ಚಳ್ಳಕೆರೆ ಜನಧ್ವನಿವಾರ್ತೆ ಫೆ.22.
ಬೆಳೆ ಪರಿಹಾರ ವಿತರಣೆಯಲ್ಲಿ ಬಾರಿ ಮೊತ್ತದ ಹಣ ದುರುಪಯೋಗವಾಗಿರುವ ಬಗ್ಗೆ ಆರೋಪುಗಳು ಕೇಳಿ ಬರುತ್ತಿದ್ದು ಕೂಡಲೆ ತನಿಖೆ ನಡಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿAದ ತಾಲೂಕು ಕಚೇರಿಗೆ ಮನವಿ ನೀಡಲಾಗಿದೆ.
![](https://janadhwani.in/wp-content/uploads/2023/02/D22-CLKP1-1024x768.jpg)
ಚಳ್ಳಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅಕಾಲಿಕ ಮಳೆಗೆ ಹಾಗೂ ಅತಿವೃಷ್ಠಿ-ಅನಾವೃಷ್ಠಿಗೆ ಸಿಲುಕು ಬೆಳೆಗಳು ನಷ್ಟವಾಗಿ ರೈತರು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡರ ಕಂದಾಯ ಇಲಾಖಲೆಯ ಅಧಿಕಾರಿಗಳು ಯಾರದೋ ಜಮೀನಿಗೆ ಇನ್ಯಾರದೋ ಖಾತೆಯ ಹೆಸರಿಗೆ ಬೆಳೆ ಪರಿಹಾರ ತಂತ್ರಾAಶದಲ್ಲಿ ನೋಂದಣೆ ಮಾಡಿದ್ದಾರೆ.
ಈಲ್ಲೆಯ ಚಳ್ಳಕೆರೆ ತಾಲೂಕಿಗೆ ಸುಮಾರು ೮೬.೭೬ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ಅರ್ಹ ರೈತರ ಖಾತೆ ಜಮೆ ಮಾಡಿದೆ ಬೇರೋಬ್ಬರ ಖಾತೆಗೆ ಜಮೆ ಮಾಡಿರುವುದು ಬೆಳಕಿಗೆ ಬಂದಿದ್ದು ಇದರಿಂದ ಅರ್ಹ ರೈತರು ಬೆಳೆ ವಿಮೆ ವಂಚನೆ ಯಾಗುವ ಜತೆಗೆ ಸರಕಾರದ ಬೊಕ್ಕಸಕ್ಕೂ ನಷ್ಟವನ್ನುಂಟು ಮಾಡಿದ್ದು ಲೋಕಾಯುಕ್ತ ಇಲಾಖೆಗೆ ವಹಿಸಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಕೊಳ್ಳುವಂತೆ ಕರ್ನಾಟ ಕಾರ್ಯನಿತರ ಪತ್ರಕರ್ತರ ಧ್ವನಿ ಸಂಘಟನೆಯ ಕೆ.ಶಿವಕುಮಾರ್, ಈರಣ್ಣ, ರಾಮು, ಆರ್,ದ್ಯಾಮರಾಜ್, ಮಂಜುನಾಥ, ಶಶಿಕುಮಾರ್, ಇತರರು ತಹಶೀಲ್ದಾರ್-ಗ್ರೇಟ್ ಸಂದ್ಯಾ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಸಿದ್ದಾರೆ.
![](https://janadhwani.in/wp-content/uploads/2023/02/IMG-20230222-WA0002-801x1024.jpg)
0 Comments