ಮೊಳಕಾಲ್ಮೂರು ನ.3.ಮತ ನೀಡಿ ಅಧಿಕಾರ ನೀಡಿರುವ ಮೊಳಕಾಲ್ಮೂರು ಮತ ಕ್ಷೇತ್ರದ ಜನರ ಅಭಿವೃದ್ಧಿ ಕಡೆಗಣಿಸಿರುವ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಮತ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಇಡೀ ರಾತ್ರಿ ಧರಣಿ ನಡೆಸುತ್ತಿರುವುದು ಮತಕ್ಷೇತ್ರದ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಟೀಕಿಸಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು ಅವರ ಸರ್ಕಾರದ ವಿರುದ್ಧ ಧರಣಿ ಮಾಡಿದರೆ ಅಥವಾ ನನಗೆ ಜನತೆ ನೀಡಿದ ಅಧಿಕಾರ ನಡೆಸಲು ಬರುವುದಿಲ್ಲವೆಂದು ತನಗೆ ತಾನೇ ತನ್ನ ವಿರುದ್ಧ ಧರಣಿ ಮಾಡಿಕೊಂಡರೇ ಎನ್ನುವುದನ್ನು ಧರಣಿ ನಡೆಸಿದ ರಾಮುಲು ಮತದಾರರಿಗೆ ಸ್ಪಷ್ಟಪಡಿಸಬೇಕು ಎಂದು ಯೋಗೇಶ್ ಬಾಬು ಒತ್ತಾಯಿಸಿದ್ದಾರೆ. ಅಧಿಕಾರದ ಪೂರ್ಣವಧಿಯಲ್ಲಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸಿಎಂ ಬಳಿ ಚಕಾರ ಎತ್ತಿಲ್ಲ. ಮೊಳಕಾಲ್ಮೂರು ಅತ್ಯಂತ ಹಿಂದುಳಿದ ಮತಕ್ಷೇತ್ರವಾಗಿದ್ದರೂ, ವಿಶೇಷ ಅನುದಾನ ಕೂಡಾ ತರಲಿಲ್ಲ. ಈಗ ದಿಢೀರ್ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಹರಿಕಾರರಾಗಲು ಹಗಲು ರಾತ್ರಿ ಹೋರಾಟ ನಡೆಸಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀಗಳ ಪಾತ್ರ ಮಹತ್ವವಾಗಿದೆ. ಆದರೆ, ಶ್ರೀಗಳಿಗಿಂತ ತನ್ನದೇ ಹೋರಾಟ ಇದೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದನ್ನು ಮತದಾರರು ಗಮನಿಸುತ್ತಿದ್ದಾರೆ ಎನ್ನುವುದನ್ನ ಶ್ರೀರಾಮುಲು ಅರಿಯಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹಣದಹೊಳೆ ಹರಿಸಿದರೆ ಸಾಕು, ಅಧಿಕಾರ ಸುಲಭವಾಗಿ ಸಿಗಲಿದೆ ಎಂದು ಶ್ರೀರಾಮುಲು ತಿಳಿದಿದ್ದಾರೆ. ಈ ಸಲ ಮೊಳಕಾಲ್ಮೂರು ಮತದಾರರನ್ನು ಅಷ್ಟು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ ಎಂದು ಯೋಗೇಶ್ ಬಾಬು ಎಚ್ಚರಿಕೆ ನೀಡಿದರು.
ಪ್ರವಾಹದಿಂದ ಕೊಚ್ಚಿಹೋಗಿರುವ ತುಂಗಭದ್ರಾ ಕೆಳಹಂತದ ಕಾಲುವೆ ದುರಸ್ತಿ ಕಾರ್ಯ ಸಾಗಿದೆ. ಇಂತಹ ಸಂದರ್ಭದಲ್ಲಿ ಆಡಳಿತರೂಢ ಸರ್ಕಾರದ ಸಚಿವರಾಗಿ ಕಾಲುವೆ ಬಳಿ ಇಡೀ ರಾತ್ರಿ ಹೈಡ್ರಾಮ ನಡೆಸುತ್ತಿರುವುದು ಮುಜುಗರ ಹುಟ್ಟಿಸಿದೆ. ಅಲ್ಲದೇ ಕ್ಯಾಂಪೇನ್ ಮಾಡಿರುವುದು ನಾಚಿಗೇಡಿನ ಸಂಗತಿ ಆಗಿದೆ ಎಂದು ಹೇಳಿದರು.
ಶ್ರೀರಾಮುಲು ಮೊದಲು ಅಧಿಕಾರ ನೀಡಿದ ಮತದಾರರ ಪರ ಅಭಿವೃದ್ಧಿಗಾಗಿ ಶಪಥ ಮಾಡಲಿ. ಅವರು ಗೆದ್ದಾಗಿನಿಂದಲೂ ಮತಕ್ಷೇತ್ರದ ಜನರ ಬಗ್ಗೆ ಕಾಳಜಿವಹಿಸದ ಸಚಿವ ಶ್ರೀರಾಮುಲು ಬಳ್ಳಾರಿ ಜನರ ಬಗ್ಗೆ ಕಾಳಜಿ ತೋರಿಸುವುದನ್ನು ಮೊದಲು ಬಿಡಬೇಕು ಎಂದರು.
ಇನ್ನಾದರೂ ಮತಕ್ಷೇತ್ರದ ಜನರು ಶ್ರೀರಾಮುಲುರಂಥಹ ನಯವಂಚಕ ರಾಜಕಾರಣಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಮತಕ್ಷೇತ್ರದಲ್ಲಿ ಜನರ ಸಂಕಷ್ಟಕ್ಕೆ ಸದಾ ತಮ್ಮನ್ಬು ಒಡ್ಡಿಕೊಳ್ಳುವವರಿಗೆ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು ಮನವಿ ಮಾಡಿದ್ದಾರೆ.
ಮತಕ್ಷೇತ್ರ ಮರೆತ ಶ್ರೀರಾಮುಲು ಯಾರ ವಿರುದ್ಧ ವೇದಾವತಿ ತಟದಲ್ಲಿ ಹೋರಾಟ ಮಾಡಿದರು-ಯೋಗೇಶ್ ಬಾಬು ಪ್ರಶ್ನೆ…
ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ
0 Comments