ಚಳ್ಳಕೆರೆ ಜನಧ್ವನಿ ವಾರ್ತೆ ಮಾ.23. ಹಸಿರಿನಿಂದ ಕಂಗೊಳಿಸುತ್ತಿದ್ದು ಉದ್ಯಾನಗಳಿಗೆ ಈಗ ಬರದ ಬಿಸಿ ತಟ್ಟಿದ್ದು ಗಿಡಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಸಮೀಪ ಭೂತಪ್ಪನಗುಡಿ ಬಳಿ ಪವಿತ್ರವನದಲ್ಲಿ ಸುಮಾರು 450 ಬೇವು, ಹರಳಿ ಸೇರಿದಂತೆ ವಿವಿಧ ಗಿಡಗಳನ್ನು ನೆಟ್ಟಿದ್ದು ಅವುಗಳಲ್ಲಿ ಸುಮಾರು 350 ಗಿಡಗಳು ಉಲುಸಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡಗಳಿಗೆ ಈಗ ನೀರಿನ ಕೊರತೆ ಹಾಗೂ ಬಿಸಿಲಿತಾಪಕ್ಕೆ ಬಾಡುವಂತಾಗಿದ್ದು ಈಗ ಗ್ರಾಪಂ ಅಧಿಕಾರಿಗಳು ಜನರಿಗೆ ಕುಡಿಯುವ ನೀರು ಒದಗಿಸುವ ಜತೆಗೆ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಗಿಡಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುವಂತಾಗಿದೆ,
ಮುಂಗಾರು ಮಳೆ ಕೊರತೆಯಿಂದ ರೈತರು ಬೆಳೆ ಒಣಗುತ್ತಿರುವುದು ಒಂದು ಕಡೆಯಾದರೆ, ನೆಟ್ಟಿರುವ ಸಸಿಗಳ ಸಂರಕ್ಷಣೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ ಸ್ವಯಂ ಪ್ರೇರಿತರಾಗಿ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸಲು ಮುಂದಾಗಿದ್ದಾರೆ.
ಗ್ರಾಪಂ ಪಿಡಿಒ ರಾಮಚಂದ್ರಪ್ಪ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವ ಕೊಳವೆ ಬಾವಿಗಳಿದ್ದು ಜನರಿಗೆ ನೀರು ಒದಗಿಸುವ ಜತಗೆ ಪವಿತ್ರವನ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಡೆ ನೆಟ್ಟಿರುವ ಗಿಡಗಳು ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದಾಗಿ ನೆಟ್ಟಿರುವ ಸಸಿಗಳು ಒಣಗಿ ಹೋಗುತ್ತಿರುವುದನ್ನು ಮನಗಂಡು ಹತ್ತು ದಿನಕ್ಕೊಮ್ಮೆ ಗಿಡಗಳಿಗೆ ಟ್ಯಾಂಕರ್ ಮೂಲಕ ನೀರು ಉಣಿಸಿ ಗಿಡಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
0 Comments