ಹಿರಿಯೂರು, ಡಿಸೆಂಬರ್ 23 ರಸ್ತೆ ಅಪಘಾತ ಲಾರಿ ಚಾಲಕ ಮೃತಪಟ್ಟ ಘಟನೆ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಹೊಳಲ್ಕೆರೆ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದ ವಿರೇಶಪ್ಪ ಕೆ.ಎನ್( 63) ಶನಿವಾರ ಬೆಳಗಿನ ಜಾವ 3.30 ರ ಸಮಯದಲ್ಲಿ ಮೆಕ್ಕೆಜೋಳ ತುಂಬಿಕೊಂಡು
ತುಮಕೂರಿಗೆ ಹೋಗುವಾಗ ಹಿರಿಯೂರು ತಾಲ್ಲೂಕು ಆದಿವಾಲ ಸಮೀಪ ಟೈರ್ ಪಂಚರ್ ಆಗಿದ್ದರಿಂದ ಇಂಡಿಕೇಟರ್ ಲೈಟ್ ಹಾಕಿ ರಸ್ತೆ ಎಡ ಬದಿಯಲ್ಲಿ
ನಿಲ್ಲಿಸಿಕೊಂಡಿದ್ದು, ಅದೇ ಸಮಯದಲ್ಲಿ ಮತ್ತೊಂದು ಲಾರಿ
ಲಾರಿಯನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ವಿರೇಶಪ್ಪನ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯೂರು ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಪ್ರಕರದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments