿನ ತಾಪಕ್ಕೆ ನೀರು ಮೇವಿಲ್ಲದೆ ಸಾಯುವ ಸ್ಥಿತಿ ತಲುಪಿದರೂ ಸಹ ಸರಕಾರಗಳು ಮಾತ್ರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಜನ ಜಾನುವಾರುಗಳ ರಕ್ಷಣೆಗೆ ಮುಂದಾಗುತ್ತಿಲ್ಲ ಚುನಾವಣೆ ಹೆಸರಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಸಹ ಕುಡಿಯುವ ನೀರು ಮೇವು ಒದಗಿಸಲು ಮುಂದಾಗುತ್ತಿಲ್ಲ ಎಂದು ಸರಕಾರಗಳ ವಿರುದ್ದ ಕಿಡಿ ಕಾರಿದ್ದಾರೆ.
ಜಪಾನಂದ ಸ್ವಾಮಿಗಳು ಶಂಕರಗಲ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಡು ಪ್ರಾಣಿಗಳಿಗೆ ಆಹಾರ ನೀರು ಇಲ್ಲದೆ ಇರುವ ಕಾರಣ ರೈತರ ಸಾಕು ಪ್ರಾಣಿಗಳ ಮೇಲೆ ಎರಗಿ ಗಾಯಗೊಳಿಸಿರುವುದು ಕಂಡು ಬಂದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ರೈತರ ನೆರವಿಗೆ ಬಾರದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
42-43 ° ಬಿಸಿಲಿನಲ್ಲಿ ಬದುಕುತ್ತಿರುವ ಈ ಬಡಪಾಯಿಗಳಿಗೆ ಪೂಜ್ಯ ಸ್ವಾಮಿ ಜಪಾನಂದರೆ ನಡೆದಾಡುವ ದೇವರು ಎಂದು ಈ ಭಾಗದ ನೂರಾರು ಗ್ರಾಮಸ್ತರ ನಂಬಿಕೆ. ಅದೇನೇರಲಿ
ಅತ್ಯಂತ ದುಬಾರಿ ಹಾಗೂ ವಿಶೇಷವಾದ “ಸುರುಟಿ” ತಳಿಯಾದ ಸುಮಾರು 50 ಎಮ್ಮೆಗಳಿಗೆ ಮರು ಜನ್ಮನೀಡಿದ ಪೂಜ್ಯ ಸ್ವಾಮಿ ಜಪಾನಂದಜಿ ಮಹಾರಾಜರು.


ಕಳೆದ ಒಂದು ವಾರದ ಹಿಂದೆ ವೃದ್ಧರಾದ ಶ್ರೀ ರಾಮಪ್ಪ ಹಾಗೂ ಶ್ರೀ ರಾಮಚಂದ್ರಪ್ಪ ಎನ್ನುವ ಬಡ ಹೈನುಗಾರರು ಸ್ವಾಮಿಜೀ ರವರಬಳಿಗೆ ಬಂದು ತಮ್ಮ ದುಃಖ ವನ್ನು ತೂಡಿಕೊಂಡರು. ಅತ್ಯಂತ ದುಬಾರಿ ಹಾಗೂ ವಿಶೇಷ ತಳಿ ಯಾದ “ಸುರುಟಿ “ಎಮ್ಮೆಗಳ ದಾರುಣ ಸ್ಥಿತಿ ಹಾಗೂ ಸುಮಾರು ಎಮ್ಮೆಗಳು ಆಹಾರವಿಲ್ಲದೆ ಪ್ರಾಣಬಿಟ್ಟಿ ರುವುದನ್ನು ವಿವರಿಸಿ ತಮಗೆ ಸಹಾಯಮಾಡದಿದ್ದರೆ ಬದುಕುಳಿದ ಎಮ್ಮಗಳು ಸಾವನನ್ನಪ್ಪುತ್ತಿದ್ದವು ಎಂದು ಕಣ್ಣೀರಾಕಿದ್ದಾರೆ .
ತಕ್ಷಣ ರೈತರ ಮನವಿಗೆ ಸ್ಪಂದಿಸಿದ ಶ್ರೀ ಜಪಾನಂದಸ್ವಾಮೀಜಿಗಲು ರೈತರ ಎಮ್ಮೆಗಳಿಗೆ ಮೇವು ನೀಡಿ ರೈತರ ಬಧುಕಿಗೆ ಆಸರೆಯಾಗಿದ್ದಾರೆ .

ಗುಡುಗು-ಸಿಡಿಲು ಆಘಾತದಿಂದ ಪಾರಾಗಲು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಲಹೆಗಳು


ಬಳ್ಳಾರಿ,ಏ.24
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಪ್ರಾಧಿಕಾರದಿಂದ ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಅವುಗಳನ್ನು ಕಡ್ಡಾಯವಾಗಿ ಪಾಲಿಸಿ, ನೈಸರ್ಗಿಕ ಅವಘಡಗಳಿಂದ ಆಗುವ ಹಾನಿಯಿಂದಾಗಿ ತಪ್ಪಿಸಿಕೊಳ್ಳಬಹುದಾಗಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚಿಸಿದೆ.
*ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಸಲಹೆ ಸೂಚನೆಗಳು:*
ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಮುಖಾಂತರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಸಂದೇಶಗಳನ್ನು ಗಮನಿಸಬೇಕು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗವುದನ್ನು ತಪ್ಪಿಸಬೇಕು. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಾದ ಮನೆಗಳು, ಕಚೇರಿಗಳು, ಅಂಗಡಿಗಳು ಮತ್ತು ಕಿಟಕಿ ಮುಚ್ಚಿರುವಂತಹ ವಾಹನಗಳಲ್ಲಿ ಆಶ್ರಯ ಪಡೆಯಬೇಕು ಎಂದು ತಿಳಿಸಿದೆ.
ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿಕೊಂಡು ಆಶ್ರಯ ಪಡೆಯಬೇಕು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರ ನೀರಿನ ಮೂಲಗಳಿಂದ ತಕ್ಷಣವೇ ದೂರವಿರುವುದು, ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು, ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು.
ಗುಡುಗು – ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡಬೇಕು ಹಾಗೂ ಮನೆಗಳಲ್ಲಿ ಇರಬೇಕು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯಬೇಕು ಹಾಗೂ ವಾಹನ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರಬೇಕು. ಮರಗಳು ಮತ್ತು ವಿದ್ಯುತ್ ಲೈನ್‍ಗಳಿಂದ ದೂರ ವಾಹನ ನಿಲುಗಡೆ ಮಾಡಬೇಕು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳಬೇಕು. ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್ ಅಥವಾ ಟೆಲಿಫೆÇೀನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ ಹಾಗೂ ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯಬೇಕು. ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರಬೇಕು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೆÇೀನ್‍ಗಳನ್ನು ಬಳಸಬಾರದು ಹಾಗೂ ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿ ಕರೆಯನ್ನು ಬಳಸಬಾರದು.
ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರಬೇಕು. ಮಕ್ಕಳು, ವಯೋವೃದ್ದರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಗಮನಹರಿಸಬೇಕು. ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ ಅವಶೇಷಗಳನ್ನು ತೆಗೆದುಹಾಕಬೇಕು.
ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು, ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಒಗೆಯಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್ ಸೈಕಲ್ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡಬಾರದು.
ಆಟದ ಮೈದಾನ, ಉದ್ಯಾನವನಗಳು, ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸಬೇಕು. ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು. ಅರಣ್ಯ ಪ್ರದೇಶದಿಂದ ಗಿಡ ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸಬೇಕು. ಮಿಂಚಿನ ಹೊಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಬೇಕು.
ಗುಡುಗು ಸಿಡಿಲಿನ ಸಮಯದಲ್ಲಿ ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗಬೇಕು. ಮಿಂಚು ಬರುವ ಸಮಯದಲ್ಲಿ ರಬ್ಬರ್ ಸೋಲ್ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರಬೇಕು.
ವಿದ್ಯುತ್ ಸಂಪರ್ಕ ಹೊಂದಿರುವಂತಹ ವಿದ್ಯುತ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್‍ಟಾಪ್, ವಿಡಿಯೋ ಗೇಮ್ ಸಾಧನಗಳು, ಮೊಬೈಲ್ ಫೆÇೀನ್, ವಾಷಿಂಗ್ ಮಷಿನ್, ಸ್ಟವ್ ಹಾಗೂ ಇತರೆ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಬಾಗಿಲುಗಳು, ಕಿಟಕಿಗಳು, ಮಂಟಪಗಳು, ಕಾಂಕ್ರೀಟ್ ನೆಲ, ಬೆಂಕಿಯ ಸ್ಥಳಗಳು, ಸ್ಟವ್‍ಗಳು, ಬಾತ್‍ಟಬ್‍ಗಳು ಅಥವಾ ಇತರೆ ವಿದ್ಯುತ್ ಉಪಕರಣಗಳಿಂದ ದೂರವಿರಬೇಕು.
*ಸಿಡಿಲು ಮತ್ತು ಮಿಂಚು ಬಡಿದಾಗ ಪಾಲಿಸಬೇಕಾದ ಪ್ರಥಮ ಚಿಕಿತ್ಸಾ ವಿಧಾನ:*
ಸಿಡಿಲು ಮತ್ತು ಮಿಂಚು ಬಡಿದ ಸಮಯದಲ್ಲಿ ಪ್ರಾಥಮಿಕವಾಗಿ 112 ಅಥವಾ 108 ಸಹಾಯವಾಣಿಗೆ ಕರೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಯು ಆಗಮಿಸುವ ಮುನ್ನವೇ ನೀಡುವ ಅಗತ್ಯ ಪ್ರಥಮ ಚಿಕಿತ್ಸೆಯಿಂದ ಸಿಡಿಲು ಮಿಂಚಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ದೇಹದಲ್ಲಿ ಯಾವುದೇ ವಿದ್ಯುತ್ ಕಣಗಳು ಸಂಚಾರವಾಗುವುದಿಲ್ಲ. ಆದ್ದರಿಂದ, ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ಮುಟ್ಟಿ ಉಪಚರಿಸುವ ವ್ಯಕ್ತಿಗೆ ಯಾವುದೇ ಅಪಾಯವಿರುವುದಿಲ್ಲ.
ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಉಸಿರಾಟ ಹಾಗೂ ಎದೆ ಬಡಿತವನ್ನು ಪರೀಕ್ಷಿಸಬೇಕು. ವ್ಯಕ್ತಿಯ ದವಡೆಗೆ ನೇರವಾಗಿ ಕುತ್ತಿಗೆಯಲ್ಲಿರುವ ರಕ್ತನಾಳವನ್ನು ಪರೀಕ್ಷಿಸುವುದರಿಂದ ಸುಲಭವಾಗಿ ನಾಡಿ ಮಿಡಿತವನ್ನು ತಿಳಿಯಬಹುದು. ವ್ಯಕ್ತಿಯಲ್ಲಿ ಉಸಿರಾಟವು ಕಂಡು ಬರದಿದ್ದಲ್ಲಿ ತಕ್ಷಣವೇ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ವ್ಯಕ್ತಿಯಲ್ಲಿ ಎದೆಬಡಿತವು ಕಂಡು ಬರದಿದ್ದಲ್ಲಿ ತಕ್ಷಣವೇ Cardiac compressions ಹಾಗೂ Cardiopulmonary Resuscitation ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು.
ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಕಣ್ಣಿನ ದೃಷ್ಟಿ, ಕಿವಿಕೇಳಿಸುವಿಕೆ ಹಾಗೂ ಮೂಳೆಗಳು ಮುರಿದಿವೆಯೇ ಎಂದು ಪರೀಕ್ಷಿಸಬೇಕು. ಇದರಿಂದ ಪಾಶ್ರ್ವವಾಯು, ಲಕ್ಷಾ ಹೊಡೆಯುವುದನ್ನು ಮತ್ತು ಅಧಿಕ ರಕ್ತಸ್ರಾವದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಬಹುದು. ಸಿಡಿಲು ಬಡಿಯುವ ಸಾಧ್ಯತೆಯು ಮುಂದುವರೆಯುವುದರ ಬಗ್ಗೆ ಈಗಾಗಲೇ ಸಿಡಿಲಿನ ಹೊಡೆತಕ್ಕೆ ಒಳಗಾಗಿರುವ ವ್ಯಕ್ತಿ ಹಾಗೂ ಅವರನ್ನು ರಕ್ಷಿಸುವವರು ಎಚ್ಚರವಹಿಸಬೇಕು. ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ಅಪಾಯಕಾರಿ ಸ್ಥಳದಲ್ಲಿದ್ದರೆ, ತಕ್ಷಣವೇ ಅವನನ್ನು ಅಥವಾ ಅವಳನ್ನು ಸೂಕ್ತ ರಕ್ಷಣಾ ಸ್ಥಳಕ್ಕೆ ಸ್ಥಳಾಂತರಿಸಬೇಕು.
ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯು ವಿವಿಧ ರೀತಿಯ ಸುಟ್ಟಗಾಯಗಳಿಂದ ಬಳಲಬಹುದು ಹಾಗೂ ಕಾಣದ ಗಾಯಗಳು, ಆಘಾತಕ್ಕೆ ಒಳಗಾಗಿರಬಹುದು. ಸಿಡಿಲು ಬಡಿದಿರುವ ವ್ಯಕ್ತಿಯಿರುವ ಸ್ಥಳಕ್ಕೆ ತಲುಪಲು ಹಾಗೂ ಸಿಡಿಲು ಬಡಿತಕ್ಕೆ ಒಳಗಾದ ವ್ಯಕ್ತಿಯ ಆರೋಗ್ಯಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು ಮತ್ತು ಸಿಡಿಲಿನ ಹೊಡೆತಕ್ಕೆ ಒಳಗಾದ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.
ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಸಲಹೆ ಸೂಚನೆಗಳನ್ನು ಪಾಲಿಸುವುದರಿಂದ ಗುಡುಗು ಹಾಗೂ ಸಿಡಿಲಿನಿಂದ ಆಗುವ ಪ್ರಾಣ ಹಾನಿ ಹಾಗೂ ಇನ್ನಿತರ ಅವಘಡಗಳಿಂದ ಪಾರಾಗಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ.

ಬಯಲು ಸೀಮೆಯ ದೇವರ ಹಸುಗಳಿಗೆ ಸರ್ಕಾರ ಪ್ರತ್ಯೇಕ ಮೇವು ಬ್ಯಾಂಕ್ ಸ್ಥಾಪಿಸಲಿ: ಶ್ರೀ ಜಪಾನಂದ ಸ್ವಾಮೀಜಿ ಅಗ್ರಹ


ಚಳ್ಳಕೆರೆ: ರಾಜ್ಯದ ಬಯಲು ಸೀಮೆ ಪ್ರದೇಶಗಳಾದ ಪಾವಗಡ ಚಿತ್ರದುರ್ಗ ಚಳ್ಳಕೆರೆ ಜಗಳೂರು ಕೂಡ್ಲಿಗಿ ಪ್ರದೇಶಗಳು ಬರಗಾಲದಿಂದ ತತ್ತರಿಸಿದ್ದು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ ಅದರಲ್ಲೂ ಬುಡಕಟ್ಟು ಸಂಸ್ಕೃತಿಯಲ್ಲಿ ದೇವರ ಹಸುಗಳನ್ನು ಲಾಲನೆ ಪಾಲನೆ ಮಾಡುತ್ತಿರುವ ಕಿಲಾರಿಗಳಿಗೆ ತಮ್ಮ ಹಸುಗಳನ್ನು ಸಲಹಲು ಮೇವಿಲ್ಲದೆ ಪರಿತಪಿಸುವಂತಾಗಿದ್ದು ಹಸುಗಳು ಜೀವನ್ಮರಣ ಸ್ಥಿತಿಗೆ ತಲುಪಿವೆ ಎಂದು ಪಾವಗಡದ ಶ್ರೀರಾಮಕೃಷ್ಣಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.


ನಗರದ ರೋಟರಿ ಬಾಲ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆದು ಸರಿಯಾದ ನಿರ್ವಹಣೆ ಮಾಡದೆ ಜೈಲಿನಲ್ಲಿ ಕೈದಿಗಳಿಗೆ ತೂಕದ ರೀತಿ ಊಟ ವಿತರಿಸುವಂತೆ ಹಸುಗಳಿಗೆ ಮೇವು ಒದಗಿಸುತ್ತಿದ್ದು ಇದರಿಂದ ಬೇಸಿಗೆಯ ಬಿಸಿಲಿನ ಬೇಗೆ ಹಾಗೂ ಹಸಿವಿನಿಂದ ಹಸುಗಳು ಸಾವನ್ನಪ್ಪುತ್ತಿವೆ ಇನ್ನು ಬುಡಕಟ್ಟು ಸಂಸ್ಕೃತಿಯಲ್ಲಿ ದೇವರ ಹಸುಗಳನ್ನು ಸಲಹುತ್ತಿರುವ ಗೋಪಾಲಕರು ಪಾವಗಡದ ತಮ್ಮ ಆಶ್ರಮದ ಬಳಿ ಬಂದು ನೋವು ತೋಡಿಕೊಳ್ಳುತ್ತಿದ್ದಾರೆ ಇಂತಹ ಸಂದಿಗ್ಧ ಪರಿಸ್ಥಿತಿ ಇದ್ದರು ಸಹ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ ಹೀಗಾಗಿ ಕಳೆದ ಜನವರಿಯಿಂದಲೂ ಚಳ್ಳಕೆರೆ ಹಾಗೂ ಕೂಡ್ಲಿಗಿ ತಾಲೂಕಿನ 40 ಹಟ್ಟಿಗಳ ದೇವರ ಹಸುಗಳಿಗೆ ಇಲ್ಲಿಯವರೆಗೆ 360 ಟನ್ ನಷ್ಟು ಮೇವನ್ನು ಸುಧಾಮೂರ್ತಿಯವರ ಮೂರ್ತಿ ಫೌಂಡೇಶನ್ ಸಹಾಯ ಹಸ್ತದ ಸಲುವಾಗಿ ಆಶ್ರಮದಿಂದ ವಿತರಿಸಲಾಗಿದೆ ಸರ್ಕಾರ ಇಂತಹ ಬೇಜವಾಬ್ದಾರಿತನದಿಂದ ಹಸುಗಳನ್ನು ಕೊಲ್ಲಲು ಹೊರಟಿದೆ ಎಂದು ಆರೋಪಿಸಿದರು.

ಪ್ರಧಾನಿಗೆ ಪತ್ರ: ಬರಗಾಲದಿಂದ ತತ್ತರಿಸಿರುವ ಬಯಲು ಸೀಮೆ ಪ್ರದೇಶಗಳ ಸ್ಥಿತಿ-ಗತಿಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ನಾನು  ಪತ್ರ ಬರೆದಿದ್ದು ಪ್ರಧಾನಮಂತ್ರಿಯ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡಲೇ ಕ್ರಮ ತೆಗೆದುಕೊಂಡಿರುವ ಬಗ್ಗೆ ಉತ್ತರ ನೀಡುವಂತೆ ತಿಳಿಸಲಾಗಿದೆ ಆದರೆ ಅಧಿಕಾರಿಗಳು ಚುನಾವಣೆಯ ನೆಪವನ್ನು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತ್ಯೇಕ ಮೆವು ಬ್ಯಾಂಕ್ ಗೆ ಒತ್ತಾಯ: ಈ ವೇಳೆ ಮಾತನಾಡಿದ ಜಪಾನಂದ ಸ್ವಾಮೀಜಿ ದೇವರ ಹಸುಗಳು ಗೋಶಾಲೆಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತ್ಯೇಕ ಮೇವು ಬ್ಯಾಂಕ್ ಸ್ಥಾಪಿಸಿ ಕಿಲಾರಿಗಳ ಜೀವನ ಮತ್ತು ಹಸುಗಳ ಜೀವ ರಕ್ಷಣೆ ಮಾಡಬೇಕಾಗಿದೆ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಿಲಾರಿ ಪಾಲಯ್ಯ ಮಾತನಾಡಿ ಸ್ವಾಮೀಜಿಯವರ ಸಹಾಯ ಹಸ್ತದಿಂದ ದೇವರ ಹಸುಗಳಿಗೆ ಮೇವು ದೊರೆಯುತ್ತಿದೆ ಈಗಾಗಲೇ ಬಿಸಿಲಿನ ತಾಪಕ್ಕೆ 40ಕ್ಕೂ ಹೆಚ್ಚು ದೇವರ ಹಸುಗಳು ಸಾವನ್ನಪ್ಪಿವೆ ಇದರಿಂದ ನಮ್ಮ ಬುಡಕಟ್ಟು ಸಂಸ್ಕೃತಿ ನಶಿಸುವಂತಾಗುತ್ತದೆ ಗೋಶಾಲೆ ಸ್ಥಾಪಿಸಿರುವುದು ನಾವು ವಾಸಿಸುತ್ತಿರುವ ಹಟ್ಟಿಗಳಿಂದ ಸುಮಾರು ಹತ್ತು ಕಿಲೋಮೀಟರ್ ನಷ್ಟು ದೂರವಿದ್ದು ನಮಗೆ ಸರ್ಕಾರ ನೀಡುತ್ತಿರುವ ಮೇವು ತರಲು ಸಾಧ್ಯವಾಗುತ್ತಿಲ್ಲ ಸ್ವಾಮೀಜಿಯವರ ಕೃಪೆಯಿಂದ ಇಂದು ದೇವರ ಹಸುಗಳಿಗೆ ಮೇವು ಒದಗಿಸಲಾಗುತ್ತಿದೆ ಈಗಲಾದರೂ ಸರ್ಕಾರ ತಮ್ಮ ಕಡೆ ಗಮನಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಸೇವಾಶ್ರಮದ ಸೇವಾಕರ್ತರಾದ ಸಿಪಿ ಮಹೇಶ್ ಸಿದ್ದೇಶ್ ಉಪನ್ಯಾಸಕ ಓಬಣ್ಣ ಸೇರಿದಂತೆ ಕಿಲಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ರೈತ ದಿನಾಚರಣೆ ರೈತರನ್ನು ಕಡೆಗಣಿರುವ ಬಗ್ಗೆ ಜಿಲ್ಲಾ ಜನಸಂಪರ್ಕಸಭೆಯಲ್ಲಿ ಅಧಿಕಾರಿಗಳ ವಿರುದ್ದು ದೂರು ನೀಡಲಾಗುವುದು ರೈತ ಮುಖಂಡ ಕೆ.ಪಿ.ಭೂತಯ್ಯ.

ಚಳ್ಳಕೆರೆ ಡಿ23 ಡಿ.23 ರಂದು ರಾಷ್ಟ್ರೀಯ ರೈತರ ದಿನಾಚರಣೆ ಮಾಡದೆ ಕೃಷಿ ಇಲಾಖೆ ಹಾಗೂ ತಾಲೂಕು ಆಡಳಿತ ನಿರ್ಲಕ್ಷ ತೋರಿದ್ದಾರೆ ಎಂದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ದಿ. ಚೌದರಿ ಚರಣಸಿಂಗ್‌ ಅವರ ಜಯಂತ್ಯುತ್ಸವ ದಿನವಾದ ಡಿ.23 ರಂದು ರಾಷ್ಟ್ರೀಯ ರೈತ ದಿನವಾಗಿ ಆಚರಿಸಲಾಗಿದೆ. ಆದರೆ ಕೃಷಿ ಇಲಾಖೆಯ ನಿರ್ಲಕ್ಷದಿಂದಾಗಿ ಡಿ.23ರಂದು ರೈತರ ದಿನಾಚರಣೆಯನ್ನು ಕಸಬಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ರೈತರನ್ನು ಆಹ್ವಾನಿಸದೆ ಕೆಲವೇ ರೈತರನ್ನು ಕರೆದು ಕಾಟಾಚಾರಕ್ಕೆ ಆಚರಣೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಟ್ಟದ ಜನಸಂಪರ್ಕ ಸಭೆಯಲ್ಲಿ ರಾಷ್ಟ್ರೀಯ ರೈತ ದಿನಾರಣೆಯ ಬಗ್ಗೆ ದೂರು ನೀಡಲಾಗುವುದು ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.

You cannot copy content of this page