ನಿಗದಿತ ಸಮಯಕ್ಕೆ ಬಾರದ ಸಚಿವರು.ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮಸ್ಯೆಗಳನ್ನೊತ್ತು ಬಂದ ಸಾರ್ವಜನಿಕರು ಹೈರಾಣು ಇದು ಜಿಲ್ಲಾ ಜನತಾದರ್ಶನ.
by ಗೋಪನಹಳ್ಳಿಶಿವಣ್ಣ | 06/01/24 | ಸುದ್ದಿ
ಚಳ್ಳಕೆರೆ ಜನಧ್ವನಿ ವಾರ್ತೆ ಜ.6. ಜಿಲ್ಲಾ ಜನತಾ ದರ್ಶನ 10.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ.12 ಗಂಟೆ ಕಳೆದರೂ ಪ್ರಾರಂಭಾವಾಗದೆ ಸಭೆ ದೂರು ಹೊತ್ತುತಂದ ಸಾರ್ವಜನಿಕರು ಹೈರಾಣು.
ಹೌದು ಇದು ಚಳ್ಳಕೆರೆ ನಗರದ ಶ್ರೀ ಗುರುರಾಘವೇಂದ್ರಕಲ್ಯಾಣ ಮಂಟಪದಲ್ಲಿ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಜಿಲ್ಲಾ ಹುಸ್ತುವರಿ ಸಚಿವರ ನೇತೃತ್ವದಲ್ಲಿ ಚಳ್ಳಕೆರೆ ಯಲ್ಲಿ ನಡೆದ 9 ನೇ ಜಿಲ್ಲಾ ಜನತಾದರ್ಶನ ಕಾರ್ಯಕ್ರಮಕ್ಕೆ ನಿಗಧಿತ ಸಮಕ್ಕೆ ವೇಧಿಕೆಯತ್ತ ಬಾರದ ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಶಾಸಕರು ಕಾದು ಸುಸ್ತಾದ ಅಧಿಕಾರಿಗಳು. ಸಾರ್ವಜನಿಕರು ಹೈರಣಾದರೂ ಕೊನೆಗೂ12 .30 ಕ್ಕೆ ಸರಿಯಾಗಿ ಜಿಲ್ಲಾ ಉಸ್ತುವರು ಸಚಿವರು.ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ನಿಗದಿತ ಸಮಕ್ಕೆ 2.30 ಹೆಚ್ಚಿನ ಸಮಯದ ನಂತರ ವೇದಿಕೆಮೇಲೆ ಬಂದ ಸಚಿವರು.ಶಾಸಕರು . ಅಧಿಕಾರಿಗಳು ಉದ್ಘಾಟಿಸಿದ ಸಚಿವ ಡಿ.ಸುಧಾಕರ್. ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ. ಎರಡೇ ಗಂಟೆಗೆ ಕಾರ್ಯಕ್ರಮ ಮುಕ್ತಾಯ. ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀಡಿದ ದೂರುಗಳಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗೆ ಪರಿಹಾರ ಎಂದು ಭರವಸೆ ನೀಡಿದ ಮೇರೆಗೆ ಸಾರ್ವಜನಿಕರು. ರೈತರು ವಿವಿಧ ಸಮಸ್ಯೆಳೊಂದಿಗೆ ಬಂದಿದ್ದರು ಆದರೆ ವೇಧಿಕೆಯಲ್ಲಿ ಯಾರ ಮನವಿಗಳಿಗೆ ಮಾತನಾಡಲು ಅವಕಾಶ ನೀಡದೆ ಇರುವುದು ಸಾರ್ವಜನಿಕರಲ್ಲಿ ಅಸಮಧಾನಕ್ಕೆ ಎಡೆಮಾಡಿದಂತಾಗಿದೆ. ಇನ್ನು ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಶಾಸಕರ ಭಾಷಣ ಮಾಡಿ ವೇದಿಕೆ ಇಳಿದು ಹೊರ ಹೋಗುತ್ತಿದ್ದಂತ ಜಿಲ್ಲಾ ಮಟ್ಟದ ಅಧಿಕಾರಿಗಳೂ ಸಹ ತಮ್ಮ ತಮ್ಮ ವಾಹನಗಳೇರಿ ಹೊರಟುಹೋದರು ಸಾರ್ವಜನಿಕರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿರೀಕ್ಷೆಯಿಟ್ಟು ಕೊಂಡು ಬಂದ ಸಾರ್ವಜನಿಕರಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅರ್ಜಿಗಳನ್ನು ಕೊಡಲು ಎಲ್ಲಾ ಕೌಂಟರ್ ಗಳು ಜನದಟ್ಟಣೆಯಿಂದ ಕೂಡಿದ್ದವು ಇನ್ನು ಕೆಲವರು ವೇದಿಕೆ ಮೇಲೆ ಮನವಿ ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬುವರಿಗೆ ವೇದಿಕೆ ಬಳಿ ಮನವಿ ಹಾಗೂ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡದೆ ಇರುವುದು ಅಸನಧಾನಕ್ಕೆ ಕಾರಣವಾಯಿತು.
0 Comments