ಬೈಕ್ ಅಪಘಾತಲ್ಲಿ ಇಬ್ಬರು ಸಹೋದರೂ ಮೃತಪಟ್ಟ ಘಟನೆ ಕುದಾಪುರ ಗೇಟ್ ಬಳಿ ನಡದಿದೆ.

by | 01/12/22 | ಅಪಘಾತ

ಚಳ್ಳಕೆರೆ.
ಶ್ರೀಗುರು ತಿಪ್ಪೇರುದ್ರಸ್ವಾಮಿ ತೆಪ್ಪೋತ್ಸವ ಕಣ್ಣು ತುಂಬಿಸಿಕೊಳ್ಳಲು ಹೊರಟ ಯುವಕರು ದಾರಿ ಮಧ್ಯೆಯೇ ಬಾರದ ಲೋಕಕ್ಕೆ ತೆರಳಿದ ಘಟನೆ ನಡೆದಿದೆ.
ತಾಲೂಕಿನ ಕುದಾಪುರ ಗೇಟ್ ಬಳಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರುಯುವಕರು ಸ್ಥಳದಲ್ಲೇ ಮೃತಪಟ್ಟರೆ ಮೊತ್ತೊಬ್ಬ ಯುವಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದು ತಿಳಿದು ಬಂದಿದೆ.
ತಾಲೂಕಿನ ಬುಡ್ನಹಟ್ಟಿ ಗ್ರಾಪಂ ವಾಪ್ತಿಯ ಬೋರಪ್ಪನಹಟ್ಟಿ ಗ್ರಾಮದ ಬುಡ್ನಹಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಚಿನ್ನಯ್ಯ ಇವರ ಇಬ್ಬರು ಪುತ್ರರಾದ ಪ್ರಕಾಶ (೨೦),ಅಶೋಕ (೧೮)ಸ್ಥಳದಲ್ಲೇ ಮೃತ ಪಟ್ಟರೆ ಚಿನ್ನಯ್ಯನ ಸಮ್ಮಿಂದಿ ಪಾಲಯ್ಯನ ಮಗನಾದ ಪ್ರದೀಪ (೧೯)ಗಂಬೀರ ಗಾಯಗೊಂಡ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಚಿನ್ನಯ್ಯನಿಗೆ ಇಬ್ಬರು ಗಂಡು ಮಕ್ಕಳು ಮಾತ್ರ ಇದ್ದು ಇಬ್ಬರೂ ಮಕ್ಕಳು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಈ ಘಟನೆ ನಾಯಕನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *