ಚಳ್ಳಕೆರೆ ಜನಧ್ವನಿ ವಾರ್ತೆ.ಮಾ9 ದೇಶದ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ದುರಾಡಳಿತ ಸುಳ್ಳು ಭರವಸೆ ಗಳಂತಹ ಭರವಸೆಗಳನ್ನು ಕೊಟ್ಟು ಜನಸಾಮಾನ್ಯರಿಗೆ ರಾಷ್ಟ್ರೀಯ ಪಕ್ಷಗಳು ಮೋಸ ಮಾಡಿವೆ ಇಂದಿನ ದಿನಮಾನಗಳಲ್ಲಿ ಸುಳ್ಳಿನ ಭರವಸೆ ನೀಡಿ ಕೆಲಸ ಮಾಡದಿರುವುದು ಸಾಮಾನ್ಯ ಜನತೆಗೆ ಗೊತ್ತಾಗಿದೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಹೇಳಿದರು.
ಇಂದು ನಗರದ ಬಿ ಎಂ ಜಿ ಎಚ್ ಎಸ್ ಪ್ರೌಢಶಾಲಾ ಆವರಣದ ಹಿಂಭಾಗದಲ್ಲಿ ಗಾಂಧಿನಗರ ಬನ್ನಿ ಮಹಾಕಾಳಿ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪರಸ್ಪರ ಕಿತ್ತಾಟ ಹಗರಣಗಳ ಸರಮಾಲೆ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಜನರ ಮನಸ್ಸನ್ನು ಕೆಣಕಿದ್ದಾರೆ ಇಂತಹ ವಿಷಪೂರಿತ ಎರಡು ಪಕ್ಷಗಳನ್ನು ಕಿತ್ತುಹಾಕಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಏಕೆಂದರೆ ಈ ಹಿಂದೆ ಕುಮಾರಸ್ವಾಮಿ ಯವರ ಆಡಳಿತದಲ್ಲಿ ಜಾತಿ ನಿಂದನೆಯನ್ನು ತೊರೆದು ಹಾಕಿದ್ದಾರೆ ಲಾಟರಿ ನಿಷೇಧ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಲಿನ ಪ್ರೋತ್ಸಾಹ ಧನ ಬಾಣಂತಿಯರಿಗೆ 6000 ರು ಪರಿಹಾರ ಧನ ಅಲ್ಲದೆ ರಾಜ್ಯದಲ್ಲಿ ಎರಡು ಬಾರಿ ಸಾಲ ಮನ್ನಾ ಕೈಗಾರಿಕಾ ಟ್ರಸ್ಟ್ ಪ್ರಾರಂಭ ನಮ್ಮ ಮೆಟ್ರೋ ಹಾಗೂ ಪ್ರೌಢಶಾಲೆಗಳಿಗೆ ಬಿಸಿಊಟ ಪದ್ದತಿ ವೇತನ ಗ್ರಾಮ ವಾಸ್ತವದಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಸಾಮಾನ್ಯ ಜನರು ಅರಿತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಕ್ಕೆ ಕೈ ಹಿಡಿದಿದ್ದಾರೆ ಎಂದರು
ತಾಲೂಕು ಜೆಡಿಎಸ್ ಮುಖಂಡ ಪಿಟಿ ತಿಪ್ಪೇಸ್ವಾಮಿ ಮಾತನಾಡಿ ನಗರದಲ್ಲಿ g+2 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಒಂದು ಸೈಟಿನಲ್ಲಿ ಎರಡು ಮನೆಗಳನ್ನು ನಿರ್ಮಿಸಿ ಅದರಲ್ಲಿ ಕಳಪೆ ಕಾಮಗಾರಿ ಮಾಡಿ ಕಮಿಷನ್ ತಿನ್ನಲು ಹುನ್ನಾರ ನಡೆಸಿದ್ದು ಕಾಮಗಾರಿ ಹಂತದಲ್ಲಿರುವ ಜಿ ಪ್ಲಸ್ ಟೂ ಮನೆಗೆ ಆಂಧ್ರಪ್ರದೇಶದಿಂದ ಗುತ್ತಿಗೆದಾರರನ್ನು ಕರೆತಂದು ಅವರಿಗೆ ಗುತ್ತಿಗೆ ನೀಡಿದ್ದಾರೆ ನಮ್ಮ ನಗರದಲ್ಲಿ ಬೇಕಾದಷ್ಟು ಜನ ಗೊತ್ತಿದೆ ಅವರಿಗೆ ಕೊಡಲಿಲ್ಲ ಎಂಬುದು ನಿಗೂಢವಾಗಿದೆ ಎಂದು ಹೇಳಿದರು
ಈ ವೇಳೆ 15ನೇ ವಾರ್ಡ್ 22ನೇ ವಾರ್ಡ್ 23ನೇ ವಾರ್ಡಿನ 300 ರಿಂದ 400 ಜನ ಸಮಾರಂಭಕ್ಕೆ ಭಾಗವಹಿಸಿ 30 ಜನ ಯುವಕರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಗೆ ಸೇರ್ಪಡೆಯಾದರು
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶ್ರೀನಿವಾಸ್ ಪ್ರಮೋದ್ ಕುಮಾರ್ ನಾಗವೇಣಿ ಕವಿತಾ ತಿಪ್ಪಕ್ಕ ತಿಪ್ಪೇಸ್ವಾಮಿ ಜೆಡಿಎಸ್ ಮುಖಂಡ ಸಮರ್ಥ ರಾಯ್ ಭೀಮಣ್ಣ ಗಾಡಿ ತಿಪ್ಪೇಸ್ವಾಮಿ ಡಿ ಚಂದ್ರು ಬಾಲಣ್ಣ ವಿಜಯಕುಮಾರ್ ಮನು ದೊರೆ ಇನ್ನೂ ಅನೇಕ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು
0 Comments