ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ರೇಹಾನ್ ಪಾಷ.

by | 17/10/23 | ಕೃಷಿ


ಚಳ್ಳಕೆರೆ ಜನಧ್ವನಿ ವಾರ್ತೆ ಅ.17:
ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಸರಕಾರಿ ಯೋಜನೆಯಡಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.
ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 120205 ಕೃಷಿ ಯೋಗ್ಯ ತಾಕುಗಳಿದ್ದು (ಸರ್ವೇ ನಂಬರ್/ಪೋಡುಗಳು) ಅವುಗಳಲ್ಲಿ ಈಗಾಗಲೇ 81189 ತಾಕುಗಳನ್ನು ಪ್ರುಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ 39016 ತಾಕುಗಳ ಜೋಡಣೆ ಬಾಕಿ ಇರುತ್ತದೆ. ಉಳಿದ ರೈತರು ಕೂಡಲೆ ಗ್ರಾಮ ಒನ್. ಕರ್ನಾಟಕ ಒನ್.ವಿವಿಧ ಸೇವಾ ಕೇಂದ್ರದಲ್ಲಿ ನೊಂದಣೆ ಮಾಡಿಸಿಕೊಳ್ಳಿ. ಈ ಬಾರಿ ಬೆಳೆ ಪರಿಹಾರಕ್ಕೆ ಅರ್ಜಿ ಸ್ವೀಕರಿಸುವುದಿಲ್ಲ. ಯಾವ ರೈತರು ಪ್ರೂಟ್ ಐಡಿ ಮಾಡಿಸಿಕೊಂಡಿರುತ್ತಾರೋ ಅವರ ಖಾತೆಗೆ ನೇರವಾಗಿ ಬೆಳೆ ಪರಿಹಾರ. ವಿಮೆ ಹಣ ಜಮವಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶನ ಡಾ.ಅಶೋಕ್ ಮಾತನಾಡಿ ಕಳೆದ ಬಾರಿ ಜಂಟಿ ಖಾತೆ ಹೊಂದಿದ ರೈತರಿಂದ ಅಗ್ರಿಮೆಂಟ್ ಮಾಡಿಕೊಂಡು ಒಬ್ಬರ ಖಾತೆಗೆ ಬೆಳೆ ನಷ್ಟ ಪರಿಹಾರ ನೀಡಲಾಗುತ್ತಿತ್ತು ಆದರೆ ಈ ಬಾರಿ ಸರಕಾರ ನಿಮವನ್ನು ಸಡಿಲಿಕೆ ಮಾಡಿ ಜಂಟಿ ಖಾತೆ ಹೊಂದಿದ ರೈತರು ಆಧಾರ್ .ಬ್ಯಾಂಕ್ ಖಾತೆ ಜೋಡಣೆ ಹಾಗೂ ಪ್ರೂಟ್ ಐಡಿ ನೋಂದಣೆ ಮಾಡಿಸಿಕೊಂಡರೆ ನೋಂದಣೆ ಮಾಡಿಕೊಂಡ ಖಾತೆ ದಾರರ ಬ್ಯಾಂಕ್ ಖಾತೆ ಪರಿಹಾರ ಬೀಳಲಿದೆ ಪ್ರೋಟ್ ಐಡಿ ಮಾಡಿಸಿಕೊಂಡ ರೈತರಿಗೆ ಮಾತ್ರ ಬೆಳೆ ಪರಿಹಾರ. ಬಿತ್ತನೆ ಬೀಜ.ಗೊಬ್ಬರ. ಕೃಷಿಪರಿಕರಗಳನ್ನು ಕೃಷಿಇಲಾಖೆಯಿಂದ ನೀಡಲಾಗುವುದು ಆದ್ದರಿಂದ ಪ್ರತಿಯೊಬ್ಬ ಖಾತೆದಾರ ರೈತರು ಪ್ರೂಟ್ ಐಡಿ ನೋಂದಣೆ ಮಾಡಿಸಿಕೊಳ್ಳುವಂತೆ ರೈತರಿಗೆ ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಫ್ರೂಟ್ಸ್ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರೈತ ಭಾಂದವರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಈ ಕೂಡಲೇ ಜೋಡಣೆ ಮಾಡಲು ನಿಮ್ಮ ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸುವಂತೆ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಜಂಟಿಯಾಗಿ ತಿಳಿಸಿದ್ದಾರೆ.

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *