ಹಿರಿಯೂರು :
ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಕ್ರೀಡೆಗಳು ಅತ್ಯಂತ ಅಗತ್ಯವಾಗಿದ್ದು, ಜೊತೆಗೆ ಈ ಕ್ರೀಡೆಗಳು ಕ್ರೀಡಾಭಿಮಾನಿಗಳಿಗೆ ಮನೋರಂಜನೆಯನ್ನು ಸಹ ನೀಡುತ್ತವೆ, ಇಂತಹ ಕ್ರೀಡೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು ಅತ್ಯಗತ್ಯವಾಗಿದೆ ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 17 ನೇ ವರ್ಷದ “ಸ್ನೇಹಕೂಟ ಕ್ರಿಕೆಟ್ ಪಂದ್ಯಾವಳಿ”ಯನ್ನು ಉದ್ಘಾಟಿಸಿ, ಸ್ಪರ್ಧಿಗಳಿಗೆ ಶುಭಹಾರೈಸಿ ನಂತರ ಅವರು ಮಾತನಾಡಿದರು.
ಹಿರಿಯೂರು ತಾಲ್ಲೂಕು ಕ್ರೀಡೆಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದು, ನಮ್ಮ ತಾಲ್ಲೂಕಿನ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ, ನೆಹರು ಕ್ರೀಡಾಂಗಣ ಇಂತಹ ಕ್ರೀಡಾಪಟುಗಳನ್ನು ತಯಾರು ಮಾಡುವ ಉತ್ತಮ ವೇದಿಕೆಯಾಗಿದ್ದು, ಈ ಕ್ರೀಡಾಂಗಣದಿಂದ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಲಿ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್, ನಗರಸಭೆ ಸದಸ್ಯರುಗಳಾದ ವಿಠ್ಠಲ ಪಾಂಡುರಂಗ, ಶಿವುಯಾದವ್, ನಗರಸಭೆ ಮಾಜಿ ಅಧ್ಯಯಕ್ಷ ಹಾಗೂ ಗುತ್ತಿಗೆದಾರರ ಸಂಘಧ ಅಧ್ಯಕ್ಷ ಚಂದ್ರಶೇಖರ್, ಈಶ್ವರಪ್ಪ ಹೂವಿನಹೊಳೆ, ಶಿವಕುಮಾರ್, ಅಸ್ಗರ್ ಅಹಮದ್, ಬಿ.ಜಿ.ಪದ್ಮನಾಭ್, ಹಿರಿಯೂರು ಪ್ರಕಾಶ್, ಅಣ್ಣೇಶ್ ಪಟೇಲ್, ಹರೀಶ್, ಯೋಗಾನಂದ್, ಡಿಸಿಪಿ ಮಂಜುನಾಥ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...
0 Comments